ಕನ್ನಡ ವಿವೇಕ

ಬದುಕನ್ನು ಹಸನು ಮಾಡಲು ಕನ್ನಡ ಭಾಷೆ, ಸಂಸ್ಕೃತಿಯು ನಮಗೆ ನೀಡಿದ ಕೆಲವು ಗಾದೆ, ಸೂಕ್ತಿ, ನಾಣ್ಣುಡಿ, ಲೋಕೋಕ್ತಿ, ನಲ್ವಾತು ಇವುಗಳಲ್ಲಿ ವಾರಕ್ಕೆ ಒಂದರ ಕಿರು ಪರಿಚಯವನ್ನು ಈ ಅಂಕಣದಲ್ಲಿ ಮಾಡಿಕೊಡಲಾಗುತ್ತದೆ.

ಕನ್ನಡ ಗಾದೆಮಾತು – ಅಕ್ಕರೆಯ ರುಚಿ ಮುಂದೆ, ಸಕ್ಕರೆಯ ರುಚಿ ಹಿಂದೆ.

ಮನುಷ್ಯರ ನಡುವಿನ ಪ್ರೀತಿ ವಿಶ್ವಾಸ ಗಳನ್ನು ಕುರಿತು ತುಂಬ ನಿದರ್ಶನೀಯವಾಗಿ ಹೇಳಿರುವ ಗಾದೆಮಾತು ಇದು. ಎಷ್ಟೇ ಸಿಹಿಯಾದ, ರುಚಿಯಾದ ಊಟವನ್ನು ಬಡಿಸಿದರೂ ಹಾಗೆ ಬಡಿಸುವಾಗ ಅಕ್ಕರೆ, ಪ್ರೀತಿ, ವಿಶ್ವಾಸ ಇಲ್ಲವೆಂದರೆ ಆ ಊಟ  ನಮ್ಮ ಬಾಯಿಗೆ ರುಚಿಸುವುದಿಲ್ಲ, ಹೆಚ್ಚು ತಿನ್ಮಬೇಕು ಅನ್ನಿಸುವುದಿಲ್ಲ. ಆದರೆ, ತಿಳಿಗಂಜಿಯ ಸರಳ ಊಟವನ್ನೇ ಆಗಲಿ, ಅಕ್ಕರೆಯಿಂದ ಕೊಟ್ಟರೆ ಮನಸ್ಸು ಸಂತಸ ಪಟ್ಟು, ಎರಡು ತುತ್ತು ಹೆಚ್ಚಾಗಿಯೇ ಸೇರಿ ಹೊಟ್ಟೆ ತಂಪಾಗುತ್ತದೆ. ಹೀಗೆ, ಈ ಗಾದೆಮಾತು,  ನಮ್ಮ‌‌ ಜೀವನದಲ್ಲಿ, ಪದಾರ್ಥವೈಭವಕ್ಕಿಂತ ಅಕ್ಕರೆ, ವಿಶ್ವಾಸಗಳು ಮುಖ್ಯ […]

ಕನ್ನಡ ಗಾದೆಮಾತು – ಊಟಕ್ಕೆ ಮೊದಲಿರಬೇಕು, ಸ್ನಾನಕ್ಕೆ ಕೊನೆಗಿರಬೇಕು.

ನೈಜ ಜೀವನಾನುಭವದಿಂದ ಮೂಡಿ ಬಂದಿರುವ ಗಾದೆಮಾತು ಇದು. ಮನೆಯಲ್ಲಿ, ಹಬ್ಬ – ಹರಿದಿನಗಳಲ್ಲಿ ಅಥವಾ ಮದುವೆ – ಮುಂಜಿಗಳಲ್ಲಿ, ಅಡಿಗೆ ಆದ ತಕ್ಷಣ ಅಂದರೆ ಮೊದಲ ಪಂಕ್ತಿಯಲ್ಲೇ ಊಟ ಮಾಡಿದರೆ ಅಡಿಗೆ ಬಿಸಿಬಿಸಿಯಾಗಿ, ವಿಪುಲವಾಗಿದ್ದು ಎಲ್ಲ ಭಕ್ಷ್ಯಭೋಜ್ಯಗಳೂ ಸಾಕುಬೇಕೆಂಬಷ್ಟು ಸಿಗುತ್ತವೆ. ಅದೇ ಕೊನೆಯಲ್ಲಿ ಊಟ ಮಾಡುತ್ತೇವೆ ಎಂದರೆ ಹೋಳುಕಾಳು ಇಲ್ಲದ ಸಾಂಬಾರು, ಆರಿ ಹೋದ ಬಜ್ಜಿ- ಬೋಂಡಾ ತಿನ್ನಬೇಕಾಗಬಹುದು, ಅಥವಾ ಊಟಕ್ಕೆಂದು ಮಾಡಿದ ಪಲ್ಯವೋ, ಸಿಹಿತಿಂಡಿಗಳೋ ಮುಗಿದೇ ಹೋಗಿರಬಹುದು‌. ಹಾಗೆಯೇ ಮೊದಲು ಸ್ನಾನ ಮಾಡುತ್ತೇವೆಂದರೆ (ಮುಖ್ಯವಾಗಿ ಹಳೆಕಾಲದ […]

