ಕನ್ನಡ ವಿವೇಕ

ಬದುಕನ್ನು ಹಸನು ಮಾಡಲು ಕನ್ನಡ ಭಾಷೆ, ಸಂಸ್ಕೃತಿಯು ನಮಗೆ ನೀಡಿದ ಕೆಲವು ಗಾದೆ, ಸೂಕ್ತಿ, ನಾಣ್ಣುಡಿ, ಲೋಕೋಕ್ತಿ, ನಲ್ವಾತು ಇವುಗಳಲ್ಲಿ ವಾರಕ್ಕೆ ಒಂದರ ಕಿರು ಪರಿಚಯವನ್ನು ಈ ಅಂಕಣದಲ್ಲಿ ಮಾಡಿಕೊಡಲಾಗುತ್ತದೆ.

ಕನ್ನಡ ಗಾದೆಮಾತು – ಯುಕ್ತಿಯ ಮಾತು  ಮಕ್ಕಳಿಂದಾದರೂ ತಿಳ್ಕೋ‌

ಜೀವನವು ಎಷ್ಟು ಸಂಕೀರ್ಣ ಹಾಗೂ ಅನೂಹ್ಯ ಎಂಬುದು ಎಲ್ಲ ಪ್ರಬುದ್ಧ ವಯಸ್ಕರಿಗೂ, ಒಂದಲ್ಲ‌ ಒಂದು ಸಲ  ಭಾಸವಾಗಿಯೇ ಆಗುವ  ಸತ್ಯ. ಹೀಗಾಗಿ ವಿನಯ ಹಾಗೂ ನಿರಂತರ ಕಲಿಕೆಯ ಮನ:ಸ್ಥಿತಿ ಮಾತ್ರ ಜೀವನದ ಅಸಾಧ್ಯ ಏರುತಗ್ಗುಗಳ ಪಯಣದಲ್ಲಿ ನಮ್ಮ ಆಧಾರಗಳಾಗಬಲ್ಲವು. ಕಲಿಕೆ ಮುಖ್ಯ ಎಂದಾದಾಗ ನಾವು ಕಲಿಸುವವರ ವಯಸ್ಸು, ವಿದ್ಯೆ, ಸ್ಥಾನಮಾನ ನೋಡದೆ ಕಲಿಯಬೇಕು‌. ಅದರಲ್ಲೂ ವಯಸ್ಕ ಜೀವನದ ಇಕ್ಕಟ್ಟುಗಳಿಗೆ ಇನ್ನೂ ಪರಿಚಿತರಾಗದ ಚಿಕ್ಕ ಮಕ್ಕಳು ತಮ್ಮ ಬೆರಗು, ನಗು, ಸರಳ-ಮುಗ್ಧ ಮನೋನೆಲೆಗಳಿಂದ ಜೀವನದ ಬಗ್ಗೆ ಅತ್ಯಂತ ನೂತನ […]

ಕನ್ನಡ ಗಾದೆಮಾತು – ನೀರಿಗಿಳಿಯದೆ ಈಜು ಬರೊಲ್ಲ.

ಕೆಲಸ ಅಥವಾ ಕೌಶಲ್ಯವನ್ನು ಕಲಿಯಲು‌ ಇಷ್ಟ ಪಡುವವರು ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಚಿನ್ನದಂತಹ ಮಾತು ಇದು. ನಮ್ಮ‌ ಹಿರಿಯರು ಕಲಿಸಿದ ವಿವೇಕ. ಈಜು ಹೊಡೆಯುವುದಾಗಲಿ, ಅಡಿಗೆ ಮಾಡುವುದಾಗಲಿ, ಎರಡು ಅಥವಾ ನಾಲ್ಕು ಚಕ್ರದ ಗಾಡಿ ಓಡಿಸುವುದಾಗಲಿ, ಉಪಕರಣವೊಂದನ್ನು ತಯಾರಿಸುವುದಾಗಲಿ …. ಆ ಕೆಲಸವನ್ನು ನಮ್ಮ ಕೈಮೈ, ಬುದ್ಧಿಗಳನ್ನು ಬಳಸಿ ತಪ್ಪು ಮಾಡಿ, ಸರಿ ಮಾಡಲು ಪ್ರಯತ್ನ ಮಾಡಿ, ಒದ್ದಾಡಿ, ನಂತರ ಸರಿಯಾಗಿ ಮಾಡಿದಾಗಲೇ ನಮಗೆ ಆ ಕೆಲಸ ಬರುವುದು‌. ಬೇರೆಯವರು ಮಾಡುವುದನ್ನು ದೂರದಿಂದ ನೋಡಿದರೆ ಆ ಕೆಲಸದ ಬಗೆಗಿನ […]

ಕನ್ನಡ ಗಾದೆಮಾತು – ಸಟ್ಟುಗ ಇದ್ರೂ ಕೈ ಸುಟ್ಟುಕೊಂಡ್ರು.

