Crystal

ಹರಳು – ಸಮಕಟ್ಟಾದ ಮೇಲ್ಮೈಗಳುಳ್ಳ ಒಂದು ಘನವಸ್ತು‌. ಇಲ್ಲಿ ಒಂದೇ ವಸ್ತುವಿನ ಹರಳುಗಳು ಹೇಗೆ ಬೆಳೆಯುತ್ತವೆ ಅಂದರೆ ಅವುಗಳ ಮೇಲ್ಮೈಗಳ ನಡುವಿನ ಕೋನವು ಒಂದೇ ಆಗಿರುತ್ತದೆ.

Cryogenics

ಶೀತ ಭೌತಶಾಸ್ತ್ರ – ಬಹಳವೇ ಕಡಿಮೆ ತಾಪಮಾನಕ್ಕೆ ಸಂಬಂಧಿಸಿದ ಭೌತಶಾಸ್ತ್ರ.

ಕನ್ನಡ ಗಾದೆ ಮಾತು – ಗಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿ ತೋಡಿದರಂತೆ.

ಉತ್ತಮವಾದ ಜೀವನಕ್ಕೆ ಪೂರ್ವ ಯೋಜನೆ ತುಂಬ ಅಗತ್ಯ. ಶಾಲಾ ಕಾಲೇಜಿನ ಪರೀಕ್ಷೆ, ಹಬ್ಬ, ಮದುವೆ, ಸಮಾರಂಭ, ಕಾರ್ಯಕ್ರಮ ಯಾವುದೇ ಇರಲಿ, ಒಳ್ಳೆಯ ಪೂರ್ವಯೋಜನೆ ಇದ್ದು ಹಂತಹಂತವಾಗಿ ಸಕಾಲಕ್ಕೆ ಕೆಲಸ ಮಾಡಿದರೆ ಅನಗತ್ಯ ಒತ್ತಡವಿಲ್ಲದೆ ಗುರಿ ಸಾಧಿಸಬಹುದು. ಆದರೆ ಯಾವುದೇ ವಿನ್ಯಾಸ, ಪೂರ್ವ ಯೋಜನೆ ಇಲ್ಲದೆ ಗಡಿಬಿಡಿಯಲ್ಲಿ ಏನಾದರೂ ಮಾಡಲು ಹೊರಟರೆ ಬೇಕಾದ್ದೇನೂ ಕೈಗೆ ಸಿಗದೆ, ಬೇಕಾದವರು ಲಭ್ಯವಾಗದೆ ಪರದಾಡುವಂತಾಗುತ್ತದೆ.‌ ಅದಕ್ಕಾಗಿಯೇ ನೋಡಿ ವಿವೇಕಿಗಳು ಹೇಳುವುದು – ಗಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿ ತೋಡಿದಂತೆ ಆಗಬಾರದು ಎಂದು.‌ ಬಾವಿ […]

ಕನ್ನಡ ಸಾಹಿತ್ಯಕ್ಕೂ‌ ಸಂಗೀತಕ್ಕೂ ಇರುವ ಕರುಳುಬಳ್ಳಿಯ ಸಂಬಂಧ 

ಮೌಖಿಕ ಸಾಹಿತ್ಯವೂ ಸೇರಿದಂತೆ ಕನ್ನಡ ಸಾಹಿತ್ಯದ ಸುದೀರ್ಘ ಚರಿತ್ರೆಯನ್ನು ಗಮನಿಸಿದಾಗ‌ ಎದ್ದು ಕಾಣುವ ಒಂದು ಅಂಶವೆಂದರೆ, ಸಾಹಿತ್ಯಕ್ಕೂ ಸಂಗೀತಕ್ಕೂ ಇರುವ ಆಳವಾದ ಸಂಬಂಧ. ಆಧುನಿಕ‌ ಕಾಲದಲ್ಲಿ ನವ್ಯ ಸಾಹಿತ್ಯದ ಘಟ್ಟವೊಂದನ್ನು ಹೊರತು ಪಡಿಸಿದರೆ ಉಳಿದೆಲ್ಲ ಘಟ್ಟಗಳಲ್ಲೂ ಸಂಗೀತದೊಂದಿಗೆ ಸಾಹಿತ್ಯದ ಸಂಬಂಧ ಗಟ್ಟಿಯಾಗಿರುವುದು ನಮ್ಮ ಅರಿವಿಗೆ ಬರುತ್ತದೆ. ಗರತಿಯ ಹಾಡುಗಳ ತ್ರಿಪದಿಯ ಧಾಟಿ, ‘ಮಾದೇಶ್ವರ‌ ಪುರಾಣ’, ‘ಮಂಟೇಸಾಮಿ ಕಥೆ’ಗಳ (ಜನಪದ ಪುರಾಣಗಳು) ಹಾಡಿನ ಮಟ್ಟುಗಳು, ಹಿಂದೆ ಗದುಗಿನ ಭಾರತ, ಜೈಮಿನಿ‌ ಭಾರತ ಮುಂತಾದವುಗಳನ್ನು ಗಮಕ‌ಶೈಲಿಯಲ್ಲಿ‌ ಹಾಡುತ್ತಿದ್ದುದು, ವಚನ ಗಾಯನ, […]

Crown glass

ಮಸೂರ ತಯಾರಿಕಾ ಗಾಜು ಅಥವಾ ದೃಶ್ಯೋಪಕರಣ ತಯಾರಿಕಾ ಗಾಜು – ಸಾಕಷ್ಟು ಗಟ್ಟಿಯಾಗಿದ್ದರೂ ಸುಲಭವಾಗಿ ಉಜ್ಜಿ ಹೊಳಪು ನೀಡಲು ಸಾಧ್ಯವುಳ್ಳ ಗಾಜು. ಇದು ತುಂಬಾ ಪಾರದರ್ಶಕವಾಗಿರುತ್ತದೆ.

