ಕನ್ನಡ ಪ್ರಸಂಗ

ಇದು ಲೇಖಕಿಯು ಕನ್ನಡದೊಂದಿಗೆ ಒಡನಾಡಿದ ಅನುಭವಗಳ ಕಥನವಾಗಿದೆ. ಕನ್ನಡ ಜಗತ್ತು ತನಗೆ ಕಲಿಸಿದ ಹಾಗೂ ಕನ್ನಡ ಭಾಷೆ ಹಾಗೂ ಸಾಹಿತ್ಯಗಳನ್ನು ತಾನು ಕಲಿಸಿದ ದಾರಿಯಲ್ಲಿನ ವಿವಿಧ ಅನುಭವಗಳನ್ನು ಓದುಗರೊಂದಿಗೆ ಹಂಚಿಕೊಳ್ಳುವ ಪ್ರಯತ್ನವಾಗಿರುತ್ತದೆ ಇದು. ವಾರಕ್ಕೆ ಒಂದು ಕನ್ನಡ ಪ್ರಸಂಗದಂತೆ ಈ ಅಂಕಣವು ಮೂಡಿ ಬರಲಿದೆ.

‘ಮಕ್ಕಿ ಕಾ ಮಕ್ಕಿ’ಗೆ ನೊಣಂಪ್ರತಿ ಅನ್ನುವ ಸಂವಾದಿ ಪದ ಇದೆ ಕನ್ನಡದಲ್ಲಿ!

 ಪರೀಕ್ಷೆ, ವಿದ್ಯಾರ್ಥಿ, ಮೌಲ್ಯಮಾಪನ ಈ ವಿಷಯಗಳ ಬಗ್ಗೆ ಮಾತಾಡುವಾಗ ನಾವೆಲ್ಲರೂ ಒಂದಲ್ಲ ಒಂದು ಸಲ ‘ಮಕ್ಕಿ ಕಾ ಮಕ್ಕಿ’ ಪದವನ್ನು ಕೇಳಿಯೇ ಇರುತ್ತೇವಲ್ಲವೆ‌? ಒಂದಕ್ಷರವನ್ನೂ ಬಿಡದೆ ನಕಲು ಮಾಡುವುದನ್ನು ಈ ಪದದಿಂದ ಸೂಚಿಸಲಾಗುತ್ತದೆ. ನೊಣ ಇದ್ದರೆ ಅದನ್ನೂ ಬಿಡದೆ ಹಾಗೇ ನಕಲು ಮಾಡಿಬಿಡುವುದು!  ಸ್ವಂತಿಕೆ ಇಲ್ಲದೆ ಇನ್ನೊಬ್ಬರನ್ನು ಅನುಕರಿಸುವವರನ್ನು ಟೀಕಿಸಲು ಈ ಪದವನ್ನು ಬಳಸುತ್ತಾರೆ. ಲೇಖಕಿ ಅನುಪಮಾ ಪ್ರಸಾದ್ ಅವರು ಬರೆದಿರುವ  ‘ಕುಂತ್ಯಮ್ಮಳ ಮಾರಾಪು’ ಕಥೆ ಓದುತ್ತಿದ್ದಾಗ ‘ನೊಣಂಪ್ರತಿ’ ಅನ್ನುವ ಪದವನ್ನು ಓದಿದೆ, ಮಕ್ಕಿ ಕಾ ಮಕ್ಕಿ […]

ಕಾಳು ಮೆಣಸೋ…ಒಳ್ಳೆ ಮೆಣಸೋ…!

 ನಮ್ಮ ತಾಯಿಯವರು ಉಡುಪಿ ಮೂಲದವರಾಗಿದ್ದು ಕೊಡಗಿನಲ್ಲಿ ಬೆಳೆದವರು. ‌ಅವರು ಅಡಿಗೆ, ಊಟಗಳ ಬಗ್ಗೆ ಮಾತಾಡುವಾಗ ‘ಒಳ್ಳೆ ಮೆಣಸು’ ಎಂಬ ಪದವನ್ನು ಸಹಜವಾಗಿ ಬಳಸುತ್ತಿದ್ದರು. ಅವರು ಆ ಪದ ಬಳಸುತ್ತಿದ್ದುದು ಕರಿಮೆಣಸು/ಕಾಳು ಮೆಣಸು ಅಥವಾ ಮೆಣಸಿನ ಕಾಳು ಎಂಬ ಪದಕ್ಕೆ ಸಂವಾದಿಯಾಗಿ(ಪೆಪ್ಪರ್).  ಕನ್ನಡ ಮಾತಾಡುವ ಎಲ್ಲ ಮನೆಗಳಲ್ಲೂ  ಒಳ್ಳೆ ಮೆಣಸು ಎಂಬ  ಈ ಪದ ಬಳಕೆಯಲ್ಲಿದೆಯೇ ಎಂಬ ಕುತೂಹಲ ನನಗೆ. ಆದರೆ ಈ ಪದವನ್ನು ಜನ ಅಷ್ಟಾಗಿ ಬಳಸುವುದಿಲ್ಲವೇನೋ.   ಒಂದು ಮಸಾಲಾ ಪದಾರ್ಥದ ಹೆಸರಿನ ಹಿಂದೆ ಈ ‘ಒಳ್ಳೆ’ ಎಂಬ […]

