ಸುಧಾ, ಕರ್ಮವೀರ ಮುಂತಾದ ಕನ್ನಡ ವಾರಪತ್ರಿಕೆಗಳ ಸಾಲಿನಲ್ಲಿ ಬರುವ ಒಂದು ವಾರಪತ್ರಿಕೆ ‘ತರಂಗ’. ನಲವತ್ತೆರಡು ವರ್ಷಗಳ ಹಿಂದೆ ಪ್ರಾರಂಭವಾಯಿತು. ಉದಯವಾಣಿ ಪತ್ರಿಕೆಯನ್ನು ಪ್ರಕಟಿಸುತ್ತಿದ್ದ ಮಣಿಪಾಲ್ ಪಬ್ಲಿಕೇಷನ್ಸ್ ನವರು ತರಲಾರಂಭಿಸಿದ ವಾರಪತ್ರಿಕೆ ಇದು. ನನ್ನ ಬಾಲ್ಯಕಾಲದ ನೆನಪುಗಳಲ್ಲಿ ‘ತರಂಗ’ ಆಪ್ತವಾಗಿ ಸೇರಿ ಹೋಗಿದೆ. ಇದಕ್ಕೆ, ಮಂಗಳೂರಿನಲ್ಲಿ ಕಳೆದ ನನ್ನ ಬಾಲ್ಯದಲ್ಲಿ ಪುಸ್ತಕ ಪ್ರಿಯರಾದ ನನ್ನ ತಂದೆತಾಯಿಯರು ಮನೆಗೆ ತರಿಸುತ್ತಿದ್ದ ತರಂಗ ವಾರಪತ್ರಿಕೆ ಹಾಗೂ ಅದರಲ್ಲಿನ ‘ಬಾಲವನದಲ್ಲಿ ಕಾರಂತಜ್ಜ’ ಅಂಕಣಗಳು ಒಂದು ಕಾರಣವಾದರೆ, ಸೈಕಲ್ ಮೇಲೆ ಪತ್ರಿಕೆ ತರುವಾಗ ‘ತರಂ…ಗ…..ತರಂ…ಗ …’ […]
ಕನ್ನಡ ಪ್ರಸಂಗ
ಇದು ಲೇಖಕಿಯು ಕನ್ನಡದೊಂದಿಗೆ ಒಡನಾಡಿದ ಅನುಭವಗಳ ಕಥನವಾಗಿದೆ. ಕನ್ನಡ ಜಗತ್ತು ತನಗೆ ಕಲಿಸಿದ ಹಾಗೂ ಕನ್ನಡ ಭಾಷೆ ಹಾಗೂ ಸಾಹಿತ್ಯಗಳನ್ನು ತಾನು ಕಲಿಸಿದ ದಾರಿಯಲ್ಲಿನ ವಿವಿಧ ಅನುಭವಗಳನ್ನು ಓದುಗರೊಂದಿಗೆ ಹಂಚಿಕೊಳ್ಳುವ ಪ್ರಯತ್ನವಾಗಿರುತ್ತದೆ ಇದು. ವಾರಕ್ಕೆ ಒಂದು ಕನ್ನಡ ಪ್ರಸಂಗದಂತೆ ಈ ಅಂಕಣವು ಮೂಡಿ ಬರಲಿದೆ.
Like us!
Follow us!