ಕನ್ನಡ ಪ್ರಸಂಗ

ಇದು ಲೇಖಕಿಯು ಕನ್ನಡದೊಂದಿಗೆ ಒಡನಾಡಿದ ಅನುಭವಗಳ ಕಥನವಾಗಿದೆ. ಕನ್ನಡ ಜಗತ್ತು ತನಗೆ ಕಲಿಸಿದ ಹಾಗೂ ಕನ್ನಡ ಭಾಷೆ ಹಾಗೂ ಸಾಹಿತ್ಯಗಳನ್ನು ತಾನು ಕಲಿಸಿದ ದಾರಿಯಲ್ಲಿನ ವಿವಿಧ ಅನುಭವಗಳನ್ನು ಓದುಗರೊಂದಿಗೆ ಹಂಚಿಕೊಳ್ಳುವ ಪ್ರಯತ್ನವಾಗಿರುತ್ತದೆ ಇದು. ವಾರಕ್ಕೆ ಒಂದು ಕನ್ನಡ ಪ್ರಸಂಗದಂತೆ ಈ ಅಂಕಣವು ಮೂಡಿ ಬರಲಿದೆ.

ಅಲ್ಲ ಅಲ್ಲ ಮ್ಯಾಮ್…..ಫೇರ್ವೆಲ್ ಫಂಕ್ಷನ್ನು!!

ಕಾಲೇಜುಗಳಲ್ಲಿ ಶೈಕ್ಷಣಿಕ ವರ್ಷದ ಕೊನೆಯಲ್ಲಿ,  ಯಾವುದಾದರೂ ವಿಭಾಗದ ಹಿರಿಯ ವಿದ್ಯಾರ್ಥಿಗಳಿಗೆ ಅದೇ ವಿಭಾಗದ ಕಿರಿಯ ವಿದ್ಯಾರ್ಥಿಗಳು ಬೀಳ್ಕೊಡುಗೆ ಕೊಡುವುದು ವಾಡಿಕೆ.‌ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ಹೊಸ ವಿದ್ಯಾರ್ಥಿಗಳಿಗೆ ಆ ವಿಭಾಗದ ಹಿರಿಯ ವಿದ್ಯಾರ್ಥಿಗಳು ಸ್ವಾಗತ ಸಮಾರಂಭ ಏರ್ಪಡಿಸುವುದೂ ಸಾಮಾನ್ಯ ಅನ್ನಿ.‌  ನಮ್ಮ ಕಾಲೇಜಿನ ಸಭಾಂಗಣವು ಕನ್ನಡ ವಿಭಾಗದ ಪಕ್ಕವೇ ಇದೆ.‌ ಹೀಗಾಗಿ ನಮಗೆ ಈ ಸ್ವಾಗತ ಸಮಾರಂಭ, ಬೀಳ್ಕೊಡುಗೆಗಳಾಗುವಾಗ ಚಂದಚಂದದ ಬಟ್ಟೆ ತೊಟ್ಟ ವಿದ್ಯಾರ್ಥಿನಿಯರ ಸರಬರ ಓಡಾಟ, ಅವರ ಖುಷಿಖುಷಿ ಹಾಡು, ನೃತ್ಯ, ಅಧ್ಯಾಪಕರ ಹಾರೈಕೆಯ ನುಡಿ…ಇತ್ಯಾದಿಗಳಿಗೆ […]

ಅಚ್ಚಗನ್ನಡ ಮಾತಾಡುವ ಅಧ್ಯಾಪಕಿಯ ಪ್ರಯೋಗ

ಕನ್ನಡ ಅಧ್ಯಾಪಕಿಯಾಗಿ ಕೆಲವು ವರ್ಷಗಳಿಂದ ನಾನು ಕನ್ನಡ  ಭಾಷಾಬಳಕೆಯಲ್ಲಿ ಒಂದು ಪ್ರಯೋಗವನ್ನು ಮಾಡುತ್ತಿದ್ದೇನೆ. ಅದೇನೆಂದರೆ, ಮಾತಾಡುವಾಗ  ಗರಿಷ್ಠ ಪ್ರಮಾಣದಲ್ಲಿ ಕನ್ನಡದ್ದೇ ಆದ ಪದಗಳನ್ನು ಬಳಸುವ ಪ್ರಯೋಗ. ದಿನ ಬಳಕೆಯ ಮಾತಿನಲ್ಲಿ ಮತ್ತು ತರಗತಿಯ ಪಾಠದಲ್ಲಿ ಕನ್ನಡ ಪದಗಳು ಸಿಗುವ ಸಾಧ್ಯತೆ ಇರುವಲ್ಲೆಲ್ಲಾ ಕನ್ನಡ ಪದಗಳನ್ನೇ ಬಳಸುವುದು ನನ್ನ ಪ್ರಯತ್ನವಾಗಿರುತ್ತದೆ. ಉದಾಹರಣೆಗೆ : Class – ತರಗತಿ                        Test – ಕಿರುಪರೀಕ್ಷೆ   […]

