ಕನ್ನಡ ಪ್ರಸಂಗ

ಇದು ಲೇಖಕಿಯು ಕನ್ನಡದೊಂದಿಗೆ ಒಡನಾಡಿದ ಅನುಭವಗಳ ಕಥನವಾಗಿದೆ. ಕನ್ನಡ ಜಗತ್ತು ತನಗೆ ಕಲಿಸಿದ ಹಾಗೂ ಕನ್ನಡ ಭಾಷೆ ಹಾಗೂ ಸಾಹಿತ್ಯಗಳನ್ನು ತಾನು ಕಲಿಸಿದ ದಾರಿಯಲ್ಲಿನ ವಿವಿಧ ಅನುಭವಗಳನ್ನು ಓದುಗರೊಂದಿಗೆ ಹಂಚಿಕೊಳ್ಳುವ ಪ್ರಯತ್ನವಾಗಿರುತ್ತದೆ ಇದು. ವಾರಕ್ಕೆ ಒಂದು ಕನ್ನಡ ಪ್ರಸಂಗದಂತೆ ಈ ಅಂಕಣವು ಮೂಡಿ ಬರಲಿದೆ.

ಅಡಿಗರ ಹುಟ್ಟುಹಬ್ಬದ ದಿನ ಅವರ ಶಬ್ದ ಪ್ರೀತಿಯ ನೆನಪು

ಇಂದು ಫೆಬ್ರವರಿ 18. ಕವಿ ಅಡಿಗರ ಜನ್ಮ ದಿನ( ಜನನ – 18-02-2018). ಅಡಿಗರು ಅಂದರೆ ನಮ್ಮ ನವ್ಯ ಸಾಹಿತ್ಯದ ಪ್ರವರ್ತಕರಲ್ಲಿ ಮುಖ್ಯರಾದ ಮೊಗೇರಿ ಗೋಪಾಲಕೃಷ್ಣ ಅಡಿಗರು. ಇವರು ಕನ್ನಡ, ಇಂಗ್ಲಿಷ್ ಹಾಗೂ ಸಂಸ್ಕೃತ ಭಾಷೆಗಳನ್ನು ಕರಗತ ಮಾಡಿಕೊಂಡಿದ್ದವರು‌. ಅವರ ಕವಿತೆಗಳೆಂದರೆ ಅಪರೂಪದ ಶಬ್ಧಗಳ ಖಜಾನೆಯೇ ಸರಿ. ಒಂದು ಉದಾಹರಣೆ ಕೊಡುವುದಾದರೆ, ಅವರ ಕವಿತೆಯೊಂದರಲ್ಲಿ ‘ಷಾಪಸಂದ್’ ಎಂಬ ಪದ ಬರುತ್ತದೆ. ಹಿಂದೊಮ್ಮೆ ಜ್ಞಾನಭಾರತಿಯಲ್ಲಿ ಕನ್ನಡ ಎಂಎ ವಿದ್ಯಾರ್ಥಿಗಳಿಗೆ ನಾನು ಆ ಕವಿತೆಯನ್ನು ಪಾಠ ಮಾಡಬೇಕಾಗಿದ್ದುದರಿಂದ,  ‘ಷಾಪಸಂದ್’ ಪದದ ಅರ್ಥ […]

“ಲೇಖನ ಚಿಹ್ನೆಗಳು ಅಂದ್ರೆ ಏನೇ?”

ಕನ್ನಡ ಅಧ್ಯಾಪಕರಿಗೆ ತರಗತಿಗಳಲ್ಲಿ ಒಮ್ಮೊಮ್ಮೆ ಬಹು ಸ್ವಾರಸ್ಯಕರ ಅನುಭವಗಳಾಗುತ್ತವೆ‌. ಈಚೆಗೆ ಬಿ.ಸಿ.ಎ. ತರಗತಿಯೊಂದರಲ್ಲಿ ಕನ್ನಡ ವಿಷಯದ ಪಾಠ ಮಾಡುತ್ತಿದ್ದಾಗ ವಿದ್ಯಾರ್ಥಿನಿಯರಿಗೆ ಪಾಠಕ್ಕೆ ಸಂಬಂಧ ಪಟ್ಟ ವಿಷಯವೊಂದನ್ನು ಬರೆಸುತ್ತಿದ್ದೆ‌. ನನ್ನ ಅನುಭವದಲ್ಲಿ, ಲೇಖನ ಚಿಹ್ನೆಗಳಿಗೆ ವಿದ್ಯಾರ್ಥಿಗಳು ಕೊಡಬೇಕಾದಷ್ಟು ಗಮನ ಕೊಡುವುದಿಲ್ಲ. ಹಾಗಾಗಿ ಅಂದು ಬರೆಸುತ್ತಿದ್ದಾಗ “ನೋಡಿ ಮಕ್ಳೇ, ಲೇಖನ ಚಿಹ್ನೆಗಳನ್ನು ಸರಿಯಾಗಿ ಹಾಕ್ಬೇಕು ನೀವು. ದಾರದಲ್ಲಿ ಮಣಿಗಳನ್ನು ಪೋಣಿಸಿ ಕೊನೆಯಲ್ಲಿ ಗಂಟು ಹಾಕೋದು ಎಷ್ಟು ಮುಖ್ಯಾನೋ, ವಾಕ್ಯದಲ್ಲಿ ಲೇಖನ ಚಿಹ್ನೆಗಳನ್ನು ಹಾಕೋದು ಅಷ್ಟೇ ಮುಖ್ಯ. ಗಂಟು ಹಾಕದ ಮಣಿಸರದಿಂದ […]

