ಕನ್ನಡ ಪ್ರಸಂಗ

ಇದು ಲೇಖಕಿಯು ಕನ್ನಡದೊಂದಿಗೆ ಒಡನಾಡಿದ ಅನುಭವಗಳ ಕಥನವಾಗಿದೆ. ಕನ್ನಡ ಜಗತ್ತು ತನಗೆ ಕಲಿಸಿದ ಹಾಗೂ ಕನ್ನಡ ಭಾಷೆ ಹಾಗೂ ಸಾಹಿತ್ಯಗಳನ್ನು ತಾನು ಕಲಿಸಿದ ದಾರಿಯಲ್ಲಿನ ವಿವಿಧ ಅನುಭವಗಳನ್ನು ಓದುಗರೊಂದಿಗೆ ಹಂಚಿಕೊಳ್ಳುವ ಪ್ರಯತ್ನವಾಗಿರುತ್ತದೆ ಇದು. ವಾರಕ್ಕೆ ಒಂದು ಕನ್ನಡ ಪ್ರಸಂಗದಂತೆ ಈ ಅಂಕಣವು ಮೂಡಿ ಬರಲಿದೆ.

ಚಟ್ನಿಯ ಪ್ರಸಂಗ

ಚಟ್ನಿ. ಈ ಪದದ ಬಳಕೆ ಮಾಡದ ಕನ್ನಡಿಗರಾರು? ಇಡ್ಲಿ ಚಟ್ನಿ, ತೆಂಗಿನಕಾಯಿ ಚಟ್ನಿ, ಕೆಂಪು ಚಟ್ನಿ, ಪುದಿನಾ ಚಟ್ನಿ, ಶೇಂಗಾ ಚಟ್ನಿ, ಈರುಳ್ಳಿ ಚಟ್ನಿ… ಓಹ್…..ಅದೆಷ್ಟು ವೈವಿಧ್ಯ ಇದರಲ್ಲಿ! ವಿವಿಧ ತರಕಾರಿಗಳು, ಹಣ್ಣುಗಳು, ಒಣಹಣ್ಣುಗಳನ್ನು ಬಳಸಿ ಥರಾವರಿ ಚಟ್ನಿಗಳನ್ನು ಪ್ರಪಂಚದಾದ್ಯಂತ ಮಾಡುತ್ತಾರೆ.‌ಉತ್ತರ ಭಾರತೀಯ‌ರ ಚಾಟ್ ಅಂಗಡಿಗಳಲ್ಲಿ ಸಿಹಿ ಚಟ್ನಿ ಮಾಡುವಾಗ ಖರ್ಜೂರ ಹಾಕ್ತಾರಂತೆ! ಹೋಟೆಲ್ ಗಳಲ್ಲಿ ತಾವು ಇಡ್ಲಿಗೆ ‘ಅನ್ಲಿಮಿಟೆಡ್ ಚಟ್ನಿ’ ಕೊಡುತ್ತೇವೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಧಾರವಾಡದ ಕಡೆ ಚಟ್ನಿಪುಡಿಗೆ ಚಟ್ನಿ ಅಂತಾರೆ. ಮಂಗಳೂರಿನಲ್ಲಿ ತೆಳು […]