“ತರಂ……ಗ…….ತರಂ……ಗ…..”  ರಿಂಗಣಿಸುತ್ತಿದ್ದ ಪೇಪರ್ ತಾತನ ಧ್ವನಿ

ಸುಧಾ, ಕರ್ಮವೀರ ಮುಂತಾದ ಕನ್ನಡ ವಾರಪತ್ರಿಕೆಗಳ ಸಾಲಿನಲ್ಲಿ ಬರುವ ಒಂದು ವಾರಪತ್ರಿಕೆ ‘ತರಂಗ’.‌ ನಲವತ್ತೆರಡು ವರ್ಷಗಳ ಹಿಂದೆ ಪ್ರಾರಂಭವಾಯಿತು.‌ ಉದಯವಾಣಿ ಪತ್ರಿಕೆಯನ್ನು ಪ್ರಕಟಿಸುತ್ತಿದ್ದ ಮಣಿಪಾಲ್ ಪಬ್ಲಿಕೇಷನ್ಸ್ ನವರು ತರಲಾರಂಭಿಸಿದ ವಾರಪತ್ರಿಕೆ ಇದು‌‌.  ನನ್ನ ಬಾಲ್ಯಕಾಲದ ನೆನಪುಗಳಲ್ಲಿ ‘ತರಂಗ’ ಆಪ್ತವಾಗಿ‌ ಸೇರಿ ಹೋಗಿದೆ. ಇದಕ್ಕೆ, ಮಂಗಳೂರಿನಲ್ಲಿ ಕಳೆದ ನನ್ನ ಬಾಲ್ಯದಲ್ಲಿ ಪುಸ್ತಕ ಪ್ರಿಯರಾದ ನನ್ನ ತಂದೆತಾಯಿಯರು ಮನೆಗೆ ತರಿಸುತ್ತಿದ್ದ ತರಂಗ ವಾರಪತ್ರಿಕೆ ಹಾಗೂ ಅದರಲ್ಲಿನ ‘ಬಾಲವನದಲ್ಲಿ ಕಾರಂತಜ್ಜ’ ಅಂಕಣಗಳು ಒಂದು ಕಾರಣವಾದರೆ, ಸೈಕಲ್ ಮೇಲೆ ಪತ್ರಿಕೆ ತರುವಾಗ ‘ತರಂ…ಗ…..ತರಂ…ಗ ‌…’ […]

“ಇವತ್ತು ಏನಾಯ್ತು ಗೊತ್ತಾ…?” …….. ಕಥೆ ಕೇಳುವ ಮತ್ತು ಕಥೆ ಹೇಳುವ ಕನ್ನಡ ಮಾತಿನ ಶೈಲಿ.

ನಮ್ಮ ದೈನಂದಿನ ಮಾತುಕತೆಯಲ್ಲಿ ಕತೆ/ಕಥೆ ಎಂಬ ಪದ ಮತ್ತು ಪರಿಕಲ್ಪನೆಯ ಪ್ರಯೋಗವನ್ನು ಎಷ್ಟು ವಿಪುಲವಾಗಿ ಮಾಡುತ್ತೇವೆ ಎಂದು ಗಮನಿಸಿದರೆ ಆಶ್ಚರ್ಯ ಆಗುತ್ತದೆ. ಮಾತುಕತೆ ಎಂಬ ಪದದಲ್ಲೇ ಕತೆ ಇದೆ! ಮಾತುಕತೆ ಅನ್ನುವ ಪದವನ್ನು ಕುಟುಂಬದ ಆಸ್ತಿ ಹಂಚಿಕೆ, ಮದುವೆ, ವ್ಯಾಪಾರ ಮುಂತಾದ ಅನೇಕ‌ ಸಂದರ್ಭಗಳಲ್ಲಿ ಬಳಸುತ್ತೇವಲ್ಲ ನಾವು!  ಇನ್ನು ನಾವು  ಕನ್ನಡಿಗರು ‌‌ಆಗಾಗ ಬಳಸುವ ವಾಕ್ಯಗಳನ್ನು ಗಮನಿಸೋಣ..   ಅಯ್ಯೋ ಅದೊಂದು ದೊಡ್ಡ ಕಥೆ. ನನ್ ಕಥೆ ಏನೂಂತ ಹೇಳಲಪ್ಪಾ.. ಅಯ್ಯೋ‌ ಕತಿಯಾ…! ಏನೇ ಇದು ನಿನ್ನ ಕಥೆ! […]