ಪಂದಿಕರಿ, ಕೂಟುಕರಿ, ಕಡಲ ಕರಿ, ವೆಜಿಟೆಬಲ್ ಕರಿ, ಉಪ್ಕರಿ…ಅರೆರೆ ಈ ‘ಕರಿ’ ಎಲ್ಲಿಂದ ಬಂತ್ರಿ!?

ಕೊಡಗಿನ ಜನ ಪಂದಿಕರಿ‌ ಎಂಬ ಪದ ಬಳಸುವುದನ್ನು ನಾವು ಕೇಳುತ್ತೇವೆ ಅಲ್ವಾ? ಕೊಡವ ಭಾಷೆಯಲ್ಲಿ ಮಲಯಾಳಂ ಪದಗಳೂ ಇರ್ತವೆ. ಮಲಯಾಳಿಗಳು ಸಾರಿಗೆ/ಪಲ್ಯಕ್ಕೆ ಕರಿ ಎಂಬ ಪದವನ್ನು ಕೆಲವೊಮ್ಮೆ ಬಳಸ್ತಾರೆ. ಕಡಲ ಕರಿ, ಕೂಟುಕರಿ..ಹೀಗೆ. ಇನ್ನು ನಾವು ದರ್ಶಿನಿ ಹೋಟೆಲ್ ಗೆ ಹೋದರೆ ‘ರೋಟಿ-ಕರಿ’ ಎಂಬ ಪದ ಬಳಸುತ್ತೇವೆ‌.‌ ಅಂದ ಹಾಗೆ, ದಕ್ಷಿಣ  ಕನ್ನಡದ ಪ್ರದೇಶದಲ್ಲಿ ಉಪ್ಕರಿ ಎಂಬ ಪದ ಬಳಸ್ತಾರೆ. ಉಡುಪಿ ಕುಂದಾಪುರ ಶೈಲಿಯ ಅಡುಗೆಯಲ್ಲಿ ಅವಲಕ್ಕಿ ಉಪ್ಕರಿ ಬಹು ಪ್ರಸಿದ್ಧ. ತಾಜಾ ತೆಂಗಿನತುರಿಗೆ ಹಸಿಮೆಣಸು, ಒಗ್ಗರಣೆ,  […]

‘ಸಿಮ್’ ಗೆ ಕನ್ನಡ ಪದ ಯಾವುದು?

ಸಂಚಾರಿ ದೂರವಾಣಿಯನ್ನು ಬಳಸದೆ ಇರುವವರು ತೀರಾ ಅಪರೂಪ ಎನ್ನುವ ಕಾಲ ಇದು. ‌ಈ ದೂರವಾಣಿಯ ಮಾತು ಬಂದಾಗಲೆಲ್ಲ ನಾವು ಬಳಸುವ ಒಂದು ಪದ ಅಂದರೆ ಸಿಮ್. “ನಿಮ್ಮ‌ ಸಿಮ್ ಯಾವುದು? ಏರ್ಟೆಲ್ಲಾ, ಜಿಯೋನಾ, ಬಿಎಸ್ಎನ್ನೆಲ್ಲಾ?” “ಫೋನು ಕಳ್ದು ಹೋಯ್ತಾ? ಬಿಡಿ, ಕಳ್ಳ ಬೇರೆ ಸಿಮ್ ಹಾಕಿರ್ತಾನೆ” “ನಂಗೆ ಇದೇ ನಂಬರ್ ಗೆ ಬೇರೆ ಸಿಮ್ ಸಿಗುತ್ತಾ?” “ನಿಮ್ಮ ಫೋನ್ ನಲ್ಲಿ ಒಂದು ಸಿಮ್ ಇದೆಯಾ? ಎರಡಾ?” ……. ಹೀಗೆ ನಾವು ಈ ಸಿಮ್ ಪದವನ್ನು ಬಳಸುತ್ತಲೇ ಇರುತ್ತೇವೆ. […]

ಮೆಂದು ವಡಾ!!?? ಅಲ್ಲ…ಅಯ್ಯಯ್ಯೋ…ಅದು ಮೆದು‌ವಡಾ!

