Electrostatic shield

ಎಲೆಕ್ಟ್ರೋ ಸ್ಟ್ಯಾಟಿಕ್ ಶೀಲ್ಡ್ – ಸ್ಥಾಯೀವಿದ್ಯುತ್ ರಕ್ಷಣಾ ಕವಚ – ಒಂದು ಉಪಕರಣವನ್ನು ವಿದ್ಯುತ್ ಕ್ಷೇತ್ರಗಳು ಮುಟ್ಟದಂತೆ ಕಾಪಾಡುವ ಒಂದು ವಿದ್ಯುತ್ ವಾಹಕ ವಸ್ತು.‌

ಕನ್ನಡ ಗಾದೆಮಾತು – ಕಾಣದ ಊರಿಗೆ ನಾಲಿಗೆಯೇ ದಾರಿ. 

ಹಳೆಯ ಕಾಲದಲ್ಲಿ ಅಂದರೆ ಗೂಗಲ್ ನಕ್ಷೆಗಳು ಇಲ್ಲದಿದ್ದ ಸಮಯದಲ್ಲಿ ಯಾರಾದರೂ ತಮಗೆ ಅಪರಿಚಿತವಾದ ಊರಿಗೆ ಹೋಗಬೇಕೆಂದರೆ ದಾರಿಯಲ್ಲಿ ಸಿಗುವ ಜನರನ್ನು ವಿಚಾರಿಸುತ್ತಾ, ವಿಚಾರಿಸುತ್ತಾ ಕೇಳುತ್ತಾ ಹೋಗಿ ತಲುಪುತ್ತಿದ್ದರು.  ನಾಚಿಕೆ, ಸಂಕೋಚ ಬಿಟ್ಟು‌ ಮನುಷ್ಯರೊಂದಿಗೆ ಬಾಯಿ ಬಿಟ್ಟು  ಮಾತಾಡಿ,  ಕೇಳುತ್ತಾ ಕೇಳುತ್ತಾ ಎಷ್ಟು ದೂರದ, ಅಪರಿಚಿತ ಊರನ್ನಾದರೂ ತಲುಪಿಬಿಡುತ್ತಿದ್ದರು. ಆದರೆ ಇಂದು ಬದಲಾಗಿರುವ ಕಾಲದಲ್ಲಿ ನಗರ ಪ್ರದೇಶಗಳಲ್ಲಂತೂ ಕೈಯಲ್ಲಿರುವ ಜಂಗಮವಾಣಿಯ ಗೂಗಲ್ಲೇ ದಾರಿ ತೋರುವ ಸಂಗಾತಿ ಆಗಿಬಿಟ್ಟಿದೆ. ಆದರೆ ಗೂಗಲ್ ಸೌಲಭ್ಯ ಸಿಗದ ಕಡೆಯಲ್ಲಿ :ಕಾಣದ ಊರಿಗೆ ಈಗಲೂ […]

ಬೆಂಗಳೂರಿಗರ ಬೆರಕೆ ಕನ್ನಡ

ಬೆಂಗಳೂರಿನಲ್ಲಿ ಓಡಾಡುವಾಗ, ಜನರೊಂದಿಗೆ ಮಾತಾಡುವಾಗ ಈ ಬಗೆಯ ವಾಕ್ಯಗಳು ಕಿವಿಗೆ ಬೀಳುತ್ತವೆ – ” ಆಫೀಸ್ ತಲುಪ್ದೆ ಕಣೋ ಆಲ್ಮೋಸ್ಟು”, “ನಾನು ಈ ಕಡೇನೆ ಹೋಗೋದು ಮೋಸ್ಟ್ ಆಫ್ ದ ಟೈಮ್ಸು”,  ನೈಟೇ ನಿಮ್ಗೆ ಕಾಲ್ ಮಾಡಿದ್ನಲ್ಲಾ,  ಐ ಥಿಂಕ್ ಯೂ ವರ್ ಬಿಸಿ”,  ” ನೀ ಕಂಟಿನ್ಯುವಸ್ ಆಗಿ ಬಂದ್ರೆ ತಾನೇ, ಒನ್ಸ್ ಇನ್ ಎ ಬ್ಲೂಮೂನ್ ಬರ್ತೀಯ”, “ಆಲ್ ಆಫ್ ಅ ಸಡನ್ ನಮ್ ಬಾಸ್ ಮೀಟಿಂಗ್ ಕರೆದ್ಬಿಟ್ರು, ಸಾರಿ ಕಣೇ, ಐ ವಾಸ್ […]

