ಕನ್ನಡ ಪ್ರಸಂಗ

ಇದು ಲೇಖಕಿಯು ಕನ್ನಡದೊಂದಿಗೆ ಒಡನಾಡಿದ ಅನುಭವಗಳ ಕಥನವಾಗಿದೆ. ಕನ್ನಡ ಜಗತ್ತು ತನಗೆ ಕಲಿಸಿದ ಹಾಗೂ ಕನ್ನಡ ಭಾಷೆ ಹಾಗೂ ಸಾಹಿತ್ಯಗಳನ್ನು ತಾನು ಕಲಿಸಿದ ದಾರಿಯಲ್ಲಿನ ವಿವಿಧ ಅನುಭವಗಳನ್ನು ಓದುಗರೊಂದಿಗೆ ಹಂಚಿಕೊಳ್ಳುವ ಪ್ರಯತ್ನವಾಗಿರುತ್ತದೆ ಇದು. ವಾರಕ್ಕೆ ಒಂದು ಕನ್ನಡ ಪ್ರಸಂಗದಂತೆ ಈ ಅಂಕಣವು ಮೂಡಿ ಬರಲಿದೆ.

ರಾಯಚೂರಿನ ಆಡುಗನ್ನಡ ತಂದ ಪೇಚಿನ ಪ್ರಸಂಗ

ನಮ್ಮ ಕುಟುಂಬಕ್ಕೆ ವಿಶ್ವನಾಥ್ ಎಂಬ ಒಬ್ಬ ಪರಿಚಿತರಿದ್ದಾರೆ. ಈ ಹಿಂದೆ, ‘ಜಲಶಿಲಾಂತರ’ ಪದದ ಬಗ್ಗೆ ಇದೇ ಜಾಲಪುಟದಲ್ಲಿ ಕನ್ನಡ ಪ್ರಸಂಗ ಬರೆಯುವಾಗ ಅವರ ಪ್ರಸ್ತಾಪ ಮಾಡಿದ್ದೆ ನಾನು. ಪಕ್ಷಿ ಛಾಯಾಹ್ರಾಹಕರು ಮತ್ತು ವನ್ಯಪ್ರದೇಶ ಚಾರಾಣಾಸಕ್ತರು ಎಂದು  ಅವರನ್ನು ಪರಿಚಯಿಸಿದ್ದೆ‌.‌ ಅವರು ಬ್ಯಾಂಕೊಂದರಲ್ಲಿ‌ ಕೆಲಸ ಮಾಡಿ ಕೆಲವು ವರ್ಷಗಳ ಹಿಂದೆ ನಿವೃತ್ತರಾದವರು. ಒಮ್ಮೆ ವಿಶ್ವನಾಥ್ ಅವರು, ‌‌‌‍‌‌ತಾವು‍ ಹಿಂದೊಮ್ಮೆ, ವರ್ಗಾವಣೆಯ ಕಾರಣದಿಂದ ರಾಯಚೂರಿನಲ್ಲಿ ಕೆಲಸ ಮಾಡಲಾರಂಭಿಸಿದಾಗ, ತಮಗೆ ಆದ ಒಂದು ಅನುಭವವನ್ನು, ಸಮಾರಂಭಕ್ಕಾಗಿ ಸೇರಿದ್ದ ಜನರೊಡನೆ ಹಾಗೆಯೇ ಸುಮ್ಮನೆ […]

‘ಕತ್ರಿಗುಪ್ಪೆ’ ಎಂಬ ಹೆಸರು ಏಕೆ ಬಂತು ಬನಶಂಕರಿಯ ಆ ಬಡಾವಣೆಗೆ!?