ಹೊಟ್ಟೆಪಾಡು ಚಾಟ್ಸ್ ಅಂಗಡಿಯ ಬುಟ್ಟಿ ಚಾಟ್ – ವೀರೇಶರ ವಿಶೇಷ ಕನ್ನಡ ಪ್ರೇಮ

“ಅಬ್ಬ, ನೋಡಿಲ್ಲಿ! ಒಂದು ಕಾಲಿರೋ ಒಬ್ಬ ವ್ಯಕ್ತಿ ಇಟ್ಟಿರೋ ಚಾಟ್ ಅಂಗಡಿ ಎಷ್ಟು ಹೆಸರು ಮಾಡಿದೆ! ಒಮ್ಮೆ ಹೋಗ್ಬರೋಣ ಮೀರಾ” ಎಂದು ನನ್ನ ಮನೆಯವರು ಅಂದಾಗ ನನ್ನಲ್ಲಿ ಕುತೂಹಲ ಮೂಡಿತು. ಯೂಟ್ಯೂಬ್ ನಲ್ಲಿದ್ದ ದೃಶ್ಯಚಿತ್ರವೊಂದರ ಮೂಲಕ ತಿಳಿದ ವಿಷಯ ಇದು‌. ಹಾಗೆಯೇ, ಮುಂದೊಂದು ವಾರಾಂತ್ಯದಲ್ಲಿ ನಾಗರಬಾವಿ ವರ್ತುಲ ರಸ್ತೆಯಲ್ಲಿದ್ದ ಆ ತಿನಿಸಿನಂಗಡಿಯನ್ನು ಹುಡುಕಿಕೊಂಡು ಹೊರಟೆವು. ಗೂಗಲ್ ಗುರು ದಾರಿ ತೋರಿದ್ದರಿಂದ ವಿಳಾಸ  ಹುಡುಕುವುದು ಅಷ್ಟೇನೂ ಕಷ್ಟವಾಗಲಿಲ್ಲ.‌  ರಸ್ತೆ ಬದಿಯಲ್ಲಿ ಪುಟ್ಟ ಟೆಂಪೋ ಒಂದನ್ನು ಚಾಟ್  ಅಂಗಡಿಯಾಗಿ ಪರಿವರ್ತಿಸಿ, […]

 “ಸೂಳ್ ಬಪ್ಪುದು ಕಾಣಾ ಮಹಾಜಿರಂಗದೊಳ್”

ಸುಮಾರು 34-35 ವರ್ಷಗಳ ಹಿಂದೆ,  ಬೆಂಗಳೂರಿನ ಬಸವೇಶ್ವರ ನಗರದಲ್ಲಿರುವ ವಿದ್ಯಾವರ್ಧಕ ಸಂಘ – ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಬಿ.ಎಸ್ಸಿ. ಪದವಿಯ ಕನ್ನಡ ತರಗತಿಯೊಂದರಲ್ಲಿ, ಶ್ರೀಮತಿ ಶಾಂತಾ ನಾಗರಾಜ್ ಎಂಬ ಕನ್ನಡ ಅಧ್ಯಾಪಕಿಯು ಉಲ್ಲೇಖಿಸಿದ ವಾಕ್ಯ ಇದು‌. ಈ ಲೇಖಕಿ‌ ಕೂಡಾ ಆ ತರಗತಿಯ ವಿದ್ಯಾರ್ಥಿನಿಯರ ಗುಂಪಿನಲ್ಲಿ ಒಬ್ಬಳಾಗಿದ್ದಳು. 25-30 ಜನ ಅರಳುಗಣ್ಣಿನ ಮತ್ತು ಅಷ್ಟೇ ತುಂಟ ಸ್ವಭಾವದ ವಿಜ್ಞಾನದ ವಿದ್ಯಾರ್ಥಿನಿಯರಿಗೆ ಕನ್ನಡದ ಆದಿಕವಿಯ ಈ  ಅವಿಸ್ಮರಣೀಯ ಉದ್ಗಾರದ ಮಹತ್ವ ಎಷ್ಟು ಅರ್ಥವಾಯಿತೋ ಬಿಟ್ಟಿತೋ! ಆದರೆ ಮೇಡಂ […]

ಕನ್ನಡಿಗರ ಮನೆಯಾಗಲಿ ಮೊದಲ ‘ಕನ್ನಡ ಶಾಲೆ’

ನಮ್ಮ ‘ಚಿತ್ರನಾಟ್ಯ’ – ಭರತನಾಟ್ಯ ತರಗತಿಗೆ ಪುಟಾಣಿ ಮಕ್ಕಳು ಬಂದು ನಾಟ್ಯ ಕಲಿಯಲು ಸೇರುತ್ತವೆ. ಐದು- ಐದೂವರೆ- ಆರು ವಯಸ್ಸಿನ ಎಳೆಯ ಮಕ್ಕಳಿಗೆ ನಾಟ್ಯ ಹೇಳಿಕೊಡುವಾಗ ಅವಕ್ಕೆ ಅರ್ಥ ಆಗುವ ಭಾಷೆಯಲ್ಲಿ ಹೇಳಿಕೊಡುವುದು ಮುಖ್ಯ‌. ಹೀಗಾಗಿ ಮಕ್ಕಳನ್ನು ಅವರ ಮನೆಯ ಭಾಷೆ/ತಾಯಿ ನುಡಿಯ ಬಗ್ಗೆ ನಾನು ಸಾಮಾನ್ಯವಾಗಿ ವಿಚಾರಿಸುತ್ತೇನೆ.  ಮೇಲೆ ಹೇಳಿದ ಹಿನ್ನಲೆಯಲ್ಲಿ ಒಮ್ಮೆ ಒಂದು ಮಗುವನ್ನು ” ನಿಮ್ಮ ಮನೆಯಲ್ಲಿ ಯಾವ ಭಾಷೆ ಮಾತಾಡ್ತೀರಮ್ಮ?” ಎಂದು ನಾನು ಕೇಳಿದಾಗ ಅದು ” ಇಂಗ್ಲಿಷ್ ” ಎಂದು […]

