Double refraction

ಇಮ್ಮಡಿ ವಕ್ರೀಭವನ – ಒಂದು‌ ಕಿರಣವು ತನ್ನ ಮೇಲೆ ಬಿದ್ದಾಗ ಅದನ್ನು ಎರಡು ವಕ್ರೀಭವಿತ ಕಿರಣಗಳನ್ನಾಗಿ ಮಾರ್ಪಡಿಸುವಂತಹ ವಿದ್ಯಮಾನ. ಕೆಲವು ಸ್ಫಟಿಕಗಳಿಗೆ ಈ  ಗುಣಲಕ್ಷಣವಿರುತ್ತದೆ.

Dot product

ದಿಶಾಯುತ ಉತ್ಪನ್ನ – ಎರಡು ದಿಶಾಯುತಗಳ ಉತ್ಪನ್ನ ಇದು‌‌, ತಾನು ಒಂದು ದಿಶಾರಹಿತ ಪರಿಮಾಣವಾಗಿರುತ್ತದೆ.

ಕನ್ನಡ ಗಾದೆಮಾತು –  ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣ ಸಂಕಟ.

ಕೆಲವು ಸಂದರ್ಭಗಳಿರುತ್ತವೆ‌‌. ಅಪಹರಣಕಾರರು ತಾವು ಹಿಡಿದಿಟ್ಟುಕೊಂಡ ಒತ್ತೆಯಾಳುಗಳನ್ನು, ಶತ್ರು ದೇಶದ ಸೈನಿಕರನ್ನು ಸೆರೆ ಹಿಡಿದ ಸೈನ್ಯಾಧಿಕಾರಿಗಳು ತಮ್ಮ ಸೆರೆಯಾಳುಗಳನ್ನು ನಡೆಸಿಕೊಳ್ಳುವ ಕ್ರಮವು ಮೇಲೆ ಹೇಳಿದ ಗಾದೆ ಮಾತನ್ನು ನೆನಪಿಸಬಹುದು.‌ ಬೆಕ್ಕು ಇಲಿಯನ್ನು ತಿನ್ನುವ ಮೊದಲು ಚಿನ್ನಾಟ, ಚೆಲ್ಲಾಟ ಆಡಬಹುದು, ಆದರೆ ಇಲಿಗೆ ತನಗೆ ಸಾವು ಕಾದಿದೆ ಎಂದು ಗೊತ್ತಿರುವುದರಿಂದ ಕ್ಷಣಕ್ಷಣವೂ  ಆ ಪಾಪದ ಜೀವಿಗೆ ಪ್ರಾಣವೇ ಬಾಯಿಗೆ ಬಂದ ಹಾಗೆ ಆಗುತ್ತಿರುತ್ತದೆ.  Kannada proverb – Bekkige chellata, ilige praana Sankata( It is a […]

ಅರ್ಧವರ್ಷ ಪದ್ಧತಿಯಲ್ಲಿ ಕನ್ನಡ  ಸಾಹಿತ್ಯ ಚರಿತ್ರೆಯನ್ನು ಪಾಠ ಮಾಡುವ ಸವಾಲು.

ಪದವಿ ಕಾಲೇಜುಗಳಲ್ಲಿ ಸುಮಾರು 2004 ನೇ ಇಸವಿಯವರೆಗೂ ವಾರ್ಷಿಕ ಪದ್ಧತಿಯ ಶೈಕ್ಷಣಿಕ ವಿನ್ಯಾಸ ಇತ್ತು.‌ ಆಗ ಕವಿತೆಗಳು/ಸಣ್ಣಕಥೆಗಳು/ಪ್ರಬಂಧಗಳು ಮುಂತಾದವನ್ನು ಪಾಠ ಮಾಡುವ ಮುಂಚೆ ಅಥವಾ ವರ್ಷದ ಪ್ರಾರಂಭದಲ್ಲಿ ಕನ್ನಡ ಸಾಹಿತ್ಯ ಚರಿತ್ರೆಯನ್ನು ಸಾವಧಾನವಾಗಿ ವಿವರಿಸುವ ಅವಕಾಶ ಇತ್ತು.  ಏಕೆಂದರೆ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ಒಂದೇ ಸಲ ವಾರ್ಷಿಕ ಪರೀಕ್ಷೆ ಇರುತ್ತಿತ್ತು. ಆದರೆ  ಅರ್ಧವಾರ್ಷಿಕ ಪಾಠ ಪದ್ಧತಿ ಬಂದ ಮೇಲೆ ಈ ಚಿತ್ರ ಬದಲಾಯಿತು.‌‌ ಪಾಠಕ್ಕೆ ಸಮಯ ಕಡಿಮೆ ಆಗಿ ಪರೀಕ್ಷೆಗೆ ಮಹತ್ವ ಹೆಚ್ಚಾಯಿತು.‌ ಪರೀಕ್ಷೆ ಬರುವಷ್ಟರಲ್ಲಿ ಪಠ್ಯಭಾಗ ಮುಗಿಸುವುದೇ […]

