ಕನ್ನಡ ಪ್ರಸಂಗ

ಇದು ಲೇಖಕಿಯು ಕನ್ನಡದೊಂದಿಗೆ ಒಡನಾಡಿದ ಅನುಭವಗಳ ಕಥನವಾಗಿದೆ. ಕನ್ನಡ ಜಗತ್ತು ತನಗೆ ಕಲಿಸಿದ ಹಾಗೂ ಕನ್ನಡ ಭಾಷೆ ಹಾಗೂ ಸಾಹಿತ್ಯಗಳನ್ನು ತಾನು ಕಲಿಸಿದ ದಾರಿಯಲ್ಲಿನ ವಿವಿಧ ಅನುಭವಗಳನ್ನು ಓದುಗರೊಂದಿಗೆ ಹಂಚಿಕೊಳ್ಳುವ ಪ್ರಯತ್ನವಾಗಿರುತ್ತದೆ ಇದು. ವಾರಕ್ಕೆ ಒಂದು ಕನ್ನಡ ಪ್ರಸಂಗದಂತೆ ಈ ಅಂಕಣವು ಮೂಡಿ ಬರಲಿದೆ.

ಅನುಚಿತ ಬಹುವಚನ ಪ್ರಯೋಗ ತಂದ ಫಜೀತಿ!

ಅದು ಒಂದು ಕಾಲೇಜಿನ ಅಧ್ಯಾಪಕರ ಸಂಘವು ಆಯೋಜಿಸಿದ್ದ ಒಂದು ಕಾರ್ಯಕ್ರಮ.‌ ಆ ದಿನ ವಯೋನಿವೃತ್ತಿ ಹೊಂದಲಿದ್ದ ಅಧ್ಯಾಪಕಿಯೊಬ್ಬರ ಗೌರವಾರ್ಥ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭ. ಸಾಮಾನ್ಯವಾಗಿ ಇಂತಹ ಸಮಾರಂಭಕ್ಕೆ ನಿವೃತ್ತಿ ಹೊಂದುತ್ತಿರುವವರ ಕುಟುಂಬ ಸದಸ್ಯರನ್ನು ಸಹ ಆಹ್ವಾನಿಸಲಾಗಿರುತ್ತದೆ.‌ ಅಂತೆಯೇ, ಈ ಸಮಾರಂಭದಲ್ಲಿ, ಮೇಲೆ ಹೇಳಿದ ಅಧ್ಯಾಪಕಿಯ ಪತಿಗೆ ಆಹ್ವಾನ ನೀಡಲಾಗಿದ್ದು, ಅವರು ಉಪಸ್ಥಿತರಿದ್ದರು. ಸಮಾರಂಭದ ನಿರೂಪಕರು ಭಾಷೆಯ ವಿಷಯದಲ್ಲಿ ಅಷ್ಟೇನೂ ಸೂಕ್ಷ್ಮತೆ ಹೊಂದಿರಲಿಲ್ಲವೆಂದು ತೋರುತ್ತೆ. ಆಕೆ ತಮ್ಮ ಸ್ವಾಗತ ನುಡಿಗಳಲ್ಲಿ ವೇದಿಕೆಯಲ್ಲಿ ಹಾಗೂ ಸಭೆಯಲ್ಲಿ ಇದ್ದವರನ್ನು ಸ್ವಾಗತಿಸುವ ಭರದಲ್ಲಿ […]

