ಕನ್ನಡ ಪ್ರಸಂಗ

ಇದು ಲೇಖಕಿಯು ಕನ್ನಡದೊಂದಿಗೆ ಒಡನಾಡಿದ ಅನುಭವಗಳ ಕಥನವಾಗಿದೆ. ಕನ್ನಡ ಜಗತ್ತು ತನಗೆ ಕಲಿಸಿದ ಹಾಗೂ ಕನ್ನಡ ಭಾಷೆ ಹಾಗೂ ಸಾಹಿತ್ಯಗಳನ್ನು ತಾನು ಕಲಿಸಿದ ದಾರಿಯಲ್ಲಿನ ವಿವಿಧ ಅನುಭವಗಳನ್ನು ಓದುಗರೊಂದಿಗೆ ಹಂಚಿಕೊಳ್ಳುವ ಪ್ರಯತ್ನವಾಗಿರುತ್ತದೆ ಇದು. ವಾರಕ್ಕೆ ಒಂದು ಕನ್ನಡ ಪ್ರಸಂಗದಂತೆ ಈ ಅಂಕಣವು ಮೂಡಿ ಬರಲಿದೆ.

ಯಾರಾದರೂ ಧನ್ಯವಾದ ಎಂದಾಗ ಕನ್ನಡದಲ್ಲಿ ಏನಂತ ಪ್ರತ್ಯುತ್ತರ ಕೊಡುವುದು?

  ದೈನಂದಿನ ಜೀವನದಲ್ಲಿ ನಾವು ನಮ್ಮ ಸಹಜೀವಿಗಳಿಗೆ ಏನಾದರೂ ಕೊಟ್ಟಾಗ, ಸಹಾಯ ಮಾಡಿದಾಗ ಅವರು ಇಂಗ್ಲಿಷ್ನಲ್ಲಿ ‘ಥ್ಯಾಂಕ್ಯೂ’ ಅಂದರೆ ನಾವು ‘ ಯು ಆರ್ ವೆಲ್ಕಮ್,  ‘ಮೆನ್ಷನ್ ನಾಟ್’,  ಅಥವಾ ‘ಇಟ್ ಇಸ್ ಆಲ್ರೈಟ್’ ಎಂದು ಹೇಳುವುದು ವಾಡಿಕೆ.‌ ಆದರೆ ಯಾರಾದರೂ ಕನ್ನಡದಲ್ಲಿ ಧನ್ಯವಾದ ಅಂತ ಹೇಳಿದರೆ ಅದಕ್ಕೆ ಕನ್ನಡದಲ್ಲಿ ಏನಂತ ಪ್ರತ್ಯುತ್ತರ ಕೊಡುವುದು?        ಸಾಮಾನ್ಯವಾಗಿ ಧನ್ಯವಾದಕ್ಕೆ ಪ್ರತಿಯಾಗಿ ಕನ್ನಡದಲ್ಲಿ ಏನು ಹೇಳುವುದೆಂದು ತೋಚದೆ ‘ಥ್ಯಾಂಕ್ಯೂ’ ಅಂದೋ, ‘ಓಹ್ ಪರವಾಗಿಲ್ಲ’ ಅಂದೋ,  ಅಥವಾ […]

ನಾಟ್ಯ ತರಗತಿಯಲ್ಲಿ ಬೇಂದ್ರೆ ಅಜ್ಜನ ನೆನಪು

ಮೊನ್ನೆ ನಮ್ಮ ನಾಟ್ಯ ತರಗತಿಯಲ್ಲಿ‌ ಐದು-ಆರು ವರ್ಷ ವಯಸ್ಸಿನ ಕೆಲವು ಪುಟ್ಟ ಮಕ್ಕಳಿಗೆ ಒಂದು‌ ಶಿಶುನೃತ್ಯ ಹೇಳಿಕೊಡುತ್ತಿದ್ದೆ.  ‘ಜಿಂಕೆ ಹೇಗೆ ಜಿಗಿಯುವುದು ಜಿಂಜಿಂಜಿಂಜಿಂ,  ನವಿಲು ಹೇಗೆ ನಲಿಯುವುದು ನಂನಂನಂನಂ ಆನೆ ಹೇಗೆ ನಡೆಯುವುದು ಓ…ಓ…. ನಾನು ಮಾತ್ರ ನಗುತಲಿರುವೆ ಹ ಹ ಹ ಹ” ಈ ನೃತ್ಯ ಸರಳ‌. ಆದರೆ ಈ ಅನುಕರಣ ಶಬ್ದಗಳಲ್ಲಿನ ನಾದ, ಮಾಧುರ್ಯ, ಸಂಗೀತ ಗುಣ ಮಕ್ಕಳಿಗೆ ‌ತುಂಬ ಇಷ್ಟವಾದ ಹಾಗೆ ಕಂಡಿತು.‌ ಜಿಂಜಿಂ, ನಂನಂ, ಓ ಓ, ಹಹ…ಮುಂತಾದ ಪದಗಳಿಗೆ ಅರ್ಥ ಇಲ್ಲದಿದ್ದರೂ […]

