ಕನ್ನಡ ಪ್ರಸಂಗ

ಇದು ಲೇಖಕಿಯು ಕನ್ನಡದೊಂದಿಗೆ ಒಡನಾಡಿದ ಅನುಭವಗಳ ಕಥನವಾಗಿದೆ. ಕನ್ನಡ ಜಗತ್ತು ತನಗೆ ಕಲಿಸಿದ ಹಾಗೂ ಕನ್ನಡ ಭಾಷೆ ಹಾಗೂ ಸಾಹಿತ್ಯಗಳನ್ನು ತಾನು ಕಲಿಸಿದ ದಾರಿಯಲ್ಲಿನ ವಿವಿಧ ಅನುಭವಗಳನ್ನು ಓದುಗರೊಂದಿಗೆ ಹಂಚಿಕೊಳ್ಳುವ ಪ್ರಯತ್ನವಾಗಿರುತ್ತದೆ ಇದು. ವಾರಕ್ಕೆ ಒಂದು ಕನ್ನಡ ಪ್ರಸಂಗದಂತೆ ಈ ಅಂಕಣವು ಮೂಡಿ ಬರಲಿದೆ.

 “ಚಾರುಲತ ಅಂದರೆ ಏನಮ್ಮ ಮಗು?”

ಶೈಕ್ಷಣಿಕ ವರ್ಷ ಪ್ರಾರಂಭ ಆದಾಗ ನಾವು ಅಧ್ಯಾಪಕರು ಹೊಸ ಹೊಸ ವಿದ್ಯಾರ್ಥಿಗಳನ್ನು ಭೇಟಿ ಮಾಡ್ತೇವೆ. ಹೊಸ ಹೊಸ ಮುಖಗಳು, ಹೊಸ ಹೊಸ ಹೆಸರುಗಳು, ಹೊಸ ಹೊಸ ಅನುಭವಗಳು.  ಹೀಗೆಯೇ ಮೊನ್ನೆ ಒಂದು ತರಗತಿಯಲ್ಲಿ ಹಾಜರಿ ಹಾಕ್ತಾ ಇದ್ದಾಗ ‘ಚಾರುಲತ’  ಎಂಬ ಹೆಸರನ್ನು ಕರೆದೆ. ಒಬ್ಬಳು ಹುಡುಗಿ ಓಗೊಟ್ಟಳು.‌ ‘ತನ್ನ ಹೆಸರಿನ ಅರ್ಥವು ಈ ಕಿಶೋರಿಗೆ ಗೊತ್ತಿರಬಹುದೇ?’ ಎಂಬ ಪ್ರಶ್ನೆಯು ನನ್ನ ಮನಸ್ಸಿನಲ್ಲಿ ಮೂಡಿ, “ಚಾರುಲತ ಅಂದರೆ ಏನಮ್ಮ ಮಗು?” ಎಂದು  ಅವಳನ್ನು ನಾನು ಕೇಳಿದೆ. ಆ ಪ್ರಶ್ನೆಯನ್ನು […]

ಅರಸು, ಹರಸು….ಅಯ್ಯೋ…. ಅ-ಹ-ಕಾರವೇ‌‌‌‌‌…ನಿನ್ನ ಕಾಟ ಲೇಸು ಲೇಸು!

ಹಿಂದೆಯೂ ಈ ಅಂಕಣದಲ್ಲಿ ಕನ್ನಡ ತರಗತಿಗಳು ಮತ್ತು ಸಾರ್ವಜನಿಕ‌ ಸಭೆಗಳಲ್ಲಿ ಉಂಟಾಗುವ ‘ಅ-ಹ ಕಾರದ ಹಾಹಾಕಾರ’ದ ಬಗ್ಗೆ ನಾನು ಬರೆದಿದ್ದೇನೆ. ನಮ್ಮ ನಾಡಿನ ಕೆಲವು ಭಾಗಗಳಲ್ಲಿ ಈ ಉಚ್ಚಾರ ಸಮಸ್ಯೆ ಎಷ್ಟು ಗಾಢವಾಗಿದೆ ಅಂದರೆ ವರ್ಷವರ್ಷಕ್ಕೂ, ನಮ್ಮ ತರಗತಿಗಳಲ್ಲಿ ಆಗಾಗ ಇದು ತಲೆದೋರುತ್ತಲೇ ಇರುತ್ತದೆ.  ಕಳೆದ ವಾರ ನನ್ನ ಬಿ.ಎಸ್ಸಿ. ಪದವಿಯ ಕನ್ನಡ ಭಾಷಾ ಚಟುವಟಿಕೆಯ ತರಗತಿಯೊಂದರಲ್ಲಿ ‘ನಾನಾರ್ಥಕ ಪದಗಳ’ ಬಗ್ಗೆ ಪಾಠ ಮಾಡುತ್ತಿದ್ದೆ. ಆಗ ‘ಅರಸು’ ಎಂಬ ಒಂದು ಪದ ಕೊಟ್ಟು ಇದಕ್ಕಿರುವ ನಾನಾರ್ಥಗಳನ್ನು ಹೇಳಿ […]

