ಕನ್ನಡ ಪ್ರಸಂಗ

ಇದು ಲೇಖಕಿಯು ಕನ್ನಡದೊಂದಿಗೆ ಒಡನಾಡಿದ ಅನುಭವಗಳ ಕಥನವಾಗಿದೆ. ಕನ್ನಡ ಜಗತ್ತು ತನಗೆ ಕಲಿಸಿದ ಹಾಗೂ ಕನ್ನಡ ಭಾಷೆ ಹಾಗೂ ಸಾಹಿತ್ಯಗಳನ್ನು ತಾನು ಕಲಿಸಿದ ದಾರಿಯಲ್ಲಿನ ವಿವಿಧ ಅನುಭವಗಳನ್ನು ಓದುಗರೊಂದಿಗೆ ಹಂಚಿಕೊಳ್ಳುವ ಪ್ರಯತ್ನವಾಗಿರುತ್ತದೆ ಇದು. ವಾರಕ್ಕೆ ಒಂದು ಕನ್ನಡ ಪ್ರಸಂಗದಂತೆ ಈ ಅಂಕಣವು ಮೂಡಿ ಬರಲಿದೆ.

ಪುಟ್ಟ ಪುಟ್ಟ ವಾಕ್ಯಗಳ ನುಡಿಯಾನ – ಕನ್ನಡದ ಜಾಯಮಾನ

ಅಧ್ಯಾಪಕ ವೃತ್ತಿಯಲ್ಲಿರುವವರಿಗೆ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡುವಾಗ ಒಂದು ಕಿರಿಕಿರಿಯ ಸಂದರ್ಭ ಎದುರಾಗುತ್ತದೆ.‌ ಅದೇನೆಂದರೆ ಹನುಮಂತನ ಬಾಲದಷ್ಟು ಉದ್ದುದ್ದ ವಾಕ್ಯಗಳನ್ನು ಓದುವ ಸನ್ನಿವೇಶ. ಎಷ್ಟೋ ಸಲ ವಚನ, ಕಾಲ, ಪ್ರಥಮ ಪುರುಷ, ಲೇಖನ ಚಿಹ್ನೆ ಮುಂತಾದ ವ್ಯಾಕರಣ ನಿಯಮಗಳೆಲ್ಲಾ ಗಾಳಿಗೆ ತೂರಲ್ಪಟ್ಟು ಆ ಉದ್ದಾನುದ್ದ ವಾಕ್ಯವು ಅರ್ಥಹೀನವಾಗಿಬಿಡುತ್ತದೆ. ಇಂತಹ ಸಂದರ್ಭಗಳಲ್ಲಿ ಕನ್ನಡದ ಜಾಯಮಾನ ಚಿಕ್ಕ ಚಿಕ್ಕ ವಾಕ್ಯಗಳದ್ದಲ್ಲವೇ ಎಂಬ ವಿಷಯ ಮನಸ್ಸಿಗೆ ಪ್ರಧಾನವಾಗಿ ಭಾಸವಾಗುತ್ತದೆ.  ಉದಾಹರಣೆಗೆ ನಾವು ಸಂಭಾಷಣೆಗಳಲ್ಲಿ ಬಳಸುವ ವಾಕ್ಯಗಳನ್ನು  ಗಮನಿಸಿ. ಏನ್ಸಮಾಚಾರ?ಊಟ ಆಯ್ತಾ?ಇವತ್ತು […]

‘ಇವ ನಮ್ಮವ ಇವ ನಮ್ಮವ’ ಎನ್ನುವ ಕನ್ನಡ ವಿಭಾಗಗಳ ಸೊಗಸು.

