ಕನ್ನಡ ಪ್ರಸಂಗ

ಇದು ಲೇಖಕಿಯು ಕನ್ನಡದೊಂದಿಗೆ ಒಡನಾಡಿದ ಅನುಭವಗಳ ಕಥನವಾಗಿದೆ. ಕನ್ನಡ ಜಗತ್ತು ತನಗೆ ಕಲಿಸಿದ ಹಾಗೂ ಕನ್ನಡ ಭಾಷೆ ಹಾಗೂ ಸಾಹಿತ್ಯಗಳನ್ನು ತಾನು ಕಲಿಸಿದ ದಾರಿಯಲ್ಲಿನ ವಿವಿಧ ಅನುಭವಗಳನ್ನು ಓದುಗರೊಂದಿಗೆ ಹಂಚಿಕೊಳ್ಳುವ ಪ್ರಯತ್ನವಾಗಿರುತ್ತದೆ ಇದು. ವಾರಕ್ಕೆ ಒಂದು ಕನ್ನಡ ಪ್ರಸಂಗದಂತೆ ಈ ಅಂಕಣವು ಮೂಡಿ ಬರಲಿದೆ.

ಪದಗಳ  ಉಚ್ಚಾರಣೆ ಅಂದರೆ ತೊಟ್ಟಿಲಲ್ಲಿ ಮಲಗಿರುವ ಎಳೆಮಗುವಿನ ಕೆನ್ನೆ ಮುಟ್ಟಿದಂತೆ….

ಈಚೆಗೆ ಬಿ.ಎಸ್ಸಿ. ಪದವಿಯ ತರಗತಿಯೊಂದರಲ್ಲಿ ಪುರಂದರ ದಾಸರ ‘ಉದರ ವೈರಾಗ್ಯವಿದು’ ಕೀರ್ತನೆಯ ಪಾಠ ಮಾಡುತ್ತಿದ್ದೆ. ಕಷ್ಟ ಪದಗಳ ಅರ್ಥಗಳನ್ನು ಬರೆಸಿ ಓದಿಸುತ್ತಿದ್ದಾಗ ವಿದ್ಯಾರ್ಥಿನಿಯೊಬ್ಬಳು ‘ಉದರ = ಹೊಟ್ಟೆ’ ಎಂದು ಓದುವ ಸಂದರ್ಭದಲ್ಲಿ ‘ಉದಾರ’ ಎಂದು ಓದಿದಳು. ಆಗ ಆ ವಿದ್ಯಾರ್ಥಿನಿಯ ಉಚ್ಚಾರವನ್ನು ತಿದ್ದುವಾಗ ಒಂದೇ ಒಂದು‌ ದೀರ್ಘವು ಅರ್ಥದಲ್ಲಿ ಎಷ್ಟು ವ್ಯತ್ಯಾಸ ಮಾಡುತ್ತದೆ ಎಂದು ಹೇಳಬೇಕಾಯಿತು.         ‘ಉದರ’ ಕ್ಕೆ ನಿಘಂಟಿನಲ್ಲಿ ಹೊಟ್ಟೆ, ಜಠರ, ಆಹಾರ, ಮಧ್ಯ ಭಾಗ ಎಂಬ ಅರ್ಥಗಳಿದ್ದರೆ, ‘ಉದಾರ’ಕ್ಕೆ […]