‘ಸ್ವಲ್ಪ’…ಈ ಪದದ ಉಪಯೋಗ ಖಂಡಿತ ಅಲ್ಲ‌ ಸ್ವಲ್ಪ.

ಊಟ ಬಡಿಸುವಾಗ ‘ಸ್ವಲ್ಪ ಹಾಕಿ’, ‘ಇನ್ನು ಸ್ವಲ್ಪ ಬಡಿಸ್ಲಾ?’ ಎನ್ನುವ ಪದಪ್ರಯೋಗವನ್ನು ನಾವೆಲ್ಲ ಕೇಳಿರುತ್ತೇವೆ, ಸ್ವತಃ ಬಳಸಿಯೂ ಇರುತ್ತೇವೆ. ನಿಘಂಟಿನಲ್ಲಿ ಈ ಪದಕ್ಕೆ ನಾಮಪದವಾದಾಗ ‘ಅಲ್ಪವಾದುದು; ಕ್ಷುದ್ರವಾದುದು’, ಗುಣ ವಿಶೇಷಣವಾದಾಗ ‘ತುಸು, ಕೊಂಚ, ಅಲ್ಪ’ ಎಂಬ ಅರ್ಥಗಳಿವೆ. ಹೊಸದಾಗಿ ಕನ್ನಡ ಕಲಿಯುತ್ತಿರುವ  ಪರಭಾಷಿಕರನ್ನು ಯಾರಾದರೂ ‘ ನಿಮಗೆ ಕನ್ನಡ ಬರುತ್ತಾ?’ ಎಂದು ಕೇಳಿದರೆ ಅವರು ‘ಸ್ವಲ್ಪ ಸ್ವಲ್ಪ’ ಎನ್ನುವುದನ್ನು ಕೇಳಿರುತ್ತೇವೆ ಅಲ್ಲವೇ? ಮಾತುಕತೆಗಳಲ್ಲಿ ‘ಅಲ್ಪಸ್ವಲ್ಪ’ ಎಂಬ ಪದಪ್ರಯೋಗ ಕೂಡ ಇದೆ. “ಸಂಗೀತ ಅಲ್ಪಸ್ವಲ್ಪ ಕಲಿತಿದ್ದೇನೆ”, ದೆಹಲಿಯ ಬಗ್ಗೆ […]

ಬಳಸುತ್ತಿರುವುದು ರವಷ್ಟು, ಇರುವುದು ಬೆಟ್ಟದಷ್ಟು.

ವೃತ್ತಿಯಿಂದ ಕನ್ನಡ ಪಾಠ ಮಾಡುವ ಹಾಗೂ ಪ್ರವೃತ್ತಿಯಿಂದ ಕನ್ನಡ ಬರೆಯುವ ನಾನು ಕನ್ನಡ ನಿಘಂಟು, ಶಬ್ದಕೋಶಗಳನ್ನು ಆಗಾಗ ಬಳಸಬೇಕಾಗುತ್ತದೆ. ಪ್ರತಿ ಸಲ ನಿಘಂಟು ತೆರೆದಾಗಲೂ ನನಗೆ ಒಂದು ವಿಷಯ ಮನಸ್ಸಿಗೆ ಬರುತ್ತದೆ. ಅದೇನೆಂದರೆ ನಾವು ಸಾಮಾನ್ಯವಾಗಿ ಮಾತಿನಲ್ಲಿ ಹಾಗೂ ಬರವಣಿಗೆಯಲ್ಲಿ ಬಳಸದೆ ಇರುವ ಅನೇಕಾನೇಕ ಪದಗಳು ಕನ್ನಡ ನಿಘಂಟಿನಲ್ಲಿ ಪ್ರತಿ ಅಕ್ಷರದಲ್ಲೂ ಸಿಗುತ್ತವೆಯಲ್ಲ(!) ಎಂಬುದು. ಉದಾಹರಣೆಗೆ , ಅದ್ದೆ = ಬೇರೊಬ್ಬನ ಸ್ಥಾನದಲ್ಲಿಯ, ಬದಲಿ ಅಪ್ಪುನಿಧಿ = ಸಮುದ್ರ, ಕಡಲು ಆರೇಚನ = ( ಕಣ್ಣುಗಳು) ಮುಚ್ಚಿಕೊಳ್ಳುವುದು […]

