Electronics

ವಿದ್ಯುನ್ಮಾನ ವಿಜ್ಞಾನ – ವಿದ್ಯುನ್ಮಂಡಲಗಳು ಮತ್ತು ಅವುಗಳ ನಿರ್ಮಾಣಗಳನ್ನು ಅಧ್ಯಯನ ಮಾಡುವ ಒಂದು ವಿಜ್ಞಾನ ಶಾಖೆ.

Electron gun

ಎಲೆಕ್ಟ್ರಾನು ಕೋವಿ – ನಿರ್ವಾತ ಕೊಳವೆಯಲ್ಲಿನ ಕಾಯಿಸಿದ ಋಣ ವಿದ್ಯುದ್ವಾರವನ್ನು ಸೂಚಿಸುವ ಪದ. ಇದು ಉಷ್ಣ ಅಯಾನು ಹೊರಚೆಲ್ಲುವಿಕೆಯ ಮೂಲಕ ಎಲೆಕ್ರ್ಟಾನುಗಳ ಒಂದು ಪ್ರವಾಹವನ್ನು ಉತ್ಪತ್ತಿ ಮಾಡುತ್ತದೆ.

ಕನ್ನಡ ಗಾದೆಮಾತು – ಮನೆ ಗೆದ್ದು ಮಾರು ಗೆಲ್ಲು.

ಕನ್ನಡ  ವಿವೇಕದ  ಒಂದು ನೆಲೆಯನ್ನು ಬಹು ಅರ್ಥವತ್ತಾಗಿ‌ ಹೇಳುವ  ಗಾದೆ ಮಾತು ಇದು. ಮೊದಲು ಮನುಷ್ಯನು ತನ್ನ ಮನೆಯನ್ನು ನೆಮ್ಮದಿಯಿಂದ ಇರುವಂತೆ ನೋಡಿಕೊಳ್ಳಬೇಕು, ನಂತರವಷ್ಟೇ ಅವನು ಮಾರಿನ ಬಗ್ಗೆ ಅಂದರೆ ಮನೆಯಾಚೆಗಿನ ವಿಸ್ತಾರ ಪ್ರದೇಶದ ಹಿತ, ನೆಮ್ಮದಿಗಳ ಬಗ್ಗೆ ಆಲೋಚಿಸಬೇಕು.‌ ತನ್ನ ಮನೆಯನ್ನು ನಿರ್ಲಕ್ಷಿಸಿ, ನೋಯಿಸಿದವನು ಎಷ್ಟು ಲೋಕೋಪಕಾರ ಮಾಡಿದರೆ ಏನು ಪ್ರಯೋಜನ? ಯೋಚಿಸಿ ನೋಡಬೇಕಾದ ವಿಷಯ ಇದು.‌ Kannada proverb – Mane geddu maaru gellu – ( First win the hearts […]

 “ಸೂಳ್ ಬಪ್ಪುದು ಕಾಣಾ ಮಹಾಜಿರಂಗದೊಳ್”

ಸುಮಾರು 34-35 ವರ್ಷಗಳ ಹಿಂದೆ,  ಬೆಂಗಳೂರಿನ ಬಸವೇಶ್ವರ ನಗರದಲ್ಲಿರುವ ವಿದ್ಯಾವರ್ಧಕ ಸಂಘ – ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಬಿ.ಎಸ್ಸಿ. ಪದವಿಯ ಕನ್ನಡ ತರಗತಿಯೊಂದರಲ್ಲಿ, ಶ್ರೀಮತಿ ಶಾಂತಾ ನಾಗರಾಜ್ ಎಂಬ ಕನ್ನಡ ಅಧ್ಯಾಪಕಿಯು ಉಲ್ಲೇಖಿಸಿದ ವಾಕ್ಯ ಇದು‌. ಈ ಲೇಖಕಿ‌ ಕೂಡಾ ಆ ತರಗತಿಯ ವಿದ್ಯಾರ್ಥಿನಿಯರ ಗುಂಪಿನಲ್ಲಿ ಒಬ್ಬಳಾಗಿದ್ದಳು. 25-30 ಜನ ಅರಳುಗಣ್ಣಿನ ಮತ್ತು ಅಷ್ಟೇ ತುಂಟ ಸ್ವಭಾವದ ವಿಜ್ಞಾನದ ವಿದ್ಯಾರ್ಥಿನಿಯರಿಗೆ ಕನ್ನಡದ ಆದಿಕವಿಯ ಈ  ಅವಿಸ್ಮರಣೀಯ ಉದ್ಗಾರದ ಮಹತ್ವ ಎಷ್ಟು ಅರ್ಥವಾಯಿತೋ ಬಿಟ್ಟಿತೋ! ಆದರೆ ಮೇಡಂ […]

Electron gas

ಎಲೆಕ್ಟ್ರಾನನಿಲ‌ – ಒಂದು ಘನವಸ್ತು ಅಥವಾ ದ್ರವವಸ್ತುವಿನೊಳಗೆ ಮುಕ್ತ ಎಲೆಕ್ಟ್ರಾನುಗಳು‌ ಅನಿಲದಂತೆ ಓಡಾಡಿಕೊಂಡಿರುವುದು.