ಕೆ.ಪಿ.ರಾವ್ ಎಂಬ ಕಾರ್ಯಧೀಮಂತ, ಕನ್ನಡ ‘ನುಡಿ’ ಶ್ರೀಮಂತ.

ನಮ್ಮ ನಲ್ಮೆಯ ಕನ್ನಡ ಭಾಷೆಯಲ್ಲಿ ಒಂದು ಒಳ್ಳೆಯ ಮಾತಿದೆ, ‘ತಂಪು ಹೊತ್ತಿನಲ್ಲಿ ನೆನೆಯಬೇಕಾದವರು’ ಅಂತ.‌ ಸ್ವಲ್ಪ ಮಟ್ಟಿಗೆ ಸಂಸ್ಕೃತದ ‘ಪ್ರಾತಃಸ್ಮರಣೀಯರು’ ಎಂಬ ಪದದ ಅರ್ಥಕ್ಕೆ ಹತ್ತಿರವಾದ ಪದ ಇದು‌.  ಕಿನ್ನಿಕಂಬಳ ಪದ್ಮನಾಭ ರಾವ್, ಜನಪ್ರಿಯವಾಗಿ ನಾವೆಲ್ಲರೂ ಬಲ್ಲಂತೆ ಕೆ.ಪಿ‌.ರಾವ್ ರು ಅಂತಹ ಒಬ್ಬ ವ್ಯಕ್ತಿ, ಅಂದರೆ, ನಾವು ತಂಪು ಹೊತ್ತಿನಲ್ಲಿ  ನೆನೆಯಬೇಕಾದವರು.  ಭಾಷೆಗಳ ಬಗೆಗೆ ಅಪಾರ ಕುತೂಹಲ, ಯಂತ್ರಗಳನ್ನು ಕುರಿತ ದೀರ್ಘಾವಧಿಯ ಪರಿಣತಿ ಹಾಗೂ ನಿರಂತರ ಕಲಿಕೆಯ ಬಗ್ಗೆ ಅತ್ಯಾಸಕ್ತಿ ಇರುವ ವ್ಯಕ್ತಿಯೊಬ್ಬರು, ತನ್ನ ನಾಡು, ನುಡಿಗೆ […]

ಆಟೋರಿಕ್ಷಾದ ಹಿಂದೆ ಬರೆದಿದ್ದ ಸಾಲು…ಕನ್ನಡನಾಡಿನಲ್ಲಿ‌ ಜ್ಞಾನ ಸಿಗುವುದು ಅನಿರೀಕ್ಷಿತ ಸ್ಥಳಗಳಲ್ಲೂ!

