ಕನ್ನಡ ಪ್ರಸಂಗ

ಇದು ಲೇಖಕಿಯು ಕನ್ನಡದೊಂದಿಗೆ ಒಡನಾಡಿದ ಅನುಭವಗಳ ಕಥನವಾಗಿದೆ. ಕನ್ನಡ ಜಗತ್ತು ತನಗೆ ಕಲಿಸಿದ ಹಾಗೂ ಕನ್ನಡ ಭಾಷೆ ಹಾಗೂ ಸಾಹಿತ್ಯಗಳನ್ನು ತಾನು ಕಲಿಸಿದ ದಾರಿಯಲ್ಲಿನ ವಿವಿಧ ಅನುಭವಗಳನ್ನು ಓದುಗರೊಂದಿಗೆ ಹಂಚಿಕೊಳ್ಳುವ ಪ್ರಯತ್ನವಾಗಿರುತ್ತದೆ ಇದು. ವಾರಕ್ಕೆ ಒಂದು ಕನ್ನಡ ಪ್ರಸಂಗದಂತೆ ಈ ಅಂಕಣವು ಮೂಡಿ ಬರಲಿದೆ.

‘ಸಿಮ್’ ಗೆ ಕನ್ನಡ ಪದ ಯಾವುದು?

ಸಂಚಾರಿ ದೂರವಾಣಿಯನ್ನು ಬಳಸದೆ ಇರುವವರು ತೀರಾ ಅಪರೂಪ ಎನ್ನುವ ಕಾಲ ಇದು. ‌ಈ ದೂರವಾಣಿಯ ಮಾತು ಬಂದಾಗಲೆಲ್ಲ ನಾವು ಬಳಸುವ ಒಂದು ಪದ ಅಂದರೆ ಸಿಮ್. “ನಿಮ್ಮ‌ ಸಿಮ್ ಯಾವುದು? ಏರ್ಟೆಲ್ಲಾ, ಜಿಯೋನಾ, ಬಿಎಸ್ಎನ್ನೆಲ್ಲಾ?” “ಫೋನು ಕಳ್ದು ಹೋಯ್ತಾ? ಬಿಡಿ, ಕಳ್ಳ ಬೇರೆ ಸಿಮ್ ಹಾಕಿರ್ತಾನೆ” “ನಂಗೆ ಇದೇ ನಂಬರ್ ಗೆ ಬೇರೆ ಸಿಮ್ ಸಿಗುತ್ತಾ?” “ನಿಮ್ಮ ಫೋನ್ ನಲ್ಲಿ ಒಂದು ಸಿಮ್ ಇದೆಯಾ? ಎರಡಾ?” ……. ಹೀಗೆ ನಾವು ಈ ಸಿಮ್ ಪದವನ್ನು ಬಳಸುತ್ತಲೇ ಇರುತ್ತೇವೆ. […]

ಮೆಂದು ವಡಾ!!?? ಅಲ್ಲ…ಅಯ್ಯಯ್ಯೋ…ಅದು ಮೆದು‌ವಡಾ!

 ಈಚೆಗೆ ನನಗೊಮ್ಮೆ ಮುಂಬೈಯಿಂದ ಗೋವಾಗೆ ಕೊಂಕಣ ರೈಲುಮಾರ್ಗದಲ್ಲಿ ಹೋಗುವ ‘ಮಾಂಡೊವಿ ಎಕ್ಸ್ ಪ್ರೆಸ್’ ಎಂಬ ಹೆಸರಿನ ರೈಲಿನಲ್ಲಿ ಪ್ರಯಾಣ ಮಾಡುವ ಅವಕಾಶ ಒದಗಿತ್ತು. ಬೆಟ್ಟಗಳು, ನದಿಗಳು, ಹಸಿರಾದ ಕಣಿವೆಗಳು, ಎತ್ತರದ ಸೇತುವೆಗಳು ಹಾಗೂ ಅನೇಕ ಸುರಂಗಗಳಿಂದ ಕೂಡಿದ ನಯನ ಮನೋಹರ ರೈಲು ಮಾರ್ಗ ಅದು‌. ಈ ಕಾರಣದಿಂದಾಗಿ ಹಗಲಿನಲ್ಲಿ ಈ ರೈಲಿನಲ್ಲಿ ಪಯಣಿಸುವುದು ಒಂದು ಸಂತಸದ ವಿಷಯ. ಇದರ ಜೊತೆಗೆ ಇನ್ನೊಂದು ಉಲ್ಲಾಸಕರ ವಿಷಯವೆಂದರೆ ಈ ರೈಲಿನಲ್ಲಿ ಬಗೆಬಗೆಯ ಬಹು ರುಚಿಕರವಾದ ತಾಜಾ ತಿಂಡಿಗಳು ಕೈಗೆಟಕುವ ಬೆಲೆಯಲ್ಲಿ […]

“ಏನ್ ಮೇಡಂ! ಇಷ್ಟೊಂದ್ ಕನ್ನಡ ಮಾತಾಡ್ತೀರಲ್ಲ!”

