ಕನ್ನಡ ಪ್ರಸಂಗ

ಇದು ಲೇಖಕಿಯು ಕನ್ನಡದೊಂದಿಗೆ ಒಡನಾಡಿದ ಅನುಭವಗಳ ಕಥನವಾಗಿದೆ. ಕನ್ನಡ ಜಗತ್ತು ತನಗೆ ಕಲಿಸಿದ ಹಾಗೂ ಕನ್ನಡ ಭಾಷೆ ಹಾಗೂ ಸಾಹಿತ್ಯಗಳನ್ನು ತಾನು ಕಲಿಸಿದ ದಾರಿಯಲ್ಲಿನ ವಿವಿಧ ಅನುಭವಗಳನ್ನು ಓದುಗರೊಂದಿಗೆ ಹಂಚಿಕೊಳ್ಳುವ ಪ್ರಯತ್ನವಾಗಿರುತ್ತದೆ ಇದು. ವಾರಕ್ಕೆ ಒಂದು ಕನ್ನಡ ಪ್ರಸಂಗದಂತೆ ಈ ಅಂಕಣವು ಮೂಡಿ ಬರಲಿದೆ.

“ಹಿಟ್ಟಂ ತಿಂದಂ ಬೆಟ್ಟಂ ಕಿತ್ತಿಟ್ಟಂ!”. 

ಕರ್ನಾಟಕದ ಸರಳ, ಪೌಷ್ಟಿಕ ಹಾಗೂ ಪ್ರಖ್ಯಾತ ಆಹಾರಗಳಲ್ಲಿ ರಾಗಿಮುದ್ದೆ ಒಂದು. ದಕ್ಷಿಣ ಕರ್ನಾಟಕದ ಅನೇಕ ಭಾಗಗಳಲ್ಲಿ ಇದು  ಪ್ರಧಾನ‌ ದೈನಿಕ  ಆಹಾರವಾಗಿದೆ (ಸ್ಟೇಪಲ್ ಫುಡ್ ಎಂಬ ಅರ್ಥದಲ್ಲಿ). ಇದಕ್ಕೆ ‘ಹಿಟ್ಟು’ ಎಂಬ ಇನ್ನೊಂದು ಹೆಸರಿದೆ! ಮತ್ತೆ, ಇನ್ನೂ ಬೇಯಿಸದ ರಾಗಿಹಿಟ್ಟಿಗೆ ರಾಗಿಹಸಿಟ್ಟು (ರಾಗಿ ಹಸಿಹಿಟ್ಟು) ಅನ್ನುತ್ತಾರೆ ನೋಡಿ!  ತಾಯಿ ಮಂಗಳೂರಿನವರಾಗಿದ್ದು ತಂದೆ ತುಮಕೂರಿನವರಾಗಿದ್ದ ನಮ್ಮ ಮನೆಯಲ್ಲಿ ರಾಗಿಮುದ್ದೆ ದೈನಿಕ ಆಹಾರವಾಗಿರಲಿಲ್ಲ, ಆದರೆ ಅಪರೂಪಕ್ಕೆ ಮಾಡುವ ಒಂದು ವಿಶೇಷ ಆಹಾರವಾಗಿತ್ತು. ‘ರಾಗಿ‌ಮುದ್ದೆ ಮಾಡಿದ್ರೆ ಅದಕ್ಕೆ ಸರಿಯಾದ  ಹುಳಿ(ಸಾಂಬಾರ್) ಇರ್ಬೇಕು, […]

ಉಪಹಾರವೋ…ಉಪಾಹಾರವೋ…?

