ಎ.ಎಸ್.ಮೂರ್ತಿ ಅವರ ರಂಗಭೂಮಿಯ ಪರಂಪರೆಯನ್ನು ಸಾರ್ಥಕವಾಗಿ ಮುಂದುವರಿಸಿಕೊಂಡು ಬರುತ್ತಿರುವ ಬೆಂಗಳೂರಿನ ‘ವಿಜಯನಗರ ಬಿಂಬ’ ಸಂಸ್ಥೆಯು ಪ್ರತಿ ವರ್ಷವೂ ಮಕ್ಕಳಿಗಾಗಿ ಬೇಸಿಗೆ ಶಿಬಿರವನ್ನು ಆಯೋಜಿಸುತ್ತದೆ. ಹಾಡು, ನಾಟ್ಯ, ಚಿತ್ರ, ಕಾವ್ಯ ಮುಂತಾದ ಕಲೆಗಳಲ್ಲಿ ಮಕ್ಕಳಿಗೆ ತರಬೇತಿ ಕೊಡಲು ಆಯಾ ಕ್ಷೇತ್ರದ ತಜ್ಞರನ್ನು ಆಯೋಜಕರು ಆಹ್ವಾನಿಸುತ್ತಾರೆ. ಇದೇ ಹಿನ್ನೆಲೆಯಲ್ಲಿ ಈ ಲೇಖಕಿಯನ್ನು ಮಕ್ಕಳಿಗೆ ಕವಿತಾ ರಚನೆಯನ್ನು ಹೇಳಿಕೊಡಲು ಆಹ್ವಾನಿಸುತ್ತಿರುತ್ತಾರೆ. ಮುಗ್ಧ ಮಕ್ಕಳಿಗೆ ಕವಿತಾ ರಚನೆ ಎಂಬ ಮಾಯಾಲೋಕದ ಪರಿಚಯ ಮಾಡಿಸುವುದು ಖುಷಿ ನೀಡುವ ಹಾಗೂ ಅದೇ ಹೊತ್ತಿನಲ್ಲಿ ತುಂಬ ಸವಾಲೊಡ್ಡುವ […]
ಕನ್ನಡ ಪ್ರಸಂಗ
ಇದು ಲೇಖಕಿಯು ಕನ್ನಡದೊಂದಿಗೆ ಒಡನಾಡಿದ ಅನುಭವಗಳ ಕಥನವಾಗಿದೆ. ಕನ್ನಡ ಜಗತ್ತು ತನಗೆ ಕಲಿಸಿದ ಹಾಗೂ ಕನ್ನಡ ಭಾಷೆ ಹಾಗೂ ಸಾಹಿತ್ಯಗಳನ್ನು ತಾನು ಕಲಿಸಿದ ದಾರಿಯಲ್ಲಿನ ವಿವಿಧ ಅನುಭವಗಳನ್ನು ಓದುಗರೊಂದಿಗೆ ಹಂಚಿಕೊಳ್ಳುವ ಪ್ರಯತ್ನವಾಗಿರುತ್ತದೆ ಇದು. ವಾರಕ್ಕೆ ಒಂದು ಕನ್ನಡ ಪ್ರಸಂಗದಂತೆ ಈ ಅಂಕಣವು ಮೂಡಿ ಬರಲಿದೆ.
Like us!
Follow us!