ಕನ್ನಡ ವಿವೇಕ

ಬದುಕನ್ನು ಹಸನು ಮಾಡಲು ಕನ್ನಡ ಭಾಷೆ, ಸಂಸ್ಕೃತಿಯು ನಮಗೆ ನೀಡಿದ ಕೆಲವು ಗಾದೆ, ಸೂಕ್ತಿ, ನಾಣ್ಣುಡಿ, ಲೋಕೋಕ್ತಿ, ನಲ್ವಾತು ಇವುಗಳಲ್ಲಿ ವಾರಕ್ಕೆ ಒಂದರ ಕಿರು ಪರಿಚಯವನ್ನು ಈ ಅಂಕಣದಲ್ಲಿ ಮಾಡಿಕೊಡಲಾಗುತ್ತದೆ.

ಕನ್ನಡ ಗಾದೆಮಾತು – ಮಾತಿನ ಮಲ್ಲ, ಕೆಲಸಕ್ಕೆ ಒಲ್ಲ.

ಕೆಲವು ಜನ ಹೇಗಿರುತ್ತಾರೆಂದರೆ ಸದಾ ಕಾಲ ಮಾತು ಮಾತು ಮಾತು. ಕೆಲಸ ಮಾಡುವ ಬಗ್ಗೆ  ಮಾತಾಡುತ್ತಾರೆಯೇ ಹೊರತು ಕೆಲಸ ಮಾತ್ರ ಯಾವತ್ತೂ ಮಾಡುವುದಿಲ್ಲ. ಇಂತಹವರಿಂದ ಯಾರಿಗೂ ಯಾವ ಪ್ರಯೋಜನವೂ ಇಲ್ಲ.‌ ಸರ್ವಜ್ಞ ಕವಿ ಕೂಡ ಹೀಗೆ ಮಾತಾಡಿ- ಮಾತಾಡಿಯೇ ಹೊತ್ತು ಕಳೆದು, ಕೆಲಸವೇ ಮಾಡದವರನ್ನು ‘ತಾನಾಡಿಯೂ ಮಾಡದವನು ಅಧಮ ತಾ ಸರ್ವಜ್ಞ’ ಎಂದಿದ್ದಾನೆ‌‌. ಮಾತಲ್ಲೇ ಮಹಲು ಕಟ್ಟಿ ಸಮಯ ವ್ಯರ್ಥ ಮಾಡುವವರನ್ನು ಟೀಕಿಸುವಂತಹ ಗಾದೆ ಮಾತಿದು‌.  Kannada proverb – Maathina malla, kelasakke olla ( […]

ಕನ್ನಡ ಗಾದೆಮಾತು – ಅಂಬಲಿ ಕುಡಿದರೂ ಇಂಬಾಗಿ ಕುಡಿ.

‘ಅಂಬಲಿ’ ಎನ್ನುವುದು ರಾಗಿಯ ಹಿಟ್ಟಿನಿಂದ ತಯಾರಿಸುವ ಗಂಜಿಯಂತಹ ಖಾದ್ಯ. ಇದನ್ನು ಬಡವರ ಆಹಾರ ಎನ್ನಲಾಗುತ್ತದೆ. ‘ಇಂಬು’ ಪದಕ್ಕಿರುವ ಅನೇಕ ಅರ್ಥಗಳಲ್ಲಿ ಸುಖ, ಸಂತೋಷ, ಅನುಕೂಲತೆ, ಲೇಸು ಎಂಬ ಅರ್ಥಗಳೂ ಇವೆ‌. ಮೇಲೆ ಪ್ರಸ್ತಾಪವಾಗಿರುವ ಗಾದೆ ಮಾತು ಅಂಬಲಿಯನ್ನು ಅಂದರೆ ಅತ್ಯಂತ ಬಡತನದ ಆಹಾರವನ್ನು ಕುಡಿದರೂ ಅದನ್ನು ಇಂಬಾಗಿ ಅಂದರೆ ಸುಖ-ಸಂತೋಷವುಳ್ಳ ಅನುಕೂಲಕರ ವಾತಾವರಣದಲ್ಲಿ ಸೇವಿಸಬೇಕು, ಯಾವುದೋ ಮುಜುಗರ, ಹಂಗು, ಅಸುಖ, ಅವಮಾನಗಳಿರುವ ವಾತಾವರಣದಲ್ಲಿ ಕುಡಿಯಬಾರದು ಎಂದು ಹೇಳುತ್ತದೆ. ಮನುಷ್ಯನಿಗೆ ಮುಜುಗರದ ವೈಭವ, ಅಹಿತಕರ ಸಮೃದ್ಧಿಗಿಂತ, ತನ್ನದಿದು ಅನ್ನಿಸುವ […]

ಕನ್ನಡ ಗಾದೆಮಾತು – ನಾನೂ ಯಜಮಾನ, ನೀನೂ ಯಜಮಾನ, ಕುದುರೆ ಕಟ್ಟೋರು ಯಾರು?