ಒಬ್ಬ ಕಾಲೇಜು ಅಧ್ಯಾಪಕಿಯಾಗಿ ಏಳೆಂಟು ಕಾಲೇಜುಗಳಲ್ಲಿ ಕೆಲಸ ಮಾಡಿರುವ ಹಾಗೂ ಮೌಲ್ಯಮಾಪನ, ವಿಚಾರ ಸಂಕಿರಣ, ಪರೀಕ್ಷಾ ಮಂಡಳಿ ಮುಂತಾದವುಗಳ ದೆಸೆಯಿಂದಾಗಿ ಬೇರೆ ಅನೇಕ ಕಾಲೇಜುಗಳ ಅಧ್ಯಾಪಕರೊಡನೆ ಒಡನಾಡುವ ಅವಕಾಶ ಪಡೆದಿರುವ ನನಗೆ, ಕಾಲೇಜುಗಳ ಕನ್ನಡ ವಿಭಾಗಗಳ ಬಗ್ಗೆ,  ಓದುಗರೊಡನೆ ಹಂಚಿಕೊಳ್ಳಬೇಕೆನ್ನಿಸುವ ಒಂದು ಅನುಭವ ಇದೆ. ಅದೇನೆಂದರೆ, ಕನ್ನಡ ವಿಭಾಗಗಳ ಮನುಷ್ಯ ಪ್ರೀತಿ ಮತ್ತು ಅವು ಜನರನ್ನು ಒಳಗೊಳ್ಳುವ ರೀತಿ.   ನಾನು ಕೆಲಸ ಮಾಡಿದ ಕಾಲೇಜುಗಳಲ್ಲಿ ( ಮತ್ತು ಸಾಮಾನ್ಯವಾಗಿ  ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ) ಗರಿಷ್ಠ ಸಂಖ್ಯೆಯ ಉದ್ಯೋಗಿಗಳು […]

ರಾಜರತ್ನಂ ಮಾದರಿ – ಮಕ್ಕಳಿಗೆ ಕವಿತೆ ಕಟ್ಟುವುದನ್ನು ಕಲಿಸುವ ಸುಂದರ ದಾರಿ.

ಎ.ಎಸ್.ಮೂರ್ತಿ ಅವರ ರಂಗಭೂಮಿಯ ಪರಂಪರೆಯನ್ನು ಸಾರ್ಥಕವಾಗಿ‌ ಮುಂದುವರಿಸಿಕೊಂಡು ಬರುತ್ತಿರುವ ಬೆಂಗಳೂರಿನ ‘ವಿಜಯನಗರ ಬಿಂಬ’ ಸಂಸ್ಥೆಯು ಪ್ರತಿ ವರ್ಷವೂ  ಮಕ್ಕಳಿಗಾಗಿ ಬೇಸಿಗೆ ಶಿಬಿರವನ್ನು ಆಯೋಜಿಸುತ್ತದೆ. ಹಾಡು, ನಾಟ್ಯ, ಚಿತ್ರ, ಕಾವ್ಯ ಮುಂತಾದ ಕಲೆಗಳಲ್ಲಿ ಮಕ್ಕಳಿಗೆ ತರಬೇತಿ ಕೊಡಲು ಆಯಾ ಕ್ಷೇತ್ರದ ತಜ್ಞರನ್ನು ಆಯೋಜಕರು ಆಹ್ವಾನಿಸುತ್ತಾರೆ.‌ ಇದೇ ಹಿನ್ನೆಲೆಯಲ್ಲಿ ಈ ಲೇಖಕಿಯನ್ನು ಮಕ್ಕಳಿಗೆ ಕವಿತಾ ರಚನೆಯನ್ನು ಹೇಳಿಕೊಡಲು ಆಹ್ವಾನಿಸುತ್ತಿರುತ್ತಾರೆ.  ಮುಗ್ಧ ಮಕ್ಕಳಿಗೆ ಕವಿತಾ ರಚನೆ ಎಂಬ ಮಾಯಾಲೋಕದ ಪರಿಚಯ ಮಾಡಿಸುವುದು ಖುಷಿ ನೀಡುವ ಹಾಗೂ ಅದೇ ಹೊತ್ತಿನಲ್ಲಿ ತುಂಬ ಸವಾಲೊಡ್ಡುವ […]

ಬೆಂಗಳೂರಿಗರ ಬೆರಕೆ ಕನ್ನಡ

ಬೆಂಗಳೂರಿನಲ್ಲಿ ಓಡಾಡುವಾಗ, ಜನರೊಂದಿಗೆ ಮಾತಾಡುವಾಗ ಈ ಬಗೆಯ ವಾಕ್ಯಗಳು ಕಿವಿಗೆ ಬೀಳುತ್ತವೆ – ” ಆಫೀಸ್ ತಲುಪ್ದೆ ಕಣೋ ಆಲ್ಮೋಸ್ಟು”, “ನಾನು ಈ ಕಡೇನೆ ಹೋಗೋದು ಮೋಸ್ಟ್ ಆಫ್ ದ ಟೈಮ್ಸು”,  ನೈಟೇ ನಿಮ್ಗೆ ಕಾಲ್ ಮಾಡಿದ್ನಲ್ಲಾ,  ಐ ಥಿಂಕ್ ಯೂ ವರ್ ಬಿಸಿ”,  ” ನೀ ಕಂಟಿನ್ಯುವಸ್ ಆಗಿ ಬಂದ್ರೆ ತಾನೇ, ಒನ್ಸ್ ಇನ್ ಎ ಬ್ಲೂಮೂನ್ ಬರ್ತೀಯ”, “ಆಲ್ ಆಫ್ ಅ ಸಡನ್ ನಮ್ ಬಾಸ್ ಮೀಟಿಂಗ್ ಕರೆದ್ಬಿಟ್ರು, ಸಾರಿ ಕಣೇ, ಐ ವಾಸ್ […]

