ಕನ್ನಡ ಪ್ರಸಂಗ

ಇದು ಲೇಖಕಿಯು ಕನ್ನಡದೊಂದಿಗೆ ಒಡನಾಡಿದ ಅನುಭವಗಳ ಕಥನವಾಗಿದೆ. ಕನ್ನಡ ಜಗತ್ತು ತನಗೆ ಕಲಿಸಿದ ಹಾಗೂ ಕನ್ನಡ ಭಾಷೆ ಹಾಗೂ ಸಾಹಿತ್ಯಗಳನ್ನು ತಾನು ಕಲಿಸಿದ ದಾರಿಯಲ್ಲಿನ ವಿವಿಧ ಅನುಭವಗಳನ್ನು ಓದುಗರೊಂದಿಗೆ ಹಂಚಿಕೊಳ್ಳುವ ಪ್ರಯತ್ನವಾಗಿರುತ್ತದೆ ಇದು. ವಾರಕ್ಕೆ ಒಂದು ಕನ್ನಡ ಪ್ರಸಂಗದಂತೆ ಈ ಅಂಕಣವು ಮೂಡಿ ಬರಲಿದೆ.

ಭಾವನೃತ್ಯ ಎಂಬ ಸಾಂಸ್ಕೃತಿಕ ಸಿರಿ  

ಭಾವಗೀತೆಗಳು ಅಂದರೆ ಕನ್ನಡಿಗರೆಲ್ಲರೂ ” ಹಾಂ ಗೊತ್ತು” ಅನ್ನುತ್ತಾರೆ.‌ ಆದರೆ ಭಾವನೃತ್ಯ ಎಂಬುದು ಹೆಚ್ಚು ಜನರು ಬಳಸುವ ಪದ ಅಲ್ಲ. ಭಾವಗೀತೆಯೊಂದಕ್ಕೆ ನಾಟ್ಯ ಸಂಯೋಜನೆ ಮಾಡಿದರೆ ಅದು ಭಾವನೃತ್ಯ. ‌ಭರತನಾಟ್ಯ, ಸಮಕಾಲೀನ ನೃತ್ಯ, ಜಾನಪದ ನೃತ್ಯ ಯಾವುದೇ ಆಗಬಹುದು ; ಭಾವವನ್ನು ಪ್ರೇಕ್ಷಕರಿಗೆ ತಲುಪಿಸುವ ಕೆಲಸವನ್ನು ಭಾವನೃತ್ಯವು ಪರಿಣಾಮಕಾರಿಯಾಗಿ ಮಾಡುತ್ತದೆ. ಕುವೆಂಪು, ಬೇಂದ್ರೆ, ಪುತಿನ, ಕೆಎಸ್ ನ, ಹೆಚ್.ಎಸ್.ವಿ., ಜಿ.ಎಸ್.ಶಿವರುದ್ರಪ್ಪ ….ಇಂತಹ ಕವಿಗಳ ರಚನೆಗಳು ಭಾವನೃತ್ಯಕ್ಕೆ ಬಹುವಾಗಿ ಒಪ್ಪುತ್ತವೆ. ಉದಾಹರಣೆಗೆ ಕುವೆಂಪು ಅವರ ‘ಬೃಂದಾವನಕೆ ಹಾಲನು‌ ಮಾರಲು […]

ಅರ್ಥ ಇಲ್ಲದೆಯೇ ಭಾವವನ್ನು ತಲುಪಿಸುವ ಚಮತ್ಕಾರ – ಕನ್ನಡದ ಅನುಕರಣ ಪದಗಳ ಭಂಡಾರ

ನನ್ನ ತಂಗಿ‌ ಅರಳು ಹುರಿದ ಹಾಗೆ ಚಟಪಟ ಅಂತ ಮಾತಾಡ್ತಾಳಪ್ಪ, ಮಗು ಪಿಳಿಪಳಿ ಕಣ್ ಬಿಟ್ಕೊಂಡು ನೋಡ್ತಿತ್ತು, ಸರ್ರನೆ ಹೋಗಿ ಭರ್ರನೆ ಬರ್ತೀನಿ, ನೀರು ಝುಳುಝುಳು ಹರೀತಿದೆ ನೋಡಿ, ಢಣ ಢಣ ಗಂಟೆ ಬಾರಿಸಿತು… ಹೀಗೆ ಅನುಕರಣ ಶಬ್ದಗಳನ್ನು ಬಳಸಿರುವ ವಾಕ್ಯಗಳನ್ನು ಆಗಾಗ ನಾವು ಹೇಳುತ್ತಲೂ ಕೇಳುತ್ತಲೂ ಇರುತ್ತೇವಲ್ಲವೇ? ಈ ಅನುಕರಣ ಶಬ್ದಗಳನ್ನು ವ್ಯಾಕರಣ ಪಂಡಿತರು ಅರ್ಥ ಇಲ್ಲದ ಆದರೆ ಒಂದು ಕ್ರಿಯೆಯ ಸದ್ದನ್ನು ಅನುಕರಿಸುವ ಪದಗಳು ಅನ್ನುತ್ತಾರೆ. ಅನುಕರಣಾವ್ಯಯಗಳು ಎಂದು ಒಂದು ವಿಭಾಗವೇ ಇರುತ್ತೆ ವ್ಯಾಕರಣ […]

