ಕನ್ನಡ ಪ್ರಸಂಗ

ಇದು ಲೇಖಕಿಯು ಕನ್ನಡದೊಂದಿಗೆ ಒಡನಾಡಿದ ಅನುಭವಗಳ ಕಥನವಾಗಿದೆ. ಕನ್ನಡ ಜಗತ್ತು ತನಗೆ ಕಲಿಸಿದ ಹಾಗೂ ಕನ್ನಡ ಭಾಷೆ ಹಾಗೂ ಸಾಹಿತ್ಯಗಳನ್ನು ತಾನು ಕಲಿಸಿದ ದಾರಿಯಲ್ಲಿನ ವಿವಿಧ ಅನುಭವಗಳನ್ನು ಓದುಗರೊಂದಿಗೆ ಹಂಚಿಕೊಳ್ಳುವ ಪ್ರಯತ್ನವಾಗಿರುತ್ತದೆ ಇದು. ವಾರಕ್ಕೆ ಒಂದು ಕನ್ನಡ ಪ್ರಸಂಗದಂತೆ ಈ ಅಂಕಣವು ಮೂಡಿ ಬರಲಿದೆ.

ಅರ್ಧವರ್ಷ ಪದ್ಧತಿಯಲ್ಲಿ ಕನ್ನಡ  ಸಾಹಿತ್ಯ ಚರಿತ್ರೆಯನ್ನು ಪಾಠ ಮಾಡುವ ಸವಾಲು.

ಪದವಿ ಕಾಲೇಜುಗಳಲ್ಲಿ ಸುಮಾರು 2004 ನೇ ಇಸವಿಯವರೆಗೂ ವಾರ್ಷಿಕ ಪದ್ಧತಿಯ ಶೈಕ್ಷಣಿಕ ವಿನ್ಯಾಸ ಇತ್ತು.‌ ಆಗ ಕವಿತೆಗಳು/ಸಣ್ಣಕಥೆಗಳು/ಪ್ರಬಂಧಗಳು ಮುಂತಾದವನ್ನು ಪಾಠ ಮಾಡುವ ಮುಂಚೆ ಅಥವಾ ವರ್ಷದ ಪ್ರಾರಂಭದಲ್ಲಿ ಕನ್ನಡ ಸಾಹಿತ್ಯ ಚರಿತ್ರೆಯನ್ನು ಸಾವಧಾನವಾಗಿ ವಿವರಿಸುವ ಅವಕಾಶ ಇತ್ತು.  ಏಕೆಂದರೆ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ಒಂದೇ ಸಲ ವಾರ್ಷಿಕ ಪರೀಕ್ಷೆ ಇರುತ್ತಿತ್ತು. ಆದರೆ  ಅರ್ಧವಾರ್ಷಿಕ ಪಾಠ ಪದ್ಧತಿ ಬಂದ ಮೇಲೆ ಈ ಚಿತ್ರ ಬದಲಾಯಿತು.‌‌ ಪಾಠಕ್ಕೆ ಸಮಯ ಕಡಿಮೆ ಆಗಿ ಪರೀಕ್ಷೆಗೆ ಮಹತ್ವ ಹೆಚ್ಚಾಯಿತು.‌ ಪರೀಕ್ಷೆ ಬರುವಷ್ಟರಲ್ಲಿ ಪಠ್ಯಭಾಗ ಮುಗಿಸುವುದೇ […]

ಸೇತುವೆಯಾದ ಸಂಗೀತ

ಕನ್ನಡ ಸಾಹಿತ್ಯದ ಚರಿತ್ರೆಯನ್ನು ಮತ್ತು ಕನ್ನಡಿಗರ ಜೀವನಕ್ರಮವನ್ನು ತುಸು ಆಳವಾಗಿ ಗಮನಿಸಿದ ಯಾರಿಗೇ ಆದರೂ ಒಂದು ಸಂಗತಿ ಗಮನಕ್ಕೆ ಬಂದಿರುತ್ತದೆ. ಅದೇನೆಂದರೆ ಸಂಗೀತವು ಸಾಹಿತ್ಯವನ್ನು ಜನರಿಗೆ ಮುಟ್ಟಿಸುವ ಸೇತುವೆಯಾಗಿ ಕೆಲಸ ಮಾಡಿದೆ. ಈ ಮಾತು ಅನಕ್ಷರಸ್ಥ ಸಮುದಾಯದ ಮಟ್ಟಿಗಂತೂ  ಹೆಚ್ಚು ನಿಜ. ಮೊದಲಿಗೆ ಕನ್ನಡ ಸಾಹಿತ್ಯದ ತಾಯಿಬೇರಾದ ನಮ್ಮ ಜನಪದ ಸಾಹಿತ್ಯವನ್ನು ನೋಡುವುದಾದರೆ, ಅಲ್ಲಂತೂ ಹಾಡಿನ ಧಾಟಿಯು ಮಾತಿಗಿಂತ ಮೊದಲೇ ಅಥವಾ ಮಾತಿನೊಟ್ಟಿಗೆ ಬಂತೇನೋ ಎಂಬಂತೆ, ಗಳಸ್ಯ ಕಂಠಸ್ಯವಾಗಿ ಬಾಯಿಂದ ಬಾಯಿಗೆ ಧಾಟಿ ಸಮೇತ ಸಾಹಿತ್ಯ ಹರಿದುಬಂದಿದೆ. […]