ಸಟ್ಟುಗ ಅಂದ್ರೆ ಮಗುಚೆಕೈ ಅಥವಾ ದೋಸೆ ಎತ್ತುವ ಸಪಾಟು ಮೂತಿಯ ಸೌಟು‌. ಇದು ಇರುವುದೇ ದೋಸೆಯನ್ನು ಕಾವಲಿಯಿಂದ ಎತ್ತುವಾಗಲೋ ಅಥವಾ ಉಪ್ಪಿಟ್ಟು ಕೆದಕುವಾಗಲೋ ಕೈ ಸುಡಬಾರದು ಎಂದು. ‌ನೋಡಿ ಮತ್ತೆ, ಇದು ಇದ್ದರೂ ಹೇಗೆಹೇಗೋ ಬಿಸಿ ಕಾವಲಿಯನ್ನೋ‌ ಪಾತ್ರೆಯನ್ನೋ ಮುಟ್ಟಿ ಕೈ ಸುಟ್ಟುಕೊಂಡರೆ ಅಂಥವರಿಗೆ ಏನೆನ್ನಬೇಕು? ಮೂರ್ಖರೆನ್ನಬೇಕೋ, ಅಜ್ಞಾನಿಗಳೆನ್ನಬೇಕೋ? ಹಾಗೆಯೇ ಜೀವನದಲ್ಲಿ ನಮ್ಮ ಅಪಾಯ, ಕಷ್ಟಗಳನ್ನು ಕಡಿಮೆ ಮಾಡುವ ಅನುಕೂಲಕರ  ಸಂಗತಿಗಳು (ಉದಾಹರಣೆಗೆ ವಿಮೆ) ಇದ್ದರೂ ಅವುಗಳನ್ನು ಉಪಯೋಗಿಸದೆ ಅನಗತ್ಯ ಅನಾನುಕೂಲ ಮಾಡಿಕೊಳ್ಳಬಾರದು ನಾವು. ಅಲ್ಲವೆ? Kannada proverb – […]

ಕನ್ನಡ ಗಾದೆಮಾತು – ಮೂರ್ಕಾಸಿನ ಗಳಿಕೆ, ಆರ್ಕಾಸಿನ ಬಳಕೆ.

ಕಾಸು-ಹಣ-ಧನ-ರೂಪಾಯಿ- ಪೌಂಡು – ಡಾಲರ್- ಯೂರೋ – ಯೆನ್ …… ಯಾವ ಹೆಸರಿನಿಂದ ಕರೆದರೇನಂತೆ, ಮನುಷ್ಯ ಯಾವ ನಾಗರಿಕ ಸಮಾಜದಲ್ಲಿ ಇದ್ದರೇನಂತೆ, ಅವನ‌ ಮೂಲ ಜೀವನಾವಶ್ಯಕತೆಗಳು ಪೂರ್ಣಗೊಳ್ಳಲು ಕಾಸು ಬೇಕು‌. ಜೊತೆಗೆ ಕಷ್ಟಪಟ್ಟು ದುಡಿದು ಗಳಿಸಿದ ಕಾಸನ್ನು ಹುಷಾರಾಗಿಯೂ ಖರ್ಚು ಮಾಡಬೇಕು. ಮೂರು ಕಾಸನ್ನು ಗಳಿಸಿ ಆರು ಕಾಸನ್ಬು ಬಳಸಬಾರದು‌. ನಮ್ಮ ಆದಾಯಕ್ಕಿಂತ ಖರ್ಚು ಯಾವತ್ತೂ ಜಾಸ್ತಿ ಆಗಬಾರದು ; ಜಾಸ್ತಿ ಆದರೆ ಸಾಲದ ಸುಳಿಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತೇವೆ.‌ ಉತ್ತಮವಾದ ಒಂದು ಆರ್ಥಿಕ ವಿವೇಕವನ್ನು ಈ ಗಾದೆಮಾತು […]

ಕನ್ನಡ ಗಾದೆಮಾತು – ತುಸ ತಿಂದ್ರೂ ರಸ ತಿನ್ನಬೇಕು.

