Eclipse

ಗ್ರಹಣ – ಒಂದು ಆಕಾಶಕಾಯದ ನೆರಳು ಇನ್ನೊಂದರ ಮೇಲೆ ಬೀಳುವುದು‌ ಅಥವಾ ಒಂದು ಆಕಾಶಕಾಯದ ನೆರಳು ಇನ್ನೊಂದನ್ನು ಕಾಂತಿಗುಂದಿಸುವುದು.

Echo

ಪ್ರತಿಧ್ವನಿ – ಒಂದು ಗಟ್ಟಿ ಮೇಲ್ಮೈಯು ಶಬ್ಧದ ಅಲೆಗಳನ್ನು ಪ್ರತಿಫಲಿಸಿದಾಗ ಉಂಟಾಗುವ ಪರಿಣಾಮ. 

ಕನ್ನಡ ಗಾದೆಮಾತು –  ಅನ್ನ ಇಕ್ಕಿ ಸಾಕು ಅನ್ನಿಸಬಹುದು, ದುಡ್ಡು ಕೊಟ್ಟು ಸಾಕು ಅನ್ನಿಸಕ್ಕೆ ಆಗಲ್ಲ.

ಮನುಷ್ಯ ಸ್ವಭಾವ ಹಾಗೂ ಬದುಕಿನ ಬಗ್ಗೆ ಮುಖ್ಯವಾದ ಒಳನೋಟವೊಂದನ್ನು ಕೊಡುವ ಗಾದೆ ಮಾತಿದು. ಹಸಿದ ಮನುಷ್ಯನೊಬ್ಬನಿಗೆ ನೀವು ಊಟ ಬಡಿಸಿದಾಗ ಎರಡಲ್ಲ ನಾಲ್ಕು ತುತ್ತಿಗೆ ‘ ಇನ್ನು ಸಾಕು, ಹೊಟ್ಟೆ ತುಂಬಿತು’ ಎಂದು ಅವನು ಹೇಳುತ್ತಾನೆ ಮತ್ತು ಅವನಿಗೆ ಹೊಟ್ಟೆ ತುಂಬ ಬಡಿಸಿದ ತೃಪ್ತಿ ನಿಮಗೆ ಸಿಗುತ್ತದೆ. ಆದರೆ ಹಣದ ವಿಷಯದಲ್ಲಿ ಹೀಗಾಗುವುದಿಲ್ಲ.‌ ಮನುಷ್ಯನಿಗೆ ಯಾರು ಎಷ್ಟು ಹಣ ಕೊಟ್ಟರೂ ಯಾವತ್ತೂ ಅವನಿಗೆ ಸಾಕು ಅನ್ನಿಸಲ್ಲ, ಇನ್ನೂ ಬೇಕು ಬೇಕು ಅನ್ನಿಸುತ್ತಲೇ ಇರುತ್ತೆ. ಲಂಚ-ರಿಷುವತ್ತು, ಭ್ರಷ್ಟಾಚಾರ, ಕಳ್ಳತನದಂತಹ […]

ಜನಪದ ಗಾಯಕರ ಅದ್ಭುತ ಸಂವಹನ‌ ಶೈಲಿ…ಅದ್ಹೆಂಗಪ್ಪಾ ಅಂದ್ರೆ…

“ಏನು, ಹೆಂಗಿದೀರ? ಎಲ್ರೂ ನಾಷ್ಟ ಮಾಡಿದ್ರಾ ಮತ್ತೆ?..ನಮ್ಮ ಮಾಯ್ಕಾರ ಮಾದಪ್ನೋರು ಬರೋ ದಾರಿಯಲ್ಲಿ…” ಏನಾಯ್ತಪ್ಪಾ ಅಂದ್ರೆ ……..ಇದು ಕನ್ನಡ ಜನಪದ ಪುರಾಣಗಳ ಅದ್ಭುತ ಸಂವಹನ ಶೈಲಿ.         ಮಂಟೆಸ್ವಾಮಿ‌ ಕಥೆ, ಮಾದೇಶ್ವರನ ಪುರಾಣ, ಗೀಗೀಪದ ಮುಂತಾದ ಜನಪದ ಪುರಾಣ ಗಾಯನ ಹಾಗೂ ಗೀತ ಗಾಯನ ಸಂಪ್ರದಾಯವನ್ನು ವೀಕ್ಷಿಸಿದ ಯಾರಿಗೇ ಆದರೂ ಆ ಗಾಯಕರ ಉತ್ತಮ‌ ಸಂವಹನ ಕಲೆಯು‌ ಅಂದರೆ ಬಹಳ ಸರಾಗವಾಗಿ ಪ್ರೇಕ್ಷಕರನ್ನು ತಲುಪುವ ಗುಣವು ಗಮನಕ್ಕೆ ಬಂದಿರುತ್ತದೆ.‌ ಸ್ವಲ್ಪ ಮಾತು, ಸ್ವಲ್ಪ‌ […]