ಕೊಸರಿನ ಧರ್ಮ, ಕನ್ನಡ ವ್ಯಾಪಾರದ ಒಳಮರ್ಮ

ಮೈಸೂರು, ಬೆಂಗಳೂರು ಮುಂತಾದ ಹಳೆ ಮೈಸೂರಿನ ಪ್ರದೇಶಗಳಲ್ಲಿ ಸ್ಥಳೀಯ ವ್ಯಾಪಾರಿಗಳ ಬಳಿ ಹೂವು, ತರಕಾರಿ ಮುಂತಾದವನ್ನು ಕೊಂಡವರಿಗೆ ‘ಕೊಸರು’ ಎಂಬ ಪದ ಹಾಗೂ ಪ್ರಕ್ರಿಯೆಯ ಪರಿಚಯ ಇರುತ್ತದೆ ಎಂದು ನಾವು ಭಾವಿಸಬಹುದು. ಉದಾಹರಣೆಗೆ ನಾಲ್ಕು ರಸ್ತೆಗಳು ಕೂಡುವ ವೃತ್ತದ ಬಳಿ ಹೂಮಾರಾಟ ಮಾಡುತ್ತಿರುವ, ಹಳೆಕಾಲದ ವ್ಯಾಪಾರಿಯೊಬ್ಬರ ಬಳಿ ನೀವು ಒಂದು ಮೊಳ ಮಲ್ಲಿಗೆ ಅಥವಾ ಕನಕಾಂಬರ ಹೂವನ್ನು ಕೊಂಡಿರಿ ಎಂದಿಟ್ಟುಕೊಳ್ಳೋಣ. ಬೆಲೆ ವಿಚಾರಿಸಿ ನಿಮಗೆ ಎಷ್ಟು ಬೇಕೋ ಅಷ್ಟನ್ನು ಕೊಡುವಂತೆ ಹೇಳಿ ವ್ಯಾಪಾರಿಗೆ ನೀವು ಹಣ ಕೊಟ್ಟು, […]

ಕನ್ನಡವನ್ನು ಸಬಲಗೊಳಿಸುವುದು ಅಂದರೆ ವಿವಿಧ ಪದಕೋಶಗಳ ನಿರ್ಮಾಣ.

ಕನ್ನಡವನ್ನು ಪ್ರೀತಿಸುವ ಉಳಿಸಿ ಬೆಳೆಸುವ ಆಸೆ ಇರುವ ಯಾರೇ ಆದರೂ ಅದನ್ನು ಸಬಲಗೊಳಿಸುವ ಬಗ್ಗೆ ಯೋಚಿಸುತ್ತಾರೆ. ಬಹುಶಃ ನಮ್ಮ ಭಾಷೆಯನ್ನು ಸಬಲಗೊಳಿಸುವ ಒಂದು ಮಾರ್ಗ ಅಂದರೆ  ಬೇರೆ ಬೇರೆ ಜ್ಞಾನಶಿಸ್ತುಗಳಲ್ಲಿ ಆಗುತ್ತಿರುವ ನೂತನ ಸಂಶೋಧನೆಗಳನ್ನು ಕನ್ನಡದಲ್ಲಿ ಬರೆಯಲು ಸಾಧ್ಯವಾಗುವಂತೆ ಅದನ್ನು ಸಜ್ಜುಗೊಳಿಸುವುದು. ಉದಾಹರಣೆಗೆ, ಗಣಕ ವಿಜ್ಞಾನ, ಮಾಹಿತಿ ತಂತ್ರಜ್ಞಾನ, ಮಾನವ ನಿರ್ಮಿತ ಬುದ್ಧಿಮತ್ತೆ, ಅರ್ಥ ಶಾಸ್ತ್ರ, ತತ್ವಶಾಸ್ತ್ರ ನಿರ್ವಹಣಾ ಶಾಸ್ತ್ರ ಮುಂತಾದ ಎಲ್ಲ ಶಾಸ್ತ್ರಗಳಲ್ಲೂ ಪ್ರತ್ಯೇಕ ಕನ್ನಡ ಪದಕೋಶಗಳನ್ನು, ಆಕ್ಸ್ ಫರ್ಡ್ ಪದಕೋಶಗಳ ಮಾದರಿಯಲ್ಲಿ ತಯಾರು ಮಾಡಿದರೆ […]