 ಈಚೆಗೆ ನನಗೊಮ್ಮೆ ಮುಂಬೈಯಿಂದ ಗೋವಾಗೆ ಕೊಂಕಣ ರೈಲುಮಾರ್ಗದಲ್ಲಿ ಹೋಗುವ ‘ಮಾಂಡೊವಿ ಎಕ್ಸ್ ಪ್ರೆಸ್’ ಎಂಬ ಹೆಸರಿನ ರೈಲಿನಲ್ಲಿ ಪ್ರಯಾಣ ಮಾಡುವ ಅವಕಾಶ ಒದಗಿತ್ತು. ಬೆಟ್ಟಗಳು, ನದಿಗಳು, ಹಸಿರಾದ ಕಣಿವೆಗಳು, ಎತ್ತರದ ಸೇತುವೆಗಳು ಹಾಗೂ ಅನೇಕ ಸುರಂಗಗಳಿಂದ ಕೂಡಿದ ನಯನ ಮನೋಹರ ರೈಲು ಮಾರ್ಗ ಅದು‌. ಈ ಕಾರಣದಿಂದಾಗಿ ಹಗಲಿನಲ್ಲಿ ಈ ರೈಲಿನಲ್ಲಿ ಪಯಣಿಸುವುದು ಒಂದು ಸಂತಸದ ವಿಷಯ. ಇದರ ಜೊತೆಗೆ ಇನ್ನೊಂದು ಉಲ್ಲಾಸಕರ ವಿಷಯವೆಂದರೆ ಈ ರೈಲಿನಲ್ಲಿ ಬಗೆಬಗೆಯ ಬಹು ರುಚಿಕರವಾದ ತಾಜಾ ತಿಂಡಿಗಳು ಕೈಗೆಟಕುವ ಬೆಲೆಯಲ್ಲಿ […]

“ಏನ್ ಮೇಡಂ! ಇಷ್ಟೊಂದ್ ಕನ್ನಡ ಮಾತಾಡ್ತೀರಲ್ಲ!”

ಕನ್ನಡ ಅಧ್ಯಾಪಕಿಯಾದ ನನ್ನ ವೃತ್ತಿಜೀವನದಲ್ಲಿ ಒಮ್ಮೊಮ್ಮೆ ಕನ್ನಡ ಭಾಷೆಯ ಕಾರಣದಿಂದಲೇ ಕೆಲವು ಅಚ್ಚರಿಯ ಸಂಗತಿಗಳು ಜರುಗ್ತವೆ‌. ಇದೋ ಇಲ್ಲಿದೆ ಅಂತಹ ಒಂದು ಪ್ರಸಂಗ. ಈಚೆಗೆ ನಾನು ನಮ್ಮ ವಿಶ್ವವಿದ್ಯಾಲಯದ ಉತ್ತರಪತ್ರಿಕೆಗಳ ಸಂರಕ್ಷಣ ಘಟಕದಲ್ಲಿ ಕೆಲಸ ಮಾಡ್ತಿದ್ದೆ. ಎಲ್ಲ ಅಧ್ಯಾಪಕರೂ ಮೌಲ್ಯಮಾಪನ ಮಾಡಲು ಆ ಘಟಕಕ್ಕೆ ಬಂದು ಉತ್ತರಪತ್ರಿಕೆಗಳನ್ನು ಘಟಕದಿಂದ ತೆಗೆದುಕೊಳ್ಳೋದು, ಮೌಲ್ಯಮಾಪನ ಮಾಡಿ ಮರಳಿಸೋದು – ಇವನ್ನ ಮಾಡ್ತಾ ಇರ್ತಾರೆ. ಈ ಘಟಕಕ್ಕೆ ನಿರ್ಬಂಧಿತ ಪ್ರವೇಶ ಇರುತ್ತೆ‌.‌ ಹಾಗಾಗಿ ಬಾಗಿಲಿಗೆ ಒಂದು ಭಾರವಾದ ಮೇಜನ್ನೋ, ಇಳಿಮೇಜನ್ನೋ ( […]

 “ಅಮ್ಮಾ, ಅದು ಕೊರೆಮೊಗ್ಗು”!