ಕೆಲವು ಸಲ ವ್ಯಕ್ತಿಯು ಅಹಂಕಾರದಿಂದಲೋ ಅಥವಾ ಕೇವಲ ಸೋಮಾರಿತನದಿಂದಲೋ ತಾನು ಮಾಡಬೇಕಾದ ಅಥವಾ ಮಾಡಬಹುದಾದ ಕೆಲಸವನ್ನು ಮಾಡುವುದಿಲ್ಲ.‌ ಉದಾಹರಣೆಗೆ, ಮನೆಯಲ್ಲಿ ಕಸ ಬಿದ್ದಿದೆ ಎಂದಿಟ್ಟುಕೊಳ್ಳೋಣ. ಆ ಮನೆಯ ನಿವಾಸಿಗಳೆಲ್ಲರೂ ‘ನಾನೊಂದು ದೊಡ್ಡ ಜನ, ನಾನ್ಯಾಕೆ ಕಸ ತೆಗೆಯಬೇಕು? ಬೇಕಾದ್ರೆ ನೀನು ತೆಗಿ” ಎಂದು ಇನ್ನೊಬ್ಬರಿಗೆ ಹೇಳುತ್ತಿದ್ದರೆ ಆ ಕಸ ಅಲ್ಲೇ ಇರುತ್ತದೆ. ಮನೆ/ಕಛೇರಿ, ಸಂಸ್ಥೆ ಅಂದ ಮೇಲೆ ಮಾಡಲೇಬೇಕಾದ ಕೈಮೈ ಕೆಲಸಗಳು ಇದ್ದೇ ಇರುತ್ತವೆ. ಯಾರೋ ಒಬ್ಬರು ಅವನ್ನು ಮಾಡಲೇಬೇಕು. ಉದಾಹರಣೆಗೆ, ಕುದುರೆ ಸವಾರಿ ಮಾಡಿದರೆ ಸಾಲದು, […]

ಕನ್ನಡ ಗಾದೆಮಾತು – ಧೈರ್ಯವಿದ್ದವರಿಗೇ ದೈವದ ಸಹಾಯ.

ಧೈರ್ಯ ಎಂಬುದು ಜೀವನದಲ್ಲಿ ತುಂಬ ಮುಖ್ಯ. ಈಜು ಕಲಿಯುವುದರಿಂದ ಹಿಡಿದು ಮೇಲಧಿಕಾರಿಗಳು ಮಾಡಿದ ತಪ್ಪನ್ನು ತಪ್ಪು ಎಂದು ಅವರ ಎದುರಿಗೇ ಅನ್ನುವುದರ ತನಕ, ವಾಹನ ತುಂಬಿರುವ ರಸ್ತೆ ದಾಟುವುದರಿಂದ ಹಿಡಿದು, ಕಹಿಯಾದರೂ ಸತ್ಯವನ್ನು ಬಾಯಿಬಿಟ್ಟು ಹೇಳುವ ತನಕ  ಪ್ರತಿಯೊಂದಕ್ಕೂ ಧೈರ್ಯ ಬೇಕು‌. ಅದಕ್ಕೇ ಧೈರ್ಯವನ್ನು ಎಲ್ಲ ಸದ್ಗುಣಗಳ ತಾಯಿ ಅನ್ನುತ್ತದೆ ಒಂದು ಇಂಗ್ಲಿಷ್ ಸೂಕ್ತಿ. ಆಸ್ತಿಕರು ಅಂದರೆ ದೇವರನ್ನು ನಂಬುವವರು ಸಹ ಧೈರ್ಯ ಇದ್ದವರಿಗೆ ಮಾತ್ರ ದೈವವು ಸಹಾಯ ಮಾಡುತ್ತದೆ ಎನ್ನುತ್ತಾರೆ! ಅಂದರೆ ಯಾವುದೇ ಸವಾಲಿನ ಕೆಲಸವಾದರೂ […]

ಕನ್ನಡ ಗಾದೆಮಾತು – ಮಾತು ಕಲ್ತ ನಾಯಿ ಬೇಟೆ ಆಡುತ್ಯೆ?