ಕನ್ನಡ ಅಧ್ಯಾಪಕಿಯಾದ ನನ್ನ ವೃತ್ತಿಜೀವನದಲ್ಲಿ ಒಮ್ಮೊಮ್ಮೆ ಕನ್ನಡ ಭಾಷೆಯ ಕಾರಣದಿಂದಲೇ ಕೆಲವು ಅಚ್ಚರಿಯ ಸಂಗತಿಗಳು ಜರುಗ್ತವೆ‌. ಇದೋ ಇಲ್ಲಿದೆ ಅಂತಹ ಒಂದು ಪ್ರಸಂಗ. ಈಚೆಗೆ ನಾನು ನಮ್ಮ ವಿಶ್ವವಿದ್ಯಾಲಯದ ಉತ್ತರಪತ್ರಿಕೆಗಳ ಸಂರಕ್ಷಣ ಘಟಕದಲ್ಲಿ ಕೆಲಸ ಮಾಡ್ತಿದ್ದೆ. ಎಲ್ಲ ಅಧ್ಯಾಪಕರೂ ಮೌಲ್ಯಮಾಪನ ಮಾಡಲು ಆ ಘಟಕಕ್ಕೆ ಬಂದು ಉತ್ತರಪತ್ರಿಕೆಗಳನ್ನು ಘಟಕದಿಂದ ತೆಗೆದುಕೊಳ್ಳೋದು, ಮೌಲ್ಯಮಾಪನ ಮಾಡಿ ಮರಳಿಸೋದು – ಇವನ್ನ ಮಾಡ್ತಾ ಇರ್ತಾರೆ. ಈ ಘಟಕಕ್ಕೆ ನಿರ್ಬಂಧಿತ ಪ್ರವೇಶ ಇರುತ್ತೆ‌.‌ ಹಾಗಾಗಿ ಬಾಗಿಲಿಗೆ ಒಂದು ಭಾರವಾದ ಮೇಜನ್ನೋ, ಇಳಿಮೇಜನ್ನೋ ( […]

 “ಅಮ್ಮಾ, ಅದು ಕೊರೆಮೊಗ್ಗು”!

ಅಚ್ಚಗನ್ನಡದ ಗ್ರಾಮೀಣ ಪದವೊಂದು ನನಗೆ ಪರಿಚಯವಾದದ್ದರ ಕುರಿತಾಗಿದೆ ಈ ವಾರದ ಕನ್ನಡ ಪ್ರಸಂಗ. ನನಗೆ ಮಲ್ಲಿಗೆ, ಸಂಪಿಗೆ, ಜಾಜಿಯಂತಹ ಪರಿಮಳಭರಿತ ಹೂಗಳೆಂದರೆ ಬಹಳ ಇಷ್ಟ.  ಬೇರೆಯವರು ಮುಡಿದದ್ದನ್ನು ನೋಡಿ ಸಂತೋಷ ಪಡುವುದು, ಹೂವಿನ ಮಾರುಕಟ್ಟೆಯಲ್ಲಿ ಈ ಹೂಗಳನ್ನು/ಹೂ ಮಾಲೆಗಳನ್ನು ಓರಣವಾಗಿ ಜೋಡಿಸಿರುವುದನ್ನು ನೋಡಿ ಆನಂದಿಸುವುದು , ನಾನು ಕೂಡ ಅವುಗಳನ್ನು ಹೆರಳಲ್ಲಿ ಮುಡಿದು ಸಂಭ್ರಮಿಸುವುದು ಇವನ್ನೆಲ್ಲ ಮಾಡುತ್ತಿರುತ್ತೇನೆ. ಬೆಂಗಳೂರಿನಲ್ಲಿ ಈಗ ಚಳಿಗಾಲ ಅಲ್ಲವೆ? ಹೀಗಾಗಿ ಮಲ್ಲಿಗೆ ಹೂವು ಹೆಚ್ಚಾಗಿ ಮಾರುಕಟ್ಟೆಗೆ ಬಾರದೆ ಇರುವುದರಿಂದಾಗಿ ಅದರ ಬೆಲೆ ಜಾಸ್ತಿ. […]