ಮೊದಲು ಕಟ್ಟಬೇಕು ಸೇತುವೆ ಮನಗಳಿಗೆ ಇಲ್ದಿದ್ರೆ ಹೇಗೆ ತಲುಪುತ್ತೆ ಕನ್ನಡ‌ ಪಾಠ ಮಕ್ಕಳಿಗೆ?

ಎರಡೂವರೆ ದಶಕಗಳಿಗೂ ಹೆಚ್ಚು ಕಾಲ ಕನ್ನಡ ಪಾಠ ಮಾಡಿರುವ ನನ್ನಂತಹ ಕನ್ನಡ ಅಧ್ಯಾಪಕರಿಗೆ ಒಂದು ವಿಷಯ ಚೆನ್ನಾಗಿ ಮನದಟ್ಟಾಗಿರುತ್ತದೆ, ಎಂಬುದು ನನ್ನ ಅನಿಸಿಕೆ. ಅದೇನೆಂದರೆ, ಪ್ರಾಥಮಿಕ-ಪ್ರೌಢ-ಪದವಿಪೂರ್ವ- ಪದವಿ …. ಯಾವುದೇ ಹಂತವಾಗಲಿ, ಉತ್ತಮವಾಗಿ ಪಾಠ ಮಾಡುವ ಆಸೆಯುಳ್ಳ ಕನ್ನಡ ಅಧ್ಯಾಪಕರು ಮೊದಲು ವಿದ್ಯಾರ್ಥಿಗಳ ಮನವನ್ನು ಮುಟ್ಟುವ ಸೇತುವೆ ಕಟ್ಟಿಕೊಳ್ಳಬೇಕು; ಆಮೇಲಷ್ಟೇ ಪಾಠ ಮಾಡಬೇಕು.  ‘ಈ ಅಧ್ಯಾಪಕರು ಸಹ ನನ್ನಂತೆ ಒಬ್ಬ ಮನುಷ್ಯರು, ಭಾವನೆಗಳಿರುವವರು, ಜೀವನದೊಂದಿಗಿನ ಹೋರಾಟದಲ್ಲಿ ನನ್ನ ಪಯಣಕ್ಕೆ ಅರ್ಥಪೂರ್ಣ ಬೆಂಬಲ ನೀಡಬಲ್ಲವರು’ ಎಂಬ ಮನೋಭಾವವು ವಿದ್ಯಾರ್ಥಿಗಳಲ್ಲಿ […]

ಪದವಿ ಹಂತದಲ್ಲಿನ ಕನ್ನಡ ಬರವಣಿಗೆಯ ತಪ್ಪುಗಳು – ಅಧ್ಯಾಪಕರ ಮಟ್ಟಿಗೆ ನುಂಗಲಾರದ ತುತ್ತುಗಳು 

ಹದಿನೇಳರಿಂದ ಇಪ್ಪತ್ತು ವಯಸ್ಸಿನ ವಿದ್ಯಾರ್ಥಿಗಳಿಗೆ ಅಂದರೆ ಪದವಿ ಹಂತದಲ್ಲಿರುವ  ಕಿಶೋರ ಕಿಶೋರಿಯರಿಗೆ  ಕನ್ನಡ ಪಾಠ ಮಾಡುವ ಅಧ್ಯಾಪಕರ ಒಂದು ದೊಡ್ಡ ತಲೆನೋವೆಂದರೆ, ಆ ವಿದ್ಯಾರ್ಥಿಗಳು ಮಾಡುವ  ಅಕ್ಷರ ತಪ್ಪುಗಳು. ಅಲ್ಪಪ್ರಾಣ – ಮಹಾಪ್ರಾಣ, ಹೃಸ್ವಾಕ್ಷರ – ದೀರ್ಘಾಕ್ಷರ, ಅಕಾರ-ಹಕಾರ, ವಿಭಕ್ತಿ ಪ್ರತ್ಯಯಗಳಲ್ಲಿನ ಅನೇಕ  ದೋಷಗಳು, ಲೇಖನ ಚಿಹ್ನೆಗಳಿಲ್ಲದೆ ಬರೆಯುವುದು, ಹೇಳಿ ಬರೆಸುತ್ತಿರುವಾಗ ಪದಗಳನ್ನೇ ಬಿಟ್ಟುಬಿಡುವುದು… ರಾಮಾ ರಾಮಾ….ಈ ಪಟ್ಟಿ ಬಹು ಉದ್ದವಾದುದು.‌ ತರಗತಿಯಲ್ಲಿ ಪಾಠವಿಷಯಗಳನ್ನು ಬರೆಸುವಾಗ ಅಥವಾ ಪರೀಕ್ಷೆಯ ಅವರ ಉತ್ತರ ಪತ್ರಿಕೆಗಳನ್ನು ತಿದ್ದುವಾಗ ಈ ದೋಷಗಳು […]