ಕನ್ನಡ ಅಧ್ಯಾಪಕರು ಹಾಗೂ ಭಾವ ಪ್ರಕಟಣೆ

ಭಾಷಾ ತರಗತಿಗಳು ಭಾವರಹಿತವಾದರೆ ಅವು ಪರಿಣಾಮಕಾರಿಯಾಗುವುದಿಲ್ಲ. ಒಬ್ಬ ಕನ್ನಡ ಅಧ್ಯಾಪಕಿಯಾಗಿ  ನಾನು ಭಾವಿಸಿದ ಹಾಗೂ ಜೀವಿಸಿದ  ಅನುಭವವಿದು. ಭಾಷೆಯು ಸಾಹಿತ್ಯದ ಸಂದರ್ಭದಲ್ಲಿ ಅಥವಾ ಸಂವಹನ ಸಂದರ್ಭದಲ್ಲಿ ಬಳಕೆಯಾಗುವಾಗ ಭಾವಭರಿತವಾದ ರೂಪ, ಆಕಾರಗಳನ್ನು ಹೊಂದಿರುತ್ತದೆ. ವಿಜ್ಞಾನ, ವಾಣಿಜ್ಯ, ತರ್ಕ ಮುಂತಾದ ವಿಷಯಗಳನ್ನು ಬೋಧಿಸುವಾಗ ಅಥವಾ ಬರೆಯುವಾಗ ಭಾಷೆಯು ತನ್ನ ಭಾವರೂಪವನ್ನು ಹಿಂದಿಟ್ಟು ಜ್ಞಾನರೂಪವನ್ನು ಮುಂದಿಡುತ್ತದೇನೋ.  ಆದರೆ ಕನ್ನಡ ಅಥವಾ ಯಾವುದೇ ಭಾಷಾ/ಸಾಹಿತ್ಯ  ತರಗತಿಗಳಲ್ಲಿ ಅದು ಭಾವರೂಪಿಯಲ್ಲದೇ ಹೋದರೆ ತಾನು ಹೇಳಬೇಕಾದುದನ್ನು ಸಮರ್ಥವಾಗಿ‌ ಹೇಳಲಾಗದು. ಅಕ್ಷರ, ಪದ, ವಾಕ್ಯಗಳನ್ನು ಉಚ್ಚರಿಸುವಾಗ […]

ಕನ್ನಡ ಉಳಿಸುವುದಕ್ಕೂ ಪೆಟ್ರೋಲ್ ಉಳಿಸುವುದಕ್ಕೂ ಇರುವ ವ್ಯತ್ಯಾಸ ಏನು?

ಈ ತಿಂಗಳು ಅಂದರೆ ನವೆಂಬರ್ 2023ರ ಕಸ್ತೂರಿ ಮಾಸಪತ್ರಿಕೆಯಲ್ಲಿ ಒಂದು ಉತ್ತಮ ಲೇಖನ ಬಂದಿದೆ. ಜಯತನಯ ಎಂಬವರು ಬರೆದ  “ಕನ್ನಡ ಹಿತರಕ್ಷಣೆಗೆ ಏನು ಮಾಡಬೇಕು?” ಎಂಬ ಲೇಖನ ಅದು.‌ ಆ ಲೇಖನದಲ್ಲಿನ ಒಂದು ವಿಷಯ ನನ್ನ ಗಮನ ಸೆಳೆಯಿತು. ‌ ಪೆಟ್ರೋಲನ್ನು ಉಳಿಸಬೇಕು ಅಂದರೆ ಅದನ್ನು ಬಳಸಬಾರದು, ಆದರೆ ಕನ್ನಡವನ್ನು ಉಳಿಸಬೇಕು ಅಂದರೆ ಅದನ್ನು ಬಳಸಬೇಕು ಎಂಬ ಮಾತು ಅದು.  ಎಷ್ಟು ನಿಜ ಅಲ್ಲವೇ?  “ಹಿಂಗಾದ್ರೆ ಹೆಂಗೆ ಸ್ವಾಮಿ ಕನ್ನಡದುದ್ಧಾರ, ಭಾಷೆ ಬಳಸಿ ಬಳಸಿ ಮಾಡ್ಬೇಕ್ ನಾವೆ ಕನ್ನಡ […]