ಮತ್ತೊಮ್ಮೆ ಮೂಡಬೇಕಿದೆ ಅನಕೃ ಪ್ರಜ್ಞೆ,ಕನ್ನಡ ನಾಡಿನಲ್ಲಿ

‘ಕನ್ನಡದ ಕಾದಂಬರಿ ಸಾರ್ವಭೌಮ’ ಎಂಬ ಹೆಗ್ಗಳಿಕೆಯನ್ನು ಗಳಿಸಿದ ಶ್ರೀಯುತ ಅರಕಲಗೂಡು ನರಸಿಂಗರಾವ್ ಕೃಷ್ಣ ರಾವ್ (ಅನಕೃ : 1908 – 1971 ) ಅವರು ಅಪ್ಪಟ ಕನ್ನಡಾಭಿಮಾನಿ.‌ ಕರ್ನಾಟಕ    ಏಕೀಕರಣಕ್ಕಾಗಿ ದುಡಿದದ್ದು ಮಾತ್ರವಲ್ಲ, ವಿವಿಧ ಕಾರಣಗಳಿಂದ ಕನ್ನಡಕ್ಕೆ ನಮ್ಮ ನಾಡಿನ ಕೆಲವು ಪ್ರದೇಶಗಳಲ್ಲಿ ಮನ್ನಣೆ ಇರದಿದ್ದ ಸಂದರ್ಭದಲ್ಲಿ, ತಮ್ಮಂತೆಯೇ ಕನ್ನಡಪರರಾದ ಅಭಿಮಾನಿಗಳನ್ನು ಜೊತೆಗೆ ಕಟ್ಟಿಕೊಂಡು, ಕನ್ನಡ ನಾಡಿನ ಉದ್ದಗಲಕ್ಕೂ ಓಡಾಡಿ, ಕನ್ನಡದ ಜಯಘಂಟೆಯನ್ನು ಬಾರಿಸಿದವರು ಈ ಮಹನೀಯರು. ಕನ್ನಡವನ್ನು ಉಳಿಸಿ ಬೆಳೆಸುವುದಕ್ಕಾಗಿ ಅವರು ಕನ್ನಡಿಗರಿಗೆ ನಾಲ್ಕು […]

ಕನ್ನಡ ಪದಗಳ ಲೋಕದಲ್ಲಿ ಇನ್ನೊಂದು ಸುತ್ತು….’ಇಂಡೆಂಟ್’ ಗೆ ಕನ್ನಡ ಪದ ಹುಡುಕಿದ್ದು.

ನಮ್ಮ ವಿಶ್ವವಿದ್ಯಾಲಯ ( ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ) ಅಥವಾ ಯಾವುದೇ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಪದವಿ/ಸ್ನಾತಕೋತ್ತರ ಪದವಿ ಪರೀಕ್ಷೆಗಳ ಸಮಯದಲ್ಲಿ, ವಿವಿಧ ಅಧ್ಯಯನ ವಿಭಾಗಗಳಿಂದ ಪಡೆಯಲಾಗುವ ಬಹಳ ಮುಖ್ಯವಾದ ಒಂದು ಮಾಹಿತಿ ಅಂದರೆ  “ನಿಮ್ಮ ವಿಭಾಗಕ್ಕೆ ಎಷ್ಟು ಪ್ರಶ್ನೆಪತ್ರಿಕೆಗಳ ಅಗತ್ಯ ಇದೆ?” ಎಂಬುದು‌. ಇದನ್ನು ಇಂಗ್ಲಿಷ್ ನಲ್ಲಿ indent ಎನ್ನುತ್ತಾರೆ. ಈ ‘ಇಂಡೆಂಟ್’ ಎಂಬ ಪದವನ್ನು ಸಾಮಾನ್ಯವಾಗಿ ಹಾಗೆಯೇ ಬಳಸಿಬಿಡುತ್ತಾರೆ, ಇದಕ್ಕೆ  ಕನ್ನಡ ಪದವನ್ನು ಬಳಸಲೇಬೇಕೆಂಬ ತುಡಿತ ಕಛೇರಿಗಳಲ್ಲಿ ಕಾಣುವುದಿಲ್ಲ. ನನ್ನ ಮನಸ್ಸಿಗೋ ಯಾವುದಾದರೊಂದು ಸಾಮಾನ್ಯ ಬಳಕೆಯ ಇಂಗ್ಲಿಷ್ […]

