ಕನ್ನಡ ಪ್ರಸಂಗ

ಇದು ಲೇಖಕಿಯು ಕನ್ನಡದೊಂದಿಗೆ ಒಡನಾಡಿದ ಅನುಭವಗಳ ಕಥನವಾಗಿದೆ. ಕನ್ನಡ ಜಗತ್ತು ತನಗೆ ಕಲಿಸಿದ ಹಾಗೂ ಕನ್ನಡ ಭಾಷೆ ಹಾಗೂ ಸಾಹಿತ್ಯಗಳನ್ನು ತಾನು ಕಲಿಸಿದ ದಾರಿಯಲ್ಲಿನ ವಿವಿಧ ಅನುಭವಗಳನ್ನು ಓದುಗರೊಂದಿಗೆ ಹಂಚಿಕೊಳ್ಳುವ ಪ್ರಯತ್ನವಾಗಿರುತ್ತದೆ ಇದು. ವಾರಕ್ಕೆ ಒಂದು ಕನ್ನಡ ಪ್ರಸಂಗದಂತೆ ಈ ಅಂಕಣವು ಮೂಡಿ ಬರಲಿದೆ.

 “ಆಯ್ತು. ಕನ್ನಡ ಕಲಿತರೆ ನಿಂಗೆ ಪಿಜ್ಝಾ ಟ್ರೀಟ್! ಸರೀನಾ?

೨೦೧೬ರ ಜೂನ್ ತಿಂಗಳಿರಬೇಕು. ನಮ್ಮ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ಒಂದು ದಿನ ನನ್ನ ಸಹೋದ್ಯೋಗಿಯೊಬ್ಬರು ನಮ್ಮ ವಿಭಾಗಕ್ಕೆ ಬಂದರು. ಅವರ ಮುಖ ತುಸು ಚಿಂತಾಗ್ರಸ್ತವಾದಂತೆ ಕಂಡಿತು. “ನನ್ನ ಮಗಂಗೆ ಏನಾದ್ರೂ ಮಾಡಿ ಕನ್ನಡ ಹೇಳಿಕೊಡ್ಬೇಕಲ್ಲಾ ಮೇಡಂ. ಅವನು ಈಗ ಒಂಬತ್ತನೇ ತರಗತೀಲಿದಾನೆ. ಕೇಂದ್ರೀಯ ವಿದ್ಯಾಲಯದಲ್ಲಿ ಓದ್ತಾನೆ. ಅಲ್ಲಿ ಕನ್ನಡ ಇಲ್ಲ,*** ಹಿಂದಿ ಓದೋದು ಅವ್ನು. ನಿನ್ನೆ ನಮ್ಮೂರು ಮೈಸೂರಿಗೆ ರೈಲಲ್ಲಿ ಹೋಗಿದ್ವಿ.

ನೋನೋನೋನೋ!! ದಿಸ್ ವರ್‍ಡ್ ಈಸ್ ವೆರಿ ಬ್ಯಾಡ್ ಮೇಡಂ!!!!!!

ಮಹಾರಾಣಿ ಕಾಲೇಜಿನಲ್ಲಿ ನಡೆಯುವ ತರಗತಿ ಚುನಾವಣೆಗಳ ಬಗ್ಗೆ ಹಿಂದಿನ ವಾರದ ಕನ್ನಡ ಪ್ರಸಂಗದಲ್ಲಿ ಹೇಳಿದ್ದೆ. ಈ ಕುರಿತ ಇನ್ನೊಂದು ಅನುಭವವನ್ನು ಈಗ ಹೇಳುತ್ತೇನೆ.

ಅಭಿಮಾನಿ ಕನ್ನಡತಿ ಹಾಗೂ ಅಲಂಕಾರ ಕನ್ನಡತಿ

ಕಾಲೇಜುಗಳಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸುವುದು ಅನೇಕ ವರ್ಷಗಳಿಂದ ನಡೆದು ಬಂದ ಒಂದು ಪದ್ಧತಿ. ನಮ್ಮ ಮಹಾರಾಣಿ ವಿಜ್ಞಾನ ಕಾಲೇಜೂ(ಬೆಂಗಳೂರು) ಇದಕ್ಕೆ ಹೊರತಲ್ಲ. ನವೆಂಬರ್ ೧ನೆಯ ದಿವಸವು, ಪರೀಕ್ಷೆಯೋ, ಅರ್ಧವಾರ್ಷಿಕ ಪರೀಕ್ಷೆಯ ನಂತರದ ದೀರ್ಘ ರಜೆಯ ನಡುವೆ ಬಂದಾಗ ಅಂದೇ ರಾಜ್ಯೋತ್ಸವವನ್ನು ಆಚರಿಸಲು ಸಾಧ್ಯವಾಗುವುದಿಲ್ಲ.

ಅಲ್ಲು ಆರ್ಥಿದೇವಿ ಮಹಿಮಾ! …… ವಿದ್ಯಾರ್ಥಿನಿ ಬರೆದ ಹೆಸರು ತಂದ ತಲೆಬಿಸಿ .. ರಾಮಾರಾಮಾ!