ಕಂಬಕ್ಕೆ ಕಟ್ಟಲ್ಪಟ್ಟ ದೇವರು.. ಕನ್ನಡ ಜನಪದರ ಭಾವಸಿರಿಯ ತವರು

ಈಚೆಗೆ ನಮ್ಮ ಹಂಪಿನಗರದ ಏಳನೇ ಮುಖ್ಯರಸ್ತೆಯ ಬಳಿ ಹೂವು ಕೊಂಡುಕೊಳ್ಳುತ್ತಿದ್ದಾಗ ಒಂದು ಕುತೂಹಲಕರ ವಿಷಯವನ್ನು ಗಮನಿಸಿದೆ. ಹೂಮಾರುವವರು ತಮ್ಮ ಬುಟ್ಟಿ ಇತ್ಯಾದಿಗಳನ್ನು ಇಟ್ಟುಕೊಂಡ ಜಾಗದ ಪಕ್ಕದಲ್ಲಿ ಇದ್ದ ಕಂಬವೊಂದಕ್ಕೆ  ಕೆಲವು ಪುಟ್ಟ ಪುಟ್ಟ ದೇವರ ವಿಗ್ರಹಗಳನ್ನು  ಕಟ್ಟಿಟ್ಟದ್ದು ಕಂಡುಬಂತು.‌  ಬಹುಶಃ ಆ ಹೂ ಮಾರುವವರು ಮತ್ತು ಸುತ್ತಮುತ್ತ ಇದ್ದ ಹಣ್ಣಿನ ವ್ಯಾಪಾರಿಗಳು ಆ ವಿಗ್ರಹಗಳಿಗೆ ನಮಿಸಿ ತಮ್ಮ ದಿನದ ವ್ಯಾಪಾರವನ್ನು ಶುರು ಮಾಡುತ್ತಾರೆಂದು ತೋರುತ್ತದೆ. ಕಲ್ಲಿಗೆ ಭಕ್ತಿಯಿಂದ ಕುಂಕುಮ ಹಚ್ಚಿ ಹೂ ಇಟ್ಟು ಅದನ್ನೇ ಭಗವಂತನೆಂದು ತಿಳಿಯುವ […]

ಚಟ್ನಿಯ ಪ್ರಸಂಗ

ಚಟ್ನಿ. ಈ ಪದದ ಬಳಕೆ ಮಾಡದ ಕನ್ನಡಿಗರಾರು? ಇಡ್ಲಿ ಚಟ್ನಿ, ತೆಂಗಿನಕಾಯಿ ಚಟ್ನಿ, ಕೆಂಪು ಚಟ್ನಿ, ಪುದಿನಾ ಚಟ್ನಿ, ಶೇಂಗಾ ಚಟ್ನಿ, ಈರುಳ್ಳಿ ಚಟ್ನಿ… ಓಹ್…..ಅದೆಷ್ಟು ವೈವಿಧ್ಯ ಇದರಲ್ಲಿ! ವಿವಿಧ ತರಕಾರಿಗಳು, ಹಣ್ಣುಗಳು, ಒಣಹಣ್ಣುಗಳನ್ನು ಬಳಸಿ ಥರಾವರಿ ಚಟ್ನಿಗಳನ್ನು ಪ್ರಪಂಚದಾದ್ಯಂತ ಮಾಡುತ್ತಾರೆ.‌ಉತ್ತರ ಭಾರತೀಯ‌ರ ಚಾಟ್ ಅಂಗಡಿಗಳಲ್ಲಿ ಸಿಹಿ ಚಟ್ನಿ ಮಾಡುವಾಗ ಖರ್ಜೂರ ಹಾಕ್ತಾರಂತೆ! ಹೋಟೆಲ್ ಗಳಲ್ಲಿ ತಾವು ಇಡ್ಲಿಗೆ ‘ಅನ್ಲಿಮಿಟೆಡ್ ಚಟ್ನಿ’ ಕೊಡುತ್ತೇವೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಧಾರವಾಡದ ಕಡೆ ಚಟ್ನಿಪುಡಿಗೆ ಚಟ್ನಿ ಅಂತಾರೆ. ಮಂಗಳೂರಿನಲ್ಲಿ ತೆಳು […]

