ಕನ್ನಡ ಗಾದೆಮಾತು –  ಹಿತ್ತಲ ಗಿಡ ಮದ್ದಲ್ಲ.‌

ಕನ್ನಡದ ಅತಿ ಜನಪ್ರಿಯ ಗಾದೆಮಾತುಗಳಲ್ಲಿ ಇದೂ ಒಂದು‌. ಮೂರೇ ಪದಗಳಲ್ಲಿ ಲೋಕಸತ್ಯವೊಂದನ್ನು ಹೇಳುವ ನುಡಿಸಿರಿ ಇದು.  ನಮ್ಮ ಹಿತ್ತಲಲ್ಲೇ ಇರುವ ಒಂದು  ಮದ್ದು( ಔಷಧೀಯ ಗಿಡ) ನಮ್ಮ ಗಮನಕ್ಕೆ ಬಂದಿರುವುದೇ ಇಲ್ಲ! ಬೇರೆಯವರು ಯಾರಾದರೂ ಅದನ್ನು ಮೆಚ್ಚಿಕೊಂಡರೆ ಆಗ ನಮಗೇ ಆಶ್ಚರ್ಯ ಆಗುತ್ತದೆ, ‘ಅಯ್ಯೋ ಇಷ್ಟು ದಿನ ಇದು ಇದ್ದದ್ದು ನಮ್ಮ ಅರಿವಿಗೆ ಬಂದೇ ಇರಲಿಲ್ಲವಲ್ಲ!’ ಅಂತ. ಅತಿಪರಿಚಿತತೆ ತರುವ ತಿರಸ್ಕಾರವು ಇದಕ್ಕೆ ಕಾರಣವಿರಬಹುದು.‌ ಗಿಡಗಳು ಮಾತ್ರ ಅಲ್ಲ, ನಾವು ಮನುಷ್ಯರ ವಿಷಯದಲ್ಲೂ ಹೀಗೇ ವರ್ತಿಸುತ್ತವೆ. ನಮ್ಮೊಂದಿಗೆಯೇ,  […]

ಕನ್ನಡ ಅಧ್ಯಾಪಕರು ಮಾತ್ರ ಮಾಡಬಹುದಾದ ಒಂದು ಮುಖ್ಯ ಕನ್ನಡ ಕೆಲಸ

ಪ್ರಾಥಮಿಕ, ಪ್ರೌಢ, ಪದವಿಪೂರ್ವ, ಪದವಿ…ತರಗತಿಯ ಹಂತ ಯಾವುದೇ ಇರಲಿ, ಕನ್ನಡ ಅಧ್ಯಾಪಕರು ಮಾತ್ರ ಮಾಡಬಹುದಾದ ಮತ್ತು ಕನ್ನಡಕ್ಕೆ ಈ ಸನ್ನಿವೇಶದಲ್ಲಿ ಅತ್ಯಂತ ಜರೂರಾಗಿ ಆಗಬೇಕಾದ ಕನ್ನಡದ ಕೆಲಸವೊಂದಿದೆ. ಅದೇನೆಂದರೆ, ಅವರು ತಮ್ಮ ಮಾತಿನಲ್ಲಿ ಮತ್ತು ಪಾಠದಲ್ಲಿ ಗರಿಷ್ಠ ಸಂಖ್ಯೆಯ ಕನ್ನಡ ಪದಗಳನ್ನು ಬಳಸುವ ಕೆಲಸ. ‘ ಇದರಲ್ಲಿ ಏನು ವಿಶೇಷ ಇದೆ? ಕನ್ನಡ ಅಧ್ಯಾಪಕರು ಆಡೋದೇ ಕನ್ನಡ ‌ಭಾಷೆ ಅಲ್ವಾ? ಬಳಸೋದೇ ಕನ್ನಡ ಪದಗಳಲ್ವಾ?’ ಎಂಬ ಪ್ರಶ್ನೆ ಹುಟ್ಟಬಹುದು.  ಜಾಗತೀಕರಣದ ನಂತರದ ಕನ್ನಡನಾಡಿನ ನಗರಗಳಲ್ಲಿ ( ಮುಖ್ಯವಾಗಿ ಬೆಂಗಳೂರು- […]

Dynamo

ವಿದ್ಯುತ್ ಉತ್ಪಾದಕ – ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯಾಗಿ ಪರಿವರ್ತಿಸುವ ಒಂದು ಚಿಕ್ಕ ಉಪಕರಣ.