ಹಿಂದೆ, ನಮ್ಮ ಗ್ರಾಮೀಣ ಸಮಾಜಗಳಲ್ಲಿ‌ ಕೃಷಿ ಹಾಗೂ ಪಶುಪಾಲನಾ ವೃತ್ತಿಯಲ್ಲಿ‌ ತೊಡಗಿದ್ದ ಜನರು ತಮ್ಮ ಕುರಿಕೋಳಿ, ದನಕರುಗಳನ್ನು ಕಳ್ಳರು ಹಾಗೂ ವನ್ಯಪ್ರಾಣಿಗಳಿಂದ ರಕ್ಷಿಸಲು ಬೇಟೆನಾಯಿಗಳನ್ನು ಸಾಕುತ್ತಿದ್ದರು‌. ಜೊತೆಗೆ ಕಾಡಿನಲ್ಲಿ ತಾವು ಬೇಟೆಯಾಡಲು ಹೋದಾಗಲೂ ಈ ನಾಯಿಗಳನ್ನು ಬೇಟೆಯಲ್ಲಿ ಸಹಕರಿಸಲು ಕರೆದುಕೊಂಡು ಹೋಗುತ್ತಿದ್ದರು‌. ಅಂದರೆ ಈ ನಾಯಿಗಳ ಮೂಲ ಕೆಲಸ ಬೇಟೆಯೇ ಆಗಿತ್ತು ಅನ್ನುವುದನ್ನು ಹೆಚ್ಚು ವಿವರಿಸಬೇಕಿಲ್ಲ. ಆದರೆ, ಅಪ್ಪಿತಪ್ಪಿ ಆ ನಾಯಿ ಮನುಷ್ಯರ ಹಾಗೆ ಮಾತಾಡುವುದನ್ನು ಕಲಿಯಿತು ಎಂದಿಟ್ಟುಕೊಳ್ಳಿ‌. ಆಗ ಅದು ತನಗೆ ಮಾತು ಬರದಿದ್ದಾಗ ಶ್ರದ್ಧೆಯಿಂದ […]

ಕನ್ನಡ ಗಾದೆಮಾತು – ನುಂಗಿಕೊಂಡ ಸಂಕಟ ಬೆಂಕಿಗಿಂತ ಹೆಚ್ಚು.

ಕೆಲವು ಸಲ ಮನುಷ್ಯರು, ತಮಗೆ ಆದ ತೀವ್ರ ನೋವು, ಸಂಕಟ, ಅವಮಾನಗಳನ್ನು ನುಂಗಿಕೊಂಡು ಏನೂ ಹೇಳದೆ, ಪ್ರತಿಕ್ರಯಿಸದೆ, ಹಾಗೇ ಸುಮ್ಮನಿದ್ದುಬಿಡುತ್ತಾರೆ.‌ ಮೇಲ್ನೋಟಕ್ಕೆ ಅವರು ಆರಾಮಾಗಿ ಇದ್ದಾರೆ ಅನ್ನಿಸಿದರೂ ಆ ಸಂಕಟ ಒಳಗೇ ಅವರನ್ನು ತೀವ್ರವಾಗಿ ಸುಡುತ್ತಿರುತ್ತದೆ. ಆದರೆ ಕಾಲಾನಂತರ ಈ ಸಂಕಟವು ಯಾವುದಾದರೂ ದೈಹಿಕ, ಮಾನಸಿಕ ರೋಗವಾಗಿ ಪರಿವರ್ತನೆ ಆಗಬಹುದು‌. ಅಥವಾ ಈ ಸಂಕಟದ ಕಾರಣದಿಂದಾಗಿ ಆ ವ್ಯಕ್ತಿಯು ಇಡೀ ಲೋಕದ ವಿರುದ್ಧ ತಿರುಗಿ ಬೀಳಬಹುದು‌. ಆಧುನಿಕ ಮನೋವಿಜ್ಞಾನ ಸಹ ‘ತಾನು ನುಂಗಿಕೊಂಡ ಸಂಕಟವು ವ್ಯಕ್ತಿಯ ಮಟ್ಟಿಗೆ ವಿಷಕಾರಿಯಾಗುತ್ತದೆ, […]

ಕನ್ನಡ ಗಾದೆ ಮಾತು – ಎಮ್ಮೆ ಮೇಲೆ ಮಳೆ ಬಿದ್ದಂಗೆ.