“ಅಲ್ಯಾ ಕಟ್ ತಗೊಳ್ಳಿ ಮೇಡಂ, ತುಂಬ ಚೆನ್ನಾಗಿರುತ್ತೆ”. – ಉಚ್ಚಾರ ತಂದ ಫಜೀತಿಯ ಪ್ರಸಂಗ

ಈ ಸಲ ತಾಪದ ಅಲೆಗಳೊಡನೆ ಬೆಂಗಳೂರನ್ನು ಕಾಡಿದ ಬೇಸಗೆಯ ಶಾಖಕ್ಕೆ ಹೆದರಿ, ಮನೆಯಲ್ಲಿ ಧರಿಸಲು ಒಂದೆರಡು ಹತ್ತಿ ಬಟ್ಟೆಗಳ‌ ಖರೀದಿಗೆಂದು ರಾಜಾಜಿನಗರದ ಬಟ್ಟೆಯಂಗಡಿಯೊಂದಕ್ಕೆ ಹೋಗಿದ್ದೆ. ಇಪ್ಪತ್ತು- ಇಪ್ಪತ್ತೈದು ವಯಸ್ಸಿನ  ಮೂವರು ಯುವತಿಯರು ನಿರ್ವಹಿಸುತ್ತಿದ್ದ ಸಣ್ಣ ಬಟ್ಟೆ ಅಂಗಡಿ ಅದು.  ಸರಿ. ಉಡುಪುಗಳನ್ನು ನಾನು ಆಯ್ಕೆ ಮಾಡಲು ತೊಡಗಿದ್ದಾಗ ನನಗೆ ಸಹಾಯ ಮಾಡುವ ಉದ್ದೇಶದಿಂದ ಅವರಲ್ಲಿ ಒಬ್ಬ ಹುಡುಗಿ ನನ್ನ ಬಳಿ ಬಂದು, ಅಲ್ಲಿನ ಗೂಟಗಳಲ್ಲಿ ನೇತು ಹಾಕಿದ್ದ ಉಡುಪೊಂದನ್ನು ತೆಗೆದು “ಅಲ್ಯಾ ಕಟ್ ತಗೊಳ್ಳಿ ಮೇಡಂ, ತುಂಬ […]

ಪುಟ್ಟ ಪುಟ್ಟ ವಾಕ್ಯಗಳ ನುಡಿಯಾನ – ಕನ್ನಡದ ಜಾಯಮಾನ

ಅಧ್ಯಾಪಕ ವೃತ್ತಿಯಲ್ಲಿರುವವರಿಗೆ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡುವಾಗ ಒಂದು ಕಿರಿಕಿರಿಯ ಸಂದರ್ಭ ಎದುರಾಗುತ್ತದೆ.‌ ಅದೇನೆಂದರೆ ಹನುಮಂತನ ಬಾಲದಷ್ಟು ಉದ್ದುದ್ದ ವಾಕ್ಯಗಳನ್ನು ಓದುವ ಸನ್ನಿವೇಶ. ಎಷ್ಟೋ ಸಲ ವಚನ, ಕಾಲ, ಪ್ರಥಮ ಪುರುಷ, ಲೇಖನ ಚಿಹ್ನೆ ಮುಂತಾದ ವ್ಯಾಕರಣ ನಿಯಮಗಳೆಲ್ಲಾ ಗಾಳಿಗೆ ತೂರಲ್ಪಟ್ಟು ಆ ಉದ್ದಾನುದ್ದ ವಾಕ್ಯವು ಅರ್ಥಹೀನವಾಗಿಬಿಡುತ್ತದೆ. ಇಂತಹ ಸಂದರ್ಭಗಳಲ್ಲಿ ಕನ್ನಡದ ಜಾಯಮಾನ ಚಿಕ್ಕ ಚಿಕ್ಕ ವಾಕ್ಯಗಳದ್ದಲ್ಲವೇ ಎಂಬ ವಿಷಯ ಮನಸ್ಸಿಗೆ ಪ್ರಧಾನವಾಗಿ ಭಾಸವಾಗುತ್ತದೆ.  ಉದಾಹರಣೆಗೆ ನಾವು ಸಂಭಾಷಣೆಗಳಲ್ಲಿ ಬಳಸುವ ವಾಕ್ಯಗಳನ್ನು  ಗಮನಿಸಿ. ಏನ್ಸಮಾಚಾರ?ಊಟ ಆಯ್ತಾ?ಇವತ್ತು […]