“ಅದು ಮಲ್ಲಿಗೆ, ಜಾಸ್ಮಿನ್ ಮೇಡಂ…ಫೋರ್ಟಿ ರುಪೀಸ್”

ಹೂ ಮಾರುವವರ ಜೊತೆಯಲ್ಲಿ ವ್ಯವಹರಿಸುವಾಗ ಕನ್ನಡ ಭಾಷೆಗೆ ಸಂಬಂಧಿಸಿದಂತೆ ಆಗುವಂತಹ ಅನುಭವಗಳು ತುಂಬ ಸ್ವಾರಸ್ಯಕರವಾಗಿರುತ್ತವೆ. ಇತ್ತೀಚೆಗೆ, ನಾನು ವಾಸ ಇರುವ ಬೆಂಗಳೂರಿನ ಹಂಪಿನಗರದಲ್ಲಿ ಸಣ್ಣ ಪ್ರಮಾಣದಲ್ಲಿ ಹೂ ಮಾರುತ್ತಿದ್ದ ಒಬ್ಬ ವ್ಯಾಪಾರಿಯ ಬಳಿ ಹೂ ಕೊಳ್ಳಲು ಹೋಗಿದ್ದೆ. ‌ಅಲ್ಲಿ ಮೊಲ್ಲೆ ಹೂವು ಮತ್ತು ಮಲ್ಲಿಗೆ ಹೂವು ಪಕ್ಕ ಪಕ್ಕ ಇದ್ದವು‌. ನಾನು ಮೊಲ್ಲೆ ಹೂವನ್ನು ತೋರಿಸಿ ”ಎಷ್ಟು ಇದಕ್ಕೆ?” ಅಂತ ಕೇಳಿದೆ. “ಮೂವತ್ತು ರೂಪಾಯಿ‌ ಮೊಳ” ಅಂದ ಆ ವ್ಯಾಪಾರಿ.‌ ಪಕ್ಕದಲ್ಲಿದ್ದ ಮಲ್ಲಿ ಗೆಯನ್ನು ತೋರಿಸಿ ” […]

ಭಾವನೃತ್ಯ ಎಂಬ ಸಾಂಸ್ಕೃತಿಕ ಸಿರಿ  

ಭಾವಗೀತೆಗಳು ಅಂದರೆ ಕನ್ನಡಿಗರೆಲ್ಲರೂ ” ಹಾಂ ಗೊತ್ತು” ಅನ್ನುತ್ತಾರೆ.‌ ಆದರೆ ಭಾವನೃತ್ಯ ಎಂಬುದು ಹೆಚ್ಚು ಜನರು ಬಳಸುವ ಪದ ಅಲ್ಲ. ಭಾವಗೀತೆಯೊಂದಕ್ಕೆ ನಾಟ್ಯ ಸಂಯೋಜನೆ ಮಾಡಿದರೆ ಅದು ಭಾವನೃತ್ಯ. ‌ಭರತನಾಟ್ಯ, ಸಮಕಾಲೀನ ನೃತ್ಯ, ಜಾನಪದ ನೃತ್ಯ ಯಾವುದೇ ಆಗಬಹುದು ; ಭಾವವನ್ನು ಪ್ರೇಕ್ಷಕರಿಗೆ ತಲುಪಿಸುವ ಕೆಲಸವನ್ನು ಭಾವನೃತ್ಯವು ಪರಿಣಾಮಕಾರಿಯಾಗಿ ಮಾಡುತ್ತದೆ. ಕುವೆಂಪು, ಬೇಂದ್ರೆ, ಪುತಿನ, ಕೆಎಸ್ ನ, ಹೆಚ್.ಎಸ್.ವಿ., ಜಿ.ಎಸ್.ಶಿವರುದ್ರಪ್ಪ ….ಇಂತಹ ಕವಿಗಳ ರಚನೆಗಳು ಭಾವನೃತ್ಯಕ್ಕೆ ಬಹುವಾಗಿ ಒಪ್ಪುತ್ತವೆ. ಉದಾಹರಣೆಗೆ ಕುವೆಂಪು ಅವರ ‘ಬೃಂದಾವನಕೆ ಹಾಲನು‌ ಮಾರಲು […]