ಪಠ್ಯ ಪುಸ್ತಕ ಯಾವ್ದು…!?      ಮರ್ತ್ಹೋಗಿದೆ  ಮ್ಯಾಮ್.. ಒಂದ್ನಿಮಿಷ …ಫ್ರೆಂಡ್ನ ಕೇಳ್ಬಿಟ್ಟು….

ಈ ನಡುವೆ ಒಂದು ದಿನ  ಸಂಜೆ ನನ್ನ ದೂರವಾಣಿ ರಿಂಗಣಿಸಿತು.‌ ಬಿ.ಎಸ್ಸಿ. ವಿದ್ಯಾರ್ಥಿನಿಯೊಬ್ಬಳು ಮಾತಾಡುತ್ತ ” ನಾನು ಈಗ ಮೂರನೇ ವರ್ಷ ಬಿ.ಎಸ್ಸಿ.ಓದ್ತಾ ಇದ್ದೀನಿ ಮ್ಯಾಮ್.‌ ನಾನು ಹಿಂದಿನ ವರ್ಷದ ಕನ್ನಡ ಪರೀಕ್ಷೆ ತಗೋಬೇಕು, ಯಾವ ಟೆಕ್ಸ್ಟ್ ( ಪಠ್ಯಪುಸ್ತಕ) ಓದ್ಬೇಕು ಅಂತ ಗೊತ್ತಾಗ್ತಾ ಇಲ್ಲ, ಪ್ಲೀಸ್ ಹೇಳಿ ಮ್ಯಾಮ್” ಅಂದಳು.  ನಾನು “ನಾಳೆ ಕಾಲೇಜಿಗೆ ಬಾಮ್ಮ,  ನೋಡಿ ಹೇಳ್ತೀನಿ” ಅಂದೆ.  ಸರಿ, ಸೂಚನೆಯ ಪ್ರಕಾರ ಮೇಲೆ ಹೇಳಿದ ವಿದ್ಯಾರ್ಥಿನಿ ಕಾಲೇಜಿಗೆ ನಮ್ಮ ಕನ್ನಡ ವಿಭಾಗಕ್ಕೆ ಬಂದಳು‌. […]

ಕವನ ವಾಚನ ಕಲೆ – ವಿದ್ಯಾರ್ಥಿಗಳಿಗೆ ಭಾವವನ್ನು ತಲುಪಿಸುವ ನೆಲೆ.

ಯಾವುದೇ ಕವಿತೆಯ ಕೇಂದ್ರವೆಂದರೆ ಅದು ಭಾವ. ಕವಿಯ ಅನುಭವದ ಅಭಿವ್ಯಕ್ತಿ ಅಥವಾ ಭಾವದ ಭಾಷಾರೂಪೀ ಪ್ರಕಟಣೆಯೇ ಕವಿತೆ.‌ ಅಧ್ಯಾಪಕರು ವಿದ್ಯಾರ್ಥಿಗಳಿಗೆ ಕವಿತೆಯನ್ನು ಪಾಠ ಮಾಡುವಾಗ ಅದನ್ನು ವಾಚಿಸುವ ರೀತಿಯು ಬಹಳ ಮುಖ್ಯ ವಾಗುತ್ತದೆ. ಏಕೆಂದರೆ ಸರಿಯಾದ ಒತ್ತು, ಸ್ವರಭಾರ, ಧ್ವನಿಯ ಏರಿಳಿತಗಳು ಕವಿತೆಯ ಭಾವದ ಜಾಡು ಹಿಡಿಯುತ್ತವೆ. ಉದಾಹರಣೆಗೆ, ‘ಸಾಮಾನ್ಯನೇ ಈ ಗಾಂಧಿ’ ಎಂಬ ಸಾಲು.‌ ಸಾಮಾನ್ಯನೇ ಎಂಬುದನ್ನು ಉಚ್ಚರಿಸುವ  ಎರಡು ಬೇರೆ ಬೇರೆ ರೀತಿಗಳಿಂದ ಗಾಂಧಿ ಎಲ್ಲರಂತೆ ಸಾಮಾನ್ಯನೇ ಅನ್ನುವ ಅರ್ಥವೂ‌ ಬರಬಹುದು, ಅಥವಾ ಅವನು […]

 ‘ಬೆಳಗಿನ ಶುಭೋದಯ’ ಏಕೆ, ಶುಭೋದಯ ಸಾಕಲ್ಲವೇ?