ಅಭಿನಂದಿತರೋ, ಅಭಿನಂದಿಸುವವರೋ‌..!? ಪದಬಳಕೆಯಲ್ಲಿನ ಅಜಾಗರೂಕತೆ ತಂದ ಗೊಂದಲ

ಹೀಗೇ ತತ್ರಾಪಿ ( casually) ಮಾತಾಡುತ್ತಿದ್ದಾಗ ನನ್ನ ಸಾಹಿತಿ-ಕಲಾವಿದ ಮಿತ್ರರೊಬ್ಬರು ಈಚೆಗೆ ತಮಗೆ ಆದ ಒಂದು ಪೇಚಿನ ಪ್ರಸಂಗವೊಂದನ್ನು ಹೇಳಿದರು. ಪದಗಳನ್ನು ಬಳಸುವಾಗ ಜಾಗ್ರತೆ ವಹಿಸದಿದ್ದರೆ ಏನಾಗಬಹುದು ಎಂಬುದಕ್ಕೆ ಈ ಪ್ರಸಂಗ ಉದಾಹರಣೆಯಾಗುತ್ತದೆ ಅನ್ನಿಸಿತು ನನಗೆ. ಅದಕ್ಕಾಗಿ ಅದನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಕೆಲವು ದಿನಗಳ ಹಿಂದೆ, ಬೆಂಗಳೂರಿನಿಂದ ಸುಮಾರು ಇನ್ನೂರು ಕಿ.ಮೀ‌. ದೂರ ಇರುವ ಊರಿನ ಸಾಹಿತ್ಯಕ ಸಂಘದವರೊಬ್ಬರು ಇವರಿಗೆ ದೂರವಾಣಿ ಕರೆ ಮಾಡಿ, ಮುಂದಿನ ವಾರ ಇಂತಹ ದಿನ ‘ಒಂದು ಸನ್ಮಾನ ಇಟ್ಕೊಂಡಿದೀವಿ, ದಯಮಾಡಿ ಬರಬೇಕು […]

ವಿದ್ಯೆ ಕೊಡುವ ಶಾಲೆಯ ಹೆಸರಿನ ನಾಮಫಲಕದಲ್ಲೇ ಅಕ್ಷರ ತಪ್ಪು! ಅಯ್ಯೋ…!

ಈಚೆಗೆ ಮದುವೆ ಛತ್ರವೊಂದನ್ನು ಹುಡುಕುತ್ತಿದ್ದಾಗ ನನಗೆ ಆದ ಅನುಭವ ಇದು.  ಬೃಹತ್ ಬೆಂಗಳೂರಿನ ವಿಶಾಲ ವಿಸ್ತಾರದಲ್ಲಿ ಸ್ಥಳಗಳನ್ನು ಹುಡುಕುವುದು ಸುಲಭವೇನಲ್ಲ. ಬಂಧುಗಳ ಮದುವೆಯೊಂದಕ್ಕೆ ಆಹ್ವಾನ ಬಂದಿದ್ದು, ಬೆಂಗಳೂರೆಂಬೋ ಬೆಂಗಳೂರಿನಲ್ಲಿ, ನಾನು ಮತ್ತು ನನ್ನ ಮನೆಯವರು ನಮ್ಮ ಮಟ್ಟಿಗೆ ಅಪರಿಚಿತವಾದ ಪ್ರದೇಶದಲ್ಲಿ ಇದ್ದ  ಆ ಮದುವೆ ಛತ್ರವನ್ನು ಹುಡುಕುತ್ತಿದ್ದೆವು. ಗೂಗಲ್ ರಾಯರು ನಮಗೆ ಮಾರ್ಗದರ್ಶನ ಮಾಡಲು ಸೋತಾಗ ಅಲ್ಲೇ ಓಡಾಡುತ್ತಿದ್ದ ಜನರ ಬಳಿ ‘ಆ ಛತ್ರ ಎಲ್ಲಿದೆ’ ಎಂದು ಕೇಳಿದೆವು. “ಅಲ್ಲೇ ಆ ಸ್ಕೂಲ್ ಪಕ್ಕ  ಇದೆ ನೋಡಿ” ಎಂದು […]