ಅರ್ಥ ಇಲ್ಲದೆಯೇ ಭಾವವನ್ನು ತಲುಪಿಸುವ ಚಮತ್ಕಾರ – ಕನ್ನಡದ ಅನುಕರಣ ಪದಗಳ ಭಂಡಾರ

ನನ್ನ ತಂಗಿ‌ ಅರಳು ಹುರಿದ ಹಾಗೆ ಚಟಪಟ ಅಂತ ಮಾತಾಡ್ತಾಳಪ್ಪ, ಮಗು ಪಿಳಿಪಳಿ ಕಣ್ ಬಿಟ್ಕೊಂಡು ನೋಡ್ತಿತ್ತು, ಸರ್ರನೆ ಹೋಗಿ ಭರ್ರನೆ ಬರ್ತೀನಿ, ನೀರು ಝುಳುಝುಳು ಹರೀತಿದೆ ನೋಡಿ, ಢಣ ಢಣ ಗಂಟೆ ಬಾರಿಸಿತು… ಹೀಗೆ ಅನುಕರಣ ಶಬ್ದಗಳನ್ನು ಬಳಸಿರುವ ವಾಕ್ಯಗಳನ್ನು ಆಗಾಗ ನಾವು ಹೇಳುತ್ತಲೂ ಕೇಳುತ್ತಲೂ ಇರುತ್ತೇವಲ್ಲವೇ? ಈ ಅನುಕರಣ ಶಬ್ದಗಳನ್ನು ವ್ಯಾಕರಣ ಪಂಡಿತರು ಅರ್ಥ ಇಲ್ಲದ ಆದರೆ ಒಂದು ಕ್ರಿಯೆಯ ಸದ್ದನ್ನು ಅನುಕರಿಸುವ ಪದಗಳು ಅನ್ನುತ್ತಾರೆ. ಅನುಕರಣಾವ್ಯಯಗಳು ಎಂದು ಒಂದು ವಿಭಾಗವೇ ಇರುತ್ತೆ ವ್ಯಾಕರಣ […]

ಮೊದಲು ಕಟ್ಟಬೇಕು ಸೇತುವೆ ಮನಗಳಿಗೆ ಇಲ್ದಿದ್ರೆ ಹೇಗೆ ತಲುಪುತ್ತೆ ಕನ್ನಡ‌ ಪಾಠ ಮಕ್ಕಳಿಗೆ?

ಎರಡೂವರೆ ದಶಕಗಳಿಗೂ ಹೆಚ್ಚು ಕಾಲ ಕನ್ನಡ ಪಾಠ ಮಾಡಿರುವ ನನ್ನಂತಹ ಕನ್ನಡ ಅಧ್ಯಾಪಕರಿಗೆ ಒಂದು ವಿಷಯ ಚೆನ್ನಾಗಿ ಮನದಟ್ಟಾಗಿರುತ್ತದೆ, ಎಂಬುದು ನನ್ನ ಅನಿಸಿಕೆ. ಅದೇನೆಂದರೆ, ಪ್ರಾಥಮಿಕ-ಪ್ರೌಢ-ಪದವಿಪೂರ್ವ- ಪದವಿ …. ಯಾವುದೇ ಹಂತವಾಗಲಿ, ಉತ್ತಮವಾಗಿ ಪಾಠ ಮಾಡುವ ಆಸೆಯುಳ್ಳ ಕನ್ನಡ ಅಧ್ಯಾಪಕರು ಮೊದಲು ವಿದ್ಯಾರ್ಥಿಗಳ ಮನವನ್ನು ಮುಟ್ಟುವ ಸೇತುವೆ ಕಟ್ಟಿಕೊಳ್ಳಬೇಕು; ಆಮೇಲಷ್ಟೇ ಪಾಠ ಮಾಡಬೇಕು.  ‘ಈ ಅಧ್ಯಾಪಕರು ಸಹ ನನ್ನಂತೆ ಒಬ್ಬ ಮನುಷ್ಯರು, ಭಾವನೆಗಳಿರುವವರು, ಜೀವನದೊಂದಿಗಿನ ಹೋರಾಟದಲ್ಲಿ ನನ್ನ ಪಯಣಕ್ಕೆ ಅರ್ಥಪೂರ್ಣ ಬೆಂಬಲ ನೀಡಬಲ್ಲವರು’ ಎಂಬ ಮನೋಭಾವವು ವಿದ್ಯಾರ್ಥಿಗಳಲ್ಲಿ […]