ಅಗಲಿದ ಸ್ನೇಹಿತನ‌ ಹೆಸರನ್ನು ತನ್ನ ಕಾವ್ಯನಾಮಕ್ಕೆ ಸೇರಿಸಿಕೊಂಡ ಕನ್ನಡ ಕವಿ

ಸಂತೆಬೆನ್ನೂರು ಫೈಜ್ನಟ್ರಾಜ್  – ವಿವಿಧ ಕನ್ನಡ ಪತ್ರಿಕೆಗಳಲ್ಲಿ ಈ ಹೆಸರು ಓದಿದಾಗ ನನಗೆ ಕುತೂಹಲ ಮೂಡುತ್ತಿತ್ತು.‌ ಇದೆಂತಹ ಹೆಸರು? ಫೈಜ್ ಎಂಬ ಮುಸಲ್ಮಾನ ಹೆಸರು ಮತ್ತು ನಟರಾಜ್ ಎಂಬ ಹಿಂದೂ ಹೆಸರುಗಳು ಒಟ್ಟು ಸೇರಿದ್ದು ಹೇಗೆ? ಇದು ಹಿರಿಯರು ತಮ್ಮ ಮನೆಯ ಮಗುವಿಗೆ ಇಟ್ಟಿರಬಹುದಾದ ಹೆಸರೇ? ಅಥವಾ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಮಕ್ಕಳಿಗೆ ಈ  ರೀತಿಯ ಹೆಸರುಗಳನ್ನೇನಾದರೂ ಇಡುತ್ತಾರೆಯೇ?……ಹೀಗೆ ಕೆಲವಾರು ಪ್ರಶ್ನೆಗಳು ಮನಸ್ಸಿನಲ್ಲಿ ಏಳುತ್ತಿದ್ದವು.          ಈಚೆಗೆ ಒಂದು ದಿನ ಈ ಪ್ರಶ್ನೆಗೆ […]

ಊಟದ ತಟ್ಟೆಗೆ ಅದೆಷ್ಟು ಹೆಸರುಗಳು!!

ಹೀಗೆಯೇ ಮೊನ್ನೆ ಅಕ್ಕಮಹಾದೇವಿಯ ‘ಮರವಿದ್ದು ಫಲವೇನು’ ಎಂಬ ವಚನವೊಂದನ್ನು ಓದುತ್ತಿದ್ದಾಗ ‘ಅಗಲಿದ್ದು ಫಲವೇನು ಬಾನವಿಲ್ಲದನ್ನಕ್ಕ’ ಎಂಬ ಸಾಲನ್ನು ಓದಿದೆ. ‘ಅಗಲು’ ಎಂಬುದನ್ನು ನಾವು ಕ್ರಿಯಾಪದವಾಗಿ ದೂರವಾಗು ಎಂಬ ಅರ್ಥದಲ್ಲಿ ಸಾಮಾನ್ಯವಾಗಿ ಬಳಸುತ್ತೇವೆ ಅಲ್ಲವೇ? ಈ ಪದ ಕೇಳಿದ ತಕ್ಷಣ ಪ್ರೇಮಿಗಳ ‘ಅಗಲಿಕೆ’, ‘ಎಂದೆಂದೂ ನಿನ್ನನು ಅಗಲಿ ನಾನಿರಲಾರೆ’ ಎಂಬ ಅಣ್ಣಾವ್ರ ಹಾಡಿನ ಸಾಲು, ‘ಅಗಲಿ ಇರಲಾರೆನೋ ನಿನ್ನನ್ನ’ ಎಂಬ ರಂಗಗೀತೆ ನೆನಪಾಗುತ್ತವೆ ತಾನೇ.  ಇಲ್ಲಿ ಯಾವ ಅರ್ಥದಲ್ಲಿ ‘ಅಗಲು’ ಎಂಬ ಪದವನ್ನು ವಚನಕಾರ್ತಿ ಬಳಸಿರಬಹುದು ಎಂದು ಯೋಚಿಸುತ್ತಾ […]

ಕನ್ನಡ ಸಾಹಿತ್ಯಕ್ಕೂ‌ ಸಂಗೀತಕ್ಕೂ ಇರುವ ಕರುಳುಬಳ್ಳಿಯ ಸಂಬಂಧ 

ಮೌಖಿಕ ಸಾಹಿತ್ಯವೂ ಸೇರಿದಂತೆ ಕನ್ನಡ ಸಾಹಿತ್ಯದ ಸುದೀರ್ಘ ಚರಿತ್ರೆಯನ್ನು ಗಮನಿಸಿದಾಗ‌ ಎದ್ದು ಕಾಣುವ ಒಂದು ಅಂಶವೆಂದರೆ, ಸಾಹಿತ್ಯಕ್ಕೂ ಸಂಗೀತಕ್ಕೂ ಇರುವ ಆಳವಾದ ಸಂಬಂಧ. ಆಧುನಿಕ‌ ಕಾಲದಲ್ಲಿ ನವ್ಯ ಸಾಹಿತ್ಯದ ಘಟ್ಟವೊಂದನ್ನು ಹೊರತು ಪಡಿಸಿದರೆ ಉಳಿದೆಲ್ಲ ಘಟ್ಟಗಳಲ್ಲೂ ಸಂಗೀತದೊಂದಿಗೆ ಸಾಹಿತ್ಯದ ಸಂಬಂಧ ಗಟ್ಟಿಯಾಗಿರುವುದು ನಮ್ಮ ಅರಿವಿಗೆ ಬರುತ್ತದೆ. ಗರತಿಯ ಹಾಡುಗಳ ತ್ರಿಪದಿಯ ಧಾಟಿ, ‘ಮಾದೇಶ್ವರ‌ ಪುರಾಣ’, ‘ಮಂಟೇಸಾಮಿ ಕಥೆ’ಗಳ (ಜನಪದ ಪುರಾಣಗಳು) ಹಾಡಿನ ಮಟ್ಟುಗಳು, ಹಿಂದೆ ಗದುಗಿನ ಭಾರತ, ಜೈಮಿನಿ‌ ಭಾರತ ಮುಂತಾದವುಗಳನ್ನು ಗಮಕ‌ಶೈಲಿಯಲ್ಲಿ‌ ಹಾಡುತ್ತಿದ್ದುದು, ವಚನ ಗಾಯನ, […]