ಹೊಟ್ಟೆಪಾಡು ಚಾಟ್ಸ್ ಅಂಗಡಿಯ ಬುಟ್ಟಿ ಚಾಟ್ – ವೀರೇಶರ ವಿಶೇಷ ಕನ್ನಡ ಪ್ರೇಮ

“ಅಬ್ಬ, ನೋಡಿಲ್ಲಿ! ಒಂದು ಕಾಲಿರೋ ಒಬ್ಬ ವ್ಯಕ್ತಿ ಇಟ್ಟಿರೋ ಚಾಟ್ ಅಂಗಡಿ ಎಷ್ಟು ಹೆಸರು ಮಾಡಿದೆ! ಒಮ್ಮೆ ಹೋಗ್ಬರೋಣ ಮೀರಾ” ಎಂದು ನನ್ನ ಮನೆಯವರು ಅಂದಾಗ ನನ್ನಲ್ಲಿ ಕುತೂಹಲ ಮೂಡಿತು. ಯೂಟ್ಯೂಬ್ ನಲ್ಲಿದ್ದ ದೃಶ್ಯಚಿತ್ರವೊಂದರ ಮೂಲಕ ತಿಳಿದ ವಿಷಯ ಇದು‌. ಹಾಗೆಯೇ, ಮುಂದೊಂದು ವಾರಾಂತ್ಯದಲ್ಲಿ ನಾಗರಬಾವಿ ವರ್ತುಲ ರಸ್ತೆಯಲ್ಲಿದ್ದ ಆ ತಿನಿಸಿನಂಗಡಿಯನ್ನು ಹುಡುಕಿಕೊಂಡು ಹೊರಟೆವು. ಗೂಗಲ್ ಗುರು ದಾರಿ ತೋರಿದ್ದರಿಂದ ವಿಳಾಸ  ಹುಡುಕುವುದು ಅಷ್ಟೇನೂ ಕಷ್ಟವಾಗಲಿಲ್ಲ.‌  ರಸ್ತೆ ಬದಿಯಲ್ಲಿ ಪುಟ್ಟ ಟೆಂಪೋ ಒಂದನ್ನು ಚಾಟ್  ಅಂಗಡಿಯಾಗಿ ಪರಿವರ್ತಿಸಿ, […]

 “ಸೂಳ್ ಬಪ್ಪುದು ಕಾಣಾ ಮಹಾಜಿರಂಗದೊಳ್”

ಸುಮಾರು 34-35 ವರ್ಷಗಳ ಹಿಂದೆ,  ಬೆಂಗಳೂರಿನ ಬಸವೇಶ್ವರ ನಗರದಲ್ಲಿರುವ ವಿದ್ಯಾವರ್ಧಕ ಸಂಘ – ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಬಿ.ಎಸ್ಸಿ. ಪದವಿಯ ಕನ್ನಡ ತರಗತಿಯೊಂದರಲ್ಲಿ, ಶ್ರೀಮತಿ ಶಾಂತಾ ನಾಗರಾಜ್ ಎಂಬ ಕನ್ನಡ ಅಧ್ಯಾಪಕಿಯು ಉಲ್ಲೇಖಿಸಿದ ವಾಕ್ಯ ಇದು‌. ಈ ಲೇಖಕಿ‌ ಕೂಡಾ ಆ ತರಗತಿಯ ವಿದ್ಯಾರ್ಥಿನಿಯರ ಗುಂಪಿನಲ್ಲಿ ಒಬ್ಬಳಾಗಿದ್ದಳು. 25-30 ಜನ ಅರಳುಗಣ್ಣಿನ ಮತ್ತು ಅಷ್ಟೇ ತುಂಟ ಸ್ವಭಾವದ ವಿಜ್ಞಾನದ ವಿದ್ಯಾರ್ಥಿನಿಯರಿಗೆ ಕನ್ನಡದ ಆದಿಕವಿಯ ಈ  ಅವಿಸ್ಮರಣೀಯ ಉದ್ಗಾರದ ಮಹತ್ವ ಎಷ್ಟು ಅರ್ಥವಾಯಿತೋ ಬಿಟ್ಟಿತೋ! ಆದರೆ ಮೇಡಂ […]