Dynamics

ಬಲ ವಿಜ್ಞಾನ – ಬಲಗಳ ವರ್ತನೆಯ ಅಡಿಯಲ್ಲಿ ಚಲಿಸುವ ವಸ್ತುಗಳ ಅಧ್ಯಯನ ಮಾಡುವ ಶಾಸ್ತ್ರ. ಯಂತ್ರಚಲನಶಾಸ್ತ್ರ(ಮೆಕ್ಯಾನಿಕ್ಸ್)ದ ಒಂದು ಶಾಖೆ ಇದು.

Dynamic equilibrium

ಚಲನಾತ್ಮಕ ಸಮತೋಲನ – ಸಮಸ್ಥಿತಿಯಲ್ಲಿರುವ ಒಂದು ವ್ಯವಸ್ಥೆಯಲ್ಲಿ ಮುಮ್ಮುಖ ಕ್ರಿಯೆ ಮತ್ತು ಹಿಮ್ಮುಖ ಕ್ರಿಯೆಗಳು ಒಂದೇ ವೇಗದಲ್ಲಿ ನಡೆದರೆ ಅದನ್ನು ಚಲನಾತ್ಮಕ ಸಮತೋಲನ ಎನ್ನುತ್ತಾರೆ.

Dwraf star

ಕುಬ್ಜ ನಕ್ಷತ್ರ – ತನ್ನ ವಿಕಾಸದ ಕೊನೆಯ ಹಂತದಲ್ಲಿರುವ ನಕ್ಷತ್ರವಿದು. ಇದರೊಳಗಿನ ಇಂಧನವು ತೀರಿಹೋಗಿ ಅದರ ಗುರುತ್ವ ಶಕ್ತಿಯು ಕುಸಿದು ಹೋಗಿರುತ್ತದೆ.

Ductility 

ತಂತಿಯಾಗುವ ಸಾಮರ್ಥ್ಯ – ವಸ್ತುಗಳಲ್ಲಿ ಅದರಲ್ಲೂ ಮುಖ್ಯವಾಗಿ ಲೋಹಗಳಲ್ಲಿ ಕಾಣಿಸುವ ಸಾಮರ್ಥ್ಯ ಇದು. ಉದಾಹರಣೆಗೆ ತಾಮ್ರ ಲೋಹವನ್ನು ತಂತಿಯಂತೆ ಉದ್ದಕ್ಕೆ ಎಳೆದರೂ ಅದು ಸೀಳಿಕೊಳ್ಳದೆ, ಮುರಿಯದೆ ಇರುತ್ತದೆ.

