ಮೈಸೂರು, ಬೆಂಗಳೂರು ಮುಂತಾದ ಹಳೆ ಮೈಸೂರಿನ ಪ್ರದೇಶಗಳಲ್ಲಿ ಸ್ಥಳೀಯ ವ್ಯಾಪಾರಿಗಳ ಬಳಿ ಹೂವು, ತರಕಾರಿ ಮುಂತಾದವನ್ನು ಕೊಂಡವರಿಗೆ ‘ಕೊಸರು’ ಎಂಬ ಪದ ಹಾಗೂ ಪ್ರಕ್ರಿಯೆಯ ಪರಿಚಯ ಇರುತ್ತದೆ ಎಂದು ನಾವು ಭಾವಿಸಬಹುದು. ಉದಾಹರಣೆಗೆ ನಾಲ್ಕು ರಸ್ತೆಗಳು ಕೂಡುವ ವೃತ್ತದ ಬಳಿ ಹೂಮಾರಾಟ ಮಾಡುತ್ತಿರುವ, ಹಳೆಕಾಲದ ವ್ಯಾಪಾರಿಯೊಬ್ಬರ ಬಳಿ ನೀವು ಒಂದು ಮೊಳ ಮಲ್ಲಿಗೆ ಅಥವಾ ಕನಕಾಂಬರ ಹೂವನ್ನು ಕೊಂಡಿರಿ ಎಂದಿಟ್ಟುಕೊಳ್ಳೋಣ. ಬೆಲೆ ವಿಚಾರಿಸಿ ನಿಮಗೆ ಎಷ್ಟು ಬೇಕೋ ಅಷ್ಟನ್ನು ಕೊಡುವಂತೆ ಹೇಳಿ ವ್ಯಾಪಾರಿಗೆ ನೀವು ಹಣ ಕೊಟ್ಟು, […]
ಕನ್ನಡ ಪ್ರಸಂಗ
ಇದು ಲೇಖಕಿಯು ಕನ್ನಡದೊಂದಿಗೆ ಒಡನಾಡಿದ ಅನುಭವಗಳ ಕಥನವಾಗಿದೆ. ಕನ್ನಡ ಜಗತ್ತು ತನಗೆ ಕಲಿಸಿದ ಹಾಗೂ ಕನ್ನಡ ಭಾಷೆ ಹಾಗೂ ಸಾಹಿತ್ಯಗಳನ್ನು ತಾನು ಕಲಿಸಿದ ದಾರಿಯಲ್ಲಿನ ವಿವಿಧ ಅನುಭವಗಳನ್ನು ಓದುಗರೊಂದಿಗೆ ಹಂಚಿಕೊಳ್ಳುವ ಪ್ರಯತ್ನವಾಗಿರುತ್ತದೆ ಇದು. ವಾರಕ್ಕೆ ಒಂದು ಕನ್ನಡ ಪ್ರಸಂಗದಂತೆ ಈ ಅಂಕಣವು ಮೂಡಿ ಬರಲಿದೆ.
Like us!
Follow us!