“ನಂಗೆ entertainment ಅನ್ನೋ ಪದಕ್ಕೆ ಕನ್ನಡದಲ್ಲಿ ಏನ್ ಬರೀಬೇಕು ಅಂತ ಗೊತ್ತೇ ಆಗ್ಲಿಲ್ಲ ಮ್ಯಾಮ್”. 

ಪದವಿ ತರಗತಿಗಳಿಗೆ ಕನ್ನಡ ಪಾಠ ಮಾಡುವ ನನ್ನಂತಹ ಅಧ್ಯಾಪಕರಿಗೆ ಭಾಷೆಯ ವಿಚಾರದಲ್ಲಿ ಆಗಾಗ ನೆನಪಿನಲ್ಲಿ ಉಳಿಯುವಂತಹ ಅನುಭವಗಳಾಗುತ್ತವೆ. ಈಗ ನಾನು ವಿವರಿಸಹೊರಟಿರುವುದು ಅಂತಹದೇ ಒಂದು ಅನುಭವ.           ಒಂದು ದಿನ ವಿಶ್ವವಿದ್ಯಾಲಯದ ಪದವಿ ಪರೀಕ್ಷೆಗಳ ಭಾಗವಾಗಿ ಕನ್ನಡ ಭಾಷಾ ಪರೀಕ್ಷೆಯನ್ನು ಬರೆದು, ಪರೀಕ್ಷಾ ಕೊಠಡಿಯಿಂದ ಹೊರಗೆ ಬಂದ ನನ್ನ ವಿದ್ಯಾರ್ಥಿನಿಯೊಬ್ಬಳು ನನ್ನೊಂದಿಗೆ ಮಾತಾಡುತ್ತಾ, ” ಪರೀಕ್ಷೆ ಏನೋ ಸುಲಭಾನೇ ಇತ್ತು ಮ್ಯಾಮ್, ಆದ್ರೆ ನಂಗೆ entertainment ಅನ್ನೋ ಪದಕ್ಕೆ ಕನ್ನಡದಲ್ಲಿ ಏನ್ ಬರೀಬೇಕು […]

“ಇಲ್ಲ ಇಲ್ಲ ಮೇಡಂ, ನಂಗೆ ಸರಿಯಾಗಿ ಕನ್ನಡ ಬರಲ್ಲ…”

ಮೊನ್ನೆ ನಮ್ಮ ಬಡಾವಣೆಯ ತರಕಾರಿ ಅಂಗಡಿಗೆ ಹೋಗಿದ್ದಾಗ ಒಂದು ವಿಚಿತ್ರ ಅನುಭವ  ಆಯಿತು. ತರಕಾರಿ ಮಾರುತ್ತಿದ್ದವನ ಹತ್ತಿರ ‘ಈರುಳ್ಳಿ ಎಷ್ಟು?’ ಅಂದೆ. ಅವನು ‘ನಲವತ್ತು ರೂಪಾಯ್’ ಅಂದವನು‌ ತಕ್ಷಣ ‘ಫಾರ್ಟಿ ರೂಪೀಸ್’ ಅಂದ.‌ ನನ್ನ ಮನಸ್ಸಿನಲ್ಲಿ ‘ಯಾಕೆ ಇವನು ಹೀಗಂದ?’ ಎಂಬ ಪ್ರಶ್ನೆ ಮೂಡಿತು.‌  ”ಯಾಕಪ್ಪಾ, ನಂಗೆ ಕನ್ನಡ ಬರಲ್ಲ ಅನ್ನಿಸ್ತಾ? ತಕ್ಷಣ ಇಂಗ್ಲಿಷ್ನಲ್ಲಿ ಬೆಲೆ ಹೇಳಿದ್ರಲ್ಲಾ? ” ಎಂದು ಕೇಳಿದೆ. ನಮ್ಮ ಬಡಾವಣೆಯಲ್ಲಿ  ಮಾರವಾಡಿಗಳು, ಜೈನರು ತುಂಬ ಮಂದಿ ಇದ್ದಾರೆ. ನನ್ನನ್ನೂ ಅವರಲ್ಲಿ ಒಬ್ಬರು ಅಂದುಕೊಂಡಿರಬೇಕು […]

ಭಾಷೆ ಕೇವಲ ಉಪಕರಣವೋ ಅಥವಾ ವ್ಯಕ್ತಿತ್ವದ ಪ್ರತಿಬಿಂಬವೋ? 