‘ದೇವಿ‌ ಹಾಕಿಸುವುದು‌’ ಎಂಬ ಪದದ ವಿಶೇಷತೆ

ದೇವಿ ಹಾಕಿಸುವುದು – ಕನ್ನಡ ಭಾಷೆಯ ಒಂದು ವಿಶಿಷ್ಟ ಪದಪ್ರಯೋಗ ಇದು‌. ಆಧುನಿಕ ವಿಜ್ಞಾನದ ಆವಿಷ್ಕಾರಕ್ಕಿಂತ ಮುಂಚೆ ಮೈತುಂಬ ಗುಳ್ಳೆಗಳು ಏಳುವ ವಿವಿಧ ರೀತಿಯ ಸಿಡುಬಿನ ಕಾಯಿಲೆಗಳು ಬಂದರೆ, ಅದಕ್ಕೆ ಕಾರಣ ಗ್ರಾಮದೇವತೆಯ ಕೋಪ ಎಂಬ ಭಾವನೆಯು ನಮ್ಮ‌ ಹಳ್ಳಿಗರಲ್ಲಿತ್ತು. ಅದಕ್ಕಾಗಿಯೇ ನೋಡಿ ಈ ಕಾಯಿಲೆಗೆ ‘ಅಮ್ಮ ಬಂದಿದೆ, ಅಮ್ಮ ಆಗಿದೆ’ ಎಂದೇ ಹೇಳುತ್ತಿದ್ದರು. Small pox ಎಂಬ ಸಿಡುಬಿಗಂತೂ ‘ದೇವಮ್ಮ‌ ಕಾಯಿಲೆ’ ಎಂಬ ಹೆಸರೇ ಇತ್ತು! ಮುಂದೆ, 1796ರಲ್ಲಿ, ಇಂಗ್ಲೆಂಡ್ ದೇಶದ ವಿಜ್ಞಾನಿ ಎಡ್ವರ್ಡ್ ಜನ್ನರ್ ಅವರು […]

ಕನ್ನಡ ಅಧ್ಯಾಪಕರ ಕನ್ನಡ ಭಾಷೆ ಹೇಗಿದ್ದರೆ ಚಂದ?

ಕನ್ನಡನಾಡಿ‌ನ ಮಕ್ಕಳು ಕನ್ನಡ ಭಾಷೆಯನ್ನು ಮಾತಾಡಲು ಕಲಿಯುವ ಮೂರು ಜಾಗಗಳು ಅಂದರೆ ತಮ್ಮ ಮನೆ, ತಮ್ಮ ಶಾಲೆ-ಕಾಲೇಜು ಹಾಗೂ ತಮ್ಮನ್ನು ತಲುಪುವ ವಿವಿಧ ಮಾಧ್ಯಮಗಳು. ಈ ಹಿನ್ನೆಲೆಯಲ್ಲಿ ನೋಡಿದಾಗ ಶಾಲೆ-ಕಾಲೇಜುಗಳಲ್ಲಿನ ಅಧ್ಯಾಪಕರು ಮಾತಾಡುವ ಕನ್ನಡ ಭಾಷೆಯ ರೀತಿ-ರೂಪಗಳು ಬಹಳ ಮುಖ್ಯ‌. ಅವು ಎಳೆಯ ವಯಸ್ಸಿನ ವಿದ್ಯಾರ್ಥಿಗಳ ಮೇಲೆ ತುಂಬ ಪರಿಣಾಮ ಬೀರುತ್ತವೆ. ಈ ವಿಷಯದಲ್ಲಿ, ಒಬ್ಬ ಕಾಲೇಜು ಕನ್ನಡ ಅಧ್ಯಾಪಕಿಯಾಗಿ ಸುಮಾರು ಮೂವತ್ತು ವರ್ಷ ಕೆಲಸ ಮಾಡಿರುವ ನನ್ನ ಅನಿಸಿಕೆ ಹೀಗಿದೆ. ‘ಕನ್ನಡ ಅಧ್ಯಾಪಕರ ಕನ್ನಡ ಗರಿಷ್ಠ […]

ಆಂಗ್ಲೀಕರಣಗೊಂಡ ತರಕಾರಿ ಮಳಿಗೆ!

ಕಲರ್ ಕ್ಯಾಪ್ಸಿಕಂ, ಬೀನ್ಸ್,, ಪಿಯರ್, ಪೋಮೊಗ್ರಾನೇಟ್, ಪಪಾಯ, ಲಿಚೀ, ಬಟರ್ ಫ್ರೂಟ್ …. ಕರ್ನಾಟಕದ ರಾಜಧಾನಿ ಬೆಂಗಳೂರಿನ ಹಣ್ಣು ತರಕಾರಿ ಮಳಿಗೆಗಳಿಗೆ ಹೋದರೆ ಕಿವಿಗೆ ಬೀಳುವ ಪದಗಳಿವು‌. ಹುರುಳಿಕಾಯಿ, ಚವುಳಿಕಾಯಿ, ದೊಣ್ಣೆಮೆಣಸು, ಪರಂಗಿ ಹಣ್ಣು, ಕಣ್ಗುಡ್ಡೆ ಕಾಯಿ, ಬೆಣ್ಣೆಹಣ್ಣು…ಈ ಕನ್ನಡ ಪದಗಳು ಕಿವಿಗೆ ಬೀಳುವುದು ತೀರಾ ಅಪರೂಪ.‌ ಇದಕ್ಕೆ ಕಾರಣ ಏನಿರಬಹುದು ಎಂದು ಯೋಚಿಸಿದೆ‌. ಎರಡು ಕಾರಣಗಳಿವೆ ಅನ್ನಿಸಿತು. 1. ಬೆಂಗಳೂರಿನಲ್ಲಿ ಕನ್ನಡಿಗರಲ್ಲದೆ ಹಿಂದಿ, ಮಾರ್ವಾಡಿ, ತಮಿಳು, ತೆಲುಗು, ಮಲೆಯಾಳಿ ಮುಂತಾದ ಕನ್ನಡೇತರ ಭಾಷೆಗಳನ್ನು ಮಾತಾಡುವ ಜನರ […]