ನಗರ ಅಥವಾ ಪೇಟೆಯ ರಸ್ತೆಗಳಲ್ಲಿ ಓಡಾಡುವಾಗ ‘ಉಪಹಾರ ಗೃಹ’ ಎಂಬ ಪದವನ್ನು, ಮತ್ತು ಆಹ್ವಾನ ಪತ್ರಿಕೆಗಳಲ್ಲಿ ‘ಸಭೆಗೆ ಮುಂಚೆ ಲಘು ಉಪಹಾರದ ವ್ಯವಸ್ಥೆ ಇದೆ’ ಎಂಬ ಪದಪ್ರಯೋಗಗಳನ್ನು ನಾವೆಲ್ಲ ಗಮನಿಸಿರುತ್ತೇವಲ್ಲ.‌.‌ ಅದನ್ನು ನೋಡಿದಾಗೆಲ್ಲ ನನ್ನ ಮನಸ್ಸಿನಲ್ಲಿ ಒಂದು ಪ್ರಶ್ನೆ ಚಿಮ್ಮುತ್ತಿತ್ತು. ಇದು ಉಪಹಾರವೋ ಉಪಾಹಾರವೋ ಎಂಬ ಪ್ರಶ್ನೆ ಅದು. ಕನ್ನಡ ಸಾಹಿತ್ಯ ಪರಿಷತ್ತಿನ ಸಂಕ್ಷಿಪ್ತ ಕನ್ನಡ ‌ನಿಘಂಟನ್ನು ನೋಡಿದಾಗ ಗೊಂದಲ ತಿಳಿಯಾಯಿತು.‌‌ ನಿಘಂಟಿನಲ್ಲಿ ಉಪಹಾರಕ್ಕೂ ಉಪಾಹಾರಕ್ಕೂ ತಿಂಡಿ, ಅಲ್ಪಾಹಾರ ಎಂದೇ ಅರ್ಥವಿದೆ (ಬೇರೆ ಅರ್ಥಗಳ ಜೊತೆಗೆ). ಒಂದೇ ಅರ್ಥ […]

ಊರೊಂದರ ಹೆಸರಿನಲ್ಲಿ ನವರಸ!

ನವರಸ ಅಂದ ತಕ್ಷಣ ಕನ್ನಡ ಸಾಹಿತ್ಯ ಮತ್ತು ಭರತನಾಟ್ಯ ಕ್ಷೇತ್ರದ ನನ್ನಂಥವರಿಗೆ ನೆನಪಾಗುವುದು ಶೃಂಗಾರ, ವೀರ, ಕಾರುಣ್ಯ, ಅದ್ಭುತ.‌..ಇಂಥವು ಒಂಬತ್ತು ಇರುವ ಬೇರೆ ಬೇರೆ ಮನಃಸ್ಥಿತಿಗಳು, ಕಲಾಸಂಬಂಧೀ ನೆಲೆಗಳು. ‌ಭರತನ ಕಾವ್ಯಮೀಮಾಂಸೆಯನ್ನು ಅಡಿಗಲ್ಲಾಗಿ ಇಟ್ಟುಕೊಂಡ ಎಲ್ಲ ಲಲಿತಕಲೆಗಳಿಗೂ ನವರಸಗಳು ಸಮಾನ ಅಂಶ‌ವಾಗಿರುತ್ತವೆ.‌ ಹೀಗಿರುವಾಗ ಪ್ರಯಾಣವೊಂದರಲ್ಲಿ ನವರಸ ಎಂಬುದು ಒಂದು ಊರಿನ ಹೆಸರಲ್ಲಿ ಕಾಣಿಸಿಕೊಂಡುಬಿಟ್ಟರೆ ಎಂತಹ ಸೋಜಿಗ ಅನ್ನಿಸಬಹುದು! ಅಲ್ಲವೇ?  ಈಚೆಗೆ ಸಾಹಿತ್ಯ ಕಾರ್ಯಕ್ರಮವೊಂದಕ್ಕಾಗಿ‌ ಬಿಜಾಪುರ( ಈಗ ವಿಜಯಪುರ) ಕ್ಕೆ ಹೋಗಬೇಕಿತ್ತು ನಾನು. ಬೆಂಗಳೂರಿನಿಂದ ರೈಲಿನಲ್ಲಿ ಹೊರಟು ಬಿಜಾಪುರದಲ್ಲಿ ಇಳಿದವಳನ್ನು […]

“ಮದರ್ ಟಂಗ್ ಕನ್ನಡ …ಫಾದರ್ ಟಂಗ್ ತಮಿಳ್ ಮ್ಯಾಮ್!!”