ಪದವಿ ಹಂತದಲ್ಲಿನ ಕನ್ನಡ ಬರವಣಿಗೆಯ ತಪ್ಪುಗಳು – ಅಧ್ಯಾಪಕರ ಮಟ್ಟಿಗೆ ನುಂಗಲಾರದ ತುತ್ತುಗಳು 

ಹದಿನೇಳರಿಂದ ಇಪ್ಪತ್ತು ವಯಸ್ಸಿನ ವಿದ್ಯಾರ್ಥಿಗಳಿಗೆ ಅಂದರೆ ಪದವಿ ಹಂತದಲ್ಲಿರುವ  ಕಿಶೋರ ಕಿಶೋರಿಯರಿಗೆ  ಕನ್ನಡ ಪಾಠ ಮಾಡುವ ಅಧ್ಯಾಪಕರ ಒಂದು ದೊಡ್ಡ ತಲೆನೋವೆಂದರೆ, ಆ ವಿದ್ಯಾರ್ಥಿಗಳು ಮಾಡುವ  ಅಕ್ಷರ ತಪ್ಪುಗಳು. ಅಲ್ಪಪ್ರಾಣ – ಮಹಾಪ್ರಾಣ, ಹೃಸ್ವಾಕ್ಷರ – ದೀರ್ಘಾಕ್ಷರ, ಅಕಾರ-ಹಕಾರ, ವಿಭಕ್ತಿ ಪ್ರತ್ಯಯಗಳಲ್ಲಿನ ಅನೇಕ  ದೋಷಗಳು, ಲೇಖನ ಚಿಹ್ನೆಗಳಿಲ್ಲದೆ ಬರೆಯುವುದು, ಹೇಳಿ ಬರೆಸುತ್ತಿರುವಾಗ ಪದಗಳನ್ನೇ ಬಿಟ್ಟುಬಿಡುವುದು… ರಾಮಾ ರಾಮಾ….ಈ ಪಟ್ಟಿ ಬಹು ಉದ್ದವಾದುದು.‌ ತರಗತಿಯಲ್ಲಿ ಪಾಠವಿಷಯಗಳನ್ನು ಬರೆಸುವಾಗ ಅಥವಾ ಪರೀಕ್ಷೆಯ ಅವರ ಉತ್ತರ ಪತ್ರಿಕೆಗಳನ್ನು ತಿದ್ದುವಾಗ ಈ ದೋಷಗಳು […]

“ಅಲ್ಯಾ ಕಟ್ ತಗೊಳ್ಳಿ ಮೇಡಂ, ತುಂಬ ಚೆನ್ನಾಗಿರುತ್ತೆ”. – ಉಚ್ಚಾರ ತಂದ ಫಜೀತಿಯ ಪ್ರಸಂಗ

ಈ ಸಲ ತಾಪದ ಅಲೆಗಳೊಡನೆ ಬೆಂಗಳೂರನ್ನು ಕಾಡಿದ ಬೇಸಗೆಯ ಶಾಖಕ್ಕೆ ಹೆದರಿ, ಮನೆಯಲ್ಲಿ ಧರಿಸಲು ಒಂದೆರಡು ಹತ್ತಿ ಬಟ್ಟೆಗಳ‌ ಖರೀದಿಗೆಂದು ರಾಜಾಜಿನಗರದ ಬಟ್ಟೆಯಂಗಡಿಯೊಂದಕ್ಕೆ ಹೋಗಿದ್ದೆ. ಇಪ್ಪತ್ತು- ಇಪ್ಪತ್ತೈದು ವಯಸ್ಸಿನ  ಮೂವರು ಯುವತಿಯರು ನಿರ್ವಹಿಸುತ್ತಿದ್ದ ಸಣ್ಣ ಬಟ್ಟೆ ಅಂಗಡಿ ಅದು.  ಸರಿ. ಉಡುಪುಗಳನ್ನು ನಾನು ಆಯ್ಕೆ ಮಾಡಲು ತೊಡಗಿದ್ದಾಗ ನನಗೆ ಸಹಾಯ ಮಾಡುವ ಉದ್ದೇಶದಿಂದ ಅವರಲ್ಲಿ ಒಬ್ಬ ಹುಡುಗಿ ನನ್ನ ಬಳಿ ಬಂದು, ಅಲ್ಲಿನ ಗೂಟಗಳಲ್ಲಿ ನೇತು ಹಾಕಿದ್ದ ಉಡುಪೊಂದನ್ನು ತೆಗೆದು “ಅಲ್ಯಾ ಕಟ್ ತಗೊಳ್ಳಿ ಮೇಡಂ, ತುಂಬ […]

Page 7 of 16

Kannada Sethu. All rights reserved.