ಅಚ್ಚಗನ್ನಡದ ಗ್ರಾಮೀಣ ಪದವೊಂದು ನನಗೆ ಪರಿಚಯವಾದದ್ದರ ಕುರಿತಾಗಿದೆ ಈ ವಾರದ ಕನ್ನಡ ಪ್ರಸಂಗ. ನನಗೆ ಮಲ್ಲಿಗೆ, ಸಂಪಿಗೆ, ಜಾಜಿಯಂತಹ ಪರಿಮಳಭರಿತ ಹೂಗಳೆಂದರೆ ಬಹಳ ಇಷ್ಟ.  ಬೇರೆಯವರು ಮುಡಿದದ್ದನ್ನು ನೋಡಿ ಸಂತೋಷ ಪಡುವುದು, ಹೂವಿನ ಮಾರುಕಟ್ಟೆಯಲ್ಲಿ ಈ ಹೂಗಳನ್ನು/ಹೂ ಮಾಲೆಗಳನ್ನು ಓರಣವಾಗಿ ಜೋಡಿಸಿರುವುದನ್ನು ನೋಡಿ ಆನಂದಿಸುವುದು , ನಾನು ಕೂಡ ಅವುಗಳನ್ನು ಹೆರಳಲ್ಲಿ ಮುಡಿದು ಸಂಭ್ರಮಿಸುವುದು ಇವನ್ನೆಲ್ಲ ಮಾಡುತ್ತಿರುತ್ತೇನೆ. ಬೆಂಗಳೂರಿನಲ್ಲಿ ಈಗ ಚಳಿಗಾಲ ಅಲ್ಲವೆ? ಹೀಗಾಗಿ ಮಲ್ಲಿಗೆ ಹೂವು ಹೆಚ್ಚಾಗಿ ಮಾರುಕಟ್ಟೆಗೆ ಬಾರದೆ ಇರುವುದರಿಂದಾಗಿ ಅದರ ಬೆಲೆ ಜಾಸ್ತಿ. […]

ಮತ್ತೊಮ್ಮೆ ಮೂಡಬೇಕಿದೆ ಅನಕೃ ಪ್ರಜ್ಞೆ,ಕನ್ನಡ ನಾಡಿನಲ್ಲಿ

‘ಕನ್ನಡದ ಕಾದಂಬರಿ ಸಾರ್ವಭೌಮ’ ಎಂಬ ಹೆಗ್ಗಳಿಕೆಯನ್ನು ಗಳಿಸಿದ ಶ್ರೀಯುತ ಅರಕಲಗೂಡು ನರಸಿಂಗರಾವ್ ಕೃಷ್ಣ ರಾವ್ (ಅನಕೃ : 1908 – 1971 ) ಅವರು ಅಪ್ಪಟ ಕನ್ನಡಾಭಿಮಾನಿ.‌ ಕರ್ನಾಟಕ    ಏಕೀಕರಣಕ್ಕಾಗಿ ದುಡಿದದ್ದು ಮಾತ್ರವಲ್ಲ, ವಿವಿಧ ಕಾರಣಗಳಿಂದ ಕನ್ನಡಕ್ಕೆ ನಮ್ಮ ನಾಡಿನ ಕೆಲವು ಪ್ರದೇಶಗಳಲ್ಲಿ ಮನ್ನಣೆ ಇರದಿದ್ದ ಸಂದರ್ಭದಲ್ಲಿ, ತಮ್ಮಂತೆಯೇ ಕನ್ನಡಪರರಾದ ಅಭಿಮಾನಿಗಳನ್ನು ಜೊತೆಗೆ ಕಟ್ಟಿಕೊಂಡು, ಕನ್ನಡ ನಾಡಿನ ಉದ್ದಗಲಕ್ಕೂ ಓಡಾಡಿ, ಕನ್ನಡದ ಜಯಘಂಟೆಯನ್ನು ಬಾರಿಸಿದವರು ಈ ಮಹನೀಯರು. ಕನ್ನಡವನ್ನು ಉಳಿಸಿ ಬೆಳೆಸುವುದಕ್ಕಾಗಿ ಅವರು ಕನ್ನಡಿಗರಿಗೆ ನಾಲ್ಕು […]

ಕನ್ನಡ ಪದಗಳ ಲೋಕದಲ್ಲಿ ಇನ್ನೊಂದು ಸುತ್ತು….’ಇಂಡೆಂಟ್’ ಗೆ ಕನ್ನಡ ಪದ ಹುಡುಕಿದ್ದು.

