Declinometer

ಇಳಿಜಾರು ಮಾಪಕ‌ – ಅಯಸ್ಕಾಂತೀಯ ಇಳಿಜಾರನ್ನು ಅಳೆಯಲು‌ ಬಳಸುವ ಉಪಕರಣ.

Decay

ವಿನಾಶ – ಒಂದು ವಿಕಿರಣ ಬೀಜಕೇಂದ್ರವು ಇನ್ನೊಂದು ವಿಕಿರಣ ಬೀಜಕೇಂದ್ರವಾಗಿ‌ ಮಾರ್ಪಾಟುಗೊಳ್ಳುವುದು.

ಕನ್ನಡ ಗಾದೆ ಮಾತು – ಮುತ್ತು ಕಳೆದರೆ ಸಿಕ್ಬಹುದು, ಹೊತ್ತು ಕಳೆದರೆ ಸಿಕ್ತದಾ? 

ಸಮಯದ ಮಹತ್ವವನ್ನು ತುಂಬ ಪರಿಣಾಮಕಾರಿಯಾಗಿ ಹೇಳುವ ಗಾದೆ ಮಾತಿದು.‌ ಮುತ್ತು‌ ಬೆಲೆಬಾಳುವ ವಸ್ತು ನಿಜ.‌ ಅದು ಒಂದು ವೇಳೆ ಕಳೆದುಹೋದರೆ, ಕಳಕೊಂಡವರ  ಅದೃಷ್ಟ ಚೆನ್ನಾಗಿದ್ದರೆ  ಆ ಮುತ್ತು ಮರಳಿ ಸಿಗುವ ಸಾಧ್ಯತೆ ಇದೆ.‌ ಆದರೆ ವ್ಯರ್ಥವಾಗಿ ಕಳೆದ ಸಮಯ ಮಾತ್ರ ಏನು‌ ಮಾಡಿದರೂ ಮತ್ತೆ ಸಿಗುವುದಿಲ್ಲ.‌ ಅದು ಶಾಶ್ವತವಾಗಿ ಹೊರಟು ಹೋದಂತೆಯೇ ಸರಿ.‌ ಅದಕ್ಕಾಗಿಯೇ ನಾವು ಹೊತ್ತನ್ನು ಮುತ್ತಿಗಿಂತ ಹೆಚ್ಚು ಮೌಲ್ಯಯುತವಾದುದು ಎಂದು ಅರಿತು ಜೋಪಾನ ಮಾಡಬೇಕು.   Kannada proverb – Muththu kaledare sikbahudu, hoththu […]

ಧಾಟಿ ಮೊದಲೋ, ಶಬ್ದ ಮೊದಲೋ? 

ಸಾಹಿತ್ಯ-ಸಂಗೀತಗಳಲ್ಲಿ ಆಸಕ್ತಿ ಇರುವವರನ್ನು ಕಾಡುವ ಒಂದು ಕುತೂಹಲಕರ ಪ್ರಶ್ನೆ ಇದು. ಹಾಡುಗಳ ತಯಾರಿಯಲ್ಲಿ‌ ರಾಗ ಮೊದಲೋ ಅಥವಾ ಪದಸೃಷ್ಟಿ ಮೊದಲೋ? ಎಂಬುದು.‌ ಇಲ್ಲಿನ ಸ್ವಾರಸ್ಯಕರ ಸಂಗತಿ‌ ಅಂದರೆ ಕೆಲವು ಸಲ ಮಾತು ಮೊದಲು –  ಭಾವಗೀತೆಗಳಲ್ಲಿ ಆಗುವಂತೆ, ಕೆಲವು ಸಲ ರಾಗ ಮೊದಲು – ಸಿನಿಮಾ ಹಾಡುಗಳಲ್ಲಿ ಆಗುವಂತೆ. ಇನ್ನು ಹಳೆಯ ಜಾನಪದ ಧಾಟಿಗಳು ಪೀಳಿಗೆಯಿಂದ ಪೀಳಿಗೆಗೆ ಸಾಗಿ ಬರುತ್ತಾ ಹೋದಂತೆ, ಪ್ರತಿ‌ ಹೊಸ ಪೀಳಿಗೆಯೂ ಅದಕ್ಕೆ ತನ್ನದೇ ಆದ ಶಬ್ದಗಳನ್ನು ಸೇರಿಸುತ್ತದೆ, ಅಂದರೆ ಇಲ್ಲಿ ರಾಗ […]

Dalton’s law

ಡಾಲ್ಟನ್ ರ ನಿಯಮ – ಅನಿಲಗಳ ಒಂದು‌ ಮಿಶ್ರಣದ ಒತ್ತಡವು ಆ ಮಿಶ್ರಣದಲ್ಲಿನ ಪ್ರತಿ ಬಿಡಿ ಅನಿಲದ ಒತ್ತಡಗಳ ಒಟ್ಟು ಮೊತ್ತವಾಗಿರುತ್ತದೆ  ಎಂದು ಸೂಚಿಸುವ ನಿಯಮವಿದು.