ಬೆಂಗಳೂರಿಗರಿಗೆ ಪರಿಚಿತವಾದ ಒಂದು ಹೆಸರೆಂದರೆ ಕತ್ರಿಗುಪ್ಪೆ. ಬನಶಂಕರಿಗೆ ಸೇರುವ ಒಂದು ಬಡಾವಣೆ ಇದು. ನಾನು ಆ ಕಡೆಗೆ ಹೋದಾಗಲೆಲ್ಲ ಏನಿದು ಈ ಹೆಸರು? ಕತ್ತರಿಗುಪ್ಪೆಯಾ, ಕತ್ರಿಗುಪ್ಪೆಯಾ? ಇದರ ಅರ್ಥ ಏನಿರಬಹುದು ಎಂದು ಬಹಳ ಸಲ ಯೋಚಿಸುತ್ತಿದ್ದೆ.  ಒಂದಿಷ್ಟು ಕೇಳಿಕೆ, ಓದುಗಳ ನಂತರ ತಿಳಿಯಿತು – ಕತ್ರಿಗುಪ್ಪೆ ಒಂದು ಅನ್ವರ್ಥನಾಮ ಅಂತ. ಬಹಳ‌ ಹಿಂದೆ ಇಲ್ಲಿ ದೊಡ್ಡ ಪ್ರಮಾಣದಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿತ್ತಂತೆ. ಕಲ್ಲೊಡ್ಡರು ಅಲ್ಲಿನ ಕಲ್ಲುಗಳನ್ನು ಕತ್ತರಿಸಿ, ಕತ್ತರಿಸಿ, ಪಕ್ಕದಲ್ಲೇ ಗುಪ್ಪೆ( ರಾಶಿ) ಯಾಗಿ ಹಾಕ್ತಿದ್ರಂತೆ.‌ ಹಾಗಾಗಿ  […]

ಸತ್ಯನಾರಾಯಣ ಪೂಜೆಗೆ ಹೋಗಿದ್ದಕ್ಕೆ ಪ್ರಾಪ್ತಿಯಾಯ್ತು ಹೊಸಪದ ಫಲ!

ಇದು ವಾಸ್ತವಿಕವಾಗಿ ನಡೆದ ಘಟನೆ. 12-07-2026ನೇ ಭಾನುವಾರ ನಮ್ಮ ಕುಟುಂಬ ಸ್ನೇಹಿತರಾದ ಶ್ರೀ ಶಂಕರ್ ಶಾಸ್ತ್ರಿಯವರು, ತಮ್ಮ ಮಗಳು ಶರ್ಮಿಳಾ, ( ನನ್ನ ಭರತನಾಟ್ಯ ಶಿಷ್ಯೆ) ಹತ್ತನೇ ತರಗತಿಯಲ್ಲಿ ಗರಿಷ್ಠ ಅಂಕಗಳನ್ನು ಗಳಿಸಿ ತೇರ್ಗಡೆಯಾದ ಸಂತೋಷಕ್ಕಾಗಿ, ವಿಜಯನಗರದ ಹತ್ತಿರದ ಪಿಎಫ್ ಬಡಾವಣೆಯಲ್ಲಿನ ತಮ್ಮ ಮನೆಯಲ್ಲಿ ಸತ್ಯನಾರಾಯಣ ಸ್ವಾಮಿಯ ಪೂಜೆಯನ್ನು ಏರ್ಪಡಿಸಿದ್ದರು‌. ಸಾಂಗವಾಗಿ ನಡೆದ ಪೂಜೆಯ ನಂತರ ಅವರು ಏರ್ಪಡಿಸಿದ್ದ ಭೋಜನದ ಸಮಯದಲ್ಲಿ ನಡೆದದ್ದು ಈಗ ನಾನು ವಿವರಿಸಲಿರುವ ಪದಪ್ರಾಪ್ತಿ ಘಟನೆ. ಆ ಸಮಾರಂಭಕ್ಕೆ ಶಂಕರ್ ಶಾಸ್ತ್ರಿಯವರಿಗೆ ಪರಿಚಿತರಾದ […]

