ಕನ್ನಡ ವಿವೇಕ

ಬದುಕನ್ನು ಹಸನು ಮಾಡಲು ಕನ್ನಡ ಭಾಷೆ, ಸಂಸ್ಕೃತಿಯು ನಮಗೆ ನೀಡಿದ ಕೆಲವು ಗಾದೆ, ಸೂಕ್ತಿ, ನಾಣ್ಣುಡಿ, ಲೋಕೋಕ್ತಿ, ನಲ್ವಾತು ಇವುಗಳಲ್ಲಿ ವಾರಕ್ಕೆ ಒಂದರ ಕಿರು ಪರಿಚಯವನ್ನು ಈ ಅಂಕಣದಲ್ಲಿ ಮಾಡಿಕೊಡಲಾಗುತ್ತದೆ.

ಕನ್ನಡ ಗಾದೆಮಾತು – ಮರ ಹತ್ತುವವನನ್ನು‌ ಕೈಗೆಟಕುವವೆರೆಗೆ ಮಾತ್ರ ನೂಕಬಹುದು.

ನಾವು ಇನ್ನೊಬ್ಬರಿಗೆ ಅಂದರೆ ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ಮತ್ತು ನಮ್ಮ ಸಹಾಯವನ್ನು ಬಯಸಿ ಬಂದವರಿಗೆ ಮಾಡುವಂತಹ ಸಹಾಯಕ್ಕೆ ಒಂದು ಮಿತಿ ಇರುತ್ತದೆ. ಬೇರೆಯವರು ನಮಗೆ ಮಾಡಬಹುದಾದ ವಿಷಯದಲ್ಲೂ ಇದು ನಿಜ. ಮರ ಹತ್ತುವವರಿಗೆ ನಾವು, ನಮ್ಮ ಕೈಗೆ ಅವರು ಎಟಕುವ ತನಕ ಮಾತ್ರ ಅವರನ್ನು ಮೇಲಕ್ಕೆ ನೂಕಬಹುದು. ಆಮೇಲೆ  ಸ್ವತಃ ಅವರೇ ಮೇಲೆ ಮೇಲೆ ಹತ್ತಬೇಕು‌. ಈ ವಿವೇಕದ ಮಾತನ್ನು ನೆನಪಿಟ್ಟುಕೊಂಡರೆ ನಾವು ಸಹಾಯ ಪಡೆಯುವುದರಲ್ಲಿ ಮತ್ತು ಕೊಡುವುದರಲ್ಲಿರುವ ಮಿತಿ ನಮಗೆ ಅರ್ಥ ಆಗುತ್ತದೆ. Kannada proverb – […]

ಕನ್ನಡ ಗಾದೆಮಾತು – ವನವೆಲ್ಲ‌ ಸಿರಿಗಂಧವ? 

ಸಿರಿಗಂಧ( ಶ್ರೀಗಂಧ) ಎಂಬುದು‌ ನಮಗೆಲ್ಲ ಗೊತ್ತಿರುವಂತೆ ದಕ್ಷಿಣ ಕರ್ನಾಟಕದಲ್ಲಿ (ಹಾಗೂ ಒಟ್ಟು ದಕ್ಷಿಣ ಏಷ್ಯಾದ ಕೆಲವು ಪ್ರದೇಶಗಳಲ್ಲಿ) ಬೆಳೆಯುವ ಒಂದು ವಿಶೇಷವಾದ ಮರ. ಇದರ ಚಿರಂತನ ಸುಗಂಧವು ಶತಶತಮಾನಗಳಿಂದ ಜಗತ್ಪ್ರಸಿದ್ಧವಾಗಿದೆ.  ನಮ್ಮ ಮೈಸೂರನ್ನು ಗಂಧದ ಬೀಡು ಅನ್ನುತ್ತಾರಲ್ಲವೆ? ಆದರೆ ಕಾಡಿನಲ್ಲಿ ಬೆಳೆಯುವ ಎಲ್ಲ ಮರಗಳೂ ಶ್ರೀಗಂಧವಾಗಿರುವುದಿಲ್ಲ. ಹೀಗೆಯೇ ವ್ಯಕ್ತಿಗಳಲ್ಲಿ ಎಲ್ಲರೂ ಒಂದೇ ರೀತಿಯ ಶ್ರೇಷ್ಠತೆ ಹೊಂದಿರುವುದಿಲ್ಲ. ಎಲ್ಲ ಲೋಹಗಳೂ ಚಿನ್ನವಲ್ಲ. ಎಲ್ಲ ಹರಳುಗಳೂ ವಜ್ರವಲ್ಲ‌. ಅತ್ಯುತ್ತಮವಾದುದು ಅಪರೂಪವಾಗಿರುತ್ತದೆ‌. ಜೀವನದ ಈ ಸತ್ಯವನ್ನು ಮೇಲಿನ ಗಾದೆಮಾತು ತುಂಬ ಚೆನ್ನಾಗಿ […]