Electrostatics

ಎಲೆಕ್ಟ್ರೋಸ್ಟ್ಯಾಟಿಕ್ಸ್ – ಸ್ಥಾಯೀವಿದ್ಯುತ್ ವಿಜ್ಞಾನ  – ವಿಶ್ರಾಂತಿಯಲ್ಲಿರುವ ‌ ವಿದ್ಯದಂಶಗಳನ್ನು, ಅವುಗಳ ನಡುವಿನ ಬಲಗಳನ್ನು ಮತ್ತು ಅವುಗಳಿಗೆ ಸಂಬಂಧಿಸಿದ ವಿದ್ಯುತ್ ಕ್ಷೇತ್ರಗಳನ್ನು ಅಧ್ಯಯನ ಮಾಡುವ ಜ್ಞಾನಶಾಖೆ.

Ellipsoid

ಎಲಿಪ್ಸಾಯ್ಡ್ –  ಅಂಡಾಕೃತಿ‌ ಘನ‌- ಮೂರು ಆಯಾಮಗಳ ಒಂದು‌ ಘನಾಕೃತಿ ಇದು, ಮೊಟ್ಟೆಯಂತೆ ಇರುತ್ತೆ.

Elementary particles

ಎಲಿಮೆಂಟರಿ ಪಾರ್ಟಿಕಲ್ಸ್ – ಮೂಲಭೂತ ಕಣಗಳು – ಈ ವಿಶ್ವದ ಎಲ್ಲ ವಸ್ತುಗಳನ್ನು ರೂಪಿಸಿರುವ ಆದರೆ ಕಣ್ಣಿಗೆ ಕಾಣಿಸದಷ್ಟು ಚಿಕ್ಕದಾಗಿರುವ ಕಣಗಳು. ಇವು ಪರಮಾಣುವಿನ ಒಳಗೆ ಇರುತ್ತವೆ. 

Electrostatic induction 

ಎಲೆಕ್ಟ್ರೋಸ್ಟ್ಯಾಟಿಕ್ ಇಂಡಕ್ಷನ್ – ಸ್ಥಾಯೀವಿದ್ಯುತ್ ಆವಾಹನೆ – ಒಂದು ವಿದ್ಯುತ್ ಕ್ಷೇತ್ರದ ಯಾವುದಾದರೊಂದು ಬಿಂದುವಿನಲ್ಲಿ ಧನ ಹಾಗೂ ಋಣ ವಿದ್ಯುದಂಶಗಳನ್ನು ಪ್ರತ್ಯೇಕಿಸುವ ಮೂಲಕ ವಿದ್ಯುತ್ತನ್ನು ಉತ್ಪಾದಿಸುವುದು.

Electrostatic precipitation

ಎಲೆಕ್ಟ್ರೋಸ್ಟ್ಯಾಟಿಕ್ ಪ್ರಿಸಿಪಿಟೇಷನ್ – ಸ್ಥಾಯೀವಿದ್ಯುತ್ ಅವಪತನ – ಒಂದು ಅನಿಲದಲ್ಲಿ‌ ತೇಲಾಡುತ್ತಿರುವ ಸ್ಥಿತಿಯಲ್ಲಿರುವ ಘನವಸ್ತು ಅಥವಾ ದ್ರವವಸ್ತುವಿನ ಕಣಗಳನ್ನು ಬೇರೆಮಾಡುವ ಅಥವಾ ತೆಗೆದು ಹಾಕುವ ಒಂದು ವಿಧಾನ.

ಕನ್ನಡ ಗಾದೆಮಾತು – ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದರಂತೆ. 