‘ಸ್ವಚ್ಛತೆಯೇ ದೇವರು ಮಗು’‌ ಎಂದ ಕವಿ‌ ಪುತಿನ‌

 ನನ್ನ ಸಾಹಿತ್ಯ ಜೀವನದ ಮರೆಯಲಾಗದ ನೆನಪುಗಳಲ್ಲಿ ಒಂದು ಎಂದರೆ, ಕವಿ ಪುತಿನ ( ಪುರೋಹಿತ ತಿರುನಾರಾಯಣಯ್ಯಂಗಾರ್ ನರಸಿಂಹಾಚಾರ್ – ಕನ್ನಡ ನವೋದಯ ಸಂದರ್ಭದ ಹಿರಿಯ ಕವಿ ಹಾಗೂ ನಾಟಕಕಾರ – ಜೀವಿತ ಕಾಲ : 1905-1998 ) ಅವರನ್ನು ಮುಖತಃ ಭೇಟಿ ಮಾಡಿದ್ದು.  1991 ನೇ ವರ್ಷ ಅದು. ನಾನು ಬೆಂಗಳೂರಿನ ಬಸವೇಶ್ವರ ನಗರದ ‘ವಿದ್ಯಾವರ್ಧಕ ಸಂಘ’ ಕಾಲೇಜಿನಲ್ಲಿ ಬಿ.ಎಸ್ಸಿ. ಅಂತಿಮ‌ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ಸಮಯ.‌ ರಸಾಯನಶಾಸ್ತ್ರ‌ ಹಾಗೂ ಕನ್ನಡ ಸಾಹಿತ್ಯ ಎರಡರಲ್ಲೂ ಪರಿಣತಿ ಇದ್ದ, […]

‘ಕೇಟರಿಂಗ್’ ಗೆ ಕನ್ನಡ ಪದ ಯಾವುದಪ್ಪ?

ಸಭೆ-ಸಮಾರಂಭಗಳು, ಔತಣಕೂಟಗಳ ಮಾತು ಬಂದಾಗ ಅಥವಾ ಮನೆಯಲ್ಲಿ ನಿತ್ಯವೂ ಅಡಿಗೆ ಮಾಡುವುದು ಕಷ್ಟ ಎಂಬ ಸಂದರ್ಭ ಇದ್ದಾಗ,  ‘ಕೇಟರಿಂಗ್ ಗೆ ಹೇಳ್ಬಿಟ್ಟಿದ್ದೀವಪ್ಪ, ಅವ್ರೇ ಅಡಿಗೆ ಮಾಡಿ ತಂದು ಬಡಿಸ್ತಾರೆ, ಉಳಿದದ್ದನ್ನ ತಗೊಂಡು ಹೋಗ್ತಾರೆ, ನಮಗೆ ಯಾವ್ದೂ ತಲೆನೋವಿಲ್ಲ ಸದ್ಯ’, “ನಮ್ಮ ಪರಿಚಯದ ಕೇಟರಿಂಗ್ ನವ್ರಿದಾರೆ, ಫೋನ್ ನಂಬರ್ ಬೇಕಾ?”, “ಅಯ್ಯೋ, ಬೆಳಿಬೆಳಿಗ್ಗೆ ಆಫೀಸ್ಗೆ ಓಡುವಾಗ ತಿಂಡಿ ಮಾಡೋದು ಕಷ್ಟ. ಕೇಟರಿಂಗ್ನವ್ರಿಗೆ ಹೇಳಿದೀನಿ. ತಂದ್ಕೊಡ್ತಾರೆ” …. ಈ ತರಹದ ಮಾತುಗಳನ್ನು ನಾವು ಕೇಳುತ್ತಿರುತ್ತೇವೆ, ಅಲ್ಲವೆ? ಈ ‘ಕೇಟರಿಂಗ್’ ಎಂಬ […]

“ನಾಟ್ ಫನಿ….ಕನ್ನಡಾಭಿಮಾನಿ!”