ಗುಡ್ ಮಾರ್ನಿಂಗ್ ಎಂದು ಇಂಗ್ಲಿಷ್ ಭಾಷೆಯಲ್ಲಿ ಹೇಳುವ ಬದಲು  ಕನ್ನಡದಲ್ಲಿ ಅದನ್ನು ಹೇಳಬಯಸುವವರು ‘ಬೆಳಗಿನ ಶುಭೋದಯ’ ಎಂದು ಹೇಳುವುದನ್ನು ನಾವು ಅನೇಕ ಸಾರಿ ಗಮನಿಸುತ್ತೇವೆ. ಶುಭೋದಯ ಎಂಬ ಒಂದು ಪದದಲ್ಲಿ ಗುಡ್( ಶುಭ) ಮತ್ತು ಉದಯ( ಮಾರ್ನಿಂಗ್) ಎಂಬ ಎರಡೂ ಪದಗಳಿವೆ! ಹೀಗಾಗಿ ಬೆಳಗಿನ ಶುಭೋದಯ ಎಂದು ಹೇಳಿದಾಗ ಗುಡ್ ಮಾರ್ನಿಂಗ್ ಆಫ್ ಮಾರ್ನಿಂಗ್ ಎಂಬ ಅರ್ಥ ಬರುತ್ತದೆ! ಹೀಗಾಗಿ‌ ಶುಭೋದಯ ಸಾಕು. ‘ಬೆಳಗಿನ ಶುಭೋದಯ’ ಬೇಡ. ಇನ್ನು ಕೆಲವರು ಗುಡ್ ಆಫ್ಟರ್ ನೂನ್ ಗೆ ಕನ್ನಡದಲ್ಲಿ […]

ದ ಧ ಗಳ ಗೊಂದಲ…ವಿಸ್ತರಿಸುತ್ತಿರುವ ಅಕ್ಷರ ತಪ್ಪುಗಳ ಗೋಲ ..ಅಯ್ಯೋ…!

ದ ಮತ್ತು ಧ ಕಾರಗಳು‌ ವಿದ್ಯಾರ್ಥಿಗಳಿಗೆ ಮಾಡುವ ಗೊಂದಲ ಅಷ್ಟಿಷ್ಟಲ್ಲ.‌ ವಿದ್ಯಾರ್ಥಿ  ಎಂದು ಬರೆಯಬೇಕಾದಾಗ  ವಿಧ್ಯಾರ್ಥಿ ಎಂದು ಬರೆಯುವುದು, ಧನಲಕ್ಷ್ಮಿ ಎಂದು ಬರೆಯಲು ದನಲಕ್ಷ್ಮಿ ಎಂದು ಬರೆಯುವುದು, ಆದ್ಯತೆ ಎಂದು ಬರೆಯಬೇಕಾದಾಗ ಆಧ್ಯತೆ ಎಂದು ಬರೆಯುವುದು, ಧನ್ಯವಾದ‌ ಎಂದು‌ ಬರೆಯಬೇಕಾದಲ್ಲಿ ದನ್ಯವಾದ ಎಂದು ಬರೆಯುವುದು……,ಹೀಗೆ.‌ ಇದಕ್ಕೆ ಇರುವ ಒಂದೇ ಪರಿಹಾರ ಅಂದರೆ ವಿದ್ಯಾರ್ಥಿಗಳು ಉಚ್ಚಾರಕ್ಕೆ ಗಮನ ಕೊಡುವಂತೆ ಮಾಡಿ ಆ ಪದಗಳ ಅರ್ಥ ವ್ಯತ್ಯಾಸವನ್ನು ಅವರಿಗೆ ತಿಳಿಸಿಕೊಡುವುದು. ಇದು ಶಾಲೆಯಲ್ಲಿ ಅಧ್ಯಾಪಕರು ‌ಮತ್ತು ಮನೆಯಲ್ಲಿ ತಂದೆತಾಯಿಗಳು ಮಾಡಬೇಕಾದ ಕೆಲಸ. […]

Page 10 of 17

Kannada Sethu. All rights reserved.