Layden Jar

ಲೇಡನ್ ಜಾರ್  – ಲೇಡನ್ ಪಾತ್ರೆ – ಪೂರ್ವಕಾಲದ ಒಂದು ರೀತಿಯ ವಿದ್ಯುತ್ ಸಂಗ್ರಾಹಕ. ಇದನ್ನು ಡಚ್ ಲ್ಯಾಂಡಿನ ಲೇಡನ್ ಎಂಬ ಸ್ಥಳದಲ್ಲಿ 1745ರಲ್ಲಿ ನಿರ್ಮಿಸಿದ್ದರು‌. ಇದರಲ್ಲಿ ಒಂದು ಗಾಜಿನ ಪಾತ್ರೆಯ ಹೊರ ಮೇಲ್ಮೈಗೆ ಒಂದು ಲೋಹದ ತೆಳುಹಾಳೆಯನ್ನು ಹೊದಿಸಿರುತ್ತಿದ್ದು, ಒಳ ಮೇಲ್ಮೈಗೂ ಇಂಥದೇ ಹಾಳೆಯನ್ನು ಹಾಕಿ ಮುಚ್ಚಿರುತ್ತಿದ್ದರು‌. ಒಳ ಮೇಲ್ಮೈ ಹೊದಿಕೆಯ ಲೋಹವನ್ನು ಮುಕ್ತವಾಗಿ ತೂಗಾಡುತ್ತಿದ್ದ ಸರಪಣಿಯೊಂದು ಸ್ಪರ್ಶಿಸುತ್ತಿತ್ತು.

Lever

ಲಿವರ್ – ಮೀಟುಗೋಲು ಅಥವಾ ಸನ್ನೆಗೋಲು – ಭದ್ರವಾಗಿ ನೆಲೆಯೂರಿಸಿದ ಒಂದು ಆಧಾರದ ಸುತ್ತ ತಿರುಗಿಸಲು ಸಾಧ್ಯವಿರುವ ಒಂದು ಗಟ್ಟಿ ಕೋಲು. ಇದರಿಂದ ಭಾರಗಳನ್ನು ಎತ್ತುವುದು ಸುಲಭವಾಗುತ್ತದೆ‌.

Lethargy

ಲೆಥಾರ್ಜಿ – ನಿಶ್ಯಕ್ತಿ – ನಿರ್ದಿಷ್ಟ ಪ್ರಮಾಣೀಕೃತ ಶಕ್ತಿ ಹಾಗೂ ಒಂದು ನ್ಯೂಟ್ರಾನಿನ ಶಕ್ತಿ(E)ಯ ಅನುಪಾತದ ಋಣಾತ್ಮಕ ಸಹಜ ಕ್ರಮವಿಧಿ ( ಕ್ರಮವಿಧಿ = logarithm). ಸಾಮಾನ್ಯ ಪದಗಳಲ್ಲಿ ಹೇಳಬೇಕೆಂದರೆ ನಿಶ್ಯಕ್ತಿ ಅಂದರೆ ಶಕ್ತಿಯ ತೀವ್ರ ಕೊರತೆಯ ಸ್ಥಿತಿ.

Lepton

ಲೆಪ್ಟಾನ್ – ಲೆಪ್ಟಾನು – ಎಲೆಕ್ಟ್ರಾನು, ಮ್ಯೂಯಾನು ( ಮತ್ತೆ ವಿಭಜಿಸಲು ಸಾಧ್ಯವಿಲ್ಲದ, ಋಣ ವಿದ್ಯುದಂಶ ಹೊಂದಿದ ಆದರೆ ಅದಕ್ಕಿಂತ ಹೆಚ್ಚು ದ್ರವ್ಯರಾಶಿಯುಳ್ಳ ಒಂದು ಅಂತರ್ಪರಮಾಣು – ಅಂದರೆ ಪರಮಾಣುವಿನೊಳಗಿನ -ಮೂಲಭೂತ ಕಣ) ಮತ್ತು ನ್ಯೂಟ್ರಾನುಗಳನ್ನು ಒಟ್ಟಾಗಿ ಸೂಚಿಸುವ ಒಂದು ಪದ.

Lenz’s law

ಲೆಂಜ್ ಸ್ ಲಾ – ಲೆಂಜ್ ರ ನಿಯಮ – ಒಂದು ವಿದ್ಯುನ್ಮಂಡಲದಲ್ಲಿ ಪ್ರೇರಿತ ವಿದ್ಯುತ್ ಸಾಮರ್ಥ್ಯ (ವಿದ್ಯುತ್ ಚಾಲಕ ಬಲ)ದ  ದಿಕ್ಕು, ತನ್ನನ್ನು ಉತ್ಪಾದಿಸುವುದರ ದಿಕ್ಕಿಗೆ ವಿರುದ್ಧವಾಗಿರುತ್ತದೆ.