ಯಾರಾದರೂ ಧನ್ಯವಾದ ಎಂದಾಗ ಕನ್ನಡದಲ್ಲಿ ಏನಂತ ಪ್ರತ್ಯುತ್ತರ ಕೊಡುವುದು?

  ದೈನಂದಿನ ಜೀವನದಲ್ಲಿ ನಾವು ನಮ್ಮ ಸಹಜೀವಿಗಳಿಗೆ ಏನಾದರೂ ಕೊಟ್ಟಾಗ, ಸಹಾಯ ಮಾಡಿದಾಗ ಅವರು ಇಂಗ್ಲಿಷ್ನಲ್ಲಿ ‘ಥ್ಯಾಂಕ್ಯೂ’ ಅಂದರೆ ನಾವು ‘ ಯು ಆರ್ ವೆಲ್ಕಮ್,  ‘ಮೆನ್ಷನ್ ನಾಟ್’,  ಅಥವಾ ‘ಇಟ್ ಇಸ್ ಆಲ್ರೈಟ್’ ಎಂದು ಹೇಳುವುದು ವಾಡಿಕೆ.‌ ಆದರೆ ಯಾರಾದರೂ ಕನ್ನಡದಲ್ಲಿ ಧನ್ಯವಾದ ಅಂತ ಹೇಳಿದರೆ ಅದಕ್ಕೆ ಕನ್ನಡದಲ್ಲಿ ಏನಂತ ಪ್ರತ್ಯುತ್ತರ ಕೊಡುವುದು?        ಸಾಮಾನ್ಯವಾಗಿ ಧನ್ಯವಾದಕ್ಕೆ ಪ್ರತಿಯಾಗಿ ಕನ್ನಡದಲ್ಲಿ ಏನು ಹೇಳುವುದೆಂದು ತೋಚದೆ ‘ಥ್ಯಾಂಕ್ಯೂ’ ಅಂದೋ, ‘ಓಹ್ ಪರವಾಗಿಲ್ಲ’ ಅಂದೋ,  ಅಥವಾ […]

ನಾಟ್ಯ ತರಗತಿಯಲ್ಲಿ ಬೇಂದ್ರೆ ಅಜ್ಜನ ನೆನಪು

ಮೊನ್ನೆ ನಮ್ಮ ನಾಟ್ಯ ತರಗತಿಯಲ್ಲಿ‌ ಐದು-ಆರು ವರ್ಷ ವಯಸ್ಸಿನ ಕೆಲವು ಪುಟ್ಟ ಮಕ್ಕಳಿಗೆ ಒಂದು‌ ಶಿಶುನೃತ್ಯ ಹೇಳಿಕೊಡುತ್ತಿದ್ದೆ.  ‘ಜಿಂಕೆ ಹೇಗೆ ಜಿಗಿಯುವುದು ಜಿಂಜಿಂಜಿಂಜಿಂ,  ನವಿಲು ಹೇಗೆ ನಲಿಯುವುದು ನಂನಂನಂನಂ ಆನೆ ಹೇಗೆ ನಡೆಯುವುದು ಓ…ಓ…. ನಾನು ಮಾತ್ರ ನಗುತಲಿರುವೆ ಹ ಹ ಹ ಹ” ಈ ನೃತ್ಯ ಸರಳ‌. ಆದರೆ ಈ ಅನುಕರಣ ಶಬ್ದಗಳಲ್ಲಿನ ನಾದ, ಮಾಧುರ್ಯ, ಸಂಗೀತ ಗುಣ ಮಕ್ಕಳಿಗೆ ‌ತುಂಬ ಇಷ್ಟವಾದ ಹಾಗೆ ಕಂಡಿತು.‌ ಜಿಂಜಿಂ, ನಂನಂ, ಓ ಓ, ಹಹ…ಮುಂತಾದ ಪದಗಳಿಗೆ ಅರ್ಥ ಇಲ್ಲದಿದ್ದರೂ […]

