ಕನ್ನಡ ಪ್ರಸಂಗ

ಇದು ಲೇಖಕಿಯು ಕನ್ನಡದೊಂದಿಗೆ ಒಡನಾಡಿದ ಅನುಭವಗಳ ಕಥನವಾಗಿದೆ. ಕನ್ನಡ ಜಗತ್ತು ತನಗೆ ಕಲಿಸಿದ ಹಾಗೂ ಕನ್ನಡ ಭಾಷೆ ಹಾಗೂ ಸಾಹಿತ್ಯಗಳನ್ನು ತಾನು ಕಲಿಸಿದ ದಾರಿಯಲ್ಲಿನ ವಿವಿಧ ಅನುಭವಗಳನ್ನು ಓದುಗರೊಂದಿಗೆ ಹಂಚಿಕೊಳ್ಳುವ ಪ್ರಯತ್ನವಾಗಿರುತ್ತದೆ ಇದು. ವಾರಕ್ಕೆ ಒಂದು ಕನ್ನಡ ಪ್ರಸಂಗದಂತೆ ಈ ಅಂಕಣವು ಮೂಡಿ ಬರಲಿದೆ.

ಕನ್ನಡ ಪದಗಳ ಲೋಕದಲ್ಲಿ ಇನ್ನೊಂದು ಸುತ್ತು….’ಇಂಡೆಂಟ್’ ಗೆ ಕನ್ನಡ ಪದ ಹುಡುಕಿದ್ದು.

ನಮ್ಮ ವಿಶ್ವವಿದ್ಯಾಲಯ ( ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ) ಅಥವಾ ಯಾವುದೇ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಪದವಿ/ಸ್ನಾತಕೋತ್ತರ ಪದವಿ ಪರೀಕ್ಷೆಗಳ ಸಮಯದಲ್ಲಿ, ವಿವಿಧ ಅಧ್ಯಯನ ವಿಭಾಗಗಳಿಂದ ಪಡೆಯಲಾಗುವ ಬಹಳ ಮುಖ್ಯವಾದ ಒಂದು ಮಾಹಿತಿ ಅಂದರೆ  “ನಿಮ್ಮ ವಿಭಾಗಕ್ಕೆ ಎಷ್ಟು ಪ್ರಶ್ನೆಪತ್ರಿಕೆಗಳ ಅಗತ್ಯ ಇದೆ?” ಎಂಬುದು‌. ಇದನ್ನು ಇಂಗ್ಲಿಷ್ ನಲ್ಲಿ indent ಎನ್ನುತ್ತಾರೆ. ಈ ‘ಇಂಡೆಂಟ್’ ಎಂಬ ಪದವನ್ನು ಸಾಮಾನ್ಯವಾಗಿ ಹಾಗೆಯೇ ಬಳಸಿಬಿಡುತ್ತಾರೆ, ಇದಕ್ಕೆ  ಕನ್ನಡ ಪದವನ್ನು ಬಳಸಲೇಬೇಕೆಂಬ ತುಡಿತ ಕಛೇರಿಗಳಲ್ಲಿ ಕಾಣುವುದಿಲ್ಲ. ನನ್ನ ಮನಸ್ಸಿಗೋ ಯಾವುದಾದರೊಂದು ಸಾಮಾನ್ಯ ಬಳಕೆಯ ಇಂಗ್ಲಿಷ್ […]

ಬೋಂಬೆ ಮಿಠಾಯಿ, ಬೊಂಬಾಯ್ ಬೋಂಡ, ಬೋಂಬೆ ರವೆ, ಬೋಂಬೆ ಬಝಾರ್, ಬಾಯಿ ಬೊಂಬಾಯಿ ……….. ಕನ್ನಡಿಗರ  ‘ಬೋಂಬೆ’ ಪೂರ್ವಪದವನ್ನು ಕುರಿತ ಪ್ರೀತಿ