ಮೊನ್ನೆ ದಿನ, ಎಂದಿನಂತೆ ನನ್ನ ದ್ವಿಚಕ್ರಿಣಿಯಲ್ಲಿ( ಹೊಂಡಾ ಆಕ್ಟಿವಾ ಸ್ಕೂಟರು) ನಾನು ಕಾಲೇಜಿಗೆ ಹೋಗುತ್ತಿದ್ದಾಗ, ರಾಜಾಜಿನಗರ ಪ್ರವೇಶಸ್ಥಳದಲ್ಲಿ ( ಎಂಟ್ರೆನ್ಸ್) ರಸ್ತೆಗಳು  ಕೂಡುವ ಬಿಂದುವಿನಲ್ಲಿ ಸಂಚಾರದೀಪ ಕೆಂಪಾಯಿತು. ಸರಿ, ಗಾಡಿ ನಿಲ್ಲಿಸಿ, ಆ ದೀಪ ಹಸಿರಾಗಲು ಕಾಯುತ್ತಿದ್ದೆ. ಆಗ ನನ್ನ ಮುಂದೆ ನಿಂತಿದ್ದ ಆಟೋರಿಕ್ಷಾ ಒಂದರ ಹಿಂದೆ ಬರೆದಿದ್ದ ಬರಹವೊಂದು ನನ್ನ ಗಮನ ಸೆಳೆಯಿತು.  “ಹೇಳಿ ಮಾಡಿಸಿದ ಜೋಡಿ ಅನ್ನುವುದು ಸಿಗುವುದು ಚಪ್ಪಲಿಯ ವಿಷಯದಲ್ಲಿ ಮಾತ್ರ, ಇನ್ನೆಲ್ಲ‌ ಹೊಂದಾಣಿಕೆ” ಎಂಬ ಸಾಲು ಅದು! ಅಬ್ಬ ಅನ್ನಿಸಿತು‌. ಬದುಕಿನ […]

ಪ್ರೆಶರ್ ಕುಕ್ಕರ್ ಗೆ ಕನ್ನಡ ಪದ ಯಾವುದು?

ಬೆಳಿಗ್ಗೆ ಎದ್ದು ಅಡುಗೆ ಮಾಡುವುದು ಅಂದರೆ ‘ಕುಕ್ಕರಿಡುವುದು’ ಎಂಬಷ್ಟರ ಮಟ್ಟಿಗೆ ಪ್ರೆಶರ್ ಕುಕ್ಕರ್ ನಮ್ಮ ಜೀವನದ ಭಾಗ ಆಗಿಬಿಟ್ಟಿದೆ, ಅಲ್ಲವೆ? ಅಡಿಗೆ ಕೆಲಸದ ಸಮಯ, ಚಿಂತೆಗಳನ್ನು ಕಡಿಮೆ ಮಾಡುವ ಈ ಅಡುಗೆ ಉಪಕರಣವನ್ನು ಬಳಸದ ಮನೆಗಳು ನಮ್ಮ ನಾಡಿನಲ್ಲಿ ಅಪರೂಪ ಅನ್ನಬಹುದು. ಒತ್ತಡ ಹೆಚ್ಚಿಸಿ, ಆ ಮೂಲಕ ತಾಪಮಾನವನ್ನು ಹೆಚ್ಚಿಸಿ ಅಡುಗೆಯು ಬೇಗ ಆಗುವ ತಂತ್ರಜ್ಞಾನವನ್ನು ಕಂಡುಹಿಡಿದದ್ದು 1679 ರಲ್ಲಿ, ಫ್ರಾನ್ಸ್ ನ ಡೇನಿಸ್ ಪಾಪಿನ್ ಎಂಬ ಭೌತಶಾಸ್ತ್ರಜ್ಞರು. ಇದನ್ನು  ಸ್ಟೀಮ್ ಡೈಜೆಸ್ಟರ್, ಪಾಪಿನ್ಸ್ ಡೈಜೆಸ್ಟರ್ ಎಂದು […]

ಲೆಸ್ಸಾ ಪ್ಲಸ್ಸಾ?! ಕನ್ನಡನಾಡಿನಲ್ಲಿ ಕಾಫಿ ಸರಬರಾಜಿನ ಹೊಸ ಪರಿಭಾಷೆ

ನಮ್ಮ ಕನ್ನಡ ನಾಡಿನ ಜನಪ್ರಿಯ ಪೇಯ ಕಾಫಿ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ! ನನ್ನದೂ  ಸೇರಿ ನಮ್ಮ ನಾಡಿನ ಅನೇಕರ ದಿನ ಪ್ರಾರಂಭವಾಗುವುದೇ ಈ ಮೋಹಕ, ಘಮಘಮ ನಿದ್ರಾಉಚ್ಛಾಟಿನಿಯಿಂದ! ದಕ್ಷಿಣ ಭಾರತದ ಕಾಫಿಸೇವಕರಲ್ಲಿ 31 ಶೇಕಡಾ ಜನರು ಕರ್ನಾಟಕದವರೇ ಅಂತೆ! ಹದಿನೇಳನೆಯ ಶತಮಾನದಲ್ಲಿ ಬಾಬಾ ಬುಡನ್ ಅವರು ಯೆಮನ್ ನಿಂದ ಏಳು ಕಾಫಿಬೀಜಗಳನ್ನು ತಮ್ಮ ಊರುಗೋಲಿನಲ್ಲಿ ಅಡಗಿಸಿಕೊಂಡು ಚಿಕ್ಕಮಗಳೂರಿನಲ್ಲಿ ನೆಟ್ಟಿದ್ದು, ನಂತರ ಕರ್ನಾಟಕವು ಭಾರತದ ಅತಿ ಹೆಚ್ಚು ಕಾಫಿ ಬೆಳೆಯುವ ನಾಡಾಗಿ‌ ಹೆಸರು ಪಡೆದದ್ದು ಇದನ್ನೆಲ್ಲ ಕೇಳಿ […]