ಪಂಚವಟಿಯ ಪ್ರಸಂಗ

ಈಚೆಗೆ ಮೈಸೂರಿನಲ್ಲಿ ಒಳ್ಳೆಯ ಹೋಟಲೆಂದು ಖ್ಯಾತವಾಗಿರುವ ಪಂಚವಟಿ ಎಂಬ ಹೋಟಲಿಗೆ ಬಂಧುಮಿತ್ರರ ಜೊತೆ ನಾನು ಕೆಲ ದಿನಗಳ ಹಿಂದೆ ಹೋಗಿದ್ದೆ.‌ ನಮ್ಮ‌ ಪಕ್ಕದ ಮೇಜಿನಲ್ಲಿ ಮೂರು ಜನ ಯುವ ಹರೆಯದವರು ಕುಳಿತಿದ್ದರು. ಅದರಲ್ಲಿ ನನಗೆ ತೀರ ಹತ್ತಿರವಿದ್ದ ನನ್ನ ಪಕ್ಕದ ಕುರ್ಚಿಯಲ್ಲಿ ಕುಳಿತಿದ್ದ ಹುಡುಗಿ ಕನ್ನಡ ಬಲ್ಲವಳು. ಉಳಿದಿಬ್ಬರು ಹುಡುಗರು ತೆಲುಗು, ತಮಿಳು ಮಾತಾಡುವವರು ಅನ್ನಿಸಿತು. ಅವರನ್ನು ನೋಡಿದರೆ ವಿದ್ಯಾರ್ಥಿಗಳಿರಬೇಕು ಅನ್ನಿಸುತ್ತಿತ್ತು. ಖುಷಿಯಾಗಿ ಅವರು ಮಾತಾಡುತ್ತಿದ್ದರು, ಅಕ್ಕ ಪಕ್ಕದವರಿಗೆ ಅವರ ಉಲ್ಲಾಸದ ಮಾತುಗಳು ಕೇಳಿಸುತ್ತಿದ್ದವು.‌  ಮಾತಾಡುತ್ತಾ ಆ […]

ಕನ್ನಡ ತರಗತಿಯಲ್ಲಿ ಹುಟ್ಟಿದ ಹೊಸ ಬಳಕೆಮಾತು!

ಕಾಲೇಜುಗಳಲ್ಲಿ ಪಾಠ ಮಾಡುವ ಎಲ್ಲ ಕನ್ನಡ ಅಧ್ಯಾಪಕರಂತೆ ನಾನು ಸಹ, ನಮ್ಮ‌‌ ಮಹಾರಾಣಿ ಕಾಲೇಜಿನ ವಿದ್ಯಾರ್ಥಿಗಳು ಕನ್ನಡ ಉಚ್ಚರಿಸುವಾಗ ಮತ್ತು ಬರೆಯುವಾಗ ಮಾಡುವ ತಪ್ಪುಗಳ ಬಗ್ಗೆ ಅಸಮ್ಮತಿ ಸೂಚಿಸುತ್ತಾ, ಅವುಗಳನ್ನು ತಿದ್ದುತ್ತಾ ಇರುತ್ತೇನೆ. ದೀರ್ಘಾಕ್ಷರಗಳು, ಒತ್ತಕ್ಷರಗಳು, ಅಕಾರ-ಹಕಾರದಂತಹವುಗಳಲ್ಲಿನ‌ ಉಚ್ಚಾರ ದೋಷಗಳು, ಲೇಖನ ಚಿಹ್ನೆಗಳನ್ನು ಬಳಸದಿರುವುದು – ಇವು ಮಕ್ಕಳು ಮಾಡುವ ಸಾಮಾನ್ಯ ತಪ್ಪುಗಳಾಗಿರುತ್ತವೆ.‌ ನಾನು ಅವರ ಉಚ್ಚಾರ ಮತ್ತು ಬರವಣಿಗೆಯನ್ನು ಗಮನಿಸುತ್ತಾ ಹೋದಂತೆ ಅವರು ಅವಸರ ಮಾಡುವುದೇ ಈ ತಪ್ಪುಗಳಿಗೆ ಮುಖ್ಯ ಕಾರಣವೆಂದು ನನಗೆ ಅರಿವಾಯಿತು.‌ ಏಕೆಂದರೆ […]

“ಬಿಸಿ Jalebiಯ Crispy ಬೈಟನ್ನು ಸವಿಯಿರಿ” – ಕನ್ನಡ ಭಾಷೆಯ ಹೊಸ ವ್ಯಾಪಾರಿ ರೂಪ!!??

