Dynamic equilibrium

ಚಲನಾತ್ಮಕ ಸಮತೋಲನ – ಸಮಸ್ಥಿತಿಯಲ್ಲಿರುವ ಒಂದು ವ್ಯವಸ್ಥೆಯಲ್ಲಿ ಮುಮ್ಮುಖ ಕ್ರಿಯೆ ಮತ್ತು ಹಿಮ್ಮುಖ ಕ್ರಿಯೆಗಳು ಒಂದೇ ವೇಗದಲ್ಲಿ ನಡೆದರೆ ಅದನ್ನು ಚಲನಾತ್ಮಕ ಸಮತೋಲನ ಎನ್ನುತ್ತಾರೆ.

Dwraf star

ಕುಬ್ಜ ನಕ್ಷತ್ರ – ತನ್ನ ವಿಕಾಸದ ಕೊನೆಯ ಹಂತದಲ್ಲಿರುವ ನಕ್ಷತ್ರವಿದು. ಇದರೊಳಗಿನ ಇಂಧನವು ತೀರಿಹೋಗಿ ಅದರ ಗುರುತ್ವ ಶಕ್ತಿಯು ಕುಸಿದು ಹೋಗಿರುತ್ತದೆ.

Ductility 

ತಂತಿಯಾಗುವ ಸಾಮರ್ಥ್ಯ – ವಸ್ತುಗಳಲ್ಲಿ ಅದರಲ್ಲೂ ಮುಖ್ಯವಾಗಿ ಲೋಹಗಳಲ್ಲಿ ಕಾಣಿಸುವ ಸಾಮರ್ಥ್ಯ ಇದು. ಉದಾಹರಣೆಗೆ ತಾಮ್ರ ಲೋಹವನ್ನು ತಂತಿಯಂತೆ ಉದ್ದಕ್ಕೆ ಎಳೆದರೂ ಅದು ಸೀಳಿಕೊಳ್ಳದೆ, ಮುರಿಯದೆ ಇರುತ್ತದೆ.

ಕನ್ನಡ ಗಾದೆಮಾತು – ರೆಟ್ಟೆ ಮುರೀಬೇಕು ರೊಟ್ಟಿ ತಿನ್ನಬೇಕು

ನಾವು ಮನುಷ್ಯರು ಕಷ್ಟಪಟ್ಟು ದುಡಿದು ನಮ್ಮ ಅನ್ನ ಸಂಪಾದಿಸಬೇಕು ಎಂಬ ಉತ್ತಮ ನೀತಿಯನ್ನು ನಾಲ್ಕೇ ಪದಗಳಲ್ಲಿ ಹೇಳುವ ಗಾದೆ ಮಾತಿದು. ರೆಟ್ಟೆ ಎಂಬ ನಾಮಪದಕ್ಕೆ ನಿಘಂಟಿನಲ್ಲಿ ಇರುವ ಅರ್ಥ ತೋಳು, ಬಾಹು ಎಂದು. ರೆಟ್ಟೆ ಮುರಿಯುವುದು ಅಂದರೆ ಶ್ರಮ ಪಟ್ಟು ಕೆಲಸ ಮಾಡುವುದು ಎಂದರ್ಥ. ನಾವು ತಿನ್ನುವ ರೊಟ್ಟಿಯು ನಮ್ಮ ರೆಟ್ಟೆ ಮುರಿದು ದುಡಿದು ಗಳಿಸಿದ ಹಣದಿಂದ ಬರಬೇಕೇ ಹೊರತು, ಇನ್ನೊಬ್ಬರ ಮರ್ಜಿ, ಭಿಕ್ಷೆ, ದಾನದಿಂದ ಬರಬಾರದು. ದುಡಿದು ಗಳಿಸಿ ತನ್ನ ಪರಿಶ್ರಮದ ಕೂಳನ್ನು ತಾನು ಉಣ್ಣುವುದರಲ್ಲಿ […]

ಛಂದಸ್ಸಿನ ಪಾಠ ಅಕ್ಕಾ –  ನಿಜದಿ ತಲುಪಬೇಕು ಕಿವಿಗಳ ಮೂಲಕ

ಕನ್ನಡವನ್ನು ಐಚ್ಛಿಕ ವಿಷಯವಾಗಿ ಓದುವ ಪದವಿ ಅಥವಾ ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳು ತಮ್ಮ ಪಠ್ಯದ ಭಾಗವಾಗಿ ಛಂದಸ್ಸನ್ನು ಓದುತ್ತಾರೆ. ಛಂದಸ್ಸು ಎಂದರೆ ಪದ್ಯರಚನೆಯ ನಿಯಮ ಎಂದು ಅರ್ಥ. ಒಂದು ಪದ್ಯದ ಲಯ, ಗತಿ, ಓಟ, ಪ್ರಾಸ, ತಾಳಕ್ಕೆ ಸಿಗುವ ಗುಣ ಇವೆಲ್ಲವನ್ನೂ ಅಧ್ಯಯನ ಮಾಡುವುದು ಛಂದಸ್ಸಿನ ಪರಿಧಿಯಲ್ಲಿ ಸೇರುತ್ತದೆ. ಛಂದಸ್ಸು ಎಂದರೆ ಹೊದಿಸುವುದು ಎಂದೂ ಅರ್ಥವಿದೆ. ಪದಗಳಿಗೆ ಲಯದ ಹೊದಿಕೆ ತೊಡಿಸುವುದು ಅನ್ನಬಹುದೇನೋ. ಛಂದಸ್ಸನ್ನು ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ಪಾಠ ಮಾಡುವುದೆಂದರೆ ಅದು ಅಧ್ಯಾಪಕರಿಗೆ ಸವಾಲಿನ ವಿಷಯವೇ ಸರಿ. […]

Page 4 of 4

Kannada Sethu. All rights reserved.