ಸೇತುವೆಯಾದ ಸಂಗೀತ

ಕನ್ನಡ ಸಾಹಿತ್ಯದ ಚರಿತ್ರೆಯನ್ನು ಮತ್ತು ಕನ್ನಡಿಗರ ಜೀವನಕ್ರಮವನ್ನು ತುಸು ಆಳವಾಗಿ ಗಮನಿಸಿದ ಯಾರಿಗೇ ಆದರೂ ಒಂದು ಸಂಗತಿ ಗಮನಕ್ಕೆ ಬಂದಿರುತ್ತದೆ. ಅದೇನೆಂದರೆ ಸಂಗೀತವು ಸಾಹಿತ್ಯವನ್ನು ಜನರಿಗೆ ಮುಟ್ಟಿಸುವ ಸೇತುವೆಯಾಗಿ ಕೆಲಸ ಮಾಡಿದೆ. ಈ ಮಾತು ಅನಕ್ಷರಸ್ಥ ಸಮುದಾಯದ ಮಟ್ಟಿಗಂತೂ  ಹೆಚ್ಚು ನಿಜ. ಮೊದಲಿಗೆ ಕನ್ನಡ ಸಾಹಿತ್ಯದ ತಾಯಿಬೇರಾದ ನಮ್ಮ ಜನಪದ ಸಾಹಿತ್ಯವನ್ನು ನೋಡುವುದಾದರೆ, ಅಲ್ಲಂತೂ ಹಾಡಿನ ಧಾಟಿಯು ಮಾತಿಗಿಂತ ಮೊದಲೇ ಅಥವಾ ಮಾತಿನೊಟ್ಟಿಗೆ ಬಂತೇನೋ ಎಂಬಂತೆ, ಗಳಸ್ಯ ಕಂಠಸ್ಯವಾಗಿ ಬಾಯಿಂದ ಬಾಯಿಗೆ ಧಾಟಿ ಸಮೇತ ಸಾಹಿತ್ಯ ಹರಿದುಬಂದಿದೆ. […]

ಕನ್ನಡ ದಾಸವಾಣಿ – “ಅಲ್ಲಿದೆ ನಮ್ಮನೆ ಇಲ್ಲಿರುವುದು ಸುಮ್ಮನೆ”

ಇದು ಪುರಂದರದಾಸರ ಒಂದು ಪ್ರಸಿದ್ಧ ಕೀರ್ತನೆಯ ಮೊದಲ ಸಾಲು‌‌. ಇಂದು ಇದ್ದು, ನಾಳೆ ಇಲ್ಲವಾಗುವ    ಭೂಮಿಯ ಜೀವನದ ಅರ್ಥಹೀನತೆ, ನಶ್ವರತೆಗಳನ್ನು ಈ ಸಾಲು ಅತ್ಯಂತ ಸರಳವಾಗಿ  ಹೇಳುತ್ತದೆ. ಮಾಳಿಗೆ ಮನೆ, ಮಡದಿ ಮಕ್ಕಳು ಎಂದು ಒದ್ದಾಡುವ ಮನುಷ್ಯನು ತನ್ನ ನಿಜವಾದ ಮನೆಯಾದ ದೇವರ ಮನೆಯನ್ನು ಮರೆತುಬಿಡುತ್ತಾನೆ, ಹಾಗೆ ಮಾಡಬಾರದು ಎಂಬುದೇ ಇದರ ತಾತ್ಪರ್ಯವಾಗಿದೆ. Kannada poet speak – Allide nammane, illuruvudu summane( My actual home is there, I am simply […]

Dose

ಒಂದು ಸಲದ ಅಳತೆ( ಒಕ್ಕುಡಿತೆ) – ವಿಕಿರಣಕಾರೀ ಬೆಳಕಿನಿಂದ ಒಂದು ಜೀವಿಗೆ ಒಂದು ಸಲಕ್ಕೆ ಕೊಡಲ್ಪಟ್ಟ ಹಾಗೂ ಆ ಜೀವಿಯು ಹೀರಿಕೊಂಡ ಶಕ್ತಿ. 

Dopler effect

ಡಾಪ್ಲರ್ ಪರಿಣಾಮ – ಆಕರ ಮತ್ತು ವೀಕ್ಷಕನ ನಡುವಿನ ಸಾಪೇಕ್ಷ ( ತುಲನಾತ್ಮಕ) ಚಲನೆಯಿಂದಾಗಿ ಒಂದು ಅಲೆಯ ಆವರ್ತನದಲ್ಲಿ ಇರುವುದೆಂದು ಭಾಸವಾಗುವ ಬದಲಾವಣೆ.

Dopant

ಉತ್ತೇಜಕ – ಒಂದು ಅರೆವಾಹಕದ ವಾಹಕತ್ವವನ್ನು ಹೆಚ್ಚಿಸಲು ಅದಕ್ಕೆ ಸೇರಿಸುವ ಕಲ್ಮಷ ಪದಾರ್ಥ.

Donor

ವಿದ್ಯುದಂಶ ದಾನಿ – ಒಂದು ಅರೆವಾಹಕಕ್ಕೆ ವಿದ್ಯುದಂಶ ವಾಹಕಗಳ ಸಂಖ್ಯೆಯನ್ನು ಹೆಚ್ಚಿಸುವುದಕ್ಕಾಗಿ ಸೇರಿಸಿದ ಕಲ್ಮಷ ಪದಾರ್ಥ. 

Page 2 of 3

Kannada Sethu. All rights reserved.