ನನ್ನ ಮಗಳು ಓದುತ್ತಿರುವ ಮಣಿಪಾಲ(ಉಡುಪಿ ಜಿಲ್ಲೆ)ದ ಹೋಟಲೊಂದರಲ್ಲಿ ಹಾಕಿದ್ದ ಪ್ರಕಟಣಾ ಫಲಕದಲ್ಲಿ  ನನ್ನ ಕಣ್ಣಿಗೆ ಬಿದ್ದ ವಾಕ್ಯ ಇದು – “ಬಿಸಿ Jalebiಯ Crispy ಬೈಟನ್ನು ಸವಿಯಿರಿ”. ಐದು ಪದಗಳಿರುವ ಕನ್ನಡ ವಾಕ್ಯ ಇದು. ಇದರಲ್ಲಿ ‌’ಬಿಸಿ’ ಮತ್ತು ‘ಸವಿಯಿರಿ’ ಎರಡೂ ಅಚ್ಚ ಕನ್ನಡದ ಪದಗಳು. ಇನ್ನು ಮೂರು ಪದಗಳಲ್ಲಿ ಎರಡು ಇಂಗ್ಲಿಷ್ ಭಾಷೆಯಲ್ಲಿಯೇ ಬರೆದ ಪದಗಳಾದರೆ( Jalebi, Crispy), ಬೈಟನ್ನು ಪದ bite ಎಂಬ ಇಂಗ್ಲಿಷ್ ಕ್ರಿಯಾಪದವನ್ನು ಕನ್ನಡದ ದ್ವಿತೀಯ ವಿಭಕ್ತಿ ಪ್ರತ್ಯಯವಾದ ‘ಅನ್ನು’ವನ್ನು ಸೇರಿಸಿ‌ –  […]

“ಐ ಲವ್ ದ  ನಾಯಿಮರಿ ಸಾಂಗ್ ಮ್ಯಾಮ್”!

ನಮ್ಮ ಚಿತ್ರನಾಟ್ಯ ಫೌಂಡೇಶನ್ ಭರತನಾಟ್ಯ ಶಾಲೆಯ ಪುಟ್ಟ ಚಾರ್ವಿ ಹೇಳಿದ ಮಾತು ಇದು. ಮನೆಯಲ್ಲಿ ‌ಮಾರ್ವಾಡಿ ಭಾಷೆ ಮಾತಾಡುವ, ಬೆಣ್ಣೆ ಬೊಂಬೆಯ ಹಾಗೆ ಮುದ್ದಾಗಿರುವ, ಐದು ವರ್ಷ ವಯಸ್ಸಿನ ಮಗು ಅದು. ಕಳೆದ ಏಳೆಂಟು ತಿಂಗಳಿಂದ ನಮ್ಮಲ್ಲಿ ನಾಟ್ಯ ಕಲಿಯುತ್ತಿದೆ.         ಭರತನಾಟ್ಯದ ಪ್ರಾರಂಭದ ಹಂತದಲ್ಲಿ ಬರೀ ಅಡವು(ಹೆಜ್ಜೆ)ಗಳನ್ನು ಹೇಳಿಕೊಟ್ಟರೆ ಮಕ್ಕಳಿಗೆ ಬೇಸರ ಆಗಬಹುದೆಂದು ಪ್ರತಿ ತರಗತಿಯಲ್ಲೂ ಯಾವುದಾದರೊಂದು ಶಿಶುಗೀತೆಗೆ ಅವರಿಗೆ ನೃತ್ಯ ಹೇಳಿಕೊಡುವ ಅಭ್ಯಾಸ ನಮ್ಮದು. ಇದೇ ರೀತಿಯಲ್ಲಿ, ‘ಕನ್ನಡದ ಮಕ್ಕಳ ಸಾಹಿತ್ಯದ ರಾಜ […]