ಬೋಂಬೆ ಮಿಠಾಯಿ, ಬೊಂಬಾಯ್ ಬೋಂಡ, ಬೋಂಬೆ ರವೆ, ಬೋಂಬೆ ಬಝಾರ್, ಬಾಯಿ ಬೊಂಬಾಯಿ ……….. ಕನ್ನಡಿಗರ  ‘ಬೋಂಬೆ’ ಪೂರ್ವಪದವನ್ನು ಕುರಿತ ಪ್ರೀತಿ

ನಾನು ಈ ಬರಹದ ಶೀರ್ಷಿಕೆಯಲ್ಲಿ ಬಳಸಿರುವ ಪದಗಳನ್ನು ಕನ್ನಡ ನಾಡಿನಲ್ಲಿ ಬಹಳ ಸಲ ಕೇಳುತ್ತೇವೆ, ಅಲ್ಲವೆ? ಬೋಂಬೆ ಹಲ್ವಾ, ಬೋಂಬೆ ರವಾ, ಬೋಂಬೆ ಮಿಠಾಯಿ, ಬೋಂಬೆ ಟಾಕೀಸ್,  ಬೊಂಬಾಯ್ ಮಾಮ……ಕನ್ನಡ ಭಾಷೆಯಲ್ಲಿ ಎಷ್ಟೆಲ್ಲ ಪದಗಳು ಈ ಬೋಂಬೆ ಪದದಿಂದ ಪ್ರಾರಂಭವಾಗುತ್ತವೆ ಎಂದರೆ ಅಚ್ಚರಿಯಾಗುತ್ತದೆ! ಇದಕ್ಕೆ ಕಾರಣ ಏನಿರಬಹುದು ಎಂದು ಒಂದಿಷ್ಟು ವಿಚಾರಿಸಿ, ಓದಿ ನೋಡಿದಾಗ ಈ ಕೆಳಗಿನ ಅಂಶಗಳು ತಿಳಿದು ಬಂದವು.  1.ಕನ್ನಡ ನಾಡಿನ ಏಕೀಕರಣಕ್ಕೆ ಮುಂಚೆ ಧಾರವಾಡ, ಬೆಳಗಾವಿ, ಬಿಜಾಪುರ ಮೊದಲಾದ ಪ್ರದೇಶಗಳು ಬ್ರಿಟಿಷ್ ಭಾರತದ ಬೋಂಬೆ […]

ಎಸ್ಕೆಲೇಟರ್ ಗೆ ಕನ್ನಡ ಪದ ಯಾವುದು?

ವಿಮಾನ ನಿಲ್ದಾಣ, ದೊಡ್ಡ ದೊಡ್ಡ  ವಾಣಿಜ್ಯ  , ಬೆಂಗಳೂರಿನ  ‘ನಮ್ಮ ಮೆಟ್ರೊ’ ರೈಲು ವ್ಯವಸ್ಥೆ ಇಲ್ಲೆಲ್ಲ ನಾವು, ತಾನೇ ಮೇಲಕ್ಕೆ ಕೆಳಕ್ಕೆ ಚಲಿಸುತ್ತಾ ಜನರ ಹತ್ತುವಿಕೆ, ಇಳಿಯುವಿಕೆಗಳನ್ನು ಸುಲಭ ಮಾಡುವ ‘ಎಸ್ಕೆಲೇಟರ್’ ಗಳನ್ನು ಬಳಸುತ್ತೇವಲ್ಲ? ಅದನ್ನು ನೋಡಿದಾಗೆಲ್ಲ ‘ಇದಕ್ಕೆ ಕನ್ನಡದಲ್ಲಿ ಏನಂತಾರೆ?’ ಅನ್ನುವ ಪ್ರಶ್ನೆಯು ನನ್ನ  ಮನಸ್ಸಿನಲ್ಲಿ ಏಳುತ್ತಿತ್ತು. ಈಚೆಗೆ, ನಮ್ಮ ಪರಿಚಿತರಾದ ‘ಲೈಟಿಂಗ್ ಕೃಷ್ಣಪ್ಪ’ ಎಂಬ ಬೆಳಕು ಕರ್ಮಿ ಒಂದು ಅನಿರೀಕ್ಷಿತ ಸಂದರ್ಭದಲ್ಲಿ ಇದಕ್ಕೆ  ಉತ್ತರ ಸಿಗಲು ನಿಮಿತ್ತವಾದರು. ಲೈಟಿಂಗ್ ಕೃಷ್ಣಪ್ಪ ನಮ್ಮ ನಾಟ್ಯ ಸಂಸ್ಥೆ […]