ಓಹ್…..ಅದು ಮೈಸೂರು ಬೇಳೆ ಅಲ್ಲ ಮಸೂರು ಬೇಳೆ!

ದಿನಸಿ ಅಂಗಡಿಗೆ ಹೋದಾಗಲೆಲ್ಲ  ತೊಗರಿಬೇಳೆಗಿಂತ ಚಿಕ್ಕದಾದ, ತನ್ನ ಕೇಸರಿ-ನಸುಗೆಂಪು ಬಣ್ಣದಿಂದ ಕಣ್ಸೆಳೆಯುತ್ತಿದ್ದ  ಬೇಳೆಯೊಂದನ್ನು ನಾನು ನೋಡುತ್ತಿದ್ದೆ‌. ನಮ್ಮ ಮನೆಯಲ್ಲಿ ಅದನ್ನು ಯಾವತ್ರೂ ತಂದ ನೆನಪಿಲ್ಲ ನನಗೆ. ಅಂಗಡಿಯವನನ್ನು ಒಮ್ಮೆ ಕೇಳಿದಾಗ ‘ಅದರ ಹೆಸರು ಮಸೂರ್ ದಾಲ್ ಮೇಡಂ’ ಅಂತ ಹೇಳಿದ್ದ. ಆ ನಂತರವೂ ಒಮ್ಮೊಮ್ಮೆ ಅದು ಕಣ್ಣಿಗೆ ಬೀಳುತ್ತಿದ್ದಾಗ ಅದರ ಹೆಸರು ಮನಸ್ಸಿಗೆ ಬರುತ್ತಿತ್ತಾದರೂ ಅಷ್ಟೇನೂ ಅದು ನನ್ನ ಕಾಡಿರಲಿಲ್ಲ.  ಆದರೆ, ಈಚೆಗೆ ನನ್ನ ಸಹೋದ್ಯೋಗಿಯೊಬ್ಬರು “ನಮ್ಮನೆಯಲ್ಲಿ ಇವತ್ತು ಮಸೂರ್ ದಾಲ್’ ಮಾಡಿದ್ದೆ.‌ ಅದು ತುಂಬಾ ಚೆನ್ನಾಗಿ […]

ಕುದುರೆ ಕಂಡ್ರೆ ಕಾಲ್ನೋವು, ಕನ್ನಡ ಕಂಡ್ರೆ ಕೈನೋವು?

ಇವತ್ತಿನ ಕನ್ನಡ ಪ್ರಸಂಗವನ್ನು ನಾನು ಬಹಳ ಖುಷಿಯಿಂದೇನೂ ಬರೆಯುತ್ತಿಲ್ಲ. ಒಬ್ಬ ಕನ್ನಡ ಅಧ್ಯಾಪಕಿಯಾಗಿ ತರಗತಿಯಲ್ಲಿ ನನಗೆ ಆದ ಆತಂಕಮಯ ಅನುಭವವೊಂದನ್ನು ನಿಮ್ಮೊಂದಿಗೆ ಹಂಚ್ಕೋತಿದ್ದೇನೆ‌. ಬೆಂಗಳೂರಿನ ಮಹಾರಾಣಿ ಕಾಲೇಜಿನ ಬಿ.ಎಸ್ಸಿ. ಪದವಿ ತರಗತಿಗಳಿಗೆ ಕನ್ನಡ ಪಾಠ ಮಾಡುವ ನಾನು, ಈಚೆಗೆ ವಿದ್ಯಾರ್ಥಿನಿಯರಿಗೆ ಆಂತರಿಕ ಮೌಲ್ಯಮಾಪನಕ್ಕೆ ಸಂಬಂಧಿಸಿದ ಕಿರುಪರೀಕ್ಷೆ ಕೊಟ್ಟಿದ್ದೆ. ಆ ಮಕ್ಕಳು ಮೂವತ್ತು ಅಂಕಗಳಿಗಾಗಿ ಒಂದೂಕಾಲು ಗಂಟೆ ಅವಧಿಯ ಪರೀಕ್ಷೆ ಬರೆಯಬೇಕಿತ್ತು. ಪರೀಕ್ಷೆ ಅವಧಿಯು  ಮುಗಿಯುತ್ತಾ ಬಂದಂತೆ ಮಕ್ಕಳ ಒಂದು ವರ್ತನೆ ನನ್ನ ಗಮನ ಸೆಳೆಯಿತು; ಅದೇನೆಂದರೆ ಮುಖ […]