 ಎಮ್ಮೆಗೆ ನೀರೆಂದರೆ ಬಹಳ ಇಷ್ಟ ಎಂಬುದು‌ ಎಲ್ಲರಿಗೂ ಗೊತ್ತಿರುವ ವಿಷಯ. ಸದಾ ನೀರಿನಲ್ಲೇ ಇರಲು ಇಷ್ಟ ಪಡುವ ಪ್ರಾಣಿ ಅದು.‌ ಹೀಗಾಗಿ ಮಳೆ ಬಂತೆಂದರೆ ಮನುಷ್ಯರು ಅಥವಾ ಬೇರೆ ಪ್ರಾಣಿಗಳು ತಡಬಡಾಯಿಸಿ‌, ಮಳೆಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಸೂರನ್ನು ಹುಡುಕಿಕೊಂಡು  ಓಡುವಂತೆ ಎಮ್ಮೆ ಓಡುವುದಿಲ್ಲ. ತನ್ನ ಮೇಲೆ ಧಾರಾಕಾರ ಮಳೆ ಬೀಳುತ್ತಿದ್ದರೂ ತನಗೆ ಏನೂ ಆಗಿಯೇ ಇಲ್ಲ ಎಂಬಂತೆ ಆರಾಮಾಗಿ ನಿಂತಿರುತ್ತದೆ ಅಥವಾ ನಡೆಯುತ್ತಿರುತ್ತದೆ. ಅದರ ಮೈಯಲ್ಲಿ ಸಾಕಷ್ಟು ಬೆವರು  ಗ್ರಂಥಿಗಳಿಲ್ಲ‌, ತನ್ನ ಮೈಯನ್ನು ತಂಪಾಗಿ ಇಟ್ಟುಕೊಳ್ಳಲು ಅದು […]

ಕನ್ನಡ ಗಾದೆಮಾತು – ಗಂಗಾಳ ತೊಳೆಯಕ್ಕೆ ಮಂಗಳವಾರ ಯಾಕೆ ಬರಬೇಕು?

ಗಂಗಾಳ ಎಂದರೆ ತಟ್ಟೆ.‌ ಊಟ ಮಾಡಿದ ನಂತರ ಗಂಗಾಳ ಅಂದರೆ ತಟ್ಟೆ ತೊಳೆಯುವುದು ಸಾಮಾನ್ಯ ಅಲ್ಲವೆ? ಈ ಕೆಲಸ ಮಾಡಲು ಮೀನಮೇಷ ಎಣಿಸುವ ಅಗತ್ಯ ಇಲ್ಲ. ಇದನ್ನು ತಕ್ಷಣ ಮಾಡಿದರೆ ಮುಂದಿನ ಊಟಕ್ಕೆ ಸ್ವಚ್ಛ ತಟ್ಟೆ ಇರುತ್ತದೆ. ‌ತೊಳೆಯಲು ಸೋಮಾರಿತನ ಮಾಡಿದರೆ, ಆ  ದಿನ ಕಳೆಯುವಷ್ಟರಲ್ಲಿ ತೊಳೆಯದ ತಟ್ಟೆಗಳ ಸಂಖ್ಯೆ ತುಂಬ ಹೆಚ್ಚಾಗಿ ಅಡುಗೆಮನೆಯಲ್ಲಿ ಸಮಸ್ಯೆ ಉಂಟಾಗುತ್ತದೆ. ಇಲ್ಲಿ ತಟ್ಟೆ ತೊಳೆಯುವುದು ಎಂಬುದು ತಕ್ಷಣ ಮಾಡಿ‌ ಮುಗಿಸಬೇಕಾದ ಕೆಲಸಗಳಿಗೆ ಒಂದು ಸಂಕೇತವಾಗಿದೆ.  Kannada proverb – Gangala tholeyakke […]

ಕನ್ನಡ ಗಾದೆಮಾತು – ಅಕ್ಕರೆಯ ರುಚಿ ಮುಂದೆ, ಸಕ್ಕರೆಯ ರುಚಿ ಹಿಂದೆ.