ಪಂಚವಟಿಯ ಪ್ರಸಂಗ

ಈಚೆಗೆ ಮೈಸೂರಿನಲ್ಲಿ ಒಳ್ಳೆಯ ಹೋಟಲೆಂದು ಖ್ಯಾತವಾಗಿರುವ ಪಂಚವಟಿ ಎಂಬ ಹೋಟಲಿಗೆ ಬಂಧುಮಿತ್ರರ ಜೊತೆ ನಾನು ಕೆಲ ದಿನಗಳ ಹಿಂದೆ ಹೋಗಿದ್ದೆ.‌ ನಮ್ಮ‌ ಪಕ್ಕದ ಮೇಜಿನಲ್ಲಿ ಮೂರು ಜನ ಯುವ ಹರೆಯದವರು ಕುಳಿತಿದ್ದರು. ಅದರಲ್ಲಿ ನನಗೆ ತೀರ ಹತ್ತಿರವಿದ್ದ ನನ್ನ ಪಕ್ಕದ ಕುರ್ಚಿಯಲ್ಲಿ ಕುಳಿತಿದ್ದ ಹುಡುಗಿ ಕನ್ನಡ ಬಲ್ಲವಳು. ಉಳಿದಿಬ್ಬರು ಹುಡುಗರು ತೆಲುಗು, ತಮಿಳು ಮಾತಾಡುವವರು ಅನ್ನಿಸಿತು. ಅವರನ್ನು ನೋಡಿದರೆ ವಿದ್ಯಾರ್ಥಿಗಳಿರಬೇಕು ಅನ್ನಿಸುತ್ತಿತ್ತು. ಖುಷಿಯಾಗಿ ಅವರು ಮಾತಾಡುತ್ತಿದ್ದರು, ಅಕ್ಕ ಪಕ್ಕದವರಿಗೆ ಅವರ ಉಲ್ಲಾಸದ ಮಾತುಗಳು ಕೇಳಿಸುತ್ತಿದ್ದವು.‌  ಮಾತಾಡುತ್ತಾ ಆ […]

ಕನ್ನಡ ತರಗತಿಯಲ್ಲಿ ಹುಟ್ಟಿದ ಹೊಸ ಬಳಕೆಮಾತು!

ಕಾಲೇಜುಗಳಲ್ಲಿ ಪಾಠ ಮಾಡುವ ಎಲ್ಲ ಕನ್ನಡ ಅಧ್ಯಾಪಕರಂತೆ ನಾನು ಸಹ, ನಮ್ಮ‌‌ ಮಹಾರಾಣಿ ಕಾಲೇಜಿನ ವಿದ್ಯಾರ್ಥಿಗಳು ಕನ್ನಡ ಉಚ್ಚರಿಸುವಾಗ ಮತ್ತು ಬರೆಯುವಾಗ ಮಾಡುವ ತಪ್ಪುಗಳ ಬಗ್ಗೆ ಅಸಮ್ಮತಿ ಸೂಚಿಸುತ್ತಾ, ಅವುಗಳನ್ನು ತಿದ್ದುತ್ತಾ ಇರುತ್ತೇನೆ. ದೀರ್ಘಾಕ್ಷರಗಳು, ಒತ್ತಕ್ಷರಗಳು, ಅಕಾರ-ಹಕಾರದಂತಹವುಗಳಲ್ಲಿನ‌ ಉಚ್ಚಾರ ದೋಷಗಳು, ಲೇಖನ ಚಿಹ್ನೆಗಳನ್ನು ಬಳಸದಿರುವುದು – ಇವು ಮಕ್ಕಳು ಮಾಡುವ ಸಾಮಾನ್ಯ ತಪ್ಪುಗಳಾಗಿರುತ್ತವೆ.‌ ನಾನು ಅವರ ಉಚ್ಚಾರ ಮತ್ತು ಬರವಣಿಗೆಯನ್ನು ಗಮನಿಸುತ್ತಾ ಹೋದಂತೆ ಅವರು ಅವಸರ ಮಾಡುವುದೇ ಈ ತಪ್ಪುಗಳಿಗೆ ಮುಖ್ಯ ಕಾರಣವೆಂದು ನನಗೆ ಅರಿವಾಯಿತು.‌ ಏಕೆಂದರೆ […]

“ಬಿಸಿ Jalebiಯ Crispy ಬೈಟನ್ನು ಸವಿಯಿರಿ” – ಕನ್ನಡ ಭಾಷೆಯ ಹೊಸ ವ್ಯಾಪಾರಿ ರೂಪ!!??

