ಕೆಲವು ವರ್ಷಗಳ ಹಿಂದೆ ಒಂದು ದಿನ ನಾನು ಮತ್ತು ನನ್ನ ಜೀವನ ಸಂಗಾತಿ ರವಿಕುಮಾರ್, ಕೋರಮಂಗಲಕ್ಕೆ ಬ್ಯಾಂಕಿನ ಕೆಲಸಕ್ಕೆಂದು ಹೋಗಿದ್ದೆವು. ನಾನು ಕಾಲೇಜಿನಿಂದ ನೇರವಾಗಿ ಬ್ಯಾಂಕಿಗೆ ಹೋಗಿದ್ದರಿಂದ ಮತ್ತು ಅಲ್ಲೂ ಕೆಲಸದಲ್ಲಿ ತುಸು ವಿಳಂಬವಾದದ್ದರಿಂದ ಹೊಟ್ಟೆ ಹಸಿಯುತ್ತಿತ್ತು. ಸರಿ, ಕೆಲಸವಾದ ನಂತರ ಹತ್ತಿರದ ಹೋಟಲೊಂದಕ್ಕೆ ಹೋಗಿ ಏನಾದರೂ ತಿಂಡಿ ತಿನ್ನೋಣವೆಂದು ಕುಳಿತೆವು.
ಕನ್ನಡ ಪ್ರಸಂಗ
ಇದು ಲೇಖಕಿಯು ಕನ್ನಡದೊಂದಿಗೆ ಒಡನಾಡಿದ ಅನುಭವಗಳ ಕಥನವಾಗಿದೆ. ಕನ್ನಡ ಜಗತ್ತು ತನಗೆ ಕಲಿಸಿದ ಹಾಗೂ ಕನ್ನಡ ಭಾಷೆ ಹಾಗೂ ಸಾಹಿತ್ಯಗಳನ್ನು ತಾನು ಕಲಿಸಿದ ದಾರಿಯಲ್ಲಿನ ವಿವಿಧ ಅನುಭವಗಳನ್ನು ಓದುಗರೊಂದಿಗೆ ಹಂಚಿಕೊಳ್ಳುವ ಪ್ರಯತ್ನವಾಗಿರುತ್ತದೆ ಇದು. ವಾರಕ್ಕೆ ಒಂದು ಕನ್ನಡ ಪ್ರಸಂಗದಂತೆ ಈ ಅಂಕಣವು ಮೂಡಿ ಬರಲಿದೆ.