ನಾವು ಅಧ್ಯಾಪಕ ವೃತ್ತಿಯವರು ವಿದ್ಯಾರ್ಥಿಗಳೊಂದಿಗೆ ಒಡನಾಡುವಾಗ, ಕೆಲವೊಮ್ಮೆ ತುಸು ವಿನೋದಮಯ ಅನ್ನಬಹುದಾದ ಸನ್ನಿವೇಶಗಳಿಗೆ ಮುಖಾಮುಖಿಯಾಗುತ್ತೇವೆ. ಕೆಲವು ದಿನಗಳ ಹಿಂದೆ ನಡೆದ ಇಂತಹ ಒಂದು ಪ್ರಸಂಗವನ್ನು ಇಲ್ಲಿ ಹೇಳುತ್ತಿದ್ದೇನೆ ನೋಡಿ.  ನಾನು ಕನ್ನಡ ಪ್ರಾಧ್ಯಾಪಕಿಯಾಗಿ ಕೆಲಸ ಮಾಡುವ ಮಹಾರಾಣಿ ಕಾಲೇಜಿನಲ್ಲಿ ಈಚೆಗೆ ಮೊದಲನೆಯ ಬಿ.ಎಸ್ಸಿ. ವಿದ್ಯಾರ್ಥಿಗಳಿಗೆ ಒಂದು ಕಿರುಪರೀಕ್ಷೆ ಕೊಟ್ಟಿದ್ದೆ. ಈ ಪರೀಕ್ಷೆಗೆ ಸಂಬಂಧಿಸಿದ ಉತ್ತರಪತ್ರಿಕೆಗಳ ಮೌಲ್ಯಮಾಪನ ಮಾಡುವಾಗ ಮೂರು ಉತ್ತರಪತ್ರಿಕೆಗಳು ಒಂದೇ ರೀತಿ ಇದ್ದು, ಈ ವಿದ್ಯಾರ್ಥಿನಿಯರು ಒಬ್ಬರಿಂದ ಒಬ್ಬರು ನಕಲು ಮಾಡಿದ್ದಾರೆ ಎಂಬುದು ನನಗೆ ಅರಿವಾಯಿತು. […]

ವೃತ್ತಿಯಿಂದ  ಆಟೋ ಚಾಲಕ, ಪ್ರವೃತ್ತಿಯಿಂದ ಕನ್ನಡ ಚಿಂತಕ

ಸಾಮಾನ್ಯವಾಗಿ ನಾನು ಕಾಲೇಜಿಗೆ ಹೋಗುವುದು ಸ್ಕೂಟರಮ್ಮ ಎಂದು ನಾನು‌ ಮುದ್ದಿನಿಂದ ಕರೆಯುವ  ದ್ವಿಚಕ್ರ ವಾಹನದಲ್ಲಿ‌‌. ಆದರೆ ಒಮ್ಮೊಮ್ಮೆ ಮೆಟ್ರೋ ರೈಲಿನಲ್ಲಿ ಹೋಗುವುದುಂಟು.‌ ಇತ್ತೀಚೆಗೆ ಮೆಟ್ರೋ ರೈಲಿನಲ್ಲಿ ವಿಶ್ವೇಶ್ವರಯ್ಯ ನಿಲ್ದಾಣ ತಲುಪಿದವಳು ಮಳೆ ಬರುತ್ತಿದ್ದ ಕಾರಣ ನಿಲ್ದಾಣದ ಬಾಗಿಲಲ್ಲೇ  ನಿಲ್ಲಿಸಿದ್ದ ಆಟೋರಿಕ್ಷಾ ಬಳಿ ಹೋಗಿ, ಚಾಲಕರನ್ನು ”ಮಹಾರಾಣಿ ಕಾಲೇಜಿಗೆ ಬರ್ತೀರಾ?” ಎಂದು ಕೇಳಿದೆ.  “ಸರಿ, ಬನ್ನಿ” ಅಂದ ಚಾಲಕರು ನಾನು ಕುಳಿತುಕೊಳ್ಳುತ್ತಿದ್ದಂತೆಯೇ ‘ಫೋನ್ ಪೇನಾ, ಕ್ಯಾಷಾ?’ ಅಂತ ಕೇಳಿದರು.‌ ನಾನು ‘ಹಣ ಕೊಡ್ತೀನಪ್ಪ’ ಅಂದೆ. “ಹಣ! ನೀವು ಹಣ […]

