ಕನ್ನಡ ಅಧ್ಯಾಪಕರು ಹಾಗೂ ಭಾವ ಪ್ರಕಟಣೆ

ಭಾಷಾ ತರಗತಿಗಳು ಭಾವರಹಿತವಾದರೆ ಅವು ಪರಿಣಾಮಕಾರಿಯಾಗುವುದಿಲ್ಲ. ಒಬ್ಬ ಕನ್ನಡ ಅಧ್ಯಾಪಕಿಯಾಗಿ  ನಾನು ಭಾವಿಸಿದ ಹಾಗೂ ಜೀವಿಸಿದ  ಅನುಭವವಿದು. ಭಾಷೆಯು ಸಾಹಿತ್ಯದ ಸಂದರ್ಭದಲ್ಲಿ ಅಥವಾ ಸಂವಹನ ಸಂದರ್ಭದಲ್ಲಿ ಬಳಕೆಯಾಗುವಾಗ ಭಾವಭರಿತವಾದ ರೂಪ, ಆಕಾರಗಳನ್ನು ಹೊಂದಿರುತ್ತದೆ. ವಿಜ್ಞಾನ, ವಾಣಿಜ್ಯ, ತರ್ಕ ಮುಂತಾದ ವಿಷಯಗಳನ್ನು ಬೋಧಿಸುವಾಗ ಅಥವಾ ಬರೆಯುವಾಗ ಭಾಷೆಯು ತನ್ನ ಭಾವರೂಪವನ್ನು ಹಿಂದಿಟ್ಟು ಜ್ಞಾನರೂಪವನ್ನು ಮುಂದಿಡುತ್ತದೇನೋ.  ಆದರೆ ಕನ್ನಡ ಅಥವಾ ಯಾವುದೇ ಭಾಷಾ/ಸಾಹಿತ್ಯ  ತರಗತಿಗಳಲ್ಲಿ ಅದು ಭಾವರೂಪಿಯಲ್ಲದೇ ಹೋದರೆ ತಾನು ಹೇಳಬೇಕಾದುದನ್ನು ಸಮರ್ಥವಾಗಿ‌ ಹೇಳಲಾಗದು. ಅಕ್ಷರ, ಪದ, ವಾಕ್ಯಗಳನ್ನು ಉಚ್ಚರಿಸುವಾಗ […]

Diffusion

ಚೆಲ್ಲಾಪಿಲ್ಲಿ ಚಲನೆ – ಒಂದು‌ ವಸ್ತುವಿನಲ್ಲಿನ ಅಣುಗಳು ತಾಪದ ಕಾರಣದಿಂದ ಚೆಲ್ಲಾಪಿಲ್ಲಿಯಾಗಿ ಚಲಿಸುವುದು.

Diffraction

ಬೆಳಕಿನಲೆಯ ಹಬ್ಬುವಿಕೆ – ಬೆಳಕಿನ ಕಿರಣ ಪುಂಜವೊಂದು ಕಿರಿದಾದ ಕಿಂಡಿಯೊಂದರ ಮೂಲಕ ಹಾಯ್ದು ಪರದೆಯೊಂದರ ಮೇಲೆ ಬೀಳುವಂತೆ ಮಾಡಿದಾಗ, ಉಜ್ವಲವಾಗಿ ಮತ್ತು ಮಸುಕಾದ ಪರ್ಯಾಯ ಪಟ್ಟಿಗಳಾಗಿ ಹಬ್ಬುವ ವಿದ್ಯಮಾನ. 

Differential pulley

ರಾಟೆ ವ್ಯವಸ್ಥೆ – ಎರಡು ರಾಟೆಗಳು ಮತ್ತು ಕೊನೆಯಿಲ್ಲದ ಸರಪಣಿಯನ್ನು ಬಳಸಿಕೊಂಡು ಕೆಲಸ ಮಾಡುವ ಒಂದು‌ ಯಾಂತ್ರಿಕ ವ್ಯವಸ್ಥೆ.

Dielectric

ಅವಾಹಕ – ತನ್ನೊಳಗೆ ವಿದ್ಯುತ್ತನ್ನು ಹರಿಯಲು ಬಿಡದ ವಸ್ತು.

Dichroism

ದ್ವಿವರ್ಣತೆ – ಟೌರ್ಮಲೈನ್ ತರಹದ  ಕೆಲವು ಹರಳುಗಳಲ್ಲಿ ಕಾಣುವಂತಹ ಒಂದು ಗುಣ, ಬೆಳಕಿನ‌ ಕೆಲವು ಕಿರಣಗಳನ್ನು ಹೀರಿಕೊಂಡು, ಇನ್ನು ಕೆಲವನ್ನು ತಮ್ಮ ಮೂಲಕ ಸಾಗಿಹೋಗಲು ಬಿಡುವಂತಹ ಗುಣ. ಇದರಿಂದಾಗಿ ಒಂದೇ ಹರಳಿನಲ್ಲಿ ಒಂದಕ್ಕಿಂತ ಹೆಚ್ಚು ಬಣ್ಣ ಕಾಣುತ್ತದೆ.

