Gyromagnetic effects

ಗೈರೋಮ್ಯಾಗ್ನೆಟಿಕ್ ಎಫೆಕ್ಟ್ಸ್ – ಭ್ರಮಣ ಕಾಂತೀಯ ಪರಿಣಾಮಗಳು – ಒಂದು ವಸ್ತುವಿನ ಕಾಂತೀಕರಣಕ್ಕೂ ಅದರ ಭ್ರಮಣಕ್ಕೂ (ಸುತ್ತುವಿಕೆಗೂ) ಇರುವ ಸಂಬಂಧದ ಗಮನಿಕೆ.

Guided missile 

ಗೈಡೆಡ್ ಮಿಸೈಲ್ – ನಿರ್ದೇಶಿತ ಕ್ಷಿಪಣಿ – ಒಂದೋ ಪೂರ್ವನಿಶ್ಚಿತ ಅಥವಾ ತನ್ನೊಳಗಿನ ಸ್ವಯಂ ಪ್ರತಿಕ್ರಯಿಸುವ ಉಪಕರಣಗಳಿಂದಾಗಿ ಅಥವಾ ರೇಡಿಯೋ (ಒಂದು ರೀತಿಯ ವಿದ್ಯುತ್ಕಾಂತೀಯ ಅಲೆ) ಆದೇಶಗಳಿಂದ ತನ್ನ ಗುರಿಯ ಕಡೆಗೆ ನಿರ್ದೇಶಿತಗೊಂಡ ಕ್ಷಿಪಣಿ.

ಕನ್ನಡ ಗಾದೆಮಾತು – ಮಾಡೋರೊಬ್ಬಿದ್ರೆ ನೋಡು ನನ್ನ ಸಿರಿ. 

ಜೀವನದಲ್ಲಿ ಎಷ್ಟೋ ಸಲ, ನಾವು ಮಾಡಬೇಕಾದ ಕರ್ತವ್ಯಗಳನ್ನು ತಾವು ಮಾಡಿ, ನಮಗೆ ವಿಶ್ರಾಂತಿ-ಬಿಡುವುಗಳನ್ನು ಒದಗಿಸಿ, ನಮ್ಮ ಜೀವನವನ್ನು ಹಗುರ ಮಾಡುವವರ ಬಗ್ಗೆ ನಮ್ಮ ಗಮನ ಹೋಗುವುದಿಲ್ಲ. ಉದಾಹರಣೆಗೆ, ಕಾಲೇಜು ಓದುವ ವಯಸ್ಸಾಗಿದ್ದರೂ ಮಕ್ಕಳಿಗೆ ಮನೆಯಲ್ಲಿ ಯಾವ ಕೆಲಸವನ್ನೂ ಹೇಳದೆ ಅವರ ಓದು, ಹವ್ಯಾಸ, ಸುತ್ತಾಟಗಳಿಗೆ ಅನುವು ಮಾಡಿಕೊಡುವ ತಾಯಿ-ತಂದೆ, ಸೊಸೆಗೆ ಅಳಿಯನಿಗೆ ತುಂಬು ಮನಸ್ಸಿನ ಸಹಕಾರ ನೀಡುವ ಅತ್ತೆ, ಮಾವ, ಭಾವ, ಮೈದುನ, ಅತ್ತಿಗೆ, ನಾದಿನಿ….ದೊಡ್ಡ ಮೊತ್ತದ ಸಂಬಳವಿಲ್ಲದಿದ್ದರೂ ಅಡುಗೆ, ಮನೆವಾಳ್ತೆ, ಚಿಕ್ಕ ಮಕ್ಕಳನ್ನು ನೋಡಿಕೊಳ್ಳುವುದು, ವಾಹನ […]

ವಲ್ಲಿಬಟ್ಟೆ, ಬೈರಾಸ, ಉತ್ತರೀಯ….ಅರೆರೆರೆ….!

ಈ ನಡುವೆ ನಮ್ಮ ಮನೆಗೆ ಚಾಮರಾಜನಗರದ ಕಡೆಯ ಪರಿಚಿತರೊಬ್ಬರು ಬಂದಿದ್ದರು. ರಾತ್ರಿ ಮಲಗಿಕೊಂಡಿದ್ದು ಬೆಳಿಗ್ಗೆ ಅವರು ಎದ್ದಾಗ, ಸ್ನಾನ ಮಾಡಲು ಹೊರಟವರು ‘ಒಂದು ವಲ್ಲಿಬಟ್ಟೆ ಇದ್ರೆ ಕೊಡ್ತೀರಾ?’ ಎಂದು ಕೇಳಿದರು. ನನಗೆ ತಕ್ಷಣ ಅರ್ಥ ಆಗಲಿಲ್ಲ. ‘ಹಾಗಂದ್ರೆ?’ ಎಂದು ಕೇಳಿದೆ. “ಅದೇ ಸ್ನಾನ ಮಾಡಿ ಮೈ ಒರೆಸ್ಕೋತೀವಲ್ಲ, ಅದು” ಅಂದರು. ಅಲ್ಲೇ ಇದ್ದು ಇದನ್ನು ಕೇಳಿಸಿಕೊಂಡ ನಮ್ಮನೆಯವರು “ಟವಲ್ ಕೇಳ್ತಿದಾರೆ ಕಣೆ, ಕೊಡು” ಅಂದರು. ಅರೆ! ಟವೆಲ್ ಗೆ ‘ವಲ್ಲಿಬಟ್ಟೆ’ ಅನ್ನುತ್ತಾರಾ! ನನಗೆ ಅಚ್ಚರಿ ಆಯ್ತು.  ಮಂಗಳೂರಿನ […]

Group velocity

ಗ್ರೂಪ್ ವೆಲಾಸಿಟಿ – ತಂಡ ವೇಗ ಅಥವಾ ಸಮೂಹ ವೇಗ – ಅಲೆಗಳ ತಂಡ (ಸಮೂಹ) ವೊಂದು ಚಲಿಸುವ ವೇಗ.

