ಕನ್ನಡ ನಾಡಿನ ಪ್ರಕೃತಿ ಸಿರಿಯಂತೆ ಸಂಸ್ಕೃತಿ ಸಂಪತ್ತು ಸಹ ವೈವಿದ್ಯಮಯವಾದದ್ದು ಹಾಗೂ ಕೌತುಕ ಹುಟ್ಟಿಸುವಂಥದ್ದು. ಇದರಲ್ಲಿ ಅದ್ಭುತವಾದ ಖಾದ್ಯವಿಶೇಷಗಳೂ ಸೇರಿವೆ. ಇವುಗಳಲ್ಲಿ ತುಂಬ ಸರಳವಾದ ಆದರೆ ಅಚ್ಚರಿ ಹುಟ್ಟಿಸುವಂತಹ ಒಂದು ತಿನಿಸು ಅಂದರೆ ಕಲ್ಲನ್ನ.
ಉತ್ತರ ಕನ್ನಡದ ಸಿರ್ಸಿಯಿಂದ ಶಿವಮೊಗ್ಗದ ತನಕ ಈ ತಿನಿಸು ರೂಢಿಯಲ್ಲಿದೆ. ನದೀತೀರದಲ್ಲಿರುವ ನಿಂಬೆ-ಕಿತ್ತಳೆ ಗಾತ್ರದ ಬೆಣಚು ಕಲ್ಲುಗಳನ್ನು ಮನೆಗೆ ತಂದು, ತೊಳೆದು ಒರೆಸಿ, ಸೌದೆ ಒಲೆಯೊಳಗೆ ಹಾಕಿ ಅವುಗಳನ್ನು ಕೆಂಪಗೆ ಕಾಯಿಸುತ್ತಾರಂತೆ. ನಂತರ ಬಾಳೆ ಎಲೆ ಅಥವಾ ಅರಿಶಿನದ ಎಲೆಯ ಮೇಲೆ ಬಿಸಿ ಅನ್ನ ಹರಡಿ ಈ ಕಾದ ಕಲ್ಲಿಟ್ಟು ಅದರ ಮೇಲೆ ಗಟ್ಟಿ ಮೊಸರು ಹಾಕಿ ಕಲಸಿ ಎರಡು ನಿಮಿಷ ಹಬೆಯು ಹೊರ ಹೋಗದಂತೆ ಎಲೆಯಿಂದ ಮುಚ್ಚುತ್ತಾರಂತೆ. ನಂತರ ಎಲೆ ತೆಗೆದು ಉಪ್ಪು/ಉಪ್ಪಿನ ಕಾಯಿ/ ಹಪ್ಪಳದ ಜೊತೆ ಈ ಕಲ್ಮೊಸರನ್ನವನ್ನು ತಿನ್ನುತ್ತಾರಂತೆ. ತುಂಬ ರುಚಿಕರ ಹಾಗೂ ಆರೋಗ್ಯಕರವಾದ ಊಟ ಇದು ಎನ್ನಲಾಗುತ್ತದೆ. ಇದನ್ನು ಓದಿದ ಯಾರಿಗೇ ಆದರೂ ಒಮ್ಮೆ ಇದನ್ನು ತಿನ್ನಬೇಕು ಎಂಬ ಆಸೆ ಆಗುವುದು ಖಂಡಿತ. ಏನಂತೀರಿ!? ಕನ್ನಡ ನಾಡಿಗೆ ಮತ್ತು ಅದರ ಖಾದ್ಯಗಳಿಗೆ ಒಮ್ಮೆ ಜೈ ಅನ್ನೋಣ ಕಣ್ರಿ.
Like us!
Follow us!