ನನ್ನ ಮಗಳು ಓದುತ್ತಿರುವ ಮಣಿಪಾಲ(ಉಡುಪಿ ಜಿಲ್ಲೆ)ದ ಹೋಟಲೊಂದರಲ್ಲಿ ಹಾಕಿದ್ದ ಪ್ರಕಟಣಾ ಫಲಕದಲ್ಲಿ  ನನ್ನ ಕಣ್ಣಿಗೆ ಬಿದ್ದ ವಾಕ್ಯ ಇದು – “ಬಿಸಿ Jalebiಯ Crispy ಬೈಟನ್ನು ಸವಿಯಿರಿ”. ಐದು ಪದಗಳಿರುವ ಕನ್ನಡ ವಾಕ್ಯ ಇದು. ಇದರಲ್ಲಿ ‌’ಬಿಸಿ’ ಮತ್ತು ‘ಸವಿಯಿರಿ’ ಎರಡೂ ಅಚ್ಚ ಕನ್ನಡದ ಪದಗಳು. ಇನ್ನು ಮೂರು ಪದಗಳಲ್ಲಿ ಎರಡು ಇಂಗ್ಲಿಷ್ ಭಾಷೆಯಲ್ಲಿಯೇ ಬರೆದ ಪದಗಳಾದರೆ( Jalebi, Crispy), ಬೈಟನ್ನು ಪದ bite ಎಂಬ ಇಂಗ್ಲಿಷ್ ಕ್ರಿಯಾಪದವನ್ನು ಕನ್ನಡದ ದ್ವಿತೀಯ ವಿಭಕ್ತಿ ಪ್ರತ್ಯಯವಾದ ‘ಅನ್ನು’ವನ್ನು ಸೇರಿಸಿ‌ –  […]

“ಐ ಲವ್ ದ  ನಾಯಿಮರಿ ಸಾಂಗ್ ಮ್ಯಾಮ್”!

ನಮ್ಮ ಚಿತ್ರನಾಟ್ಯ ಫೌಂಡೇಶನ್ ಭರತನಾಟ್ಯ ಶಾಲೆಯ ಪುಟ್ಟ ಚಾರ್ವಿ ಹೇಳಿದ ಮಾತು ಇದು. ಮನೆಯಲ್ಲಿ ‌ಮಾರ್ವಾಡಿ ಭಾಷೆ ಮಾತಾಡುವ, ಬೆಣ್ಣೆ ಬೊಂಬೆಯ ಹಾಗೆ ಮುದ್ದಾಗಿರುವ, ಐದು ವರ್ಷ ವಯಸ್ಸಿನ ಮಗು ಅದು. ಕಳೆದ ಏಳೆಂಟು ತಿಂಗಳಿಂದ ನಮ್ಮಲ್ಲಿ ನಾಟ್ಯ ಕಲಿಯುತ್ತಿದೆ.         ಭರತನಾಟ್ಯದ ಪ್ರಾರಂಭದ ಹಂತದಲ್ಲಿ ಬರೀ ಅಡವು(ಹೆಜ್ಜೆ)ಗಳನ್ನು ಹೇಳಿಕೊಟ್ಟರೆ ಮಕ್ಕಳಿಗೆ ಬೇಸರ ಆಗಬಹುದೆಂದು ಪ್ರತಿ ತರಗತಿಯಲ್ಲೂ ಯಾವುದಾದರೊಂದು ಶಿಶುಗೀತೆಗೆ ಅವರಿಗೆ ನೃತ್ಯ ಹೇಳಿಕೊಡುವ ಅಭ್ಯಾಸ ನಮ್ಮದು. ಇದೇ ರೀತಿಯಲ್ಲಿ, ‘ಕನ್ನಡದ ಮಕ್ಕಳ ಸಾಹಿತ್ಯದ ರಾಜ […]

Page 11 of 16

Kannada Sethu. All rights reserved.