“ಲವಲವಿಕೆ”!  ಎಲ್ಲಿಂದ ಬಂತು ಈ ಪದ ಕನ್ನಡಕೆ!?

‘ವಿದ್ಯಾರ್ಥಿಗಳು ತುಂಬ ಲವಲವಿಕೆಯಿಂದ ಸಮಾರಂಭದಲ್ಲಿ ಭಾಗವಹಿಸಿದರು’. ‘ನರ್ತಕಿಯ ಲವಲವಿಕೆಯು ಪ್ರೇಕ್ಷಕರಲ್ಲಿ ಉತ್ಸಾಹ ಮೂಡಿಸಿತು’. ‘ಹದಿಹರೆಯದ ಸಹಜ ಲವಲವಿಕೆಯಿಂದ ಕಂಗೊಳಿಸುತ್ತಿದ್ದ ಪ್ರೇಕ್ಷಕ ಸಮುದಾಯವು ಅತಿಥಿಗಳ ಗಮನ ಸೆಳೆಯಿತು’.  ಇಂತಹ ವಾಕ್ಯಗಳನ್ನು  ಓದಿದಾಗೆಲ್ಲ ನನಗೆ ಈ ‘ಲವಲವಿಕೆ’ ಎಂಬ ಪದದ ಬಗ್ಗೆ ಬಹಳ ಕುತೂಹಲ ಉಂಟಾಗ್ತಿತ್ತು. ಕನ್ನಡ ಸಾಹಿತ್ಯ ಪರಿಷತ್ತಿನ ಸಂಕ್ಷಿಪ್ತ ಕನ್ನಡ ನಿಘಂಟು ಈ ನಾಮಪದಕ್ಕೆ ‘ಉತ್ಸಾಹ, ಹುರುಪು, ಹಂಬಲ‌, ಆಸಕ್ತಿ’ ಎಂಬ ಅರ್ಥಗಳನ್ನು ಕೊಡುತ್ತದೆ‌. ಅದೇ ನಿಘಂಟಿನಲ್ಲಿ ‘ಲವಲವಿಸು’ ಎಂಬ ಕ್ರಿಯಾಪದ ಸಹ ಇದೆ. ಇದಕ್ಕೆ ‘ಉತ್ಸುಕವಾಗು, […]

“ಕಸುಬು ಕಲೀಬೇಕು ಕಣ್ರಪ್ಪಾ, ಕಸುಬು ಕಲೀರೋ…”

ನಮ್ಮ ತಂದೆಯವರು ನಮ್ಮ ಬಾಲ್ಯ ಕಾಲದಲ್ಲಿ ‘ತನ್ನ ತಂದೆ( ಅಂದರೆ ನಮ್ಮ ತಾತ) ಹೇಳುತ್ತಿದ್ರು’ ಎಂದು ಯಾವಾಗಲೂ ನೆನಪಿಸಿಕೊಳ್ಳುತ್ತಿದ್ದ ಮಾತಿದು‌ ; “ಕಸುಬು ಕಲೀಬೇಕು ಕಣ್ರಪ್ಪಾ, ಕಸುಬು ಕಲೀರೋ..”. ಬಹುಶಃ ಕನ್ನಡಿಗರು ತಮ್ಮ ಮಕ್ಕಳಿಗೆ, ಮೊಮ್ಮಕ್ಕಳಿಗೆ ಬಳುವಳಿಯಾಗಿ ಕೊಟ್ಟ ಜೀವನವಿವೇಕದ ಒಂದು ಮುಖ್ಯ ತುಣುಕು ಈ ಮಾತು ಎಂದು ನನ್ನ ಅನಿಸಿಕೆ‌‌. ನನ್ನ ಈ ಅನಿಸಿಕೆಗೆ ಕಾರಣ ಹೇಳುತ್ತೇನೆ. ಕಸುಬು( ಕಸಬು ಎಂದು ಕೂಡ ಬರೆಯುತ್ತಾರೆ) ಎಂಬ ಪದಕ್ಕೆ ಇರುವ ಮುಖ್ಯ ಅರ್ಥ ಎಂದರೆ ಉದ್ಯೋಗ, ಕೆಲಸ […]