ಕನ್ನಡ ಗಾದೆ ಮಾತು – ತಾಳಿದವನು ಬಾಳಿಯಾನು.

ತಾಳ್ಮೆ ಎಂಬ ಸದ್ಗುಣದ ಮಹತ್ವವನ್ನು ಹೇಳುವ ಮಾತು ಇದು. ಮೋಡ ಕರಗಿ ಹನಿಯೊಡೆಯಲು, ಬೀಜ ಸಸಿಯಾಗಲು, ಕಾಯಿ ಹಣ್ಣಾಗಲು ಅದರದ್ದೇ ಆದ ಸಮಯ ಬೇಕು‌. ಇದಕ್ಕಾಗಿ ನಾವು ಕಾಯಬೇಕಾಗುತ್ತದೆ. ಹೀಗೆಯೇ ಒಬ್ಬರನ್ನು ತಪ್ಪು ತಿಳಿಯುವ ಮೊದಲು, ಯಾರ ಮೇಲಾದರೂ ಕೋಪಿಸಿಕೊಳ್ಳುವ ಮೊದಲು ಅವರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ನಾವು ಪ್ರಯತ್ನ ಮಾಡಬೇಕು. ಇಂತಹ ತಾಳ್ಮೆಯ ಗುಣ ಯಾರಿಗೆ ಇರುತ್ತದೋ ಅವರು ಚೆನ್ನಾಗಿ ಬಾಳುವುದರಲ್ಲಿ ಅನುಮಾನವಿಲ್ಲ. Kannada proverb : Taalidavanu baaliyanu( One who has patience […]

ಕನ್ನಡ ಉಳಿಸುವುದಕ್ಕೂ ಪೆಟ್ರೋಲ್ ಉಳಿಸುವುದಕ್ಕೂ ಇರುವ ವ್ಯತ್ಯಾಸ ಏನು?

ಈ ತಿಂಗಳು ಅಂದರೆ ನವೆಂಬರ್ 2023ರ ಕಸ್ತೂರಿ ಮಾಸಪತ್ರಿಕೆಯಲ್ಲಿ ಒಂದು ಉತ್ತಮ ಲೇಖನ ಬಂದಿದೆ. ಜಯತನಯ ಎಂಬವರು ಬರೆದ  “ಕನ್ನಡ ಹಿತರಕ್ಷಣೆಗೆ ಏನು ಮಾಡಬೇಕು?” ಎಂಬ ಲೇಖನ ಅದು.‌ ಆ ಲೇಖನದಲ್ಲಿನ ಒಂದು ವಿಷಯ ನನ್ನ ಗಮನ ಸೆಳೆಯಿತು. ‌ ಪೆಟ್ರೋಲನ್ನು ಉಳಿಸಬೇಕು ಅಂದರೆ ಅದನ್ನು ಬಳಸಬಾರದು, ಆದರೆ ಕನ್ನಡವನ್ನು ಉಳಿಸಬೇಕು ಅಂದರೆ ಅದನ್ನು ಬಳಸಬೇಕು ಎಂಬ ಮಾತು ಅದು.  ಎಷ್ಟು ನಿಜ ಅಲ್ಲವೇ?  “ಹಿಂಗಾದ್ರೆ ಹೆಂಗೆ ಸ್ವಾಮಿ ಕನ್ನಡದುದ್ಧಾರ, ಭಾಷೆ ಬಳಸಿ ಬಳಸಿ ಮಾಡ್ಬೇಕ್ ನಾವೆ ಕನ್ನಡ […]

Diascope

ಚಿತ್ರಯಂತ್ರ – ಅರೆಪಾರದರ್ಶಕ ವಸ್ತುಗಳನ್ನು ಬಿಂಬಿಸಲು ಬಳಸುವ ಒಂದು ದೃಶ್ಯೋಪಕರಣ. 

Diaphragm

ತಡೆಗೋಡೆ – ದೃಶ್ಯೋಪಕರಣಗಳಲ್ಲಿ  ಕ್ಯಾಮರಾ ಕಿಂಡಿಯೊಳಗೆ ಬರುವ ಬೆಳಕಿನ ಪ್ರಮಾಣವನ್ನು ನಿಯಂತ್ರಿಸುವ ಸಾಧನ.

Page 73 of 112

Kannada Sethu. All rights reserved.