ಸೌಂದರ್ಯ ಮೀಮಾಂಸೆಯ ಮೊದಲ ಪಾಠ ಹೇಳಿಕೊಟ್ಟ ನಮ್ಮ ಸರೋಜಿನಿ ಮೇಡಂ 

ನಾನು ಮಂಗಳೂರಿನ ಕೆನರಾ  ಶಾಲೆಯಲ್ಲಿ, ಮಾಧ್ಯಮಿಕ ಹಂತದಲ್ಲಿ ಓದುತ್ತಿದ್ದಾಗ ನಮಗೆ ‘ಸರೋಜಿನಿ ಟೀಚರ್’  ಎಂಬ ಕನ್ನಡ ಅಧ್ಯಾಪಕಿ ಇದ್ದರು‌. ಎತ್ತರಕ್ಕೆ, ಬೆಳ್ಳಗಿದ್ದು, ತುಸು ಸ್ಥೂಲ ಕಾಯದ, ದೊಡ್ಡ ಹಣೆಬೊಟ್ಟು ಇಡುತ್ತಿದ್ದವರು ಆಕೆ. ನಗುತ್ತಾ, ನಗಿಸುತ್ತಾ, ತಮಾಷೆಗೆ ಗದರುತ್ತಾ ಖುಷಿಖುಷಿ ಲಹರಿಯಲ್ಲಿ ಪಾಠ ಮಾಡುತ್ತಿದ್ದ ಶಿಕ್ಷಕಿ ಅವರು. ಅವರಿಂದ ಕಲಿತ ಸೌಂದರ್ಯ ಪ್ರಜ್ಞೆಯ ಮೊದಲ ಪಾಠ ಈಗಲೂ ನೆನಪಿದೆ ನನಗೆ.  ಒಂದು ದಿನ ಈ ಮೇಡಂ ಅವರು  ನಮ್ಮನ್ನು ಅಂದರೆ ಎಂಟು-ಹತ್ತು ಜನ ವಿದ್ಯಾರ್ಥಿನಿಯರನ್ನು ಬೇರೆ ಶಾಲೆಯಲ್ಲಿ ನಡೆಯುತ್ತಿದ್ದ […]

ಕಾರು ಮತ್ತು ಅದರ ಭಾಗಗಳಿಗೇಕೆ ಮೂಲ ಕನ್ನಡ ಪದಗಳಿಲ್ಲ!?

ಕಾರ್, ಕ್ಲಚ್, ಬ್ರೇಕ್, ಆಕ್ಸಿಲಿರೇಟರ್, ಗೇರ್, ಸ್ಟೀರಿಂಗ್….. ಓಹೋಹೋಹೋ…..ಇಂಗ್ಲಿಷ್ ಪದಗಳ ಸಾಲುಸಾಲು! ‘ಕಾರು ಎಂಬ ನಾಲ್ಕು ಚಕ್ರದ ಅತಿ ಜನಪ್ರಿಯ ‌ಮೋಟಾರುಗಾಡಿಗೆ ಅರ್ಥಾತ್ ನಮ್ಮ ಸಮಾಜದ ಶ್ರೀಮಂತಿಕೆ ಹಾಗೂ ಆರಾಮಜೀವನದ ಒಂದು ಪ್ರಬಲ ಸಂಕೇತಕ್ಕೆ ಸಂಬಂಧಿಸಿದಂತೆ, ಕನ್ನಡ ಪದಗಳು ಇದ್ದಾವಾ?’ ಎಂಬ ಪ್ರಶ್ನೆ ನನ್ನನ್ನು ಕಾಡಿತು. ಕಾರ್ ಎಂಬ ಇಂಗ್ಲಿಷ್ ಪದದಿಂದ ಪ್ರಾರಂಭಿಸಿ ಮೇಲೆ ಹೇಳಿದ ಎಲ್ಲ ಪದಗಳಿಗೂ ನಾವು ‘ಉ’ ಸ್ವರ ಸೇರಿಸಿ ಕಾರು, ಕ್ಲಚ್ಚು, ಬ್ರೇಕು, ಆಕ್ಸಿಲಿರೇಟರು, ಸ್ಟೀರಿಂಗು …ಹೀಗೆ ಬಳಸುವುದನ್ನು ಅಭ್ಯಾಸ ಮಾಡಿಕೊಂಡಿದ್ದೇವೆ ಅಲ್ವಾ‌‌.. […]

ಬಟಾಟೆ ಪದದ ಗಮ್ಮತ್ತು, ‘ಆಲೂಗಡ್ಡೆ’ಯ ಕಿಮ್ಮತ್ತು!

ದಕ್ಷಿಣ ಕನ್ನಡದಲ್ಲಿ ಬೆಳೆದ ನನ್ನಂಥವರಿಗೆ ‘ಬಟಾಟೆ ಗಸಿ’ ತುಂಬ ಪರಿಚಿತ ಪದ. ತೆಂಗಿನಕಾಯಿ ತುರಿಯನ್ನು ರುಬ್ಬಿ‌ ಹಾಕಿ ಮಾಡುವ ಸಾಗುವಿನಂತಹ ಖಾದ್ಯ ಅದು. ಉಡುಪಿ ಶೈಲಿಯ ಅಡುಗೆಗಳಲ್ಲಿ ‘ಬಟಾಟೆ ಬಾಜಿ'( ಒಂದು ರೀತಿಯ ಪಲ್ಯ) ಸಹ ಒಂದು ಪ್ರಸಿದ್ಧ ವ್ಯಂಜನ.‌ ತುಂಬ ಸ್ವಾರಸ್ಯಕರವಾದ ವಿಷಯ ಅಂದರೆ ‘ಬಟಾಟ’ ಎಂಬ ಪೋರ್ಚುಗೀಸ್ ಭಾಷೆಯ ಪದವು, ಭಾರತದ ಪಶ್ಚಿಮ ಕರಾವಳಿಯ ರಾಜ್ಯಗಳಲ್ಲಿ, ಅಂದರೆ ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ, ‘ಬಟಾಟೆ’ ಆಗಿ ಉಳಿದಿದೆ. ಕರ್ನಾಟಕದ ಉಳಿದ ಭಾಗಗಳಲ್ಲಿ ಇದಕ್ಕೆ ಆಲೂಗಡ್ಡೆ […]