ಕನ್ನಡ ಗಾದೆಮಾತು – ರೆಟ್ಟೆ ಮುರೀಬೇಕು ರೊಟ್ಟಿ ತಿನ್ನಬೇಕು

ನಾವು ಮನುಷ್ಯರು ಕಷ್ಟಪಟ್ಟು ದುಡಿದು ನಮ್ಮ ಅನ್ನ ಸಂಪಾದಿಸಬೇಕು ಎಂಬ ಉತ್ತಮ ನೀತಿಯನ್ನು ನಾಲ್ಕೇ ಪದಗಳಲ್ಲಿ ಹೇಳುವ ಗಾದೆ ಮಾತಿದು. ರೆಟ್ಟೆ ಎಂಬ ನಾಮಪದಕ್ಕೆ ನಿಘಂಟಿನಲ್ಲಿ ಇರುವ ಅರ್ಥ ತೋಳು, ಬಾಹು ಎಂದು. ರೆಟ್ಟೆ ಮುರಿಯುವುದು ಅಂದರೆ ಶ್ರಮ ಪಟ್ಟು ಕೆಲಸ ಮಾಡುವುದು ಎಂದರ್ಥ. ನಾವು ತಿನ್ನುವ ರೊಟ್ಟಿಯು ನಮ್ಮ ರೆಟ್ಟೆ ಮುರಿದು ದುಡಿದು ಗಳಿಸಿದ ಹಣದಿಂದ ಬರಬೇಕೇ ಹೊರತು, ಇನ್ನೊಬ್ಬರ ಮರ್ಜಿ, ಭಿಕ್ಷೆ, ದಾನದಿಂದ ಬರಬಾರದು. ದುಡಿದು ಗಳಿಸಿ ತನ್ನ ಪರಿಶ್ರಮದ ಕೂಳನ್ನು ತಾನು ಉಣ್ಣುವುದರಲ್ಲಿ […]

ಛಂದಸ್ಸಿನ ಪಾಠ ಅಕ್ಕಾ –  ನಿಜದಿ ತಲುಪಬೇಕು ಕಿವಿಗಳ ಮೂಲಕ

ಕನ್ನಡವನ್ನು ಐಚ್ಛಿಕ ವಿಷಯವಾಗಿ ಓದುವ ಪದವಿ ಅಥವಾ ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳು ತಮ್ಮ ಪಠ್ಯದ ಭಾಗವಾಗಿ ಛಂದಸ್ಸನ್ನು ಓದುತ್ತಾರೆ. ಛಂದಸ್ಸು ಎಂದರೆ ಪದ್ಯರಚನೆಯ ನಿಯಮ ಎಂದು ಅರ್ಥ. ಒಂದು ಪದ್ಯದ ಲಯ, ಗತಿ, ಓಟ, ಪ್ರಾಸ, ತಾಳಕ್ಕೆ ಸಿಗುವ ಗುಣ ಇವೆಲ್ಲವನ್ನೂ ಅಧ್ಯಯನ ಮಾಡುವುದು ಛಂದಸ್ಸಿನ ಪರಿಧಿಯಲ್ಲಿ ಸೇರುತ್ತದೆ. ಛಂದಸ್ಸು ಎಂದರೆ ಹೊದಿಸುವುದು ಎಂದೂ ಅರ್ಥವಿದೆ. ಪದಗಳಿಗೆ ಲಯದ ಹೊದಿಕೆ ತೊಡಿಸುವುದು ಅನ್ನಬಹುದೇನೋ. ಛಂದಸ್ಸನ್ನು ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ಪಾಠ ಮಾಡುವುದೆಂದರೆ ಅದು ಅಧ್ಯಾಪಕರಿಗೆ ಸವಾಲಿನ ವಿಷಯವೇ ಸರಿ. […]

Duality (wave – particle duality)

ಇಬ್ಬಗೆ ( ಅಲೆ – ಕಣ ಇಬ್ಬಗೆ) – ವಿದ್ಯುತ್ಕಾಂತೀಯ ವಿಕಿರಣವು ಕೆಲವು ಸನ್ನಿವೇಶಗಳಲ್ಲಿ ಅಲೆಗಳಂತೆ ಮತ್ತು ಇನ್ನು ಕೆಲವು ಸನ್ನಿವೇಶಗಳಲ್ಲಿ ಕಣಗಳಂತೆ ವರ್ತಿಸುತ್ತದೆ. ಈ ಸನ್ನಿವೇಶವನ್ನು ಇಬ್ಬಗೆ( ಅಲೆ-ಕಣ ಇಬ್ಬಗೆ) ಎನ್ನುತ್ತಾರೆ.

Page 68 of 112

Kannada Sethu. All rights reserved.