ಕಾಲೇಜುಗಳಲ್ಲಿ ಕನ್ನಡ ಪಾಠ ಮಾಡುವ ಎಲ್ಲ ಅಧ್ಯಾಪಕರ ಕಿವಿಗಳಿಗೂ ಪರೀಕ್ಷಾ ಸಮಯದಲ್ಲಿ ತಲುಪಿಯೇ ತಲುಪುವ ಒಂದು ಕೋರಿಕೆ ಇದು. ತರಗತಿಗೆ ಬಂದರೋ ಬಿಟ್ಟರೋ, ಪಾಠ ಕೇಳಿದರೋ ಬಿಟ್ಟರೋ ವಿದ್ಯಾರ್ಥಿಗಳು ತಮ್ಮ ಕನ್ನಡ ವಿಷಯದ ಪರೀಕ್ಷೆಗೆ ಒಂದು ಅಥವಾ ಎರಡು ದಿನ ಇದ್ದಾಗ ತಮ್ಮ ಅಧ್ಯಾಪಕರ ಮುಂದೆ ಈ ‘ ಸಮ್ಮರಿ ಕೋರುವ’ ವಿನಂತಿಯನ್ನಂತೂ ಇಟ್ಟೇ ಇಡುತ್ತಾರೆ. ಸಿರಿಗನ್ನಡವನ್ನು ಅವರು ನೆನಪಿಸಿಕೊಳ್ಳುವ ಪರಿ ಇದು!! “ಅಯ್ಯಯ್ಯೋ …ಏನೂ ಓದಿಲ್ವಲ್ಲಪ್ಪಾ… […]
ಕನ್ನಡ ಪ್ರಸಂಗ
ಇದು ಲೇಖಕಿಯು ಕನ್ನಡದೊಂದಿಗೆ ಒಡನಾಡಿದ ಅನುಭವಗಳ ಕಥನವಾಗಿದೆ. ಕನ್ನಡ ಜಗತ್ತು ತನಗೆ ಕಲಿಸಿದ ಹಾಗೂ ಕನ್ನಡ ಭಾಷೆ ಹಾಗೂ ಸಾಹಿತ್ಯಗಳನ್ನು ತಾನು ಕಲಿಸಿದ ದಾರಿಯಲ್ಲಿನ ವಿವಿಧ ಅನುಭವಗಳನ್ನು ಓದುಗರೊಂದಿಗೆ ಹಂಚಿಕೊಳ್ಳುವ ಪ್ರಯತ್ನವಾಗಿರುತ್ತದೆ ಇದು. ವಾರಕ್ಕೆ ಒಂದು ಕನ್ನಡ ಪ್ರಸಂಗದಂತೆ ಈ ಅಂಕಣವು ಮೂಡಿ ಬರಲಿದೆ.
Like us!
Follow us!