ಈ ಲೇಖಕಿ/ಅಧ್ಯಾಪಕಿಯ ಗರಿಷ್ಠ ಕನ್ನಡ ಬಳಕೆಯ ಪ್ರಯತ್ನಗಳು ಕೆಲವೊಮ್ಮೆ ಮುಗುಳ್ನಗೆಯ ಸನ್ನಿವೇಶವನ್ನು ಸೃಷ್ಟಿ ಮಾಡ್ತವೆ. ಅಂತಹ ಒಂದು ಸನ್ನಿವೇಶಗಳನ್ನು ನಿಮ್ಮ ಜೊತೆ ಹಂಚ್ಕೊಳಕ್ಕೆ ಇಷ್ಟ ಪಡ್ತೀನಿ. ಈಚೆಗೆ ನನ್ನ ಚಿಕ್ಕ ಮಗಳು ಪ್ರಣತಿಯೊಂದಿಗೆ ಐಸ್ಕ್ರೀಮ್ ಅಂಗಡಿಯೊಂದಕ್ಕೆ ಹೋಗಿದ್ದೆ (ಅಂದ ಹಾಗೆ ಐಸ್ಕ್ರೀಮ್ ಗೆ ‘ಮಂಜುಕೆನೆ’, ‘ಮಂಜಿನ ಮಿಠಾಯಿ’ ಮುಂತಾದ ಕನ್ನಡ ಪದಗಳಿದ್ದರೂ ಅವು ಕನ್ನಡಿಗರಲ್ಲಿ ಜನಪ್ರಿಯತೆ  ಪಡೆದಿಲ್ಲ). ಐಸ್ಕ್ರೀಮ್ ಕೊಂಡ ನಂತರ ಬೆಲೆಚೀಟಿ ( ಬಿಲ್) ಕೊಡಲು, ಆ ಅಂಗಡಿಯ ಚಿಕ್ಕ ವಯಸ್ಸಿನ ಹಣಕಾಸು ನಿರ್ವಾಹಕನು ನನ್ನ […]

‘ಕನ್ನಡ, ಇಂಗ್ಲಿಷ್ ಪಾಠ ಮಾಡಕ್ಕೆ ಅಧ್ಯಾಪಕರೇ ಇಲ್ಲದ’ ಕಾಲೇಜುಗಳು!

ಕಳೆದ ವಾರ ಪದವಿಪೂರ್ವ ಶಿಕ್ಷಣದ ಫಲಿತಾಂಶ ಬಂತಲ್ಲ, ಎಲ್ಲ ಮಾಧ್ಯಮಗಳಲ್ಲೂ ಅದರದೇ ಸುದ್ದಿ.  ಎಲ್ಲರೂ ಇದರ ಬಗ್ಗೆಯೇ ಮಾತಾಡುತ್ತಾ, ಚರ್ಚಿಸುತ್ತಾ ಇದ್ದ ಸಂದರ್ಭದಲ್ಲಿ, ನನಗೆ ಪರಿಚಿತರಾದ ಕನ್ನಡ ಅಧ್ಯಾಪಕ ಮಿತ್ರರೊಬ್ಬರು ತಮ್ಮ ಮಗಳ ಪ.ಪೂ. ತರಗತಿಯ ಫಲಿತಾಂಶದ ಬಗ್ಗೆ ಹೇಳುತ್ತಾ, “ಅವ್ಳಿಗೆ 69% ಅಂಕ ಬಂದಿದೆ ಮೇಡಂ . ಕನ್ನಡ, ಇಂಗ್ಲಿಷ್ ನಲ್ಲೇ ಕಡಿಮೆ.‌ ಅವರ ಕಾಲೇಜಲ್ಲಿ ಕನ್ನಡ, ಇಂಗ್ಲಿಷ್ ಗೆ ಸರಿಯಾಗಿ ಅಧ್ಯಾಪಕರೇ ಇಲ್ಲ. ನಾನೇ ಒಂದಿಷ್ಟು ಭಾಷಾಭ್ಯಾಸ ಹೇಳ್ಕೊಟ್ಟಿದ್ದೆ ಅವಳಿಗೆ ಕೊನೆಯಲ್ಲಿ,  ಆದ್ರೂ ಹೇಳಿಕೊಳ್ಳುವಂತಹ […]

‘ಶ್ರಗ್’ ಎಂಬ ಅಂಗಿಗೆ ಕನ್ನಡದಲ್ಲಿ ಏನಂತಾರೆ?