ಮನುಷ್ಯರ ನಡುವಿನ ಪ್ರೀತಿ ವಿಶ್ವಾಸ ಗಳನ್ನು ಕುರಿತು ತುಂಬ ನಿದರ್ಶನೀಯವಾಗಿ ಹೇಳಿರುವ ಗಾದೆಮಾತು ಇದು. ಎಷ್ಟೇ ಸಿಹಿಯಾದ, ರುಚಿಯಾದ ಊಟವನ್ನು ಬಡಿಸಿದರೂ ಹಾಗೆ ಬಡಿಸುವಾಗ ಅಕ್ಕರೆ, ಪ್ರೀತಿ, ವಿಶ್ವಾಸ ಇಲ್ಲವೆಂದರೆ ಆ ಊಟ  ನಮ್ಮ ಬಾಯಿಗೆ ರುಚಿಸುವುದಿಲ್ಲ, ಹೆಚ್ಚು ತಿನ್ಮಬೇಕು ಅನ್ನಿಸುವುದಿಲ್ಲ. ಆದರೆ, ತಿಳಿಗಂಜಿಯ ಸರಳ ಊಟವನ್ನೇ ಆಗಲಿ, ಅಕ್ಕರೆಯಿಂದ ಕೊಟ್ಟರೆ ಮನಸ್ಸು ಸಂತಸ ಪಟ್ಟು, ಎರಡು ತುತ್ತು ಹೆಚ್ಚಾಗಿಯೇ ಸೇರಿ ಹೊಟ್ಟೆ ತಂಪಾಗುತ್ತದೆ. ಹೀಗೆ, ಈ ಗಾದೆಮಾತು,  ನಮ್ಮ‌‌ ಜೀವನದಲ್ಲಿ, ಪದಾರ್ಥವೈಭವಕ್ಕಿಂತ ಅಕ್ಕರೆ, ವಿಶ್ವಾಸಗಳು ಮುಖ್ಯ […]

ಕನ್ನಡ ಗಾದೆಮಾತು – ಊಟಕ್ಕೆ ಮೊದಲಿರಬೇಕು, ಸ್ನಾನಕ್ಕೆ ಕೊನೆಗಿರಬೇಕು.

ನೈಜ ಜೀವನಾನುಭವದಿಂದ ಮೂಡಿ ಬಂದಿರುವ ಗಾದೆಮಾತು ಇದು. ಮನೆಯಲ್ಲಿ, ಹಬ್ಬ – ಹರಿದಿನಗಳಲ್ಲಿ ಅಥವಾ ಮದುವೆ – ಮುಂಜಿಗಳಲ್ಲಿ, ಅಡಿಗೆ ಆದ ತಕ್ಷಣ ಅಂದರೆ ಮೊದಲ ಪಂಕ್ತಿಯಲ್ಲೇ ಊಟ ಮಾಡಿದರೆ ಅಡಿಗೆ ಬಿಸಿಬಿಸಿಯಾಗಿ, ವಿಪುಲವಾಗಿದ್ದು ಎಲ್ಲ ಭಕ್ಷ್ಯಭೋಜ್ಯಗಳೂ ಸಾಕುಬೇಕೆಂಬಷ್ಟು ಸಿಗುತ್ತವೆ. ಅದೇ ಕೊನೆಯಲ್ಲಿ ಊಟ ಮಾಡುತ್ತೇವೆ ಎಂದರೆ ಹೋಳುಕಾಳು ಇಲ್ಲದ ಸಾಂಬಾರು, ಆರಿ ಹೋದ ಬಜ್ಜಿ- ಬೋಂಡಾ ತಿನ್ನಬೇಕಾಗಬಹುದು, ಅಥವಾ ಊಟಕ್ಕೆಂದು ಮಾಡಿದ ಪಲ್ಯವೋ, ಸಿಹಿತಿಂಡಿಗಳೋ ಮುಗಿದೇ ಹೋಗಿರಬಹುದು‌. ಹಾಗೆಯೇ ಮೊದಲು ಸ್ನಾನ ಮಾಡುತ್ತೇವೆಂದರೆ (ಮುಖ್ಯವಾಗಿ ಹಳೆಕಾಲದ […]

Page 1 of 20

Kannada Sethu. All rights reserved.