ಮೊನ್ನೆ ದಿನ, ಎಂದಿನಂತೆ ನನ್ನ ದ್ವಿಚಕ್ರಿಣಿಯಲ್ಲಿ( ಹೊಂಡಾ ಆಕ್ಟಿವಾ ಸ್ಕೂಟರು) ನಾನು ಕಾಲೇಜಿಗೆ ಹೋಗುತ್ತಿದ್ದಾಗ, ರಾಜಾಜಿನಗರ ಪ್ರವೇಶಸ್ಥಳದಲ್ಲಿ ( ಎಂಟ್ರೆನ್ಸ್) ರಸ್ತೆಗಳು ಕೂಡುವ ಬಿಂದುವಿನಲ್ಲಿ ಸಂಚಾರದೀಪ ಕೆಂಪಾಯಿತು. ಸರಿ, ಗಾಡಿ ನಿಲ್ಲಿಸಿ, ಆ ದೀಪ ಹಸಿರಾಗಲು ಕಾಯುತ್ತಿದ್ದೆ. ಆಗ ನನ್ನ ಮುಂದೆ ನಿಂತಿದ್ದ ಆಟೋರಿಕ್ಷಾ ಒಂದರ ಹಿಂದೆ ಬರೆದಿದ್ದ ಬರಹವೊಂದು ನನ್ನ ಗಮನ ಸೆಳೆಯಿತು. “ಹೇಳಿ ಮಾಡಿಸಿದ ಜೋಡಿ ಅನ್ನುವುದು ಸಿಗುವುದು ಚಪ್ಪಲಿಯ ವಿಷಯದಲ್ಲಿ ಮಾತ್ರ, ಇನ್ನೆಲ್ಲ ಹೊಂದಾಣಿಕೆ” ಎಂಬ ಸಾಲು ಅದು! ಅಬ್ಬ ಅನ್ನಿಸಿತು. ಬದುಕಿನ […]
ಕನ್ನಡ ಪ್ರಸಂಗ
ಇದು ಲೇಖಕಿಯು ಕನ್ನಡದೊಂದಿಗೆ ಒಡನಾಡಿದ ಅನುಭವಗಳ ಕಥನವಾಗಿದೆ. ಕನ್ನಡ ಜಗತ್ತು ತನಗೆ ಕಲಿಸಿದ ಹಾಗೂ ಕನ್ನಡ ಭಾಷೆ ಹಾಗೂ ಸಾಹಿತ್ಯಗಳನ್ನು ತಾನು ಕಲಿಸಿದ ದಾರಿಯಲ್ಲಿನ ವಿವಿಧ ಅನುಭವಗಳನ್ನು ಓದುಗರೊಂದಿಗೆ ಹಂಚಿಕೊಳ್ಳುವ ಪ್ರಯತ್ನವಾಗಿರುತ್ತದೆ ಇದು. ವಾರಕ್ಕೆ ಒಂದು ಕನ್ನಡ ಪ್ರಸಂಗದಂತೆ ಈ ಅಂಕಣವು ಮೂಡಿ ಬರಲಿದೆ.
Like us!
Follow us!