ಉತ್ತಮ ಹಾಗೂ ಅಭಿರುಚಿಯುತ ಜೀವನದ ಬಗ್ಗೆ ಹೇಳುವ ಗಾದೆಮಾತು ಇದು‌. ಸ್ವಲ್ಪವೇ ತಿಂದರೂ ರಸಮಯವಾದದ್ದನ್ನು ತಿನ್ನಬೇಕು. ಏನೇನೋ ನೀರಸವಾದದ್ದನ್ನು ಅತಿಯಗಿ ತಿನ್ನಬಾರದು‌.‌ ಊಟ ಮಾಡುವಾಗ ಪ್ರಮಾಣಕ್ಕಿಂತ ರುಚಿ, ಸ್ವಾರಸ್ಯ, ಸವಿಯುವಿಕೆ ಮುಖ್ಯ ಎಂಬುದನ್ನು ಅಡಕವಾಗಿ, ಪ್ರಾಸಬದ್ಧವಾಗಿ ಹೇಳುತ್ತದಲ್ಲವೆ ಈ ಗಾದೆಮಾತು? ಪ್ರಾನ್ಸ್ ದೇಶದಲ್ಲಿ ಹೀಗೆ ರುಚಿಕರವಾದ, ಒಳ್ಳೆಯ ಊಟವನ್ನು ಪುಟ್ಟ ಪುಟ್ಟ ಭಾಗಗಳಲ್ಲಿ ಬಡಿಸ್ತಾರಂತೆ. ಈ ರೀತಿಯಲ್ಲಿ ತಿನ್ನುವುದನ್ನು ‘ಫ್ರೆಂಚ್ ಪೋರ್ಷನ್’ ಎನ್ನುತ್ತಾರೆ. ಒಟ್ಟಿನಲ್ಲಿ ನಮ್ಮ ಗಾದೆ ಮಾತೊಂದು ಫ್ರಾನ್ಸ್ ದೇಶವನ್ನು ನೆನಪಿಸಿತು ನೋಡಿ! Kannada proverb […]

ಕನ್ನಡ ಗಾದೆಮಾತು – ಬಂಧುಗಳಿಲ್ಲದಿರೋ ಬಡತನ ಎಂದಿಗೂ ಬೇಡ.

ಜೀವನದಲ್ಲಿ ನಮಗೆ ಕಷ್ಟಸುಖ, ನೋವು ನಲಿವುಗಳನ್ನು ಹಂಚಿಕೊಳ್ಳಲು ಬಂಧುಗಳು ಬೇಕು‌. ಬಂಧುಗಳು ಅಂದರೆ ನೆಂಟರು, ಸಂಬಂಧಿಕರು.‌ ನಮಗೆ ಯಾರ ಜೊತೆ ಬಂಧವಿರುತ್ತದೋ ಅವರು ಬಂಧುಗಳು.‌ ಎಷ್ಟು ಹಣಕಾಸು, ಐಶ್ವರ್ಯ, ವೈಭವ ಇದ್ದರೇನಂತೆ, ಜೊತೆಯಾಗಿ ಅರ್ಧ ಲೋಟ ಕಾಫಿ ಕುಡಿಯಲು, ನೋವಾದಾಗ ಹೆಗಲಿಗೊರಗಿ ಅಳಲು, ಖುಷಿಯಾದಾಗ ತಕ್ಷಣ ಅದನ್ನು ಹಂಚಿಕೊಳ್ಳಲು, ಹಬ್ಬ-ಹರಿದಿನಗಳಲ್ಲಿ ಜೊತೆಯಾಗಿ ಉಣ್ಣಲು ನಮಗೆ ಯಾರೂ ಇಲ್ಲ ಅಂದರೆ ನಾವು ಖಂಡಿತವಾಗಿಯೂ ಬಡವರೇ. ಅಲ್ಲವೆ? ಈ ಗಾದೆಮಾತು ಬದುಕಿನ ಬಹುಮುಖ್ಯ ಸಂಗತಿಯೊಂದನ್ನು ಬಹಳ ಅರ್ಥಪೂರ್ಣವಾಗಿ ಹೇಳುತ್ತಿದೆ.  Kannada […]

ಕನ್ನಡ ಗಾದೆಮಾತು – ಜಾಣನಿಗೆ ಜಗಳವಿಲ್ಲ, ರಾಗಿಗೆ ರೋಗವಿಲ್ಲ. 