ನಗದ ಕನ್ನಡ ಮೇಡಂರನ್ನು ನಗಿಸಿದ ತೇಜಸ್ವಿ ಬರವಣಿಗೆ

ನಾನು ವಿದ್ಯಾವರ್ಧಕ ಸಂಘ ಕಾಲೇಜಿನಲ್ಲಿ ಪದವಿಪೂರ್ವ ತರಗತಿಯಲ್ಲಿ ಓದುತ್ತಿದ್ದಾಗ, ಉತ್ತಮ ಕರ್ತವ್ಯ ಪ್ರಜ್ಞೆಯಿದ್ದ ಕನ್ನಡ ಅಧ್ಯಾಪಕಿಯೊಬ್ಬರು ನಮಗೆ ಪಾಠ ಮಾಡುತ್ತಿದ್ದರು. ಮಧ್ಯಮ ಎತ್ತರದ, ತುಸು ಸ್ಥೂಲ ಎನ್ನಬಹುದಾದ ದೇಹದ, ಕೆಂಪೊಡೆಯುವಷ್ಟು ಬಿಳಿ ಬಣ್ಣ ಹೊಂದಿದ್ದು ಮಧ್ಯವಯಸ್ಸು ಮೀರುತ್ತಿದ್ದ ಹಿರಿಯರು ಆಕೆ. ಪಾಠ ಮಾಡುವಾಗ ತುಂಬ ಬಿಗಿಯಾಗಿರುತ್ತಿದ್ದರು, ನಗುತ್ತಿರಲಿಲ್ಲ. ಅವರು ಬಹುತೇಕ ಕನ್ನಡ ಪದಗಳನ್ನೇ ಪಾಠದಲ್ಲಿ ಮಾತ್ರವಲ್ಲ, ತಮ್ಮ ಆಡುಮಾತಿನಲ್ಲೂ ಬಳಸುತ್ತಿದ್ದರು (ಈಗ ಸಮಯ ಎಷ್ಟು? … ಯಾಕೆ ತರಗತಿಗೆ ತಡವಾಗಿ ಬಂದೆ? … ಐವತ್ನಾಲ್ಕನೇ ಪುಟ ತೆಗೀರಿ […]

ಬಿದಿರಿ ಕಲೆ ಮತ್ತು ಸೌಂದರ್ಯಗುರುಡರ ಪ್ರಸಂಗ

ಈಚೆಗೆ ಗೆಳತಿಯೊಬ್ಬಳ ಹುಟ್ಟುಹಬ್ಬಕ್ಕೆ ಏನು ಉಡುಗೊರೆ ಕೊಡುವುದೆಂದು ಯೋಚಿಸುತ್ತಿದ್ದಾಗ ಬಿದಿರಿ ಕಲಾಕೃತಿಯೊಂದನ್ನು ಕೊಡಬಹುದಲ್ಲ ಅನ್ನಿಸಿತು. ಸರಿ, ಅದು ನಮ್ಮ ಬೆಂಗಳೂರಿನ ಮಹಾತ್ಮಾ ಗಾಂಧಿ ರಸ್ತೆಯ(ಜನಪ್ರಿಯವಾಗಿ ಕರೆಯುವಂತೆ ಎಂಜಿ ರೋಡ್) ಕಾವೇರಿ ಕರಕುಶಲ ಮಳಿಗೆಯಲ್ಲಿ ಸಿಗಬಹುದೆಂಬ ಭಾವನೆಯಿಂದ ಅಲ್ಲಿಗೆ ಹೋದೆ. ಗಂಧದ ಮರದ ವಸ್ತುಗಳು, ಮೈಸೂರು ವರ್ಣಚಿತ್ರಗಳು, ಲೋಹದ ವಿಗ್ರಹಗಳು, ಚೆನ್ನಪಟ್ಟಣದ ಗೊಂಬೆಗಳು ಮುಂತಾದ ಕರ್ನಾಟಕ ರಾಜ್ಯಮೂಲದ ಸುಂದರ ವಸ್ತುಗಳನ್ನು ಕೊಳ್ಳಬಹುದಾದ ಸ್ಥಳ ಅದು.  ಕರ್ನಾಟಕ ಸರ್ಕಾರದ ಒಡೆತನವುಳ್ಳ  ಈ ಮಳಿಗೆಯು, ಬೆಂಗಳೂರಿನ ಒಂದು ಮುಖ್ಯ ಕರಕುಶಲಕಲಾಕೃತಿಗಳ ಮಾರಾಟ […]