ಈಗಿನ‌ ಹುಡುಗಿಯರು, ಮಹಿಳೆಯರು ಜೀನ್ಸು ಪ್ಯಾಂಟು/ಲಂಗ/ ಅಂಗಿ ತೊಟ್ಟಾಗ ಅದರ ಮೇಲೆ ‘ಶ್ರಗ್’ ಎಂಬ ಸಡಿಲವಾದ, ಗುಂಡಿರಹಿತ ಕೋಟ್ ನಂತೆ ತೋರುವ, ಸಾಮಾನ್ಯವಾಗಿ ತೆಳುವಾದ ಬಟ್ಟೆಯಲ್ಲಿ ಹೊಲಿದಿರುವ, ತೋಳುಗಳಿರುವ, ಒಂದು ಮೇಲಂಗಿಯನ್ನು ತೊಡುವುದನ್ನು ನಾವು ಗಮನಿಸುತ್ತೇವಲ್ಲ, ಅದನ್ನು ಇಂಗ್ಲಿಷ್ ನಲ್ಲಿ Shrug ಎನ್ನುತ್ತಾರೆ‌. ಆ ಭಾಷೆಯಲ್ಲಿ ಶ್ರಗ್ ಎಂಬ ಪದಕ್ಕೆ  “ಔದಾಸೀನ್ಯ, ಅಸಹಾಯಕತೆ, ತಿರಸ್ಕಾರ, ಕೋಪ ಮೊದಲಾದವುಗಳನ್ನು ಸೂಚಿಸುವುದಕ್ಕಾಗಿ ಭುಜ ಎಗರಿಸು, ಹೆಗಲು ಹಾರಿಸು” ಎಂಬ ಅರ್ಥವು, ಅದು ಕ್ರಿಯಾಪದ ಆದಾಗ ಬರುತ್ತೆ. ಇನ್ನು, ಅದು ನಾಮಪದ […]

‘ಭೀಕರ’ – ‘ಭಿಕಾರಿ’!….ವಿದ್ಯಾರ್ಥಿನಿ ತಪ್ಪಾಗಿ ಓದಿದಾಗ…ಅಯ್ಯೋ ಏನು‌ ಮಾಡೋಣ ರೀ….!

ಕನ್ನಡ ತರಗತಿಗಳಲ್ಲಿ ಓದಿಸುವುದು, ವಿದ್ಯಾರ್ಥಿಗಳ  ಉಚ್ಚಾರ ತಿದ್ದುವುದು – ಇವು ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಹಂತಗಳ ತರಗತಿಗಳಲ್ಲಿ ಬಹಳ ಸಾಮಾನ್ಯ ಸಂಗತಿ. ಆದರೆ ಪದವಿ ಹಂತದಲ್ಲಿ ಈ ರೀತಿಯ ಶಿಕ್ಷಣ ಚಟುವಟಿಕೆ ತುಸು ಕಡಿಮೆ.  ವಿದ್ಯಾರ್ಥಿಗಳು ಪದವಿ ಹಂತಕ್ಕೆ ಬರುವ ಹೊತ್ತಿಗೆ, ‘ಸರಿಯಾದ ಉಚ್ಚಾರದೊಂದಿಗೆ ಕನ್ನಡ ಭಾಷೆಯನ್ನು ಓದುವುದನ್ನು ಕಲಿತಿರುತ್ತಾರೆ’ ಎಂಬ ಗೃಹೀತದೊಂದಿಗೆ ನಾವು ಅಧ್ಯಾಪಕರು ‌ಪಾಠ ಮಾಡುತ್ತಿರುತ್ತೇವೆ. ಓದಿದ ಭಾಗದ ವಿಚಾರ-ವಿಮರ್ಶೆ, ವಿಶ್ಲೇಷಣೆ, ಪಾಠವನ್ನು ಜೀವನಕ್ಕೆ‌‌ ಹಾಗೂ ಜೀವನವನ್ನು ಪಾಠಕ್ಕೆ ಅನ್ವಯಿಸಿ ಕಲಿಯುವ ಉನ್ನತ  ಮಟ್ಟದ […]

Page 1 of 19

Kannada Sethu. All rights reserved.