ನಾವು ಕಾಲೇಜಿನಲ್ಲಿ ಹೊಸ ಶೈಕ್ಷಣಿಕ ವರ್ಷ ಅಥವಾ ಹೊಸ ಅರ್ಧವರ್ಷ(ಸೆಮೆಸ್ಟರ್) ಶುರುವಾದಾಗ ಮೊದಲ ದಿನ, ಮಕ್ಕಳಿಗೆ ಒಂದು ಹಾಜರಿ ಹಾಳೆ ಕೊಟ್ಟು, ಅದರಲ್ಲಿ ಅವರ ಹೆಸರು ಬರೆಯಲು ಹೇಳುವುದು ವಾಡಿಕೆ. ಏಕೆಂದರೆ ವಿದ್ಯಾರ್ಥಿಗಳ ಅಧಿಕೃತ ಪ್ರವೇಶಾತಿ ಮಾಹಿತಿಯು ಕಾಲೇಜಿನ ಕಛೇರಿಯಿಂದ ನಮಗೆ ಸಿಗಲು ಕೆಲವು ಸಲ, ಸ್ವಲ್ಪ ಸಮಯ ಹಿಡಿಯುತ್ತದೆ, ಕಾರಣವೇನು ಗೊತ್ತೇ? ಆ ಶೈಕ್ಷಣಿಕ ವರ್ಷದ ಪ್ರವೇಶಾತಿ ಪ್ರಕ್ರಿಯೆಯು ಇನ್ನೂ ಚಾಲ್ತಿಯಲ್ಲಿರುತ್ತದೆ.

ಅ-ಹ-ಕಾರದ ಹಾಹಾಕಾರ

“ಹಿದನ್ನು ಏಗೆ ಹೊಪ್ಪುವುದು ಏಳು”. ಎರಡನೇ ಬಿಎಸ್ಸಿ ತರಗತಿಯ ನನ್ನೊಬ್ಬಳು ವಿದ್ಯಾರ್ಥಿನಿ ಪೂರ್ಣಿಮಾ ಕನ್ನಡ ತರಗತಿಯಲ್ಲಿ ಬೋರ್ಡಿನ ಮೇಲೆ ಬರೆದಿದ್ದನ್ನು ಓದಿದ್ದು ಹೀಗೆ! ಒಂದು ದಿನ ವಿದ್ಯಾರ್ಥಿನಿಯರಿಗೆ ಸರಿಯಾದ ಉಚ್ಚಾರ ಕಲಿಸಲು ಬೋರ್ಡಿನಲ್ಲಿ ಕೆಲವು ಪದ/ವಾಕ್ಯಗಳನ್ನು ಬರೆದು ಓದಿಸುತ್ತಿದ್ದಾಗ ನಡೆದ ಘಟನೆ ಇದು.

ಗುರುತಿನ ಚೀಟಿಯ ಪ್ರಸಂಗ

ನಾನು ಸದ್ಯದಲ್ಲಿ ಬೆಂಗಳೂರಿನ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಒಂದು ಭಾಗವಾದ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ, ಕನ್ನಡ ಸಹ ಪ್ರಾಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ವೃತ್ತಿಯ ಭಾಗವಾಗಿ ನಾನು ನನ್ನ ವಿದ್ಯಾರ್ಥಿನಿಯರೊಂದಿಗೆ, ಆದಷ್ಟೂ ಕನ್ನಡ ಪದಗಳನ್ನು ಬಳಸಿ ಮಾತಾಡುವ ಪ್ರಯತ್ನದಲ್ಲಿ ತೊಡಗಿರುತ್ತೇನೆ. ಬೆಂಗಳೂರಿಗರು ವ್ಯಾಪಕವಾಗಿ ಬಳಸುವ `ಕಂಗ್ಲೀಷನ್ನು'(ಅಂದರೆ, ಕನ್ನಡ ಇಂಗ್ಲಿಷ್ ಸೇರಿದ ಕನ್ನಡದ ಒಂದು ಭಾಷಾರೂಪವನ್ನು) ಕಡಿಮೆ ಬಳಸಬೇಕು ಎಂಬ ಉದ್ದೇಶವು ಸಹ ಇದರ ಹಿಂದೆ ಇದೆ ಅನ್ನಿ.

ಯಲ್ಲಮ್ಮನ ಕನ್ನಡ ಪಾಠ ಮತ್ತು ಸಾವಿರ ರೂಪಾಯಿ ಸೀರೆಯ ಕಥೆ

ದಿನವೆಲ್ಲ ಪಾತ್ರೆ ತೊಳಿ, ಬಟ್ಟೆ ಒಗಿ ಕಸ ಗುಡಿಸು, ಮನೆ ಒರೆಸು ಎಂಬಿತ್ಯಾದಿ ಕೆಲಸದಲ್ಲಿ ಮುಳುಗಿರುವ ಯಲ್ಲಮ್ಮನಿಗೆ ಹೆಚ್ಚುಕಮ್ಮಿ ನನ್ನದೇ ವಯಸ್ಸು. ಅನೇಕ ವರ್ಷಗಳಿಂದ ನಮ್ಮ ಮನೆಯ ಗೃಹವಾಳ್ತೆ, ದೇಖರೇಖಿಗಳಲ್ಲಿ ಸಹಾಯ ಮಾಡುವ ಪರಿಶ್ರಮೀ ವ್ಯಕ್ತಿ ಅವರು. ಒಂದು ದಿನ (ಸುಮಾರು ಹದಿನೆಂಟು ವರ್ಷಗಳ ಹಿಂದೆ) ಹೀಗೇ ಸುಮ್ಮನೆ ಅವರನ್ನು ಕೇಳಿದೆ “ಯಲ್ಲಮ್ಮ, ನಿಮ್ಗೆ ಓದಕ್ಕೆ, ಬರಿಯಕ್ಕೆ ಬರುತ್ತಾ?”

Page 17 of 17

Kannada Sethu. All rights reserved.