ಗ್ರಾಮೀಣ ಜನರ ಜೀವನಾನುಭವದಿಂದ ಹೊರಟ ವಿವೇಕವು ಅದೆಷ್ಟು ಸರಳ ಮತ್ತು ಸುಂದರ ನೋಡಿ. ಪೌಷ್ಟಿಕ ಆಹಾರ ರಾಗಿಯನ್ನು ತಿಂದವರಿಗೆ ರೋಗ ಬರುವುದಿಲ್ಲ, ಹಾಗೆಯೇ ಎಲ್ಲಿ ಮಾತಾಡಬೇಕು, ಹೇಗೆ, ಎಷ್ಟು‌ ಯಾವಾಗ ಮಾತಾಡಬೇಕು ಎಂದು ಗೊತ್ತಿರುವ ಜಾಣನು ಜಗಳ ಮಾಡುವುದಿಲ್ಲ‌ ; ಅನಗತ್ಯ ಕಿರಿಕಿರಿ ಇಲ್ಲದೆ ಅವನು‌ ಸನ್ನಿವೇಶಗಳನ್ನು ನಿಭಾಯಿಸುತ್ತಾನೆ. ಇದನ್ನು ಅರಿತು ನಾವು ಅನಗತ್ಯ ಜಗಳ ಮಾಡದೆ ನಮ್ಮ ಮಾನಸಿಕ ಆರೋಗ್ಯವನ್ನು ಮತ್ತು ಕಣ್ಣಿಗೆ ಅಂದವೆನಿಸುವ ಜಾಹೀರಾತು ಆಹಾರಗಳನ್ನು ತಿನ್ನದೆ ನಮ್ಮ ದೈಹಿಕ ಆರೋಗ್ಯ ಕಾಪಾಡಿಕೊಳ್ಬೇಕು. ಅಲ್ಲವೆ? […]

ಕನ್ನಡ ಗಾದೆಮಾತು – ಮರ ಹತ್ತುವವನನ್ನು‌ ಕೈಗೆಟಕುವವೆರೆಗೆ ಮಾತ್ರ ನೂಕಬಹುದು.

ನಾವು ಇನ್ನೊಬ್ಬರಿಗೆ ಅಂದರೆ ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ಮತ್ತು ನಮ್ಮ ಸಹಾಯವನ್ನು ಬಯಸಿ ಬಂದವರಿಗೆ ಮಾಡುವಂತಹ ಸಹಾಯಕ್ಕೆ ಒಂದು ಮಿತಿ ಇರುತ್ತದೆ. ಬೇರೆಯವರು ನಮಗೆ ಮಾಡಬಹುದಾದ ವಿಷಯದಲ್ಲೂ ಇದು ನಿಜ. ಮರ ಹತ್ತುವವರಿಗೆ ನಾವು, ನಮ್ಮ ಕೈಗೆ ಅವರು ಎಟಕುವ ತನಕ ಮಾತ್ರ ಅವರನ್ನು ಮೇಲಕ್ಕೆ ನೂಕಬಹುದು. ಆಮೇಲೆ  ಸ್ವತಃ ಅವರೇ ಮೇಲೆ ಮೇಲೆ ಹತ್ತಬೇಕು‌. ಈ ವಿವೇಕದ ಮಾತನ್ನು ನೆನಪಿಟ್ಟುಕೊಂಡರೆ ನಾವು ಸಹಾಯ ಪಡೆಯುವುದರಲ್ಲಿ ಮತ್ತು ಕೊಡುವುದರಲ್ಲಿರುವ ಮಿತಿ ನಮಗೆ ಅರ್ಥ ಆಗುತ್ತದೆ. Kannada proverb – […]

ಕನ್ನಡ ಗಾದೆಮಾತು – ವನವೆಲ್ಲ‌ ಸಿರಿಗಂಧವ? 

