ನಾವು ಇನ್ನೊಬ್ಬರಿಗೆ ಅಂದರೆ ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ಮತ್ತು ನಮ್ಮ ಸಹಾಯವನ್ನು ಬಯಸಿ ಬಂದವರಿಗೆ ಮಾಡುವಂತಹ ಸಹಾಯಕ್ಕೆ ಒಂದು ಮಿತಿ ಇರುತ್ತದೆ. ಬೇರೆಯವರು ನಮಗೆ ಮಾಡಬಹುದಾದ ವಿಷಯದಲ್ಲೂ ಇದು ನಿಜ. ಮರ ಹತ್ತುವವರಿಗೆ ನಾವು, ನಮ್ಮ ಕೈಗೆ ಅವರು ಎಟಕುವ ತನಕ ಮಾತ್ರ ಅವರನ್ನು ಮೇಲಕ್ಕೆ ನೂಕಬಹುದು. ಆಮೇಲೆ ಸ್ವತಃ ಅವರೇ ಮೇಲೆ ಮೇಲೆ ಹತ್ತಬೇಕು. ಈ ವಿವೇಕದ ಮಾತನ್ನು ನೆನಪಿಟ್ಟುಕೊಂಡರೆ ನಾವು ಸಹಾಯ ಪಡೆಯುವುದರಲ್ಲಿ ಮತ್ತು ಕೊಡುವುದರಲ್ಲಿರುವ ಮಿತಿ ನಮಗೆ ಅರ್ಥ ಆಗುತ್ತದೆ. Kannada proverb – […]
ಕನ್ನಡ ವಿವೇಕ
ಬದುಕನ್ನು ಹಸನು ಮಾಡಲು ಕನ್ನಡ ಭಾಷೆ, ಸಂಸ್ಕೃತಿಯು ನಮಗೆ ನೀಡಿದ ಕೆಲವು ಗಾದೆ, ಸೂಕ್ತಿ, ನಾಣ್ಣುಡಿ, ಲೋಕೋಕ್ತಿ, ನಲ್ವಾತು ಇವುಗಳಲ್ಲಿ ವಾರಕ್ಕೆ ಒಂದರ ಕಿರು ಪರಿಚಯವನ್ನು ಈ ಅಂಕಣದಲ್ಲಿ ಮಾಡಿಕೊಡಲಾಗುತ್ತದೆ.
Like us!
Follow us!