Earth’s magnetism

ಭೂಮಿಯ ಅಯಸ್ಕಾಂತತೆ – ಭೂಮಿಯು ತನ್ನ ಮೇಲ್ಮೈಯಲ್ಲಿ ಅಥವಾ ಅದಕ್ಕೆ ಹತ್ತಿರವಿರುವ ಬಿಂದುಗಳಲ್ಲಿ ಕಾಂತಕ್ಷೇತ್ರವನ್ನು ಹೊಂದಿರುವುದು ಗೊತ್ತಾಗಿರುವ ವಿಷಯವಾಗಿದೆ‌. ಹೆಚ್ಚೂಕಮ್ಮಿ ಉತ್ತರ ದಕ್ಷಿಣ ದಿಕ್ಕಿನಲ್ಲಿ ತನ್ನೊಳಗೆ ಒಂದು ಬೃಹತ್ ಗಾತ್ರದ ಪಟ್ಟಿ ರೂಪದ ಅಯಸ್ಕಾಂತವಿದೆಯೇನೋ ಎಂಬಂತೆ ವರ್ತಿಸುತ್ತದೆ ನಮ್ಮ ಭೂಮಿ.

Earth’s atmosphere

ಭೂಮಿಯ ವಾತಾವರಣ – ಭೂಮಿಯನ್ನು ಸುತ್ತುವರಿದಿರುವ ಅನಿಲ. ಇದರಲ್ಲಿ‌ ಅನೇಕ ಪದರಗಳಿರುತ್ತವೆ.

Earthing

ಭೂಸ್ಪರ್ಶನ – ಒಂದು ವಿದ್ಯುತ್ ವಾಹಕವನ್ನು ಭೂಮಿಗೆ ಜೋಡಿಸುವ ಪ್ರಕ್ರಿಯೆ.

Earth Inductor

ಭೂ ಪ್ರೇರಕ – ಒಂದು ಗೊತ್ತಾದ ವಿಸ್ತೀರ್ಣವುಳ್ಳ ಪ್ರದೇಶದಲ್ಲಿ ಗೊತ್ತಾದ ತಿರುವುಗಳಿರುವ ಒಂದು ದೊಡ್ಡ ಸುರುಳಿ‌. ಒಂದು ನಿರ್ದಿಷ್ಟ ಸ್ಥಳದಲ್ಲಿನ ಕಾಂತಕ್ಷೇತ್ರವನ್ನು ಅಳೆಯುವಾಗ ಇದನ್ನು ಬಳಸುತ್ತಾರೆ.‌

Earth Current

ಭೂಸ್ಪರ್ಶಿತ( ನೆಲ) ವಿದ್ಯುತ್ ‌- ಯಾವುದಾದರೊಂದು ವಿದ್ಯುತ್ ಉಪಕರಣದ ಮೂಲಕ ಹರಿಯುತ್ತಿರುವ ವಿದ್ಯುತ್ತು ಸೋರುವ, ತಪ್ಪಾಗಿ ಹರಿಯುವ ಅಥವಾ ಮರಳುವ ಸಂದರ್ಭಕ್ಕೆ ಇದು ಸಂಬಂಧಿಸಿದೆ. 

ಕನ್ನಡ ಗಾದೆಮಾತು –  ಹಿತ್ತಲ ಗಿಡ ಮದ್ದಲ್ಲ.‌

ಕನ್ನಡದ ಅತಿ ಜನಪ್ರಿಯ ಗಾದೆಮಾತುಗಳಲ್ಲಿ ಇದೂ ಒಂದು‌. ಮೂರೇ ಪದಗಳಲ್ಲಿ ಲೋಕಸತ್ಯವೊಂದನ್ನು ಹೇಳುವ ನುಡಿಸಿರಿ ಇದು.  ನಮ್ಮ ಹಿತ್ತಲಲ್ಲೇ ಇರುವ ಒಂದು  ಮದ್ದು( ಔಷಧೀಯ ಗಿಡ) ನಮ್ಮ ಗಮನಕ್ಕೆ ಬಂದಿರುವುದೇ ಇಲ್ಲ! ಬೇರೆಯವರು ಯಾರಾದರೂ ಅದನ್ನು ಮೆಚ್ಚಿಕೊಂಡರೆ ಆಗ ನಮಗೇ ಆಶ್ಚರ್ಯ ಆಗುತ್ತದೆ, ‘ಅಯ್ಯೋ ಇಷ್ಟು ದಿನ ಇದು ಇದ್ದದ್ದು ನಮ್ಮ ಅರಿವಿಗೆ ಬಂದೇ ಇರಲಿಲ್ಲವಲ್ಲ!’ ಅಂತ. ಅತಿಪರಿಚಿತತೆ ತರುವ ತಿರಸ್ಕಾರವು ಇದಕ್ಕೆ ಕಾರಣವಿರಬಹುದು.‌ ಗಿಡಗಳು ಮಾತ್ರ ಅಲ್ಲ, ನಾವು ಮನುಷ್ಯರ ವಿಷಯದಲ್ಲೂ ಹೀಗೇ ವರ್ತಿಸುತ್ತವೆ. ನಮ್ಮೊಂದಿಗೆಯೇ,  […]

Page 72 of 117

Kannada Sethu. All rights reserved.