ನಾನು ಈ ಬರಹದ ಶೀರ್ಷಿಕೆಯಲ್ಲಿ ಬಳಸಿರುವ ಪದಗಳನ್ನು ಕನ್ನಡ ನಾಡಿನಲ್ಲಿ ಬಹಳ ಸಲ ಕೇಳುತ್ತೇವೆ, ಅಲ್ಲವೆ? ಬೋಂಬೆ ಹಲ್ವಾ, ಬೋಂಬೆ ರವಾ, ಬೋಂಬೆ ಮಿಠಾಯಿ, ಬೋಂಬೆ ಟಾಕೀಸ್,  ಬೊಂಬಾಯ್ ಮಾಮ……ಕನ್ನಡ ಭಾಷೆಯಲ್ಲಿ ಎಷ್ಟೆಲ್ಲ ಪದಗಳು ಈ ಬೋಂಬೆ ಪದದಿಂದ ಪ್ರಾರಂಭವಾಗುತ್ತವೆ ಎಂದರೆ ಅಚ್ಚರಿಯಾಗುತ್ತದೆ! ಇದಕ್ಕೆ ಕಾರಣ ಏನಿರಬಹುದು ಎಂದು ಒಂದಿಷ್ಟು ವಿಚಾರಿಸಿ, ಓದಿ ನೋಡಿದಾಗ ಈ ಕೆಳಗಿನ ಅಂಶಗಳು ತಿಳಿದು ಬಂದವು.  1.ಕನ್ನಡ ನಾಡಿನ ಏಕೀಕರಣಕ್ಕೆ ಮುಂಚೆ ಧಾರವಾಡ, ಬೆಳಗಾವಿ, ಬಿಜಾಪುರ ಮೊದಲಾದ ಪ್ರದೇಶಗಳು ಬ್ರಿಟಿಷ್ ಭಾರತದ ಬೋಂಬೆ […]

ಎಸ್ಕೆಲೇಟರ್ ಗೆ ಕನ್ನಡ ಪದ ಯಾವುದು?

ವಿಮಾನ ನಿಲ್ದಾಣ, ದೊಡ್ಡ ದೊಡ್ಡ  ವಾಣಿಜ್ಯ  , ಬೆಂಗಳೂರಿನ  ‘ನಮ್ಮ ಮೆಟ್ರೊ’ ರೈಲು ವ್ಯವಸ್ಥೆ ಇಲ್ಲೆಲ್ಲ ನಾವು, ತಾನೇ ಮೇಲಕ್ಕೆ ಕೆಳಕ್ಕೆ ಚಲಿಸುತ್ತಾ ಜನರ ಹತ್ತುವಿಕೆ, ಇಳಿಯುವಿಕೆಗಳನ್ನು ಸುಲಭ ಮಾಡುವ ‘ಎಸ್ಕೆಲೇಟರ್’ ಗಳನ್ನು ಬಳಸುತ್ತೇವಲ್ಲ? ಅದನ್ನು ನೋಡಿದಾಗೆಲ್ಲ ‘ಇದಕ್ಕೆ ಕನ್ನಡದಲ್ಲಿ ಏನಂತಾರೆ?’ ಅನ್ನುವ ಪ್ರಶ್ನೆಯು ನನ್ನ  ಮನಸ್ಸಿನಲ್ಲಿ ಏಳುತ್ತಿತ್ತು. ಈಚೆಗೆ, ನಮ್ಮ ಪರಿಚಿತರಾದ ‘ಲೈಟಿಂಗ್ ಕೃಷ್ಣಪ್ಪ’ ಎಂಬ ಬೆಳಕು ಕರ್ಮಿ ಒಂದು ಅನಿರೀಕ್ಷಿತ ಸಂದರ್ಭದಲ್ಲಿ ಇದಕ್ಕೆ  ಉತ್ತರ ಸಿಗಲು ನಿಮಿತ್ತವಾದರು. ಲೈಟಿಂಗ್ ಕೃಷ್ಣಪ್ಪ ನಮ್ಮ ನಾಟ್ಯ ಸಂಸ್ಥೆ […]

ಕನ್ನಡತನವನ್ನು  ಈ ಕಾಲದಲ್ಲಿ ಉಳಿಸಿ,  ಬೆಳೆಸುವುದು ಹೇಗೆ?

“ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು” ಎಂಬ, ಕುವೆಂಪು ಅವರ ಪ್ರಸಿದ್ಧ ಕವಿತೆಯಲ್ಲಿ “ಕನ್ನಡ ಗೋವಿನ ಓ ಮುದ್ದಿನ ಕರು, ಕನ್ನಡತನವೊಂದಿದ್ದರೆ ನೀ ಅಮ್ಮಗೆ ಕಲ್ಪತರು” ಎಂಬ ಒಂದು ಸಾಲು ಬರುತ್ತದೆ. ಈ ಮಾಹಿತಿ‌ ತಂತ್ರಜ್ಞಾನ ಯುಗದಲ್ಲಿ, ಗೂಗಲಪ್ಪ ಮತ್ತು ಯೂಟ್ಯೂಬಮ್ಮನ ಆಳ್ವಿಕೆಯಲ್ಲಿ ಕನ್ನಡತನವನ್ನು ಉಳಿಸಿಕೊಳ್ಳುವುದು ಹೇಗೆ ಎಂಬ ಸವಾಲು ಎದುರಾಗುತ್ತದೆ‌.  ಇದರಲ್ಲಿ ಎರಡು ವಿಷಯಗಳು ಬಹಳ ಮುಖ್ಯ ಅನ್ನಿಸುತ್ತವೆ.‌ ಒಂದು ಇಂದಿನ ಹೊಸ ಹೊಸ ‘ಜಾಣ ಉಪರಣಗಳಿಗೆ’ ಒಗ್ಗುವಂತೆ, ಸಲ್ಲುವಂತೆ ಕನ್ನಡವನ್ನು ಸಬಲಗೊಳಿಸುವುದು‌, ಮತ್ತು […]

ಶರಬತ್ತು ಎಂಬ ಪದದ ವಿಸ್ಮಯಕರ ಮೂಲ!

ಶರಬತ್ತು ಅಥವಾ ಸರಬತ್ತು ಎಂಬುದು ಕನ್ನಡ ಭಾಷೆಯಲ್ಲಿ ಸಾಮಾನ್ಯವಾಗಿ ಪಾನಕಕ್ಕೆ ಬಳಸುವ ಒಂದು ಪರ್ಯಾಯ ಪದ. ನಿಂಬೆ ಹಣ್ಣಿನ ಶರಬತ್ತು, ನೆಲ್ಲಿಕಾಯಿ  ಶರಬತ್ತು, ಸೊಗದೆ ಬೇರಿನ ಶರಬತ್ತು ……  ಹೀಗೆ ಒಮ್ಮೊಮ್ಮೆ ಬಳಸುತ್ತೇವಲ್ಲವೆ?   ಮೊನ್ನೆ ಹೀಗೇ ಏನೋ ಓದುತ್ತಿದ್ದಾಗ ಈ ಪದದ ಮೂಲದ ಬಗೆಗಿನ ಒಂದು ವಿಷಯ ಕಣ್ಣಿಗೆ ಬಿತ್ತು. ಆಧುನಿಕ ಐಸ್ಕ್ರೀಮ್ ಅಂಗಡಿಗಳ ಖಾದ್ಯ-ಪಾನೀಯ- ಪಟ್ಟಿಗಳಲ್ಲಿ ಸಾರ್ಬೆಟ್ (Sorbett)ಎಂಬ ಪದ ನೋಡುತ್ತೇವಲ್ಲ?  ಈ ಪದ ಅರೇಬಿಕ್ ನ ಶರ್ಬ (ಅರ್ಥ – ಕುಡಿಯುವುದು) ದಿಂದ ಟರ್ಕಿ […]

ಕರ್ನಾಟಕದ ಹೆಮ್ಮೆ – ಮೈಸೂರು ಶೈಲಿ‌ ಭರತನಾಟ್ಯ 

ಒಬ್ಬ ಭರತನಾಟ್ಯ ಶಿಕ್ಷಕಿಯಾಗಿ, ಕಳೆದ ಮೂವತ್ನಾಲ್ಕು ವರ್ಷಗಳಲ್ಲಿ, ಬೆಂಗಳೂರಿನ ಹಂಪಿ ನಗರದಲ್ಲಿರುವ ನಮ್ಮ ಚಿತ್ರನಾಟ್ಯ ಫೌಂಡೇಶನ್ ಸಂಸ್ಥೆಯಲ್ಲಿ, ಮಕ್ಕಳಿಗೆ, ನಾಟ್ಯಾಸಕ್ತ ಪ್ರೌಢ ವಯಸ್ಕರಿಗೆ ಭರತನಾಟ್ಯವನ್ನು ಕಲಿಸುವಾಗಲೆಲ್ಲ ನೆನಪಿಗೆ ಬಂದು ಸಂತೋಷ ಕೊಡುವ ಒಂದು ಸಂಗತಿ ಅಂದರೆ, ನಮ್ಮ ಕರ್ನಾಟಕ ರಾಜ್ಯವು ಭರತನಾಟ್ಯಕ್ಕೆ ಕೊಡುಗೆಯಾಗಿ ಕೊಟ್ಟಿರುವ ಒಂದು ಶೈಲಿ.‌ ಅದೆಂದರೆ ಮೈಸೂರು ಭರತನಾಟ್ಯ ಶೈಲಿ. ಮೈಸೂರು ಒಡೆಯರ್ ರಾಜವಂಶದ ರಾಜ, ಹತ್ತನೆಯ ಜಯಚಾಮರಾಜೇಂದ್ರ ಒಡೆಯರ್ ಅವರ ಆಸ್ಥಾನದಲ್ಲಿ ಜಟ್ಟಿ ತಾಯಮ್ಮ ಎಂಬ ಆಸ್ಥಾನ ನರ್ತಕಿ ಇದ್ದರು. ಮೈಸೂರು ಭರತನಾಟ್ಯ […]