ಕನ್ನಡ ಪಾಠವನ್ನು ಕುರಿತು ಇಂಗ್ಲಿಷ್ ಲಿಪಿಯಲ್ಲಿನ ಕನ್ನಡದಲ್ಲಿ ಹಿಮ್ಮಾಹಿತಿ‌( feed back) ಬರೆದ ವಿದ್ಯಾರ್ಥಿನಿ!

ಶೈಕ್ಷಣಿಕ ವರ್ಷದ ಅಥವಾ ಅರ್ಧವರ್ಷದ ಕೊನೆಯಲ್ಲಿ ನಾವು ಅಧ್ಯಾಪಕರು ನಮ್ಮ‌ ವಿದ್ಯಾರ್ಥಿಗಳಿಂದ ಹಿಮ್ಮಾಹಿತಿ (ಫೀಡ್ ಬ್ಯಾಕ್) ತೆಗೆದುಕೊಳ್ಳುವುದುಂಟು‌. ‘ನಾವು ಮಾಡಿದ ಪಾಠ ಅವರಿಗೆ ಅರ್ಥವಾಗಿದೆಯೇ?, ನಮ್ಮ ಪಾಠದ ರೀತಿಯಲ್ಲಿ ಬದಲಾವಣೆ ಬೇಕೇ?, ಅವರು ನಮ್ಮ ಪಾಠದಿಂದ ಯಾವ ಹೊಸ ಸಂಗತಿಗಳನ್ನು ಕಲಿತರು?’ …. ಈ ಮುಂತಾಗಿ ಅವರಿಂದ ಅಭಿಪ್ರಾಯ, ಅನಿಸಿಕೆಗಳನ್ನು ಒಂದು ಹಾಳೆಯಲ್ಲಿ ಬರೆದುಕೊಡುವಂತೆ ಹೇಳುತ್ತೇವೆ. ಅವರು ಅದರಲ್ಲಿ ‌ತಮ್ಮ  ಹೆಸರು‌ ಬರೆಯುವುದು ಕಡ್ಡಾಯವೇನಲ್ಲ.‌ ಅಂದ ಹಾಗೆ, ಒಳ್ಳೆಯ ಅಭಿಪ್ರಾಯ ‌ಮಾತ್ರವಲ್ಲ, ಪಾಠದ ವಿಷಯದಲ್ಲಿ ಅವರಿಗೆ ಉಂಟಾದ ಅತೃಪ್ತಿ, […]

 “ಅಮ್ಮಾ….ವರ್ತ್ನೇಗ್ ಹಾಕ್ಸ್ಕೊಳೀ……”

