ಲೋಕದೊಂದಿಗೆ ನಾವು ವ್ಯವಹರಿಸುವಾಗ ನಮ್ಮ ಸುಖದುಃಖಗಳನ್ನು ಯಾರೊಂದಿಗೆ, ಎಷ್ಟರ ಮಟ್ಟಿಗೆ, ಯಾವಾಗ, ಹೇಗೆ ಹಂಚಿಕೊಳ್ಳುತ್ತೇವೆ ಎಂಬುದರ ಬಗ್ಗೆ ಲಕ್ಷ್ಯ ಕೊಡಬೇಕಾಗುತ್ತದೆ. ಸದಾಕಾಲ ತಮ್ಮ ಗೋಳುಗಳನ್ನು ಹೇಳುತ್ತಾ ಇರುವವರ ಬಗ್ಗೆ ಜನರು ಗೌರವ ಕಳೆದುಕೊಂಡು ಅವರ ಮಾತುಗಳಿಗೆ ಗಮನ ಕೊಡುವುದನ್ನು ನಿಲ್ಲಿಸಿಬಿಡುತ್ತಾರೆ – “ಅಯ್ಯೋ, ಅವರದ್ದು ದಿನಾ ಇದ್ದಿದ್ದೇ ಬಿಡು. ಒಂದಲ್ಲ ಒಂದು ವಿಷಯಕ್ಕೆ ಗೋಳಾಡ್ತಾನೇ ಇರ್ತಾರೆ. ದಿನಾ ಸಾಯೋರಿಗೆ ಅಳರ‍್ಯಾರು!’’ ಎನ್ನುತ್ತಾರೆ. ಈ ಗಾದೆಮಾತು ಎಷ್ಟು ಪರಿಣಾಮಕಾರಿಯಾದ ಉಕ್ತಿಯೆಂದರೆ ಸಾವು ಎನ್ನುವುದು ವ್ಯಕ್ತಿಗೆ ದಿನಾ ಬರುವಂತಹದ್ದಲ್ಲ ಎಂಬ […]