‘ಇವ ನಮ್ಮವ ಇವ ನಮ್ಮವ’ ಎನ್ನುವ ಕನ್ನಡ ವಿಭಾಗಗಳ ಸೊಗಸು.

ಒಬ್ಬ ಕಾಲೇಜು ಅಧ್ಯಾಪಕಿಯಾಗಿ ಏಳೆಂಟು ಕಾಲೇಜುಗಳಲ್ಲಿ ಕೆಲಸ ಮಾಡಿರುವ ಹಾಗೂ ಮೌಲ್ಯಮಾಪನ, ವಿಚಾರ ಸಂಕಿರಣ, ಪರೀಕ್ಷಾ ಮಂಡಳಿ ಮುಂತಾದವುಗಳ ದೆಸೆಯಿಂದಾಗಿ ಬೇರೆ ಅನೇಕ ಕಾಲೇಜುಗಳ ಅಧ್ಯಾಪಕರೊಡನೆ ಒಡನಾಡುವ ಅವಕಾಶ ಪಡೆದಿರುವ ನನಗೆ, ಕಾಲೇಜುಗಳ ಕನ್ನಡ ವಿಭಾಗಗಳ ಬಗ್ಗೆ,  ಓದುಗರೊಡನೆ ಹಂಚಿಕೊಳ್ಳಬೇಕೆನ್ನಿಸುವ ಒಂದು ಅನುಭವ ಇದೆ. ಅದೇನೆಂದರೆ, ಕನ್ನಡ ವಿಭಾಗಗಳ ಮನುಷ್ಯ ಪ್ರೀತಿ ಮತ್ತು ಅವು ಜನರನ್ನು ಒಳಗೊಳ್ಳುವ ರೀತಿ.   ನಾನು ಕೆಲಸ ಮಾಡಿದ ಕಾಲೇಜುಗಳಲ್ಲಿ ( ಮತ್ತು ಸಾಮಾನ್ಯವಾಗಿ  ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ) ಗರಿಷ್ಠ ಸಂಖ್ಯೆಯ ಉದ್ಯೋಗಿಗಳು […]

ರಾಜರತ್ನಂ ಮಾದರಿ – ಮಕ್ಕಳಿಗೆ ಕವಿತೆ ಕಟ್ಟುವುದನ್ನು ಕಲಿಸುವ ಸುಂದರ ದಾರಿ.

ಎ.ಎಸ್.ಮೂರ್ತಿ ಅವರ ರಂಗಭೂಮಿಯ ಪರಂಪರೆಯನ್ನು ಸಾರ್ಥಕವಾಗಿ‌ ಮುಂದುವರಿಸಿಕೊಂಡು ಬರುತ್ತಿರುವ ಬೆಂಗಳೂರಿನ ‘ವಿಜಯನಗರ ಬಿಂಬ’ ಸಂಸ್ಥೆಯು ಪ್ರತಿ ವರ್ಷವೂ  ಮಕ್ಕಳಿಗಾಗಿ ಬೇಸಿಗೆ ಶಿಬಿರವನ್ನು ಆಯೋಜಿಸುತ್ತದೆ. ಹಾಡು, ನಾಟ್ಯ, ಚಿತ್ರ, ಕಾವ್ಯ ಮುಂತಾದ ಕಲೆಗಳಲ್ಲಿ ಮಕ್ಕಳಿಗೆ ತರಬೇತಿ ಕೊಡಲು ಆಯಾ ಕ್ಷೇತ್ರದ ತಜ್ಞರನ್ನು ಆಯೋಜಕರು ಆಹ್ವಾನಿಸುತ್ತಾರೆ.‌ ಇದೇ ಹಿನ್ನೆಲೆಯಲ್ಲಿ ಈ ಲೇಖಕಿಯನ್ನು ಮಕ್ಕಳಿಗೆ ಕವಿತಾ ರಚನೆಯನ್ನು ಹೇಳಿಕೊಡಲು ಆಹ್ವಾನಿಸುತ್ತಿರುತ್ತಾರೆ.  ಮುಗ್ಧ ಮಕ್ಕಳಿಗೆ ಕವಿತಾ ರಚನೆ ಎಂಬ ಮಾಯಾಲೋಕದ ಪರಿಚಯ ಮಾಡಿಸುವುದು ಖುಷಿ ನೀಡುವ ಹಾಗೂ ಅದೇ ಹೊತ್ತಿನಲ್ಲಿ ತುಂಬ ಸವಾಲೊಡ್ಡುವ […]