ಕನ್ನಡ ಗಾದೆಮಾತು – ಅಕ್ಕರೆ ಇದ್ದಲ್ಲಿ ದುಕ್ಕ ಇರುತ್ತೆ‌. 

ಮನುಷ್ಯ ಸಂಬಂಧಗಳಲ್ಲಿನ‌ ಒಂದು ಸತ್ಯವನ್ನು ಹೇಳುವ ಗಾದೆಮಾತು ಇದು. ಎಲ್ಲಿ ಅಕ್ಕರೆ ಇರುತ್ತದೋ ಅಲ್ಲಿ ಕಾಳಜಿ, ನಿರೀಕ್ಷೆ, ಚಿಂತೆ, ದುಃಖ ಇವೆಲ್ಲ ಇರುತ್ತವೆ.‌ ತಾಯಿ ಮಕ್ಕಳ ಸಂಬಂಧ, ತಂದೆ ಮಕ್ಕಳ ಸಂಬಂಧ ….ಇವುಗಳಲ್ಲಿ ಇನ್ನು ಯಾವ ದುಃಖವಿಲ್ಲದಿದ್ದರೂ ರೋಗ, ಸಾವು ತರುವ ಅಗಲಿಕೆಯ ದುಃಖವಂತೂ ಇರುತ್ತದೆ ಅಲ್ಲವೆ? ನಿಜ ಹೇಳಬೇಕೆಂದರೆ ನಾವು ತುಂಬ ಕಷ್ಟ ನೋವು, ಅನುಭವಿಸುವುದು ನಾವು‌ ಯಾರನ್ನು ತುಂಬ ಪ್ರೀತಿಸುತ್ತೇವೋ ಅವರ ಕಾರಣದಿಂದಲೇ ಹೊರತು ಅಪರಿಚಿತರಿಂದ ಅಲ್ಲ.‌ ಬದುಕಿನ ಒಂದು ವಿಪರ್ಯಾಸ ಇದು. ಬದುಕಿನ […]

ಆಫ್ರಿಕಾದ ಒಂದು ಗಾದೆ ಮಾತಿನ ಕನ್ನಡ ಅನುವಾದ – ಯುವಕರು ಹೆಚ್ಚು ವೇಗವಾಗಿ ನಡೆಯುತ್ತಾರೆ, ಆದರೆ ರಸ್ತೆ ಗೊತ್ತಿರುವುದು ಹಿರಿಯರಿಗೆ.