ನಮ್ಮ ವಿಶ್ವವಿದ್ಯಾಲಯ ( ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ) ಅಥವಾ ಯಾವುದೇ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಪದವಿ/ಸ್ನಾತಕೋತ್ತರ ಪದವಿ ಪರೀಕ್ಷೆಗಳ ಸಮಯದಲ್ಲಿ, ವಿವಿಧ ಅಧ್ಯಯನ ವಿಭಾಗಗಳಿಂದ ಪಡೆಯಲಾಗುವ ಬಹಳ ಮುಖ್ಯವಾದ ಒಂದು ಮಾಹಿತಿ ಅಂದರೆ  “ನಿಮ್ಮ ವಿಭಾಗಕ್ಕೆ ಎಷ್ಟು ಪ್ರಶ್ನೆಪತ್ರಿಕೆಗಳ ಅಗತ್ಯ ಇದೆ?” ಎಂಬುದು‌. ಇದನ್ನು ಇಂಗ್ಲಿಷ್ ನಲ್ಲಿ indent ಎನ್ನುತ್ತಾರೆ. ಈ ‘ಇಂಡೆಂಟ್’ ಎಂಬ ಪದವನ್ನು ಸಾಮಾನ್ಯವಾಗಿ ಹಾಗೆಯೇ ಬಳಸಿಬಿಡುತ್ತಾರೆ, ಇದಕ್ಕೆ  ಕನ್ನಡ ಪದವನ್ನು ಬಳಸಲೇಬೇಕೆಂಬ ತುಡಿತ ಕಛೇರಿಗಳಲ್ಲಿ ಕಾಣುವುದಿಲ್ಲ. ನನ್ನ ಮನಸ್ಸಿಗೋ ಯಾವುದಾದರೊಂದು ಸಾಮಾನ್ಯ ಬಳಕೆಯ ಇಂಗ್ಲಿಷ್ […]

ಬೋಂಬೆ ಮಿಠಾಯಿ, ಬೊಂಬಾಯ್ ಬೋಂಡ, ಬೋಂಬೆ ರವೆ, ಬೋಂಬೆ ಬಝಾರ್, ಬಾಯಿ ಬೊಂಬಾಯಿ ……….. ಕನ್ನಡಿಗರ  ‘ಬೋಂಬೆ’ ಪೂರ್ವಪದವನ್ನು ಕುರಿತ ಪ್ರೀತಿ

ನಾನು ಈ ಬರಹದ ಶೀರ್ಷಿಕೆಯಲ್ಲಿ ಬಳಸಿರುವ ಪದಗಳನ್ನು ಕನ್ನಡ ನಾಡಿನಲ್ಲಿ ಬಹಳ ಸಲ ಕೇಳುತ್ತೇವೆ, ಅಲ್ಲವೆ? ಬೋಂಬೆ ಹಲ್ವಾ, ಬೋಂಬೆ ರವಾ, ಬೋಂಬೆ ಮಿಠಾಯಿ, ಬೋಂಬೆ ಟಾಕೀಸ್,  ಬೊಂಬಾಯ್ ಮಾಮ……ಕನ್ನಡ ಭಾಷೆಯಲ್ಲಿ ಎಷ್ಟೆಲ್ಲ ಪದಗಳು ಈ ಬೋಂಬೆ ಪದದಿಂದ ಪ್ರಾರಂಭವಾಗುತ್ತವೆ ಎಂದರೆ ಅಚ್ಚರಿಯಾಗುತ್ತದೆ! ಇದಕ್ಕೆ ಕಾರಣ ಏನಿರಬಹುದು ಎಂದು ಒಂದಿಷ್ಟು ವಿಚಾರಿಸಿ, ಓದಿ ನೋಡಿದಾಗ ಈ ಕೆಳಗಿನ ಅಂಶಗಳು ತಿಳಿದು ಬಂದವು.  1.ಕನ್ನಡ ನಾಡಿನ ಏಕೀಕರಣಕ್ಕೆ ಮುಂಚೆ ಧಾರವಾಡ, ಬೆಳಗಾವಿ, ಬಿಜಾಪುರ ಮೊದಲಾದ ಪ್ರದೇಶಗಳು ಬ್ರಿಟಿಷ್ ಭಾರತದ ಬೋಂಬೆ […]

Page 1 of 18

Kannada Sethu. All rights reserved.