ಕನ್ನಡ ಗಾದೆಮಾತು – ನಾಯಿಗೆ ಹೇಳಿದ್ರೆ ನಾಯಿ ತನ್ನ ಬಾಲಕ್ಕೆ ಹೇಳ್ತು.

ಕೆಲವರಿಗೆ ಏನಾದರೂ ಒಂದು ಕೆಲಸ ಹೇಳಿದರೆ, ಅದನ್ನು ತಮಗೆ ಮಾಡಲು ಸಾಧ್ಯ ಇದ್ದರೂ, ಬಿಡುವಿದ್ದರೂ ತಾವು ಮಾಡುವುದಿಲ್ಲ. ಬದಲಿಗೆ ಆ ಕೆಲಸವನ್ನು ತಮ್ಮ ಪಕ್ಕದಲ್ಲಿರುವವರಿಗೋ, ಸ್ನೇಹಿತರಿಗೋ, ತಮ್ಮ ಸಿಬ್ಬಂದಿಗೋ ಹೇಳುತ್ತಾರೆ. ತರಗತಿಯಲ್ಲಿ ವಿದ್ಯಾರ್ಥಿಗಳು, ಮನೆಯಲ್ಲಿ ಕುಟುಂಬ ಸದಸ್ಯರು ಹೀಗೆ ಮಾಡುವುದುಂಟು‌.  ಹೀಗಾದಾಗ ಆ ಕೆಲಸ ಆಗೇ ಆಗುತ್ತದೆ ಎಂದು ನಾವು ಖಾತ್ರಿಯಾಗಿ ಹೇಳಲು  ಸಾಧ್ಯ ಆಗುವುದಿಲ್ಲ. ಏಕೆಂದರೆ, ತಾವು ಮಾಡಬೇಕಾದ/ಮಾಡಬಹುದಾದ ಕೆಲಸವನ್ನು ಬೇರೆಯವರಿಗೆ ಜಾರಿಸುವವರನ್ನು ನೆಚ್ಚಿಕೊಳ್ಳಲು, ನಂಬಲು ಸಾಧ್ಯ ಆಗದು‌. ಇಂತಹ ವರ್ತನೆಯು ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ. […]

ಕನ್ನಡ ಗಾದೆಮಾತು – ಕೀಟ ಸಣ್ಣದಾದ್ರೆ ಕಾಟ ಸಣ್ಣದೆ?

ಸೊಳ್ಳೆ, ನುಸಿ, ನೊಣಗಳಂತಹ ಕೀಟಗಳು ಗಾತ್ರದಲ್ಲಿ ಸಣ್ಣವಾದರೂ ಕಚ್ಚಿ, ಗುಂಯ್ಗುಟ್ಟಿ, ನಮ್ಮ ಆಹಾರವನ್ನು ಕಲುಷಿತಗೊಳಿಸುತ್ತವೆ‌. ಹೀಗೆಯೇ ಕೆಲವು ಚಿಕ್ಕ ಚಿಕ್ಕ ಸಮಸ್ಯೆಗಳು, ಉದಾಹರಣೆಗೆ, ದಾರಿ ಮಧ್ಯೆ ಚಪ್ಪಲಿ ಕಿತ್ತುಹೋಗುವುದು, ಪೆನ್ನಿನ ಮುಚ್ಚಳ ಕಳೆದುಹೋಗುವುದು, ಅಥವಾ ಸಣ್ಣಗೆ ಶೀತವಾಗಿ ಸದಾ ಮೂಗು‌ ಸುರಿಯಲಾರಂಭಿಸುವುದು ….ಇಂಥವು ಸಣ್ಣ ಸಮಸ್ಯೆಗಳಾದರೂ ನಮಗೆ ಸಾಕಷ್ಟು ಕಿರಿಕಿರಿಯುಂಟುಮಾಡುತ್ತವೆ‌. ಕೆಲವು ಸಲವಂತೂ ಹೆಜ್ಜೇನು ಕಡಿಯುವುದು, ರೋಗ ತರುವ ಸೊಳ್ಳೆ ಕಚ್ಚುವುದು – ಈ  ಮುಂತಾದ ಘಟಿತಗಳು ನಿಜಕ್ಕೂ ಮಾರಣಾಂತಿಕ ತೊಂದರೆ ಮಾಡಬಹುದು. ಇದಕ್ಕಾಗಿಯೇ ಈ ಗಾದೆ […]