ಸಕ್ರಿಯ ಕನ್ನಡ ತರಗತಿ – ಕನ್ನಡ ಕಲಿಕೆಯ ಶಕ್ತ ರೀತಿ

ಚಟುವಟಿಕೆಯಿಂದ ಪುಟಿಯುವ ಹದಿಹರೆಯದವರನ್ನು ಕಾಲೇಜಿನ ತರಗತಿ ಕೋಣೆಗಳಲ್ಲಿ ಒಂದೇ ಕಡೆ ಕೂರುವಂತೆ ಮಾಡಿ ಅವರಿಗೆ ಆಸಕ್ತಿ ಮೂಡದ ವಿಷಯಗಳನ್ನು ಯಾಂತ್ರಿಕವಾಗಿ ತಲುಪಿಸುವುದು ಅಷ್ಟೇನೂ ಸಂತೋಷದ ವಿಷಯವಲ್ಲ. ವಿಷಯ ಹೀಗಿರುವಾಗ, `ಕನ್ನಡ ತರಗತಿಗಳನ್ನು ಆಸಕ್ತಿದಾಯಕವಾಗಿಸುವುದು ಹೇಗೆ’ ಎಂದು ಯಾವಾಗಲೂ ಯೋಚಿಸುವ ನನ್ನಂತಹ ಅಧ್ಯಾಪಕರಿಗೆ ಸಹಾಯ ಮಾಡುವ ಒಂದು ಪರಿಕಲ್ಪನೆ ಅಂದರೆ ಸಕ್ರಿಯ ತರಗತಿಯದ್ದು. ಸಕ್ರಿಯ ತರಗತಿ ಎಂದರೆ ಏನು? ಮಕ್ಕಳು ನಗುವ, ತಮ್ಮ ಭಾವನೆಗಳನ್ನು, ಪಾಠವು ಕೊಟ್ಟ ಹಾಗೂ ಜೀವನವು ಕೊಟ್ಟ ಅನುಭವಗಳನ್ನು ಮತ್ತು ತಮ್ಮ ವಿಚಾರಗಳನ್ನು ಮುಕ್ತವಾಗಿ ಹಂಚಿಕೊಳ್ಳುವ […]

ಇಂಜಿನಿಯರ್ ಪದಕ್ಕೆ ಯಂತ್ರಜ್ಞ ಎಂಬ ಸಂವಾದಿ ಪದ ಬಳಸಿದರೆ ಹೇಗೆ ?

ದಿನಬಳಕೆ ಮಾತಿನಲ್ಲಿ ಕನ್ನಡ ಪದಗಳನ್ನು ಬಳಸಬೇಕೆಂಬ ಇಚ್ಛೆಯುಳ್ಳವರಿಗೆ ಕಷ್ಟ ಕೊಡುವ ಪದಗಳಲ್ಲಿ ಇಂಜಿನಿಯರ್ ಎಂಬ ಪದ ಒಂದು. `ಅಭಿಯಂತರ’ ಎಂಬ ಪದವನ್ನು ಇಂಜಿನಿಯರ್ ಎಂಬ ಇಂಗ್ಲಿಷ್ ಪದಕ್ಕೆ ಸಂವಾದಿಯಾಗಿ ಬಳಸುತ್ತಾರೆ. ಸರ್ಕಾರಿ ಕಛೇರಿಗಳಲ್ಲೂ `ಕಾರ್ಯನಿರ್ವಾಹಕ ಆಭಿಯಂತರರು’ (ಎಕ್ಸಿಕ್ಯೂಟಿವ್ ಇಂಜಿನಿಯರ್) ಎಂಬ ಪದದ ಬಳಕೆಯನ್ನು ನಾವು ನೋಡಬಹುದು. ಆದರೆ ಸಾಮಾನ್ಯ ಮಾತುಗಳಲ್ಲಿ ಇಂಜಿನಿಯರ್, ಇಂಜಿನಿಯರಿಂಗ್ ಪದವೇ ಹೆಚ್ಚು ಚಾಲ್ತಿಯಲ್ಲಿರುವುದನ್ನು ನಾವು ಗಮನಿಸುತ್ತೇವೆ. `ಅಭಿಯಂತರ’ ಪದದ ಅರ್ಥವೆಂದರೆ ಯಂತ್ರಕ್ಕೆ ಹತ್ತಿರವಾದವನು ಎಂದು ಅರ್ಥ. ಅಭಿ+ಯಂತರ( ಯಂತ್ರ) ಎಂದು ಇದನ್ನು ಬಿಡಿಸಬಹುದು. […]

Page 16 of 20

Kannada Sethu. All rights reserved.