ಅಧ್ಯಾಪಕ ವೃತ್ತಿಯಲ್ಲಿರುವವರಿಗೆ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡುವಾಗ ಒಂದು ಕಿರಿಕಿರಿಯ ಸಂದರ್ಭ ಎದುರಾಗುತ್ತದೆ. ಅದೇನೆಂದರೆ ಹನುಮಂತನ ಬಾಲದಷ್ಟು ಉದ್ದುದ್ದ ವಾಕ್ಯಗಳನ್ನು ಓದುವ ಸನ್ನಿವೇಶ. ಎಷ್ಟೋ ಸಲ ವಚನ, ಕಾಲ, ಪ್ರಥಮ ಪುರುಷ, ಲೇಖನ ಚಿಹ್ನೆ ಮುಂತಾದ ವ್ಯಾಕರಣ ನಿಯಮಗಳೆಲ್ಲಾ ಗಾಳಿಗೆ ತೂರಲ್ಪಟ್ಟು ಆ ಉದ್ದಾನುದ್ದ ವಾಕ್ಯವು ಅರ್ಥಹೀನವಾಗಿಬಿಡುತ್ತದೆ. ಇಂತಹ ಸಂದರ್ಭಗಳಲ್ಲಿ ಕನ್ನಡದ ಜಾಯಮಾನ ಚಿಕ್ಕ ಚಿಕ್ಕ ವಾಕ್ಯಗಳದ್ದಲ್ಲವೇ ಎಂಬ ವಿಷಯ ಮನಸ್ಸಿಗೆ ಪ್ರಧಾನವಾಗಿ ಭಾಸವಾಗುತ್ತದೆ. ಉದಾಹರಣೆಗೆ ನಾವು ಸಂಭಾಷಣೆಗಳಲ್ಲಿ ಬಳಸುವ ವಾಕ್ಯಗಳನ್ನು ಗಮನಿಸಿ. ಏನ್ಸಮಾಚಾರ?ಊಟ ಆಯ್ತಾ?ಇವತ್ತು […]
ಕನ್ನಡ ಪ್ರಸಂಗ
ಇದು ಲೇಖಕಿಯು ಕನ್ನಡದೊಂದಿಗೆ ಒಡನಾಡಿದ ಅನುಭವಗಳ ಕಥನವಾಗಿದೆ. ಕನ್ನಡ ಜಗತ್ತು ತನಗೆ ಕಲಿಸಿದ ಹಾಗೂ ಕನ್ನಡ ಭಾಷೆ ಹಾಗೂ ಸಾಹಿತ್ಯಗಳನ್ನು ತಾನು ಕಲಿಸಿದ ದಾರಿಯಲ್ಲಿನ ವಿವಿಧ ಅನುಭವಗಳನ್ನು ಓದುಗರೊಂದಿಗೆ ಹಂಚಿಕೊಳ್ಳುವ ಪ್ರಯತ್ನವಾಗಿರುತ್ತದೆ ಇದು. ವಾರಕ್ಕೆ ಒಂದು ಕನ್ನಡ ಪ್ರಸಂಗದಂತೆ ಈ ಅಂಕಣವು ಮೂಡಿ ಬರಲಿದೆ.