ಕನ್ನಡ ಗಾದೆಮಾತು – ಜಿದ್ದು, ಜೀವಕ್ಕೆ ಗುದ್ದು‌.

 ಜಿದ್ದು ಎಂಬ ಪದಕ್ಕೆ ನಿಘಂಟಿನಲ್ಲಿ ಬದ್ಧ ಮಾತ್ಸರ್ಯ, ವೈರ, ಹಠ, ಸೇಡು ಮುಂತಾದ ಅರ್ಥಗಳಿವೆ. ಒಟ್ಟಿನಲ್ಲಿ ಇವೆಲ್ಲವೂ ನಕಾರಾತ್ಮಕ ಭಾವನೆಗಳು.‌ ಇನ್ನೊಬ್ಬರ ಬಗ್ಗೆ ಹಗೆತನ ಸಾಧಿಸುವುದು, ದ್ವೇಷ ಇಟ್ಟುಕೊಳ್ಳುವುದು … ಇವೆಲ್ಲ ನಮ್ಮ ಜೀವಕ್ಕೆ ಆರಾಮ ತರುವ ವಿಷಯಗಳಲ್ಲ.  ಜೀವಕ್ಕೆ ಗುದ್ದು ಕೊಟ್ಟಂತೆ ನಮಗೆ ಕಷ್ಟ ಕೊಡುವ ಅನುಭವಗಳು ಇವು. ದುರ್ಯೋಧನನು ಪಾಂಡವರ ಮೇಲೆ ಜಿದ್ದು ಇಟ್ಟುಕೊಂಡು ತನ್ನ ಸಕಲ ಸಾಮ್ರಾಜ್ಯವನ್ನು ಮತ್ತು ನೆಮ್ಮದಿಯನ್ನು ಕಳೆದುಕೊಂಡಂತೆ ಇದು. ಹೀಗಾಗಿ ನಾವು‌ ಜಿದ್ದು ಎಂಬ ವಿಷವನ್ನು ನಮ್ಮೊಳಗೆ ಇಟ್ಟುಕೊಳ್ಳಬಾರದೆಂಬ […]

ಕನ್ನಡ ಗಾದೆಮಾತು – ನೋಡಿ ತಿಳೀಬೇಕು, ಮಾಡಿ ಕಲೀಬೇಕು.

ಜೀವನದಲ್ಲಿ ನಾವು ಜಯಶಾಲಿಗಳಾಗಬೇಕಾದರೆ ಅನೇಕ  ಸಂಗತಿಗಳನ್ನು ತಿಳಿಯಬೇಕಾಗುತ್ತದೆ, ಕಲಿಯಬೇಕಾಗುತ್ತದೆ‌. ಬೇರೆಯವರು ಕೆಲಸ ಮಾಡುವ ರೀತಿಯನ್ನು ನೋಡಿ ನಾವು ಬಹಳಷ್ಟು ವಿಷಯಗಳ ಬಗ್ಗೆ ತಿಳಿಯಬಹುದು‌ ; ಉದಾಹರಣೆಗೆ ಮನೆಯಲ್ಲಿ, ಕಛೇರಿಯಲ್ಲಿ ನಮಗಿಂತ ಹಿರಿಯರು, ಅನುಭವಸ್ಥರು ಕೆಲಸ ಮಾಡುವುದನ್ನು ನೋಡಿ ತಿಳಿದುಕೊಳ್ಳುವುದು. ಅದರೆ ಇನ್ನು ಕೆಲವು ಕೆಲಸಗಳು ನಾವು ಮಾಡಿದಾಗಲೇ ಅವು ನಮಗೆ ಬರುವುದು‌ ; ಉದಾಹರಣೆಗೆ, ಈಜು,  ರುಚಿಕರ ಅಡಿಗೆ, ಹಾಗೆಯೇ ಕಾರು ಚಾಲನೆ ಮುಂತಾದ ಕೌಶಲ್ಯ ಬೇಡುವ ಕೆಲಸಗಳು‌. ನೋಡಿ ತಿಳಿದರೂ ನಿಜವಾಗಿಯೂ ಒಂದು ಕೆಲಸ ಮಾಡಲು […]