ಕಣ್ಗುಡ್ಡೆ ಕಾಯಿ!  ನೋಡಿದಿರಾ ಕನ್ನಡಿಗರು ಹೆಸರಿಟ್ಟರೆ ಅದು ಕಿವಿಗೆ ಅಕ್ಷರ ಮಿಠಾಯಿ!ಕಣ್ಗುಡ್ಡೆ ಕಾಯಿ!  ನೋಡಿದಿರಾ

ನಗರಗಳ ಮೇಲ್ದರ್ಜೆಯ      ಮಾರುಕಟ್ಟೆಗಳಲ್ಲಿ ಅಥವಾ ಐಸ್ಕ್ರೀಮ್ ( ಕನ್ನಡದಲ್ಲಿ ‘ಮಂಜುಕೆನೆ’ ಎಂಬ ಸಂವಾದಿ ಪದ ಇದೆ ಐಸ್ಕ್ರೀಮ್ ಗೆ. ಆದರೆ ಐಸ್ಕ್ರೀಮ್ ಪದವು ಕನ್ನಡದ್ದೇ ಎಂಬಷ್ಟು ಜನಪ್ರಿಯ ಆಗಿದೆ, ಹೀಗಾಗಿ ಅದೇ ಬಳಕೆಯಲ್ಲಿದೆ.) ಅಂಗಡಿಗಳಲ್ಲಿ  ಲಿಚೀ ( Lychee) ಎಂಬ ಹಣ್ಣನ್ನು ಅಥವಾ ಅದರ ತಿರುಳನ್ನು ನಾವು ನೋಡಬಹುದು/ ಅದರ ಹೆಸರನ್ಬು ಕೇಳಬಹುದು. ಮಕ್ಕಳು ಆಡುವ ಗೋಲಿಗಿಂತ ತುಸುವೇ ದೊಡ್ಡದಿರುವ ಹಣ್ಣು ಇದು ;ಒರಟಾದ ಕೆಂಪು ಸಿಪ್ಪೆ ಹೊಂದಿದ್ದು ಅದನ್ನು ಸುಲಿದರೆ ಬಿಳಿಯಾದ, ರುಚಿಯಾದ ರಸಮಯ ತಿರುಳು […]

“ಇಲ್ಲಿ ‘ಕಬ್ಬಿನ ಜ್ಯೂಸ್’ ದೊರೆಯುತ್ತದೆ”  ಯಾಕೆ ಈ ಪದ ಬಳಕೆ!?

ನಾನು ವಾಸಿಸುವ ಬೆಂಗಳೂರು ನಗರದ ಬಡಾವಣೆಯಾದ ಹಂಪಿನಗರದಲ್ಲಿಮೊನ್ನೆ, ಮನೆಸಾಮಾನು ತರಲೆಂದು ಅಂಗಡಿಗೆ ಹೋಗಿದ್ದಾಗ ಒಂದು‌ ಪ್ರಕಟಣಾ ಫಲಕ ನನ್ನ ಕಣ್ಣಿಗೆ ಬಿತ್ತು. “ಇಲ್ಲಿ ಕಬ್ಬಿನ ಜ್ಯೂಸ್ ದೊರೆಯುತ್ತದೆ” ಎಂದು ಸಾರುತ್ತಿದ್ದ ಫಲಕವದು. ನೋಡಿದರೆ ಅದು ಒಂದು ಕಬ್ಬಿನ ಹಾಲಿನ ಅಂಗಡಿಯಾಗಿತ್ತು. ಅಲ್ಲೇ ಪಕ್ಕದಲ್ಲಿ  ಇದ್ದ ಇನ್ನೊಂದು ಫಲಕದಲ್ಲಿ ‘Sugar cane juice available’ ಎಂಬ ಪ್ರಕಟಣೆ ಇತ್ತು‌.‌ ಅಂದರೆ ಇದರ ಅರ್ಥ ನಮ್ಮ ಬೆಂಗಳೂರು ಕನ್ನಡ  ‘ಕಂಗ್ಲಿಷ್’ ಆಗಿಬಿಟ್ಟು ಬಹಳ ದಿನವಾಗಿದೆ ಎಂದು!     ಕಾಲಾಂತರದಿಂದ ನಾವು […]

Page 4 of 17

Kannada Sethu. All rights reserved.