ದಕ್ಷಿಣ ಕನ್ನಡದ ಒಂದು ಹೂಕಟ್ಟಿನ  ಹೆಸರು ‘ಚೂಡಿ’‌ – ಈ ಪದದ ಜಾದೂ ನೋಡಿ!

ಮಂಗಳೂರಿನ ನನ್ನ ಬಾಲ್ಯದ ಅನೇಕ ಸ್ಮರಣೀಯ ಸಂಗತಿಗಳಲ್ಲಿ ‘ಚೂಡಿ’ ಒಂದು. ಏನಿದು ಚೂಡಿ? ಹೇಳ್ತೇನೆ ನಿಮ್ಗೆ …. ಆಯ್ತಾ? ಕನ್ನಡ ನಾಡಿನ ಕರಾವಳಿಯ ಭಾಗಗಳಲ್ಲಿ ಗೌಡ ಸಾರಸ್ವತ ಬ್ರಾಹ್ಮಣರು ಎಂಬ ಕೊಂಕಣಿ ಮಾತಾಡುವ ಸಮುದಾಯ ನೆಲೆಸಿದೆ. ಮಂಗಳೂರಿನಲ್ಲಿ ಕೂಡ ಇರುವ ಈ ಜನರು ಕೊಂಕಣಿಯನ್ನು ಮನೆಯಲ್ಲೂ, ಕನ್ನಡ ಹಾಗೂ ತುಳು ಭಾಷೆಗಳನ್ನು ಹೊರ ಪ್ರಪಂಚದ ವ್ಯವಹಾರದಲ್ಲೂ ಬಳಸುತ್ತಾರೆ. ಈ ಮೂರು ಭಾಷೆಗಳಲ್ಲಿ, ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಲೀಲಾಜಾಲವಾಗಿ ಜಿಗಿಯುತ್ತಾ, ಸ್ಥಳೀಯ ತುಳು ಹಾಗೂ ಕನ್ನಡ ಭಾಷಿಗರೊಂದಿಗೆ […]

ಸಲಾಡ್ ಗೆ ಕನ್ನಡ ಪದ ಯಾವುದು? ಹಸಿ ಪಲ್ಲೆ?

ಹೊರಗೆ ಊಟಕ್ಕೆ ಹೋದಾಗ ಅಥವಾ ಸಂತೋಷಕೂಟಗಳಲ್ಲಿ ಸಲಾಡ್ ( ಹೆಚ್ಚಿಟ್ಟ ಹಸಿತರಕಾರಿಗಳ ಖಾದ್ಯ) ಸಾಮಾನ್ಯವಾಗಿ ಇರುತ್ತದೆ ಅಲ್ಲವೆ? ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚು ಇರುವವರಂತೂ ಹುಡುಕಿ ತಿನ್ನುವ ತಿನಿಸು ಇದು.  ಹಾಂ, ಸಲಾಡ್ ಎಂಬ ಈ ಪದ ಕೇಳಿದಾಗಲೆಲ್ಲ ನನ್ನೊಳಗಿನ ಕನ್ನಡ ಕುತೂಹಲಿಗೆ ‘ಇದಕ್ಕೆ ಕನ್ನಡ ಸಂವಾದಿ ಪದ ಯಾವುದು?’ ಎಂಬ ಪ್ರಶ್ನೆ ಎದುರಾಗುತ್ತಿತ್ತು. ಸರಿ, ಉತ್ತರ ಹುಡುಕಲಾರಂಭಿಸಿದೆ. ‘ಸಲಾಡ್’ ಎಂಬ ಪದವು, ಪ್ರಾಚೀನ ಲ್ಯಾಟಿನ್ ಆಡುಭಾಷಾ ಪದಗಳಾದ ಸಾಲ್ (= ಉಪ್ಪು), ಸಲಾಟಾ (= ಉಪ್ಪು […]

ಅನುಚಿತ ಬಹುವಚನ ಪ್ರಯೋಗ ತಂದ ಫಜೀತಿ!