ಕನ್ನಡ ಗಾದೆಮಾತು – ಅಡಿಗೆ ಬಲ್ಲವನ ಹೆಂಡ್ತಿಯಾಗಬಾರದು, ಕೆಲಸ ಬಲ್ಲವನ‌ ಆಳಾಗಬಾರದು.

ಅಡಿಗೆ ಬಲ್ಲ ಗಂಡಸರನ್ನು ಮದುವೆಯಾದ ಹೆಂಗಸರ ಪಾಡು ಯಾರಿಗೂ ಬೇಡ. ಏನು ಮಾಡಿದರೂ ‘ಹೀಗಿರಬೇಕಿತ್ತು, ಹಾಗಿರಬೇಕಿತ್ತು, ಇದಕ್ಕೆ ಉಪ್ಪು ಜಾಸ್ತಿ ಆಯ್ತು, ಅದಕ್ಕೆ ಖಾರ ಕಡಿಮೆ ಆಯ್ತು, ಸಿಹಿತಿಂಡಿ ಮಾಡೋ ಹದಾನೇ ಗೊತ್ತಿಲ್ಲ ನಿಂಗೆ”…..ಹೀಗೆ ಒಂದಲ್ಲ ಒಂದು ಟೀಕಾಪ್ರಹಾರ ಆಗುತ್ತಲೇ ಇರುತ್ತದೆ, ಆ ಹೆಂಡತಿಯ ಮೇಲೆ.‌ ಇದೇ ರೀತಿಯಲ್ಲಿ, ಎಲ್ಲೇ ಆಗಲಿ ಕೆಲಸ ಚೆನ್ನಾಗಿ ಬರುವ ಒಬ್ಬ ವ್ಯಕ್ತಿಯ ಕೈಕೆಳಗೆ ಕೆಲಸಕ್ಕೆ ಸೇರಿದರೆ ಆ ಕೆಲಸಗಾರನಿಗೂ ಕೆಲಸವನ್ನು ‘ಸರಿಯಾಗಿ’ ಮಾಡುವ ಬಗೆಗೆ ಟೀಕೆ-ಟಿಪ್ಪಣಿ ತಪ್ಪಿದ್ದಲ್ಲ.‌ ಹೀಗಾಗಿ ಈ […]

ಕನ್ನಡ ಗಾದೆಮಾತು – ಮುರಿದ ಮನಸ್ಸು ಬೆರೆಯೋಲ್ಲ, ಒಡೆದ ಕನ್ನಡಿ ಕೂಡೋಲ್ಲ

ಈ‌ ಗಾದೆಮಾತು ಮಾನವ ಸಂಬಂಧಗಳ‌ಲ್ಲಿನ ಒಂದು ಕಟುಸತ್ಯವನ್ನು ತುಂಬ ಶಕ್ತವಾದ ಒಂದು ಉದಾಹರಣೆಯೊಂದಿಗೆ ಹೇಳುತ್ತಿದೆ. ಹೇಗೆ ಒಮ್ಮೆ ಮುರಿದ ಕನ್ನಡಿಯನ್ನು ಮತ್ತೆ ಕೂಡಿಸಲು ಸಾಧ್ಯ ಇಲ್ಲವೋ, ಕೂಡಿಸಿದರೂ ಕನ್ನಡಿಯ ಮೇಲ್ಮೈಯಲ್ಲಿ ಕಲೆ ಉಳಿಯುತ್ತದೋ, ಹಾಗೆಯೇ ಸಂಬಂಧಗಳಲ್ಲಿ ಮನಸ್ಸುಗಳು ಒಮ್ಮೆ ಮುರಿದವೆಂದರೆ ಮತ್ತೆ ಆ ಮನಸ್ಸುಗಳು ಬೆರೆಯುವುದಿಲ್ಲ. ಸುಳ್ಳು, ಮೋಸ, ಚಾಡಿ, ನಂಬಿಕೆದ್ರೋಹ ಮುಂತಾದ ಘಟಿತಗಳು ಮನಸ್ಸುಗಳನ್ನು ಮುರಿದುಬಿಡುತ್ತವೆ. ಹೀಗೆ ಒಮ್ಮೆ ಮುರಿದ ಮನಸ್ಸು ಮತ್ತೆ ಬೆರೆಯುವುದು ಅಸಾಧ್ಯವೇ ಸರಿ. ಬೆರೆಸಲು ಪ್ರಯತ್ನಿಸಿದರೂ ಹಳೆಯ ಕಹಿಗಳು ಕಾಡಿ, ಸಂಬಂಧವು  […]