ಬೆಂಗಳೂರಿಗರ ಬೆರಕೆ ಕನ್ನಡ

ಬೆಂಗಳೂರಿನಲ್ಲಿ ಓಡಾಡುವಾಗ, ಜನರೊಂದಿಗೆ ಮಾತಾಡುವಾಗ ಈ ಬಗೆಯ ವಾಕ್ಯಗಳು ಕಿವಿಗೆ ಬೀಳುತ್ತವೆ – ” ಆಫೀಸ್ ತಲುಪ್ದೆ ಕಣೋ ಆಲ್ಮೋಸ್ಟು”, “ನಾನು ಈ ಕಡೇನೆ ಹೋಗೋದು ಮೋಸ್ಟ್ ಆಫ್ ದ ಟೈಮ್ಸು”,  ನೈಟೇ ನಿಮ್ಗೆ ಕಾಲ್ ಮಾಡಿದ್ನಲ್ಲಾ,  ಐ ಥಿಂಕ್ ಯೂ ವರ್ ಬಿಸಿ”,  ” ನೀ ಕಂಟಿನ್ಯುವಸ್ ಆಗಿ ಬಂದ್ರೆ ತಾನೇ, ಒನ್ಸ್ ಇನ್ ಎ ಬ್ಲೂಮೂನ್ ಬರ್ತೀಯ”, “ಆಲ್ ಆಫ್ ಅ ಸಡನ್ ನಮ್ ಬಾಸ್ ಮೀಟಿಂಗ್ ಕರೆದ್ಬಿಟ್ರು, ಸಾರಿ ಕಣೇ, ಐ ವಾಸ್ […]

ಕಂಬಕ್ಕೆ ಕಟ್ಟಲ್ಪಟ್ಟ ದೇವರು.. ಕನ್ನಡ ಜನಪದರ ಭಾವಸಿರಿಯ ತವರು

ಈಚೆಗೆ ನಮ್ಮ ಹಂಪಿನಗರದ ಏಳನೇ ಮುಖ್ಯರಸ್ತೆಯ ಬಳಿ ಹೂವು ಕೊಂಡುಕೊಳ್ಳುತ್ತಿದ್ದಾಗ ಒಂದು ಕುತೂಹಲಕರ ವಿಷಯವನ್ನು ಗಮನಿಸಿದೆ. ಹೂಮಾರುವವರು ತಮ್ಮ ಬುಟ್ಟಿ ಇತ್ಯಾದಿಗಳನ್ನು ಇಟ್ಟುಕೊಂಡ ಜಾಗದ ಪಕ್ಕದಲ್ಲಿ ಇದ್ದ ಕಂಬವೊಂದಕ್ಕೆ  ಕೆಲವು ಪುಟ್ಟ ಪುಟ್ಟ ದೇವರ ವಿಗ್ರಹಗಳನ್ನು  ಕಟ್ಟಿಟ್ಟದ್ದು ಕಂಡುಬಂತು.‌  ಬಹುಶಃ ಆ ಹೂ ಮಾರುವವರು ಮತ್ತು ಸುತ್ತಮುತ್ತ ಇದ್ದ ಹಣ್ಣಿನ ವ್ಯಾಪಾರಿಗಳು ಆ ವಿಗ್ರಹಗಳಿಗೆ ನಮಿಸಿ ತಮ್ಮ ದಿನದ ವ್ಯಾಪಾರವನ್ನು ಶುರು ಮಾಡುತ್ತಾರೆಂದು ತೋರುತ್ತದೆ. ಕಲ್ಲಿಗೆ ಭಕ್ತಿಯಿಂದ ಕುಂಕುಮ ಹಚ್ಚಿ ಹೂ ಇಟ್ಟು ಅದನ್ನೇ ಭಗವಂತನೆಂದು ತಿಳಿಯುವ […]

Page 9 of 17

Kannada Sethu. All rights reserved.