ಕೆಲವು ವರ್ಷಗಳ ಹಿಂದೆ, ನಮ್ಮ ಬೀದಿಯಲ್ಲಿ ಹೂವಾಡಗಿತ್ತಿಯೊಬ್ಬಳು ದಿನಾಲೂ “ಹೂ ಬೇಕೇ ಹೂವು….” ಎಂದು ಕೂಗುತ್ತಾ ಬರುತ್ತಿದ್ದಳು. ನಾನು ಒಮ್ಮೊಮ್ಮೆ ಅವಳ ಹತ್ತಿರ ಮಲ್ಲಿಗೆ, ಕನಕಾಂಬರ, ಮೊಲ್ಲೆ.. ಹೀಗೆ ಯಾವುದಾದರೂ ಪರಿಮಳಯುತ ಹೂವನ್ನು ಕೊಳ್ಳುತ್ತಿದ್ದೆ. ಪ್ರತಿ ಸಲ ನಾನು ಹೂ ಕೊಂಡಾಗಲೂ ಅವಳು “ಅಮ್ಮಾ…ವರ್ತ್ನೇಗ್ ಹಾಕ್ಸ್ಕೊಳೀ…” ಅನ್ನುತ್ತಿದ್ದಳು. ನಮ್ಮ ಅಕ್ಕಪಕ್ಕದವರು ಮತ್ತು ಈ ಹೂವಾಡಗಿತ್ತಿ ಆಗಾಗ ಈ ‘ವರ್ತ್ನೆ’ ಪದವನ್ನು ಬಳಸುವುದನ್ನು ಕೇಳಿಸಿಕೊಂಡಿದ್ದೆ ನಾನು.‌ ದಿನಾಲೂ ಒಬ್ಬರ ಹತ್ತಿರವೇ ಹೂ ಪಡೆದು ತಿಂಗಳ ಕೊನೆಯಲ್ಲಿ ಅದರ ಹಣದ ಲೆಕ್ಕ ಚುಕ್ತಾ […]

 “ಅಯ್ಯೋ…. ಅನ್ನ ಮುಳ್ಳಕ್ಕಿ ಆಗ್ಹೋಯ್ತು ಅಮ್ಮ….”

ಈಚೆಗೆ  ಒಂದು ಸಲ ನಮ್ಮನೆಯಲ್ಲಿ ಅನ್ನ ಮಾಡಲಿಕ್ಕಾಗಿ ಕುಕ್ಕರ್ ಇಟ್ಟು ಕೂಗಿಸಿ, ಅದು ಆರಿದ ಮೇಲೆ ಮುಚ್ಚಳ ತೆಗೆದಾಗ ನಡೆದ ಪ್ರಸಂಗ ಇದು‌.‌ ಆಗ ಅಡಿಗೆಮನೆಯಲ್ಲಿ ನಾನು, ಯಲ್ಲಮ್ಮ (ನನ್ನ ಮನೆವಾಳ್ತೆ ಸಹಾಯಕಿ) ಇಬ್ಬರೂ ಇದ್ದೆವು‌. ಕುಕ್ಕರ್ ಮುಚ್ಚಳ ತೆಗೆದು ಅನ್ನ ಸರಿಯಾಗಿದೆಯೇ ಎಂದು ಗಮನಿಸಿದಾಗ ಅದು ಗಟ್ಟಿ ಗಟ್ಟಿಯಾಗಿಯೇ ಇತ್ತು, ಅಕ್ಕಿ ಕಾಳುಗಳು ಅರಳದೆ ಇನ್ನೂ ಬಿರುಸಾಗಿಯೇ ಇದ್ದವು‌. ಬಹುಶಃ ನೀರಿಟ್ಟಿದ್ದು ಕಡಿಮೆ ಆಯಿತೋ ಏನೋ. ಆ ಗಟ್ಟಿ ಗಟ್ಟಿ ಅಗುಳುಗಳನ್ನು ಯಲ್ಲಮ್ಮನೂ ಗಮನಿಸಿ ”ಅಯ್ಯೋ…. […]