ಸಿರಿಗಂಧ( ಶ್ರೀಗಂಧ) ಎಂಬುದು‌ ನಮಗೆಲ್ಲ ಗೊತ್ತಿರುವಂತೆ ದಕ್ಷಿಣ ಕರ್ನಾಟಕದಲ್ಲಿ (ಹಾಗೂ ಒಟ್ಟು ದಕ್ಷಿಣ ಏಷ್ಯಾದ ಕೆಲವು ಪ್ರದೇಶಗಳಲ್ಲಿ) ಬೆಳೆಯುವ ಒಂದು ವಿಶೇಷವಾದ ಮರ. ಇದರ ಚಿರಂತನ ಸುಗಂಧವು ಶತಶತಮಾನಗಳಿಂದ ಜಗತ್ಪ್ರಸಿದ್ಧವಾಗಿದೆ.  ನಮ್ಮ ಮೈಸೂರನ್ನು ಗಂಧದ ಬೀಡು ಅನ್ನುತ್ತಾರಲ್ಲವೆ? ಆದರೆ ಕಾಡಿನಲ್ಲಿ ಬೆಳೆಯುವ ಎಲ್ಲ ಮರಗಳೂ ಶ್ರೀಗಂಧವಾಗಿರುವುದಿಲ್ಲ. ಹೀಗೆಯೇ ವ್ಯಕ್ತಿಗಳಲ್ಲಿ ಎಲ್ಲರೂ ಒಂದೇ ರೀತಿಯ ಶ್ರೇಷ್ಠತೆ ಹೊಂದಿರುವುದಿಲ್ಲ. ಎಲ್ಲ ಲೋಹಗಳೂ ಚಿನ್ನವಲ್ಲ. ಎಲ್ಲ ಹರಳುಗಳೂ ವಜ್ರವಲ್ಲ‌. ಅತ್ಯುತ್ತಮವಾದುದು ಅಪರೂಪವಾಗಿರುತ್ತದೆ‌. ಜೀವನದ ಈ ಸತ್ಯವನ್ನು ಮೇಲಿನ ಗಾದೆಮಾತು ತುಂಬ ಚೆನ್ನಾಗಿ […]

ಕನ್ನಡ ಗಾದೆಮಾತು – ಅಕ್ಕರೆ ಇದ್ದಲ್ಲಿ ದುಕ್ಕ ಇರುತ್ತೆ‌. 

ಮನುಷ್ಯ ಸಂಬಂಧಗಳಲ್ಲಿನ‌ ಒಂದು ಸತ್ಯವನ್ನು ಹೇಳುವ ಗಾದೆಮಾತು ಇದು. ಎಲ್ಲಿ ಅಕ್ಕರೆ ಇರುತ್ತದೋ ಅಲ್ಲಿ ಕಾಳಜಿ, ನಿರೀಕ್ಷೆ, ಚಿಂತೆ, ದುಃಖ ಇವೆಲ್ಲ ಇರುತ್ತವೆ.‌ ತಾಯಿ ಮಕ್ಕಳ ಸಂಬಂಧ, ತಂದೆ ಮಕ್ಕಳ ಸಂಬಂಧ ….ಇವುಗಳಲ್ಲಿ ಇನ್ನು ಯಾವ ದುಃಖವಿಲ್ಲದಿದ್ದರೂ ರೋಗ, ಸಾವು ತರುವ ಅಗಲಿಕೆಯ ದುಃಖವಂತೂ ಇರುತ್ತದೆ ಅಲ್ಲವೆ? ನಿಜ ಹೇಳಬೇಕೆಂದರೆ ನಾವು ತುಂಬ ಕಷ್ಟ ನೋವು, ಅನುಭವಿಸುವುದು ನಾವು‌ ಯಾರನ್ನು ತುಂಬ ಪ್ರೀತಿಸುತ್ತೇವೋ ಅವರ ಕಾರಣದಿಂದಲೇ ಹೊರತು ಅಪರಿಚಿತರಿಂದ ಅಲ್ಲ.‌ ಬದುಕಿನ ಒಂದು ವಿಪರ್ಯಾಸ ಇದು. ಬದುಕಿನ […]

Page 1 of 19

Kannada Sethu. All rights reserved.