‘ಆದರ್ಶ ಮಹಿಳಾ ಸಂಘ’ದ ವಿಶಿಷ್ಟ ಕನ್ನಡ ‌ರಾಜ್ಯೋತ್ಸವ

ಬೆಂಗಳೂರಿನ ಕೋಣನಕುಂಟೆಯಲ್ಲಿ ಒಂದು ಮಹಿಖಾ ಸಂಘವಿದೆ, ‘ಆದರ್ಶ ಮಹಿಳಾ ಸಂಘ’ ಎಂದು ಅದರ ಹೆಸರು. ನೂರೈವತ್ತಕ್ಕೂ ಹೆಚ್ಚು ಸದಸ್ಯೆಯರಿರುವ ಸಂಘ ಇದು.  ಇದನ್ನು ಕಳೆದ ಹದಿನಾಲ್ಕು ವರ್ಷಗಳಿಂದ ಸಕ್ರಿಯವಾಗಿ ನಡೆಸಿಕೊಂಡು ಬರುತ್ತಿದ್ದಾರೆ ಇದರ ಅಧ್ಯಕ್ಷೆ ಶ್ರೀಮತಿ ಪುಷ್ಪಾ‌ ಹಾಗೂ ಅವರ ಸಮರ್ಥ ಬಳಗದವರು. ಹೆಂಗಸರಿಗೆ ಜೀವನೋತ್ಸಾಹ ಮೂಡಿಸುವ ಅನೇಕ ಒಳ್ಳೆಯ ಮೌಲ್ಯ, ಆಚರಣೆ, ಅಭ್ಯಾಸ ಹಾಗೂ ಕಾರ್ಯಕ್ರಮಗಳ ಮೊತ್ತವಾಗಿದೆ ಈ ಸಂಘ. 11-11-2025ರಂದು ನಡೆದ ಈ ಸಂಘದ  ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ನನಗೆ ಒದಗಿ […]

ಕನ್ನಡ ಅಧ್ಯಾಪಕರು ಮಾತಾಡಬೇಕಾಗಿರುವ ಗರಿಷ್ಠ ಕನ್ನಡ!

ಕನ್ನಡ ಭಾಷೆಯನ್ನು ಉಳಿಸುವ, ಬೆಳೆಸುವ ಕಾರ್ಯದಲ್ಲಿ ಬಹು ಮುಖ್ಯವಾದ ಭಾಗವೆಂದರೆ ಅದನ್ನು ಬಳಸುವುದು‌. ಈ‌ ಹೇಳಿಕೆಯು ಕೇಳಲು ಬಹಳ ಸರಳ ಅನ್ನಿಸಿದರೂ, ನಮ್ಮ ನಗರಗಳ ವಾಸ್ತವಿಕ ಸನ್ನಿವೇಶಗಳಿಂದಾಗಿ ಇದನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯ ಇದೆ. ಔದ್ಯೋಗಿಕ ವಲಸೆಗಳಿಂದ ನಗರಗಳಲ್ಲಿ ಕನ್ನಡೇತರರ ಸಂಖ್ಯೆ ಹೆಚ್ಚಾಗಿರುವುದು, ಇನ್ನೂ ಹೆಚ್ಚುತ್ತಿರುವುದು ಒಂದೆಡೆಯಾದರೆ, ಆಂಗ್ಲ ಮಾಧ್ಯಮದ ಶಿಕ್ಷಣದಿಂದ ಹಾಗೂ ‘ಇಂಗ್ಲಿಷ್ ಭಾಷೆಯನ್ನು ಬಳಸುವುದು ಸಾಮಾಜಿಕ, ಆರ್ಥಿಕ ನೆಲೆಯಲ್ಲಿನ ಪ್ರತಿಷ್ಠೆ’ ಎಂಬ ಭಾವನೆಯು ನಮ್ಮ ಜನಮಾನಸದಲ್ಲಿ ಬೇರೂರಿರುವುದರಿಂದ, ಕನ್ನಡದ ಬಳಕೆಯು ನಮ್ಮ ನಗರಗಳ ಯುವಪೀಳಿಗೆ […]

‘ಪೂಜೆ – ಪುನಸ್ಕಾರ’ ಈ ಜೋಡಿ ಪದದಲ್ಲಿ ಪುನಸ್ಕಾರ ಪದದ ಅರ್ಥವೇನು?