ಹುಡುಗ ಮತ್ತು ಹುಡುಗಿ ಇಬ್ಬರಿಗೂ ಇಡಬಹುದಾದ ಹೆಸರುಗಳು! 

ವಸಂತ, ಮೋಹನ, ನವೀನ, ಅರುಣ, ಕಿರಣ, ಪ್ರಜ್ವಲ್ – ಇಂತಹ ಪದಗಳ ವಿಶೇಷತೆ ಬಲ್ಲಿರಾ? ಇದನ್ನು ಗಂಡು ಮಗು ಮತ್ತು ಹೆಣ್ಣುಮಗು ಇಬ್ಬರಿಗೂ ಇಡಬಹುದು.‌ ಬಹುದು ಏನು, ಇಡುತ್ತಾರೆ ಸಹ.‌   ಕೆಲವೊಮ್ಮೆ ಇಂತಹ ಹೆಸರುಗಳು ಗೊಂದಲ ಮಾಡಿಬಿಡುತ್ತವೆ.‌ ಉದಾಹರಣೆಗೆ ‘ಶರುರಾಜ್’ ಎಂಬ ಹೆಸರು.‌ ನಾನು ಕೆಲಸ ಮಾಡುತ್ತಿದ್ದ ಕಾಲೇಜಿನಲ್ಲಿ ಒಮ್ಮೆ, ಚುನಾವಣಾ ಕೆಲಸಕ್ಕೆ ಸಿಬ್ಬಂದಿಯನ್ನು ಆಯ್ಕೆ ಮಾಡುವಾಗ ಇವರನ್ನು ಪುರುಷ ಎಂದು ಭಾವಿಸಿ ಆಯ್ಕೆ ಮಾಡಿದ್ದರು. ಆದರೆ ವಾಸ್ತವದಲ್ಲಿ ಅವರು ಒಬ್ಬ ಮಹಿಳೆ! ಇದೇ ರೀತಿಯಲ್ಲಿ ನಾನು […]

‘ಕನ್ನಡ ಕಲಿಯಿರಿ, ನಮ್ಮಲ್ಲೊಬ್ಬರಾಗಿರಿ’ -ಅಂಗಡಿಯೊಂದರಲ್ಲಿ ಕಂಡ ವಿಶಿಷ್ಟ ಕನ್ನಡ ಜಾಗೃತಿ ಸಂದೇಶ

ಈಚೆಗೆ ಜಯನಗರದ ಒಂದು ಅನುಕರಣಾ ಒಡವೆ ( ಇಮಿಟೇಷನ್ ಜುವೆಲ್ರಿ) ಅಂಗಡಿಗೆ ಹೋಗಿದ್ದೆ‌. ಅಲ್ಲಿ ಕಂಡ ಒಂದು ಆಂಗ್ಲಭಾಷಾ ಸೂಚನಾಫಲಕವು ನನಗೆ ಅಚ್ಚರಿ, ಸಂತಸ ತಂದದ್ದಲ್ಲದೆ ನನ್ನ ಮನಸ್ಸನ್ನು ಯೋಚನೆಗೂ ಹಚ್ಚಿತು. ಆ ಸೂಚನಾಫಲಕದಲ್ಲಿ ಹೀಗೆ ಬರೆಯಲಾಗಿತ್ತು‌ –  ‘Dear customer, if you live here and do not know Kannada, please learn and be one among us. Do not be a guest forever’. ( ಪ್ರಿಯ ಗ್ರಾಹಕ, […]