ಯೌವನದಲ್ಲಿ ಹುರುಪು, ಉತ್ಸಾಹ ಹೆಚ್ಚು, ಆದರೆ ತಾಳ್ಮೆ ಕಡಿಮೆ. ಹೀಗಾಗಿ, ಏನು ಮಾಡಿದರೂ ಅವಸರವಸರವಾಗಿ, ದುಡುಕು, ರಭಸಗಳಿಂದ ಅದರಲ್ಲಿ ತೊಡಗುವುದು ಯುವಕ-ಯುವತಿಯರ ಸ್ವಭಾವವಾಗಿರುತ್ತದೆ. ಆದರೆ, ಜೀವನದಲ್ಲಿ ನೊಂದು ಬೆಂದು ಕಷ್ಟ-ಸುಖ ಅನುಭವಿಸಿದ ಹಿರಿಯರು ಪ್ರಬುದ್ಧ ರೀತಿಯಲ್ಲಿ ವ್ಯವಹರಿಸುತ್ತಾರೆ ; ಯಾವ ರಸ್ತೆಯಲ್ಲಿ ಹೋಗಬೇಕು, ಯಾವುದರಲ್ಲಿ ಹೋಗಬಾರದು ಎಂಬುದು ಅವರಿಗೆ ಗೊತ್ತಿರುತ್ತದೆ. ಈ ಕಾರಣದಿಂದಾಗಿ,  ಹಿರಿಯರ ರಸ್ತೆಯ ಜ್ಞಾನದಿಂದ ಕಿರಿಯರು ಕಲಿತರೆ, ಹಾಗೂ ಯುವಕರ ಹುರುಪು ಉತ್ಸಾಹಗಳನ್ನು ತಮ್ಮ ಅನುಭವದ ಮುಖೇನ ಹಿರಿಯರು ಸರಿದಾರಿಗೆ ಹಚ್ಚಿದರೆ ಬದುಕು ಸುಂದರವಾಗುತ್ತದೆ‌. […]

ಕನ್ನಡ ಗಾದೆಮಾತು – ಇಮ್ಮನದಿಂದ ಸುಮ್ಮನೆ‌ ಕೆಟ್ಟೆ. 

ಬಹಳ ಅಪರೂಪದ ಗಾದೆ ಮಾತು ಇದು‌. ನಮ್ಮ ಮನಸ್ಸು ಕೆಲವೊಮ್ಮೆ ಈ ದಾರಿಯೋ, ಆ ದಾರಿಯೋ, ಅದೋ ಇದೋ, ಆ ಕೆಲಸವೋ, ಈ ಕೆಲಸವೋ  ಎಂದು ಯೋಚಿಸಿ ಯೋಚಿಸಿ ದ್ವಂದ್ವಕ್ಕೆ ಬಿದ್ದು ಯಾವ ನಿರ್ಧಾರಕ್ಕೂ ಬರದೆ ಅಂದುಕೊಂಡ ಕೆಲಸ ಆಗುವುದೇ ಇಲ್ಲ.  ಇದು ಕೆಲಸದ ವಿಷಯದಲ್ಲಿ ಮಾತ್ರವಲ್ಲ, ಪ್ರಯಾಣ, ಸಂಬಂಧ ಎಲ್ಲ ವಿಷಯಗಳಲ್ಲೂ ನಿಜ.‌ ಹೀಗಾಗಿ ಇಮ್ಮನ ಅಂದರೆ, ಒಂದೇ ಬಾರಿಗೆ  ಎರಡು ಕಡೆ  ಎಳೆಯುವ ಮನಸ್ಸಿನಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಬೇಕು. ಸರಿಯಾದ ಹೊತ್ತಿನಲ್ಲಿ ಯಾವುದಾದರೂ ಒಂದು […]

ಕನ್ನಡ ಗಾದೆಮಾತು – ಹಿಮಾಲಯದಲ್ಲಿ ಹಿಮ ಹೆಚ್ಚಂತೆ, ವೀರಭದ್ರನಲ್ಲಿ ಅವತಾರ ಹೆಚ್ಚಂತೆ.