“ಓಹ್….ನಮ್ಮ ಅತ್ತೆ ಮನೆಯಲ್ಲಿ ಪೂಜೆ ಪುನಸ್ಕಾರ ಹೆಚ್ಚು”, ” ನಾನು ಬೆಳಿಗ್ಗೆ ಪೂಜೆ ಪುನಸ್ಕಾರ ಮುಗಿಸೋ ಹೊತ್ತಿಗೆ ಬೆಳಿಗ್ಗೆ ಹನ್ನೊಂದು ಗಂಟೆ ಆಗುತ್ತೆ”, “ಆಚಾರವಂತ್ರಪ್ಪಾ. ಪೂಜೆ ಪುನಸ್ಕಾರ ಮುಗಿಸ್ದೆ ಬರ್ತಾರಾ!” – ಇಂತಹ ಮಾತುಗಳನ್ನು ನಾವು ಆಗಾಗ ಕೇಳುತ್ತಿರುತ್ತೇವಲ್ಲ? ನಾನು ಈ ಪುನಸ್ಕಾರ ಎಂಬ‌ ಪದ ಕೇಳಿದಾಗಲೆಲ್ಲ ಏನು ಈ‌ ಪದದ ಅರ್ಥ ಎಂದು ಯೋಚಿಸುತ್ತಿದ್ದೆ. ಒಂದಷ್ಟು ಪರಾಮರ್ಶನ ಮಾಡಿ, ಗೂಗಲಿಸಿ, ಭಾಷಾಪ್ರಿಯರ ಜೊತೆಗೆ ಚರ್ಚಿಸಿ, ಕೊನೆಗೆ ನನಗೆ ಪರಿಚಯವಿರುವ ಸಂಸ್ಕೃತ ಪಂಡಿತರಾದ ಡಾ.ಹಯವದನ ಎಂಬವರ ಬಳಿ […]

“ಅಯ್ಯೋ… ತಾಜಾ ಅನ್ನೋ ಹೆಸರಿನ್ ತಿಂಡಿ ಇಲ್ಲ‌ ಮೇಡಂ”

ಮೊನ್ನೆ ಬ್ರೆಡ್ಡು, ಸಾದಾ ಕೇಕುಗಳನ್ನು ಕೊಳ್ಳಲು ಒಂದು ಬೇಕರಿಗೆ ಹೋಗಿದ್ದೆ. ನಮ್ಮ ಹಂಪಿನಗರದಲ್ಲಿರುವ ಒಂದು ‘ಹಾಸನ ಅಯ್ಯಂಗಾರ್’ ಬೇಕರಿ ಅದು. ನನಗೆ ಆ ತಿನಿಸುಗಳನ್ನು ಕೊಟ್ಟ  ಹುಡುಗನನ್ನು “ಏನಪ್ಪಾ, ಇವು ತಾಜಾ ಇದಾವಾ?” ಎಂದು ಕೇಳಿದೆ. ಅವನಿಗೆ ತುಂಬ ಗಾಬರಿಯಾಯಿತು! “ಅಯ್ಯೋ. ತಾಜಾ ಅನ್ನೋ ಹೆಸರಿನ್ ತಿಂಡಿ ಇಲ್ಲ ಮೇಡಂ” ಎಂದು ಆತಂಕದಿಂದ ಹೇಳಿದ. ಸಾಮಾನ್ಯವಾಗಿ ಜನ ‘ಫ್ರೆಷ್’ ಅನ್ನುವ ಪದ ಬಳಸ್ತಾರಲ್ಲ, ಅದರ ಬದಲು ನಾನು ‘ತಾಜಾ’ ಎಂಬ ಪದ ಬಳಸಿದ್ದು ಅವನಿಗೆ ಹೀಗೆ ಗಾಬರಿ […]

Page 1 of 17

Kannada Sethu. All rights reserved.