Electret 

ವಿದ್ಯುತೀಕೃತ – ಶಾಶ್ವತವಾಗಿ ವಿದ್ಯುತೀಕೃತಗೊಂಡ ಒಂದು ವಸ್ತು. ಇದರ ಒಂದು ತುದಿಯಲ್ಲಿ ಧನ ವಿದ್ಯುದಂಶ ಹಾಗೂ ಇನ್ನೊಂದು ತುದಿಯಲ್ಲಿ ಋಣ ವಿದ್ಯುದಂಶ ಇರುತ್ತದೆ.

Elasticity

ಸ್ಥಿತಿ ಸ್ಥಾಪಕತ್ವ – ಆಕಾರವನ್ನು ಕೆಡಿಸುವ/ಬದಲಾಯಿಸುವ ಪೀಡನೆಯನ್ನು ತೆಗೆದು ಹಾಕಿದಾಗ ತನ್ನ ಮೂಲ ಆಯಾಮಗಳನ್ನು ಮರಳಿ ಪಡೆಯುವ ಗುಣವೇ ಸ್ಥಿತಿ ಸ್ಥಾಪಕತ್ವ.‌

ಕನ್ನಡ ಗಾದೆಮಾತು –  ಅರ್ಧ ಕಲಿತವನ ಅಬ್ಬರ ಹೆಚ್ಚು.

ನಿಜವಾಗಿಯೂ ಜ್ಞಾನಿಗಳಾದವರು ಅಬ್ಬರ ಮಾಡುವುದಿಲ್ಲ.‌ ‘ತಮಗೆ ಇಷ್ಟು ಗೊತ್ತು, ಅಷ್ಟು ಗೊತ್ತು, ತಾವು ಎಲ್ಲರಿಗಿಂತ ಮೇಲು’ ಎಂದು ಬೀಗುವುದಿಲ್ಲ.‌ ಆದರೆ ಯಾವುದಾದರೊಂದು ವಿಷಯವನ್ನು ಸ್ವಲ್ಪ ಕಲಿತವರು ತಾವು ಬಹಳ ಹೆಚ್ಚು ಕಲಿತುಬಿಟ್ಟಿದ್ದೇವೆ ಎಂದು ಅಬ್ಬರ ಮಾಡುತ್ತಾರೆ, ಮತ್ತು ಹೀಗೆ ಮಾಡಿ ತಮ್ಮ ಸುತ್ತಮುತ್ತಲಿನ ಜನರ ತಿರಸ್ಕಾರಕ್ಕೆ ಒಳಗಾಗುತ್ತಾರೆ. ಹೀಗಾಗಿ, ಮನುಷ್ಯನು ನಿರಂತರವಾಗಿ ಕಲಿಯುತ್ತಾ ಇರಬೇಕೇ ಹೊರತು ಅನಗತ್ಯ ಕಡೆಗಳಲ್ಲಿ ತನ್ನ ಜ್ಞಾನ ಪ್ರದರ್ಶನ ಮಾಡಿ ತನ್ನ ಸ್ಥಾನವನ್ನು ತಾನೇ ಕಳೆದುಕೊಳ್ಳಬಾರದು‌. Kannada proverb – Ardha kalithavana […]

ನೀರ್ ದೋಸೆ, ನೀರ್  ಚಟ್ನಿ, ನೀರ್ ಪಲ್ಯ, ನೀರ್ ಗೊಜ್ಜು…. ಅಯ್ಯಯ್ಯೋ….

ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ನೀರ್ ಎಂಬ ಧಾತುವಿನಿಂದ (ಪದಮೂಲ) ಪ್ರಾರಂಭವಾಗುವ ತಿಂಡಿ/ಖಾದ್ಯಗಳ ಹೆಸರು ಕೇಳಿ ಬರುತ್ತವೆ. ತಮಾಷೆಯೆಂದರೆ ಎಂದೂ ಆ ಹೆಸರು ಕೇಳದ ಪ್ರದೇಶದವರು‌ “ಹಾಂ…!? ಹೀಗೂ ಒಂದು ತಿಂಡಿ ಇರುತ್ತಾ!? ” ಎಂದು ಆಶ್ಚರ್ಯ ಪಡುತ್ತಾರೆ, ಆದರೆ ತಮ್ಮ ಪ್ರದೇಶದಲ್ಲಿ ಇರುವ ನೀರ್ ಎಂಬ ಪದಮೂಲದ ಹೆಸರಿನ ತಿಂಡಿಯ ಬಗೆಗೆ ಅವರಿಗೆ ಅಚ್ಚರಿಯ ಭಾವ ಇರುವುದಿಲ್ಲ; ಏಕೆಂದರೆ ಅದು ಅವರಿಗೆ ರೂಢಿಯಾಗಿಬಿಟ್ಟಿರುತ್ತದೆ.  ದಕ್ಷಿಣ ಕನ್ನಡದ ಕಡೆ ಅಕ್ಕಿ ನೆನೆ ಹಾಕಿ ಅದನ್ನು ಉಪ್ಪಿನೊಡನೆ ನುಣ್ಣಗೆ […]

Elastance

ವಿದ್ಯುತ್ ಸಾಮರ್ಥ್ಯ ವಿಲೋಮ – ವಿದ್ಯುತ್ ಸಾಮರ್ಥ್ಯದ ವಿಲೋಮ‌‌ ಇದು. ಇದನ್ನು ವಿಲೋಮ ಫ್ಯಾರಡ್ ಗಳಲ್ಲಿ ಅಳೆಯುತ್ತಾರೆ.