ಕನ್ನಡ ಗಾದೆಮಾತು – ಬಂಧುಗಳಿಲ್ಲದಿರೋ ಬಡತನ ಎಂದಿಗೂ ಬೇಡ.

ಜೀವನದಲ್ಲಿ ನಮಗೆ ಕಷ್ಟಸುಖ, ನೋವು ನಲಿವುಗಳನ್ನು ಹಂಚಿಕೊಳ್ಳಲು ಬಂಧುಗಳು ಬೇಕು‌. ಬಂಧುಗಳು ಅಂದರೆ ನೆಂಟರು, ಸಂಬಂಧಿಕರು.‌ ನಮಗೆ ಯಾರ ಜೊತೆ ಬಂಧವಿರುತ್ತದೋ ಅವರು ಬಂಧುಗಳು.‌ ಎಷ್ಟು ಹಣಕಾಸು, ಐಶ್ವರ್ಯ, ವೈಭವ ಇದ್ದರೇನಂತೆ, ಜೊತೆಯಾಗಿ ಅರ್ಧ ಲೋಟ ಕಾಫಿ ಕುಡಿಯಲು, ನೋವಾದಾಗ ಹೆಗಲಿಗೊರಗಿ ಅಳಲು, ಖುಷಿಯಾದಾಗ ತಕ್ಷಣ ಅದನ್ನು ಹಂಚಿಕೊಳ್ಳಲು, ಹಬ್ಬ-ಹರಿದಿನಗಳಲ್ಲಿ ಜೊತೆಯಾಗಿ ಉಣ್ಣಲು ನಮಗೆ ಯಾರೂ ಇಲ್ಲ ಅಂದರೆ ನಾವು ಖಂಡಿತವಾಗಿಯೂ ಬಡವರೇ. ಅಲ್ಲವೆ? ಈ ಗಾದೆಮಾತು ಬದುಕಿನ ಬಹುಮುಖ್ಯ ಸಂಗತಿಯೊಂದನ್ನು ಬಹಳ ಅರ್ಥಪೂರ್ಣವಾಗಿ ಹೇಳುತ್ತಿದೆ.  Kannada […]

ಕನ್ನಡ ಉಳಿಸುವ ಒಂದೇ ವಿಧಾನ ಅಂದರೆ …

ಒಬ್ಬ ಕನ್ನಡಾಭಿಯಾನಿಯಾಗಿ ಹಾಗೂ ಕನ್ನಡದ ಅಧ್ಯಾಪಕಿಯಾಗಿ ಕನ್ನಡದ ಉಳಿವು, ಬೆಳವಣಿಗೆಗಳ ಬಗ್ಗೆ ನಾನು ಯೋಚಿಸುತ್ತಾ ಇರ್ತೇನೆ‌. ಕರ್ನಾಟಕ ಏಕೀಕರಣ ಆಗಿ ಎಪ್ಪತ್ತು ವರ್ಷಗಳಲ್ಲಿ ಕೃಷ್ಣೆ, ತುಂಗೆ, ಕಾವೇರಿಗಳಲ್ಲಿ ಬೇಕಾದಷ್ಟು ನೀರು ಹರಿದಿದೆ‌. ಇಷ್ಟು ವರ್ಷಗಳಲ್ಲಿ ನಡೆದ ಚಳುವಳಿಗಳು, ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳಿಂದ, ಉದ್ಯಮಿಗಳು ಹಾಗೂ ಜನಸಾಮಾನ್ಯರಿಂದ ಕನ್ನಡದ ಉಳಿವು ಮತ್ತು ಬೆಳವಣಿಗೆಗಳನ್ನು ಕುರಿತು ಆಗಿರುವ ಕೆಲಸ ಮತ್ತು ಚಿಂತನೆಗಳ ಸಾರಸಂಗ್ರಹವನ್ನು ಭಟ್ಟಿ ಇಳಿಸಿ ಹೇಳುವುದಾದರೆ, ಕನ್ನಡವನ್ನು ಗರಿಷ್ಠ ಮಟ್ಟದಲ್ಲಿ ಬಳಸುವುದು ಮತ್ತು ಕನ್ನಡಿಗರನ್ನು ಕಷ್ಟ‌ನಷ್ಟಗಳಿಗೆ ಒಳಗಾಗದಂತೆ […]

Kannada Sethu. All rights reserved.