ಕನ್ನಡಿಗರ ಮನೆಯಾಗಲಿ ಮೊದಲ ‘ಕನ್ನಡ ಶಾಲೆ’

ನಮ್ಮ ‘ಚಿತ್ರನಾಟ್ಯ’ – ಭರತನಾಟ್ಯ ತರಗತಿಗೆ ಪುಟಾಣಿ ಮಕ್ಕಳು ಬಂದು ನಾಟ್ಯ ಕಲಿಯಲು ಸೇರುತ್ತವೆ. ಐದು- ಐದೂವರೆ- ಆರು ವಯಸ್ಸಿನ ಎಳೆಯ ಮಕ್ಕಳಿಗೆ ನಾಟ್ಯ ಹೇಳಿಕೊಡುವಾಗ ಅವಕ್ಕೆ ಅರ್ಥ ಆಗುವ ಭಾಷೆಯಲ್ಲಿ ಹೇಳಿಕೊಡುವುದು ಮುಖ್ಯ‌. ಹೀಗಾಗಿ ಮಕ್ಕಳನ್ನು ಅವರ ಮನೆಯ ಭಾಷೆ/ತಾಯಿ ನುಡಿಯ ಬಗ್ಗೆ ನಾನು ಸಾಮಾನ್ಯವಾಗಿ ವಿಚಾರಿಸುತ್ತೇನೆ.  ಮೇಲೆ ಹೇಳಿದ ಹಿನ್ನಲೆಯಲ್ಲಿ ಒಮ್ಮೆ ಒಂದು ಮಗುವನ್ನು ” ನಿಮ್ಮ ಮನೆಯಲ್ಲಿ ಯಾವ ಭಾಷೆ ಮಾತಾಡ್ತೀರಮ್ಮ?” ಎಂದು ನಾನು ಕೇಳಿದಾಗ ಅದು ” ಇಂಗ್ಲಿಷ್ ” ಎಂದು […]

‘ಸ್ವಲ್ಪ’…ಈ ಪದದ ಉಪಯೋಗ ಖಂಡಿತ ಅಲ್ಲ‌ ಸ್ವಲ್ಪ.

ಊಟ ಬಡಿಸುವಾಗ ‘ಸ್ವಲ್ಪ ಹಾಕಿ’, ‘ಇನ್ನು ಸ್ವಲ್ಪ ಬಡಿಸ್ಲಾ?’ ಎನ್ನುವ ಪದಪ್ರಯೋಗವನ್ನು ನಾವೆಲ್ಲ ಕೇಳಿರುತ್ತೇವೆ, ಸ್ವತಃ ಬಳಸಿಯೂ ಇರುತ್ತೇವೆ. ನಿಘಂಟಿನಲ್ಲಿ ಈ ಪದಕ್ಕೆ ನಾಮಪದವಾದಾಗ ‘ಅಲ್ಪವಾದುದು; ಕ್ಷುದ್ರವಾದುದು’, ಗುಣ ವಿಶೇಷಣವಾದಾಗ ‘ತುಸು, ಕೊಂಚ, ಅಲ್ಪ’ ಎಂಬ ಅರ್ಥಗಳಿವೆ. ಹೊಸದಾಗಿ ಕನ್ನಡ ಕಲಿಯುತ್ತಿರುವ  ಪರಭಾಷಿಕರನ್ನು ಯಾರಾದರೂ ‘ ನಿಮಗೆ ಕನ್ನಡ ಬರುತ್ತಾ?’ ಎಂದು ಕೇಳಿದರೆ ಅವರು ‘ಸ್ವಲ್ಪ ಸ್ವಲ್ಪ’ ಎನ್ನುವುದನ್ನು ಕೇಳಿರುತ್ತೇವೆ ಅಲ್ಲವೇ? ಮಾತುಕತೆಗಳಲ್ಲಿ ‘ಅಲ್ಪಸ್ವಲ್ಪ’ ಎಂಬ ಪದಪ್ರಯೋಗ ಕೂಡ ಇದೆ. “ಸಂಗೀತ ಅಲ್ಪಸ್ವಲ್ಪ ಕಲಿತಿದ್ದೇನೆ”, ದೆಹಲಿಯ ಬಗ್ಗೆ […]

Page 8 of 16

Kannada Sethu. All rights reserved.