Daughter

ಮಗಳು – ಒಂದು  ಬೀಜಕೇಂದ್ರದ ವಿಭಜನೆಯಿಂದ ಹುಟ್ಟಿದ ಇನ್ನೊಂದು ಬೀಜಕೇಂದ್ರ.

De Broglie wave

ಡಿ ಬ್ರಾಗ್ಲಿ ಅಲೆ  – ಪ್ರೋಟಾನು ಅಥವಾ ಎಲೆಕ್ಟ್ರಾನಿನಂತಹ ಒಂದು‌ ಕಣಕ್ಕೆ ಸಂಬಂಧಿಸಿದ ಅಲೆ.‌1924 ರಲ್ಲಿ ಲೂಯಿಸ್ ಡಿ ಬ್ರಾಗ್ಲಿಯವರು ಇದರ ಪ್ರಸ್ತಾಪ ಮಾಡಿದರು.

Dead beat 

ಅತಿ ಕುಗ್ಗಿದ – ಗ್ಯಾಲ್ವನೋಮೀಟರಿನಂತಹ ಉಪಕರಣದಲ್ಲಿನ ಆಂದೋಲನಗಳು ಅತ್ಯಂತ ಕಡಿಮೆ ಸಮಯದಲ್ಲಿ ನಿಂತು ಹೋದಾಗ ಅದನ್ನು ಅತಿ ಕುಗ್ಗಿದ ಸ್ಥಿತಿಯದ್ದು ಎನ್ನುತ್ತಾರೆ.

Dead earth

ಭೂ ಸಂಪರ್ಕ – ವಿದ್ಯುಚ್ಛಕ್ತಿಗೆ ಸಂಬಂಧಿಸಿದಂತೆ ಬಳಸುವ ಪದವಿದು.  ಯಾವುದೇ ಒಂದು ವಾಹಕಕ್ಕೂ (ವಿದ್ಯುತ್ ಹರಿಯುತ್ತಿರುವ) ಭೂಮಿಗೂ ಕಡಿಮೆ ಪ್ರತಿರೋಧವುಳ್ಳ ಸಂಪರ್ಕ ಕಲ್ಪಿಸಿರುವ ಸನ್ನಿವೇಶ ಇದು‌.

ಕನ್ನಡ ಗಾದೆಮಾತು – ಗಾಣಗಿತ್ತಿ ಅಯ್ಯೋ ಅಂದ್ರೆ ನೆತ್ತಿ ತಣ್ಣಗಾಗುತ್ತಾ?

ಕನ್ನಡಿಗರು ತಮ್ಮ  ಮಾತಿನಲ್ಲಿ ಆಗಾಗ ಬಳಸುವ ಒಂದು ಗಾದೆ ಮಾತು ಇದು. ಗಾಣ ಅಂದರೆ ಎಣ್ಣೆ ತೆಗೆಯುವ ಯಂತ್ರ, ಆದರಲ್ಲಿ ಕೆಲಸ ಮಾಡಿ ಎಣ್ಣೆ ತೆಗೆಯುವವಳು ಗಾಣಗಿತ್ತಿ. ಎಂದಾದರೂ ಮೈಯಲ್ಲಿ ಉಷ್ಣ ಹೆಚ್ಚಾಗಿ    ತಲೆಯೇನಾದರೂ ಬಿಸಿಯಾಗಿ ‘ಯಾರಾದರೂ ನೆತ್ತಿಗೆ ಒಂದು  ತೊಟ್ಟು ಎಣ್ಣೆ ತಿಕ್ಕಿದರೆ  ಚೆನ್ನ ಅಲ್ಲವೇ’ ಅನ್ನಿಸುತ್ತಿದ್ದಾಗ ನಾವು ಗಾಣಗಿತ್ತಿಯನ್ನು ಭೇಟಿಯಾದೆವು  ಎಂದಿಟ್ಟುಕೊಳ್ಳೋಣ. ಆಗ ಆಕೆ ತನ್ನ ಬಳಿ ಇರುವ ಎಣ್ಣೆಯಲ್ಲಿ ಒಂದು ಹನಿಯನ್ನೂ ಕೊಡದೆ ಬಾಯಲ್ಲಿ ಮಾತ್ರ “ಅಯ್ಯೋ ಪಾಪ, ನಿಮಗೆ ಉಷ್ಣ […]

Page 2 of 3

Kannada Sethu. All rights reserved.