‘ಬೆಣ್ಣೆಯಿಂದ ಕೂದಲು ತೆಗೆದ ಹಾಗೆ’ – ಕನ್ನಡದ ಒಂದು ವಿಶಿಷ್ಟ ನುಡಿಗಟ್ಟು

ಪ್ರತಿಯೊಂದು ಭಾಷೆಗೂ ಅವರದ್ದೇ ಆದ ಕೆಲವು ವಿಶಿಷ್ಟ ನುಡಿಗಟ್ಟುಗಳಿರುತ್ತವೆ. ಕನ್ನಡ ಭಾಷೆಯೂ ಇದಕ್ಕೆ ಹೊರತಲ್ಲ. ಕನ್ನಡ ಭಾಷೆಯಲ್ಲಿರುವ ಅನೇಕ ನುಡಿಗಟ್ಟುಗಳಲ್ಲಿ ‘ಬೆಣ್ಣೆಯಿಂದ ಕೂದಲು ತೆಗೆದ ಹಾಗೆ’ ಎಂಬ ನುಡಿಗಟ್ಟು ಸಹ ಒಂದು‌. ಬೆಣ್ಣೆ ಎಂಬುದು ಕನ್ನಡ ನಾಡಿನ ಜನರು  ಬಹಳವಾಗಿ  ಇಷ್ಟ ಪಟ್ಟು ಬಳಸುವ ಹೈನು ಪದಾರ್ಥ.‌ ಯಾವುದಾದರೂ  ನಯವಾದ, ಮೃದುವಾದ ಪದಾರ್ಥವನ್ನು ಮೆಚ್ಚಬೇಕಾದರೆ  ಅದನ್ನು ಬೆಣ್ಣೆಗೆ ಹೋಲಿಸುವುದು ರೂಢಿ. ಆದರೆ ಬೆಣ್ಣೆಯಿಂದ ಕೂದಲು ತೆಗೆಯುವುದು ಎಂಬುದು ಕನ್ನಡದಲ್ಲಿ ಒಂದು ವಿಶೇಷ ಭಾಷಾ ಪ್ರಯೋಗ. ತುಂಬ ನಾಜೂಕಾದ […]

ಹೊಟ್ಟೆಕಿಚ್ಚು ಸರಿ. ‘ಹೊಟ್ಟೆಕಚ್ಚು’ ಅಂದ್ರೆ ಏನು!?

‘ಅಸೂಯೆ’ ಎಂಬ ಪದಕ್ಕೆ ಹೊಟ್ಟೆಕಿಚ್ಚು, ಹೊಟ್ಟೆಯುರಿ, ಮತ್ಸರ( ಇಂಗ್ಲಿಷ್ ನಲ್ಲಿ jealousy) ಎಂಬ ಸಂವಾದಿ ಪದಗಳಿರುವುದು ನಮಗೆ ಗೊತ್ತಲ್ಲವೆ? ಮೊನ್ನೆ ಒಂದು ಪುಸ್ತಕದ ವಿಷಯಕ್ಕಾಗಿ ನನಗೆ ಕರೆ ಮಾಡಿದ್ದ ಲೇಖಕ ಮಿತ್ರ ಹಾಡ್ಲಹಳ್ಳಿ ನಾಗರಾಜ್ ಅವರು ಮಾತಿನ ಮಧ್ಯೆ ‘ಹೊಟ್ಟೆಕಚ್ಚು’ ಎಂಬ ಪದವನ್ನು ಬಳಸಿದರು‌. ಆ ಪದದ ಬಗ್ಗೆ ಕುತೂಹಲ ಹುಟ್ಟಿ ನಾನು ಅದರ ಅರ್ಥ ಕೇಳಿದಾಗ ‘ಹೊಟ್ಟೆಯಲ್ಲಿ ಜಂತುಹುಳು ಮುಂತಾದ ಹುಳುಗಳ ಬಾಧೆಯಿಂದ ಮಕ್ಕಳು ಹೊಟ್ಟೆನೋವಿಂದ ನರಳುತ್ತಾರಲ್ಲ, ಅದನ್ನು ನಮ್ಮ ಕಡೆ ಹೊಟ್ಟೆಕಚ್ಚು ಅಂತಾರೆ’ ಅಂದರು. […]

Page 5 of 19

Kannada Sethu. All rights reserved.