ಕನ್ನಡ ಗಾದೆಮಾತು – ಯುಕ್ತಿಯ ಮಾತು  ಮಕ್ಕಳಿಂದಾದರೂ ತಿಳ್ಕೋ‌

ಜೀವನವು ಎಷ್ಟು ಸಂಕೀರ್ಣ ಹಾಗೂ ಅನೂಹ್ಯ ಎಂಬುದು ಎಲ್ಲ ಪ್ರಬುದ್ಧ ವಯಸ್ಕರಿಗೂ, ಒಂದಲ್ಲ‌ ಒಂದು ಸಲ  ಭಾಸವಾಗಿಯೇ ಆಗುವ  ಸತ್ಯ. ಹೀಗಾಗಿ ವಿನಯ ಹಾಗೂ ನಿರಂತರ ಕಲಿಕೆಯ ಮನ:ಸ್ಥಿತಿ ಮಾತ್ರ ಜೀವನದ ಅಸಾಧ್ಯ ಏರುತಗ್ಗುಗಳ ಪಯಣದಲ್ಲಿ ನಮ್ಮ ಆಧಾರಗಳಾಗಬಲ್ಲವು. ಕಲಿಕೆ ಮುಖ್ಯ ಎಂದಾದಾಗ ನಾವು ಕಲಿಸುವವರ ವಯಸ್ಸು, ವಿದ್ಯೆ, ಸ್ಥಾನಮಾನ ನೋಡದೆ ಕಲಿಯಬೇಕು‌. ಅದರಲ್ಲೂ ವಯಸ್ಕ ಜೀವನದ ಇಕ್ಕಟ್ಟುಗಳಿಗೆ ಇನ್ನೂ ಪರಿಚಿತರಾಗದ ಚಿಕ್ಕ ಮಕ್ಕಳು ತಮ್ಮ ಬೆರಗು, ನಗು, ಸರಳ-ಮುಗ್ಧ ಮನೋನೆಲೆಗಳಿಂದ ಜೀವನದ ಬಗ್ಗೆ ಅತ್ಯಂತ ನೂತನ […]

ಕನ್ನಡ ಗಾದೆಮಾತು – ನೀರಿಗಿಳಿಯದೆ ಈಜು ಬರೊಲ್ಲ.

ಕೆಲಸ ಅಥವಾ ಕೌಶಲ್ಯವನ್ನು ಕಲಿಯಲು‌ ಇಷ್ಟ ಪಡುವವರು ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಚಿನ್ನದಂತಹ ಮಾತು ಇದು. ನಮ್ಮ‌ ಹಿರಿಯರು ಕಲಿಸಿದ ವಿವೇಕ. ಈಜು ಹೊಡೆಯುವುದಾಗಲಿ, ಅಡಿಗೆ ಮಾಡುವುದಾಗಲಿ, ಎರಡು ಅಥವಾ ನಾಲ್ಕು ಚಕ್ರದ ಗಾಡಿ ಓಡಿಸುವುದಾಗಲಿ, ಉಪಕರಣವೊಂದನ್ನು ತಯಾರಿಸುವುದಾಗಲಿ …. ಆ ಕೆಲಸವನ್ನು ನಮ್ಮ ಕೈಮೈ, ಬುದ್ಧಿಗಳನ್ನು ಬಳಸಿ ತಪ್ಪು ಮಾಡಿ, ಸರಿ ಮಾಡಲು ಪ್ರಯತ್ನ ಮಾಡಿ, ಒದ್ದಾಡಿ, ನಂತರ ಸರಿಯಾಗಿ ಮಾಡಿದಾಗಲೇ ನಮಗೆ ಆ ಕೆಲಸ ಬರುವುದು‌. ಬೇರೆಯವರು ಮಾಡುವುದನ್ನು ದೂರದಿಂದ ನೋಡಿದರೆ ಆ ಕೆಲಸದ ಬಗೆಗಿನ […]

Page 1 of 19

Kannada Sethu. All rights reserved.