ಮನುಷ್ಯರ ನಡುವಿನ ಪ್ರೀತಿ ವಿಶ್ವಾಸ ಗಳನ್ನು ಕುರಿತು ತುಂಬ ನಿದರ್ಶನೀಯವಾಗಿ ಹೇಳಿರುವ ಗಾದೆಮಾತು ಇದು. ಎಷ್ಟೇ ಸಿಹಿಯಾದ, ರುಚಿಯಾದ ಊಟವನ್ನು ಬಡಿಸಿದರೂ ಹಾಗೆ ಬಡಿಸುವಾಗ ಅಕ್ಕರೆ, ಪ್ರೀತಿ, ವಿಶ್ವಾಸ ಇಲ್ಲವೆಂದರೆ ಆ ಊಟ ನಮ್ಮ ಬಾಯಿಗೆ ರುಚಿಸುವುದಿಲ್ಲ, ಹೆಚ್ಚು ತಿನ್ಮಬೇಕು ಅನ್ನಿಸುವುದಿಲ್ಲ. ಆದರೆ, ತಿಳಿಗಂಜಿಯ ಸರಳ ಊಟವನ್ನೇ ಆಗಲಿ, ಅಕ್ಕರೆಯಿಂದ ಕೊಟ್ಟರೆ ಮನಸ್ಸು ಸಂತಸ ಪಟ್ಟು, ಎರಡು ತುತ್ತು ಹೆಚ್ಚಾಗಿಯೇ ಸೇರಿ ಹೊಟ್ಟೆ ತಂಪಾಗುತ್ತದೆ. ಹೀಗೆ, ಈ ಗಾದೆಮಾತು, ನಮ್ಮ ಜೀವನದಲ್ಲಿ, ಪದಾರ್ಥವೈಭವಕ್ಕಿಂತ ಅಕ್ಕರೆ, ವಿಶ್ವಾಸಗಳು ಮುಖ್ಯ […]
ಕನ್ನಡ ವಿವೇಕ
ಬದುಕನ್ನು ಹಸನು ಮಾಡಲು ಕನ್ನಡ ಭಾಷೆ, ಸಂಸ್ಕೃತಿಯು ನಮಗೆ ನೀಡಿದ ಕೆಲವು ಗಾದೆ, ಸೂಕ್ತಿ, ನಾಣ್ಣುಡಿ, ಲೋಕೋಕ್ತಿ, ನಲ್ವಾತು ಇವುಗಳಲ್ಲಿ ವಾರಕ್ಕೆ ಒಂದರ ಕಿರು ಪರಿಚಯವನ್ನು ಈ ಅಂಕಣದಲ್ಲಿ ಮಾಡಿಕೊಡಲಾಗುತ್ತದೆ.
Like us!
Follow us!