ಪದವಿ ಕಾಲೇಜುಗಳಲ್ಲಿ ಕನ್ನಡ ಪಾಠ ಮಾಡುವ ನನ್ನಂತಹ ಅಧ್ಯಾಪಕರಿಗೆ, ಆಗಷ್ಟೇ ಪದವಿಪೂರ್ವ ಹಂತವನ್ನು ದಾಟಿ ಬಂದಿರುವ ಮೊದಲ ವರ್ಷದ ಹಲವು ಪದವಿ ವಿದ್ಯಾರ್ಥಿಗಳಲ್ಲಿ, ಭಾಷೆಗಳ ಬಗ್ಗೆ ನಿರ್ಲಕ್ಷ್ಯ ಮೂಡಿರುವುದು ನಿಚ್ಚಳವಾಗಿ ಕಂಡುಬರುತ್ತದೆ. ‌ಇದಕ್ಕೆ ಕೇವಲ ವಿದ್ಯಾರ್ಥಿಗಳು ಕಾರಣರಲ್ಲ.‌ ಹತ್ತನೇ ತರಗತಿಯವರೆಗೆ ಕನ್ನಡವನ್ನು ಅತ್ಯಂತ ಇಷ್ಟದಿಂದ ಓದುವ ಅನೇಕ ವಿದ್ಯಾರ್ಥಿಗಳಿರುತ್ತಾರೆ.‌ ಆದರೆ ಪದವಿಪೂರ್ವ ಹಂತಕ್ಕೆ ಬಂದಾಗ ವಿಷಯಗಳನ್ನು ನಮ್ಮ ಶಿಕ್ಷಣ ವ್ಯವಸ್ಥೆಯು ‘ಕೋರ್ಸ್ ಸಬ್ಜೆಕ್ಟ್ಸ್’ ಮತ್ತು ‘ಲ್ಯಾಂಗ್ವೇಜಸ್’ ಎಂದು ವಿಭಾಗಿಸುವುದನ್ನು  ಮತ್ತು ಇವುಗಳಲ್ಲಿ ಮೊದಲನೆಯವು ‘ಮುಖ್ಯ’ ಹಾಗೂ ಎರಡನೆಯವು ‘ಅಮುಖ್ಯ’ […]

ಧಾಟಿ ಮೊದಲೋ, ಶಬ್ದ ಮೊದಲೋ? 

ಸಾಹಿತ್ಯ-ಸಂಗೀತಗಳಲ್ಲಿ ಆಸಕ್ತಿ ಇರುವವರನ್ನು ಕಾಡುವ ಒಂದು ಕುತೂಹಲಕರ ಪ್ರಶ್ನೆ ಇದು. ಹಾಡುಗಳ ತಯಾರಿಯಲ್ಲಿ‌ ರಾಗ ಮೊದಲೋ ಅಥವಾ ಪದಸೃಷ್ಟಿ ಮೊದಲೋ? ಎಂಬುದು.‌ ಇಲ್ಲಿನ ಸ್ವಾರಸ್ಯಕರ ಸಂಗತಿ‌ ಅಂದರೆ ಕೆಲವು ಸಲ ಮಾತು ಮೊದಲು –  ಭಾವಗೀತೆಗಳಲ್ಲಿ ಆಗುವಂತೆ, ಕೆಲವು ಸಲ ರಾಗ ಮೊದಲು – ಸಿನಿಮಾ ಹಾಡುಗಳಲ್ಲಿ ಆಗುವಂತೆ. ಇನ್ನು ಹಳೆಯ ಜಾನಪದ ಧಾಟಿಗಳು ಪೀಳಿಗೆಯಿಂದ ಪೀಳಿಗೆಗೆ ಸಾಗಿ ಬರುತ್ತಾ ಹೋದಂತೆ, ಪ್ರತಿ‌ ಹೊಸ ಪೀಳಿಗೆಯೂ ಅದಕ್ಕೆ ತನ್ನದೇ ಆದ ಶಬ್ದಗಳನ್ನು ಸೇರಿಸುತ್ತದೆ, ಅಂದರೆ ಇಲ್ಲಿ ರಾಗ […]

Page 10 of 16

Kannada Sethu. All rights reserved.