Ground wire

ಗ್ರೌಂಡ್ ವೈಯರ್ – ಭೂಸ್ಪರ್ಶ ತಂತಿ‌ – ಒಂದು ವಿದ್ಯುತ್ ಉಪಕರಣ ಹಾಗೂ ಒಂದು ಭೂಸ್ಪರ್ಶಿತ ಉಪಕರಣಗಳನ್ನು ಜೋಡಿಸಲು ಬಳಸುವ ವಾಹಕ ತಂತಿ.

Ground waves 

ಗ್ರೌಂಡ್ ವೇವ್ಸ್ – ಭೂಮಿಚಾರಿ‌ ಅಲೆಗಳು – ಪ್ರಸಾರಕ ಹಾಗೂ ಸ್ವೀಕಾರಕಗಳ ಮಧ್ಯೆ ‌ಇದ್ದು, ಭೂಮಿಯ ಮೇಲ್ಮೈಗೆ ಸಮೀಪವಾಗಿ ಪಯಣಿಸುವ ವಿದ್ಯುತ್ಕಾಂತೀಯ ( ರೇಡಿಯೋ) ಅಲೆ‌ಗಳು (ಹೋಲಿಕೆ -Sky wave – ಸ್ಕೈ ವೇವ್ – ಆಕಾಶಚಾರಿ ಅಲೆ).

Ground state 

ಗ್ರೌಂಡ್ ಸ್ಟೇಟ್ – ಕನಿಷ್ಠ ಶಕ್ತಿಸ್ಥಿತಿ – ಒಂದು ಪರಮಾಣು, ಅಣು ಅಥವಾ ಇನ್ಯಾವುದಾದರೂ ವ್ಯವಸ್ಥೆಯ ಕನಿಷ್ಠತಮ ಶಕ್ತಿಸ್ಥಿತಿ

Ground rod 

ಗ್ರೌಂಡ್ ರಾಡ್ – ಭೂಸ್ಪರ್ಶ ಕಂಬಿ‌ – ಉತ್ತಮವಾದ ಭೂಸ್ಪರ್ಶಕ್ಕಾಗಿ ಚೆನ್ನಾಗಿ ನೆಲದಲ್ಲಿ ನೆಟ್ಟಿರುವ ಒಂದು ವಾಹಕ ಕಂಬಿ.

ಕನ್ನಡ ಗಾದೆಮಾತು –  ಕುಳಿತು ತಿಂದ್ರೆ ಕುಡಿಕೆ ಹೊನ್ನು ಸಾಲ್ದು‌.

ಈ ಗಾದೆಮಾತು ನಮಗೊಂದು ಎಚ್ಚರಿಕೆ ನೀಡುತ್ತದೆ. ಅದೇನೆಂದರೆ, ನಾವು ಜೀವನದಲ್ಲಿ ಸೋಮಾರಿಗಳಾಗಬಾರದು ಎಂಬ ಎಚ್ಚರಿಕೆ ಅದು. ನಮ್ಮ ಜೀವನೋಪಾಯಕ್ಕಾಗಿ ನಮ್ಮಲ್ಲಿರುವ  ಕುಡಿಕೆಯಲ್ಲಿನ ಅಂದರೆ ಸಂಗ್ರಹಿತ ಹಣವನ್ನೇ ಬಳಸುತ್ತಿರಬಾರದು, ಹಾಗೆ ಬಳಸಿದರೆ ಅದು ಬಹಳ ಬೇಗ ಖರ್ಚಾಗಿ ಹೋಗಿ ನಾವು ಬೀದಿಗೆ ಬೀಳುವ ಪರಿಸ್ಥಿತಿ ಬಂದುಬಿಡುತ್ತದೆ. ಕುಳಿತು ತಿನ್ನುವವರು ಅಂದರೆ ದುಡಿಯದೆ ಸೋಮಾರಿಗಳಾಗಿ ಜೀವಿಸುವವರು ಎಂದು ಅರ್ಥ. ಇಂತಹವರ ಹತ್ತಿರ ಎಷ್ಟೇ ಹಣಸಂಗ್ರಹ ಇದ್ದರೂ, ಸಂಪಾದಿಸದೆ ಬರೇ ಖರ್ಚು ಮಾಡುವುದರಿಂದ ಅದು ನೀರಿನಂತೆ ಖರ್ಚಾಗಿ ಹೋಗಿ, ಅವರು ಭಿಕ್ಷೆ […]

Page 23 of 107

Kannada Sethu. All rights reserved.