ಒಬ್ಬ ಭರತನಾಟ್ಯ ಶಿಕ್ಷಕಿಯಾಗಿ, ಕಳೆದ ಮೂವತ್ನಾಲ್ಕು ವರ್ಷಗಳಲ್ಲಿ, ಬೆಂಗಳೂರಿನ ಹಂಪಿ ನಗರದಲ್ಲಿರುವ ನಮ್ಮ ಚಿತ್ರನಾಟ್ಯ ಫೌಂಡೇಶನ್ ಸಂಸ್ಥೆಯಲ್ಲಿ, ಮಕ್ಕಳಿಗೆ, ನಾಟ್ಯಾಸಕ್ತ ಪ್ರೌಢ ವಯಸ್ಕರಿಗೆ ಭರತನಾಟ್ಯವನ್ನು ಕಲಿಸುವಾಗಲೆಲ್ಲ ನೆನಪಿಗೆ ಬಂದು ಸಂತೋಷ ಕೊಡುವ ಒಂದು ಸಂಗತಿ ಅಂದರೆ, ನಮ್ಮ ಕರ್ನಾಟಕ ರಾಜ್ಯವು ಭರತನಾಟ್ಯಕ್ಕೆ ಕೊಡುಗೆಯಾಗಿ ಕೊಟ್ಟಿರುವ ಒಂದು ಶೈಲಿ. ಅದೆಂದರೆ ಮೈಸೂರು ಭರತನಾಟ್ಯ ಶೈಲಿ. ಮೈಸೂರು ಒಡೆಯರ್ ರಾಜವಂಶದ ರಾಜ, ಹತ್ತನೆಯ ಜಯಚಾಮರಾಜೇಂದ್ರ ಒಡೆಯರ್ ಅವರ ಆಸ್ಥಾನದಲ್ಲಿ ಜಟ್ಟಿ ತಾಯಮ್ಮ ಎಂಬ ಆಸ್ಥಾನ ನರ್ತಕಿ ಇದ್ದರು. ಮೈಸೂರು ಭರತನಾಟ್ಯ […]
ಕನ್ನಡ ಪ್ರಸಂಗ
ಇದು ಲೇಖಕಿಯು ಕನ್ನಡದೊಂದಿಗೆ ಒಡನಾಡಿದ ಅನುಭವಗಳ ಕಥನವಾಗಿದೆ. ಕನ್ನಡ ಜಗತ್ತು ತನಗೆ ಕಲಿಸಿದ ಹಾಗೂ ಕನ್ನಡ ಭಾಷೆ ಹಾಗೂ ಸಾಹಿತ್ಯಗಳನ್ನು ತಾನು ಕಲಿಸಿದ ದಾರಿಯಲ್ಲಿನ ವಿವಿಧ ಅನುಭವಗಳನ್ನು ಓದುಗರೊಂದಿಗೆ ಹಂಚಿಕೊಳ್ಳುವ ಪ್ರಯತ್ನವಾಗಿರುತ್ತದೆ ಇದು. ವಾರಕ್ಕೆ ಒಂದು ಕನ್ನಡ ಪ್ರಸಂಗದಂತೆ ಈ ಅಂಕಣವು ಮೂಡಿ ಬರಲಿದೆ.
Like us!
Follow us!