‘ಕನಸು ಮತ್ತು ಕಣಸು’ – ಮಾತಿನ‌ ಗಾರುಡಿಗ ಬೇಂದ್ರೆ ಅಜ್ಜ ಕಲಿಸುವ ಕನ್ನಡ ಪಾಠ

ಕನ್ನಡದ ವರಕವಿ  ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು ಕನ್ನಡ ಭಾಷೆಯ ಪದಗಳನ್ನು ಲೀಲಾಮಯವಾಗಿ, ಗರಿಷ್ಠ ಅರ್ಥವಿಸ್ತಾರದಲ್ಲಿ ಬಳಸುತ್ತಿದ್ದ ರೀತಿಯು ತುಂಬ ವಿಶಿಷ್ಟವಾದದ್ದು. ಒಂದೇ ಪದಕ್ಕಿರುವ ಬೇರೆ ಬೇರೆ ಅರ್ಥಗಳನ್ನು ದುಡಿಸಿಕೊಳ್ಳುತ್ತಿದ್ದದ್ದು, ಹೆಚ್ಚುಕಮ್ಮಿ ಒಂದೇ ಉಚ್ಚಾರವುಳ್ಳ ಆದರೆ ಅಪಾರ ಅರ್ಥ ವ್ಯತ್ಯಾಸವುಳ್ಳ ಪದಗಳನ್ನು ಒಟ್ಟೊಟ್ಟಿಗೆ ಬಳಸಿ ಶ್ರಾವ್ಯಸುಂದರ ಹಾಗೂ ಅರ್ಥಬಂಧುರ ಲೋಕವನ್ನು ಸೃಷ್ಟಿಸುವ ಅದ್ಭುತ ಶಕ್ತಿ ಅವರಲ್ಲಿತ್ತು. ಅದಕ್ಕೆ ಒಂದು ಉದಾಹರಣೆ‌ ಅಂದರೆ ಅವರು ಕನಸು ಮತ್ತು ಕಣಸು ಎಂಬ ಪದಗಳನ್ನು ತಮ್ಮ ಕವಿತೆಯೊಂದರಲ್ಲಿ ಬಳಸಿರುವ ರೀತಿ.  ಪ್ರಸ್ತುತ ಕವಿತೆಯ […]

 “ನನ್ನ ಹೆಸರು ಯಮನೂರಪ್ಪ ಮೇಡಮ್ಮು….”..!!!

ನಾವು ಕನ್ನಡಿಗರು ನಮ್ಮ ಮಕ್ಕಳಿಗೆ ಹೆಸರಿಡುವ ರೀತಿಯ ಬಗ್ಗೆ ನನಗೆ ತುಂಬ ಕುತೂಹಲ ಇದೆ. ಮನೆದೇವರ ಹಸರು, ಬಾಳಿ ಬದುಕಿದ ಮನೆಹಿರಿಯರ ಹೆಸರು, ತಮ್ಮ ಅಭಿಮಾನ ಗಳಿಸಿದ ರಾಜಕೀಯ ನಾಯಕರ, ಕವಿಗಳ, ಸಿನಿಮಾನಟರ ಹೆಸರು, ಸ್ನೇಹಿತರ ಹೆಸರು, ಅಪ್ಪ ಅಮ್ಮನ  ಹೆಸರಿನ ಮೊದಲಕ್ಷರಗಳನ್ನು ಸೇರಿಸಿದ ಹೆಸರು, ಇನ್ನು ಮುಂದೆ ಹೆಣ್ಣುಮಗು ಹುಟ್ಟಬಾರದು ಎಂದು ಬಯಸಿ ಇಟ್ಟಂತಹ ಸಾಕಮ್ಮ ಎಂಬ ಹೆಸರು!!!…..ಈ ನಡುವೆ ಗೂಗಲ್ ನಲ್ಲಿ ನೋಡಿ ಅರ್ಥ ಗೊತ್ತಿದ್ದೋ, ಗೊತ್ತಿಲ್ಲದೆಯೋ ಅಂತೂ ಇಟ್ಟ ಚಿತ್ರವಿಚಿತ್ರ ಹೆಸರು…ಒಂದೇ ಎರಡೇ….ನಮ್ಮ […]

Page 9 of 20

Kannada Sethu. All rights reserved.