Electron diffraction 

ಎಲೆಕ್ಟ್ರಾನಲೆಯ ಹಬ್ಬುವಿಕೆ – ಅಣುಗಳು ಅಥವಾ ಪರಮಾಣುಗಳು ಎಲೆಕ್ಟ್ರಾನುಗಳ ಕಿರಣಪುಂಜವೊಂದು ಹಬ್ಬುವಂತೆ ಮಾಡುವುದು‌.

Electron capture

ಎಲೆಕ್ಟ್ರಾನು ವಶ – ಒಂದು ಪರಮಾಣು ಅಥವಾ ಅಣುವು ಹೆಚ್ಚಿನ ಮುಕ್ತ ಎಲೆಕ್ಟ್ರಾನೊಂದನ್ನು ಪಡೆದುಕೊಳ್ಳುವುದರಿಂದ ಋಣ ವಿದ್ಯುದಣುವು ರೂಪುಗೊಳ್ಳುವ ಪ್ರಕ್ರಿಯೆ.

Electron affinity 

ಎಲೆಕ್ಟ್ರಾನಾಕರ್ಷಣೆ – ಒಂದು ಋಣವಿದ್ಯುದಣುವಿನಿಂದ ಒಂದು ಎಲೆಕ್ಟ್ರಾನನ್ನು ಅಣುವೊಂದು ಅಥವಾ ಪರಮಾಣುವೊಂದು ಗಳಿಸಿದಾಗ ಉಂಟಾಗುವ ಶಕ್ತಿ ವ್ಯತ್ಯಾಸ.

Electron

ಎಲೆಕ್ಟ್ರಾನು – ಒಂದು ಮೂಲಭೂತ ಕಣ. ಪರಮಾಣು ಬೀಜಕೇಂದ್ರದ ಸುತ್ತ ಇರುವ ಕವಚಗಳಲ್ಲಿ ಇರುತ್ತದೆ ಹಾಗೂ ಋಣ ವಿದ್ಯುದಂಶವನ್ನು ಹೊಂದಿರುತ್ತದೆ.

ಕನ್ನಡ ಗಾದೆಮಾತು –  ಹೂವಿನ ಜೊತೆ ನಾರೂ ಸ್ವರ್ಗ ಸೇರಿತು.

ಕನ್ನಡ ಭಾಷೆಯಲ್ಲಿನ ಒಂದು ವಿಶಿಷ್ಟ ಗಾದೆಮಾತಿದು. ದೇವರಿಗೆ ಹೂವಿನ ಹಾರ ಹಾಕಲು ಹೂ ಕಟ್ಟುವಾಗ ಬಾಳೆಯ ಅಥವಾ ಇನ್ಯಾವುದಾದರೂ ಗಿಡದ ನಾರನ್ನು ಬಳಸುತ್ತಾರೆ ಅಲ್ಲವೇ? ದೇವರಿಗೆ ಅರ್ಪಿಸಿದ ಹೂವು ಸ್ವರ್ಗ ಸೇರುತ್ತದೆ, ಏಕೆಂದರೆ ದೇವರ ಆವಾಸಸ್ಥಾನ ಸ್ವರ್ಗ ತಾನೇ. ಇಲ್ಲಿ ಸ್ವಾರಸ್ಯದ ಸಂಗತಿ ಅಂದರೆ ಸುಂದರ, ಸುಗಂಧಮಯ ಹೂವು ಸ್ವರ್ಗ ಸೇರುವುದೇನೋ ಸರಿಯೇ ; ಅದರೆ ಅದನ್ನು ಕಟ್ಟಲು ಬಳಸಿದ ಅಂದಚಂದ ಇಲ್ಲದ ಸರಳ ಸಾಧಾರಣ ನಾರೂ ಸಹ ಅದರೊಂದಿಗೆ ಸ್ವರ್ಗ ಸೇರಿಬಿಡುತ್ತದಲ್ಲ!! ನಮ್ಮ ಜೀವನದಲ್ಲಿ ಯಾರಾದರೂ […]

Page 2 of 3

Kannada Sethu. All rights reserved.