ಕನ್ನಡದ ಪ್ರಸಿದ್ಧ ಗಾದೆಮಾತುಗಳಲ್ಲಿ ಒಂದು ಇದು. ಊರನ್ನು ಪರರ ದಾಳಿಯಿಂದ ಕಾಪಾಡುವಂಥದ್ದು ಕೋಟೆ. ದಾಳಿಕೋರರು ಪ್ರವೇಶಿಸದಂತೆ ಕೋಟೆಯ ಬಾಗಿಲನ್ನು ಭದ್ರ ಪಡಿಸುವುದು ರಾಜನು ನೇಮಿಸಿದ ಕಾವಲುಗಾರನ ಕೆಲಸ. ಆದರೆ ಕೋಟೆಯ ಬಾಗಿಲನ್ನು ನಿರ್ಲಕ್ಷ್ಯದಿಂದ ತೆಗೆದಿಟ್ಟು ದಾಳಿಕೋರರು ಬರಲು ಅವಕಾಶ ಮಾಡಿಕೊಟ್ಟು, ಅವರು ದಾಳಿ ಮಾಡಿ‌ ಎಲ್ಲವನ್ನೂ ಲೂಟಿ ಹೊಡೆದು ಹೋದ ಮೇಲೆ ಕೋಟೆಯ ಬಾಗಿಲನ್ನು ಹಾಕಿದರೆ ಏನು ಪ್ರಯೋಜನ? ಹಾಗೆಯೇ ನಾವು ಮಾಡಬೇಕಾದ ಕೆಲಸಗಳನ್ನು, ತೆಗೆದುಕೊಳ್ಳಬೇಕಾದ ಜಾಗ್ರತೆಗಳನ್ನು ಅವು ಸಕಾಲಿಕವಾಗಿರುವಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ನಮ್ಮ ಕೆಲಸ, ಜಾಗ್ರತೆಗಳು […]

ಕಂಬಕ್ಕೆ ಕಟ್ಟಲ್ಪಟ್ಟ ದೇವರು.. ಕನ್ನಡ ಜನಪದರ ಭಾವಸಿರಿಯ ತವರು

ಈಚೆಗೆ ನಮ್ಮ ಹಂಪಿನಗರದ ಏಳನೇ ಮುಖ್ಯರಸ್ತೆಯ ಬಳಿ ಹೂವು ಕೊಂಡುಕೊಳ್ಳುತ್ತಿದ್ದಾಗ ಒಂದು ಕುತೂಹಲಕರ ವಿಷಯವನ್ನು ಗಮನಿಸಿದೆ. ಹೂಮಾರುವವರು ತಮ್ಮ ಬುಟ್ಟಿ ಇತ್ಯಾದಿಗಳನ್ನು ಇಟ್ಟುಕೊಂಡ ಜಾಗದ ಪಕ್ಕದಲ್ಲಿ ಇದ್ದ ಕಂಬವೊಂದಕ್ಕೆ  ಕೆಲವು ಪುಟ್ಟ ಪುಟ್ಟ ದೇವರ ವಿಗ್ರಹಗಳನ್ನು  ಕಟ್ಟಿಟ್ಟದ್ದು ಕಂಡುಬಂತು.‌  ಬಹುಶಃ ಆ ಹೂ ಮಾರುವವರು ಮತ್ತು ಸುತ್ತಮುತ್ತ ಇದ್ದ ಹಣ್ಣಿನ ವ್ಯಾಪಾರಿಗಳು ಆ ವಿಗ್ರಹಗಳಿಗೆ ನಮಿಸಿ ತಮ್ಮ ದಿನದ ವ್ಯಾಪಾರವನ್ನು ಶುರು ಮಾಡುತ್ತಾರೆಂದು ತೋರುತ್ತದೆ. ಕಲ್ಲಿಗೆ ಭಕ್ತಿಯಿಂದ ಕುಂಕುಮ ಹಚ್ಚಿ ಹೂ ಇಟ್ಟು ಅದನ್ನೇ ಭಗವಂತನೆಂದು ತಿಳಿಯುವ […]

Page 63 of 117

Kannada Sethu. All rights reserved.