ಕನ್ನಡತನವನ್ನು  ಈ ಕಾಲದಲ್ಲಿ ಉಳಿಸಿ,  ಬೆಳೆಸುವುದು ಹೇಗೆ?

“ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು” ಎಂಬ, ಕುವೆಂಪು ಅವರ ಪ್ರಸಿದ್ಧ ಕವಿತೆಯಲ್ಲಿ “ಕನ್ನಡ ಗೋವಿನ ಓ ಮುದ್ದಿನ ಕರು, ಕನ್ನಡತನವೊಂದಿದ್ದರೆ ನೀ ಅಮ್ಮಗೆ ಕಲ್ಪತರು” ಎಂಬ ಒಂದು ಸಾಲು ಬರುತ್ತದೆ. ಈ ಮಾಹಿತಿ‌ ತಂತ್ರಜ್ಞಾನ ಯುಗದಲ್ಲಿ, ಗೂಗಲಪ್ಪ ಮತ್ತು ಯೂಟ್ಯೂಬಮ್ಮನ ಆಳ್ವಿಕೆಯಲ್ಲಿ ಕನ್ನಡತನವನ್ನು ಉಳಿಸಿಕೊಳ್ಳುವುದು ಹೇಗೆ ಎಂಬ ಸವಾಲು ಎದುರಾಗುತ್ತದೆ‌.  ಇದರಲ್ಲಿ ಎರಡು ವಿಷಯಗಳು ಬಹಳ ಮುಖ್ಯ ಅನ್ನಿಸುತ್ತವೆ.‌ ಒಂದು ಇಂದಿನ ಹೊಸ ಹೊಸ ‘ಜಾಣ ಉಪರಣಗಳಿಗೆ’ ಒಗ್ಗುವಂತೆ, ಸಲ್ಲುವಂತೆ ಕನ್ನಡವನ್ನು ಸಬಲಗೊಳಿಸುವುದು‌, ಮತ್ತು […]

ಶರಬತ್ತು ಎಂಬ ಪದದ ವಿಸ್ಮಯಕರ ಮೂಲ!

ಶರಬತ್ತು ಅಥವಾ ಸರಬತ್ತು ಎಂಬುದು ಕನ್ನಡ ಭಾಷೆಯಲ್ಲಿ ಸಾಮಾನ್ಯವಾಗಿ ಪಾನಕಕ್ಕೆ ಬಳಸುವ ಒಂದು ಪರ್ಯಾಯ ಪದ. ನಿಂಬೆ ಹಣ್ಣಿನ ಶರಬತ್ತು, ನೆಲ್ಲಿಕಾಯಿ  ಶರಬತ್ತು, ಸೊಗದೆ ಬೇರಿನ ಶರಬತ್ತು ……  ಹೀಗೆ ಒಮ್ಮೊಮ್ಮೆ ಬಳಸುತ್ತೇವಲ್ಲವೆ?   ಮೊನ್ನೆ ಹೀಗೇ ಏನೋ ಓದುತ್ತಿದ್ದಾಗ ಈ ಪದದ ಮೂಲದ ಬಗೆಗಿನ ಒಂದು ವಿಷಯ ಕಣ್ಣಿಗೆ ಬಿತ್ತು. ಆಧುನಿಕ ಐಸ್ಕ್ರೀಮ್ ಅಂಗಡಿಗಳ ಖಾದ್ಯ-ಪಾನೀಯ- ಪಟ್ಟಿಗಳಲ್ಲಿ ಸಾರ್ಬೆಟ್ (Sorbett)ಎಂಬ ಪದ ನೋಡುತ್ತೇವಲ್ಲ?  ಈ ಪದ ಅರೇಬಿಕ್ ನ ಶರ್ಬ (ಅರ್ಥ – ಕುಡಿಯುವುದು) ದಿಂದ ಟರ್ಕಿ […]

Page 2 of 19

Kannada Sethu. All rights reserved.