Cathode ray oscilloscope

ಋಣಧ್ರುವ ಕಿರಣ ಬಿಂಬ ದರ್ಶಕ –  ವಿದ್ಯುತ್ ಪ್ರವಾಹವನ್ನು ಅಥವಾ  ವಿದ್ಯುದಂಶವನ್ನು ಒಂದು ಪ್ರತಿದೀಪಕ (ಫ್ಲೋರೋಸೆಂಟ್) ಪರದೆಯ ಮೇಲೆ ತೋರಿಸುವ ಒಂದು ಉಪಕರಣ.

Critical speed

ನಿರ್ಧಾರಕ ವೇಗ – ದ್ರವಗಳ ಹರಿವಿನಲ್ಲಿ ಶಾಂತ ಹರಿವಿನಿಂದ ಪ್ರಕ್ಷುಬ್ಧ ಹರಿವಿಗೆ ಆ ದ್ರವವು ಬದಲಾಗುವಂತಹ ವೇಗ.

Critical mass

ನಿರ್ಧಾರಕ ದ್ರವ್ಯರಾಶಿ – ಒಂದು ಅಣುಸ್ಥಾವರದಲ್ಲಿ ಸರಣಿಕ್ರಿಯೆಯು ಚಾಲನೆಯಲ್ಲಿರುವುದಕ್ಕಾಗಿ ಅಗತ್ಯವಿರುವ ವಿದಳನವಸ್ತುವಿನ ಕನಿಷ್ಠ ಪ್ರಮಾಣ.

Couple

ಜೋಡಿಬಲ – ಒಂದಕ್ಕೊಂದು ಸಮ ಹಾಗೂ ವಿರುದ್ಧವಾಗಿರುವ ಬಲಗಳು. ಇವು ಒಂದೇ ಬಿಂದುವಿನಲ್ಲಿ ವರ್ತಿಸುವುದಿಲ್ಲ, ಬದಲಾಗಿ‌ ಆ ವಸ್ತುವನ್ನು ತಿರುಗುವಂತೆ ಮಾಡುತ್ತವೆ.

ಕನ್ನಡ ಗಾದೆಮಾತು – ಬೀದಿ ಮಕ್ಕಳು ಬೆಳೆದೊ, ಕೋಣೆ ಮಕ್ಕಳು ಕೊಳೆತೊ.

ಕನ್ನಡ ನಾಡಿನಲ್ಲಿ, ಮಕ್ಕಳನ್ನು ಬೆಳೆಸುವ ಸಂದರ್ಭದಲ್ಲಿ ಬಳಸುವ ಒಂದು ಗಾದೆಮಾತು ಇದು.‌ ಬೀದಿಯಲ್ಲಿ ಆಟ ಆಡಿಕೊಂಡು, ಜನರ ಜೊತೆ ಮಾತಾಡಿಕೊಂಡು, ತಪ್ಪು ಮಾಡಿದಾಗ ಬೈಸಿಕೊಂಡು, ಒಳ್ಳೆಯದನ್ನು ಮಾಡಿದಾಗ ಮೆಚ್ಚುಗೆ ಪಡೆದು….ಒಟ್ಟಿನಲ್ಲಿ ಪ್ರಪಂಚಕ್ಕೆ ತೆರೆದುಕೊಳ್ಳುವ ಮಕ್ಕಳು ಜೀವನದಲ್ಲಿ ಪ್ರಗತಿ ಸಾಧಿಸುತ್ತಾರೆ. ಅದೇ ಹೊತ್ತಿನಲ್ಲಿ, ಸದಾ ಮನೆಯ ನಾಲ್ಕು ಗೋಡೆಗಳಲ್ಲಿ ಬಂಧಿಯಾಗಿ, ಜನರೊಡನೆ ಬೆರೆಯದೆ, ಪ್ರಪಂಚದ ಪರಿಚಯ ಇಲ್ಲದೆ ಹೋಗುವ ಮಕ್ಕಳ ಮನಸ್ಸು ನಿಂತ ನೀರಿನಂತೆ ಕೊಳೆಯುತ್ತದೆ. ಆದುದರಿಂದ ಮಕ್ಕಳನ್ನು ಅವರ ತಾಯ್ತಂದೆಯರು ಮನೆಯಲ್ಲಿ ಕೂಡಿ ಹಾಕದೆ ನಾಲ್ಕು ಜನರೊಡನೆ […]

Page 79 of 112

Kannada Sethu. All rights reserved.