ಅದು ಒಂದು ಕಾಲೇಜಿನ ಅಧ್ಯಾಪಕರ ಸಂಘವು ಆಯೋಜಿಸಿದ್ದ ಒಂದು ಕಾರ್ಯಕ್ರಮ.‌ ಆ ದಿನ ವಯೋನಿವೃತ್ತಿ ಹೊಂದಲಿದ್ದ ಅಧ್ಯಾಪಕಿಯೊಬ್ಬರ ಗೌರವಾರ್ಥ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭ. ಸಾಮಾನ್ಯವಾಗಿ ಇಂತಹ ಸಮಾರಂಭಕ್ಕೆ ನಿವೃತ್ತಿ ಹೊಂದುತ್ತಿರುವವರ ಕುಟುಂಬ ಸದಸ್ಯರನ್ನು ಸಹ ಆಹ್ವಾನಿಸಲಾಗಿರುತ್ತದೆ.‌ ಅಂತೆಯೇ, ಈ ಸಮಾರಂಭದಲ್ಲಿ, ಮೇಲೆ ಹೇಳಿದ ಅಧ್ಯಾಪಕಿಯ ಪತಿಗೆ ಆಹ್ವಾನ ನೀಡಲಾಗಿದ್ದು, ಅವರು ಉಪಸ್ಥಿತರಿದ್ದರು. ಸಮಾರಂಭದ ನಿರೂಪಕರು ಭಾಷೆಯ ವಿಷಯದಲ್ಲಿ ಅಷ್ಟೇನೂ ಸೂಕ್ಷ್ಮತೆ ಹೊಂದಿರಲಿಲ್ಲವೆಂದು ತೋರುತ್ತೆ. ಆಕೆ ತಮ್ಮ ಸ್ವಾಗತ ನುಡಿಗಳಲ್ಲಿ ವೇದಿಕೆಯಲ್ಲಿ ಹಾಗೂ ಸಭೆಯಲ್ಲಿ ಇದ್ದವರನ್ನು ಸ್ವಾಗತಿಸುವ ಭರದಲ್ಲಿ […]

‘ದೇವಿ‌ ಹಾಕಿಸುವುದು‌’ ಎಂಬ ಪದದ ವಿಶೇಷತೆ

ದೇವಿ ಹಾಕಿಸುವುದು – ಕನ್ನಡ ಭಾಷೆಯ ಒಂದು ವಿಶಿಷ್ಟ ಪದಪ್ರಯೋಗ ಇದು‌. ಆಧುನಿಕ ವಿಜ್ಞಾನದ ಆವಿಷ್ಕಾರಕ್ಕಿಂತ ಮುಂಚೆ ಮೈತುಂಬ ಗುಳ್ಳೆಗಳು ಏಳುವ ವಿವಿಧ ರೀತಿಯ ಸಿಡುಬಿನ ಕಾಯಿಲೆಗಳು ಬಂದರೆ, ಅದಕ್ಕೆ ಕಾರಣ ಗ್ರಾಮದೇವತೆಯ ಕೋಪ ಎಂಬ ಭಾವನೆಯು ನಮ್ಮ‌ ಹಳ್ಳಿಗರಲ್ಲಿತ್ತು. ಅದಕ್ಕಾಗಿಯೇ ನೋಡಿ ಈ ಕಾಯಿಲೆಗೆ ‘ಅಮ್ಮ ಬಂದಿದೆ, ಅಮ್ಮ ಆಗಿದೆ’ ಎಂದೇ ಹೇಳುತ್ತಿದ್ದರು. Small pox ಎಂಬ ಸಿಡುಬಿಗಂತೂ ‘ದೇವಮ್ಮ‌ ಕಾಯಿಲೆ’ ಎಂಬ ಹೆಸರೇ ಇತ್ತು! ಮುಂದೆ, 1796ರಲ್ಲಿ, ಇಂಗ್ಲೆಂಡ್ ದೇಶದ ವಿಜ್ಞಾನಿ ಎಡ್ವರ್ಡ್ ಜನ್ನರ್ ಅವರು […]

Page 1 of 20

Kannada Sethu. All rights reserved.