Effusion 

ಹೊರ ಹರಿಯುವಿಕೆ – ಒಂದು ಸಣ್ಣ ಕಿಂಡಿಯ ಮೂಲಕ ಅನಿಲವೊಂದರ ಹೊರ ಹರಿಯುವಿಕೆ, ಹೊರ ಚೆಲ್ಲುವಿಕೆ. 

Eddy currents

ಸುಳಿರೂಪೀ ವಿದ್ಯುತ್ಪ್ರವಾಹ- ಕಾಂತಕ್ಷೇತ್ರಗಳು ಬದಲಾಗುತ್ತಿದ್ದಾಗ ವಿದ್ಯುತ್ ವಾಹಕಗಳಲ್ಲಿ ಪ್ರಚೋದನೆಗೊಳ್ಳುವ ವಿದ್ಯುತ್ಪ್ರವಾಹಗಳು. ಇವುಗಳಿಂದಾಗಿ ಆ ವಾಹಕಗಳ ತಾಪಮಾನ ಏರಿ ಉಪಯುಕ್ತ ಶಕ್ತಿಯು ನಷ್ಟವಾಗುತ್ತದೆ.

Eclipse

ಗ್ರಹಣ – ಒಂದು ಆಕಾಶಕಾಯದ ನೆರಳು ಇನ್ನೊಂದರ ಮೇಲೆ ಬೀಳುವುದು‌ ಅಥವಾ ಒಂದು ಆಕಾಶಕಾಯದ ನೆರಳು ಇನ್ನೊಂದನ್ನು ಕಾಂತಿಗುಂದಿಸುವುದು.

Echo

ಪ್ರತಿಧ್ವನಿ – ಒಂದು ಗಟ್ಟಿ ಮೇಲ್ಮೈಯು ಶಬ್ಧದ ಅಲೆಗಳನ್ನು ಪ್ರತಿಫಲಿಸಿದಾಗ ಉಂಟಾಗುವ ಪರಿಣಾಮ. 

ಕನ್ನಡ ಗಾದೆಮಾತು –  ಅನ್ನ ಇಕ್ಕಿ ಸಾಕು ಅನ್ನಿಸಬಹುದು, ದುಡ್ಡು ಕೊಟ್ಟು ಸಾಕು ಅನ್ನಿಸಕ್ಕೆ ಆಗಲ್ಲ.

ಮನುಷ್ಯ ಸ್ವಭಾವ ಹಾಗೂ ಬದುಕಿನ ಬಗ್ಗೆ ಮುಖ್ಯವಾದ ಒಳನೋಟವೊಂದನ್ನು ಕೊಡುವ ಗಾದೆ ಮಾತಿದು. ಹಸಿದ ಮನುಷ್ಯನೊಬ್ಬನಿಗೆ ನೀವು ಊಟ ಬಡಿಸಿದಾಗ ಎರಡಲ್ಲ ನಾಲ್ಕು ತುತ್ತಿಗೆ ‘ ಇನ್ನು ಸಾಕು, ಹೊಟ್ಟೆ ತುಂಬಿತು’ ಎಂದು ಅವನು ಹೇಳುತ್ತಾನೆ ಮತ್ತು ಅವನಿಗೆ ಹೊಟ್ಟೆ ತುಂಬ ಬಡಿಸಿದ ತೃಪ್ತಿ ನಿಮಗೆ ಸಿಗುತ್ತದೆ. ಆದರೆ ಹಣದ ವಿಷಯದಲ್ಲಿ ಹೀಗಾಗುವುದಿಲ್ಲ.‌ ಮನುಷ್ಯನಿಗೆ ಯಾರು ಎಷ್ಟು ಹಣ ಕೊಟ್ಟರೂ ಯಾವತ್ತೂ ಅವನಿಗೆ ಸಾಕು ಅನ್ನಿಸಲ್ಲ, ಇನ್ನೂ ಬೇಕು ಬೇಕು ಅನ್ನಿಸುತ್ತಲೇ ಇರುತ್ತೆ. ಲಂಚ-ರಿಷುವತ್ತು, ಭ್ರಷ್ಟಾಚಾರ, ಕಳ್ಳತನದಂತಹ […]

Page 2 of 4

Kannada Sethu. All rights reserved.