ವಿಶ್ವಜೀವನದ ಒಂದು  ವಿಚಿತ್ರ ಸಂಗತಿಯನ್ನು ಈ ಅಪರೂಪದ ಗಾದೆಮಾತು ಹೇಳುತ್ತದೆ. ಹಿಮಾಲಯ ಎಂಬುದು ತನ್ನ ಹೆಸರೇ ಸೂಚಿಸುವಂತೆ ಹಿಮದ ಮನೆ. ಅಲ್ಲಿ ಹಿಮದ ಹೆಚ್ಚಳ ಆಗುತ್ತಲೇ ಇರುತ್ತದೆ. ಹಾಗೆಯೇ ದಕ್ಷಯಜ್ಞದ ಸಂದರ್ಭದಲ್ಲಿ ಶಿವನ ಕೋಪದ ಫಲವಾಗಿ ಅವನ ಕೂದಲಿನಿಂದ  ಹುಟ್ಟಿದ ವೀರಭದ್ರನ ಆರ್ಭಟ ಬಹಳ ಹೆಚ್ಚು. ಅದು ಸದಾ ಹೆಚ್ಚುತ್ತಲೇ ಇರುವ ಸಂಗತಿ.  ನಮ್ಮನ್ನು ತುಂಬ ಯೋಚಿಸುವಂತೆ ಮತ್ತು ಬದುಕನ್ನು ಗಮನಿಸುವಂತೆ ಮಾಡುತ್ತದಲ್ಲವೆ ಈ ಗಾದೆಮಾತು? Kannada proverb – Himalayadalli hima hechchanthe. Veerabhadranalli avatara  […]

ಕನ್ನಡ ಗಾದೆಮಾತು – ಕಂಡದ್ದು ಕಂಡ ಹಾಗೆ ಹೇಳಿದರೆ ಕೆಂಡದಂಥಾ ಕೋಪ.

ಮನುಷ್ಯರ ಅಂತರಂಗದಲ್ಲಿನ ಒಂದು ವಿಲಕ್ಷಣ ಸ್ವಭಾವವನ್ಬು ಈ ಗಾದೆಮಾತು ಬಿಚ್ಚಿ ತೋರಿಸುತ್ತದೆ.  ಜನರಿಗೆ ತಾವು ಮಾಡುವ ಕೆಲವು ತಪ್ಪುಗಳು – ಉದಾಹರಣೆಗೆ, ಬಳಗದವರಲ್ಲಿ     ತಾರತಮ್ಯ ಮಾಡುವುದು, ಬೇರೆಯವರ ಸಮಯದ ಬಗ್ಗೆ ನಿರ್ಲಕ್ಷ್ಯ ತೋರುವುದು, ಮಾತು ಕೊಟ್ಟು ಉಳಿಸಿಕೊಳ್ಳದಿರುವುದು, ಅನಗತ್ಯವಾಗಿ ಸಿಟ್ಟು ಮಾಡಿಕೊಳ್ಳುವುದು, ಕಾರಣವಿಲ್ಲದೆ ಒರಟಾಗಿ ನಡೆದುಕೊಳ್ಳುವುದು….ಇಂಥವು – ಮತ್ತು  ಅವುಗಳಿಂದ ಬೇರೆಯವರಿಗೆ ಆಗುವ ತೊಂದರೆಗಳ  ಬಗ್ಗೆ ಅರಿವಿರುವುದಿಲ್ಲ ಎಂದಲ್ಲ. ಇರುತ್ತದೆ‌. ಆದರೆ, ಎದುರಿಗಿರುವವರು ಆ ತಪ್ಪುಗಳನ್ನು ಬಾಯಿಬಿಟ್ಟು ಹೇಳಿದರೆ, ಅಥವಾ ಬೆರಳಿಟ್ಟು ತೋರಿಸಿಬಿಟ್ಟರೆ ಮಾತ್ರ ಅವರಿಗೆ ವಿಪರೀತ ಕೋಪ […]

ಕನ್ನಡ ಗಾದೆಮಾತು – ಮಳೆ ನಿಂತ ಮೇಲೆ ಕೊಡೆ ಭಾರ.

ನಾವು ಮನುಷ್ಯರಲ್ಲಿ ಬಹುಮಂದಿ ಮೂಲತಃ ಆಲಸಿಗಳು ಮತ್ತು ಎಲ್ಲವನ್ನೂ ಉಪಯೋಗಿಸಿ ಎಸೆಯುವ ಗುಣದವರಿರಬೇಕು ಅನ್ನಿಸುತ್ತೆ. ಅದಕ್ಕೇ ನೋಡಿ ಮಳೆ ಇದ್ದಾಗ ನಮ್ಮನ್ನು ಕಾಪಾಡುವ ಅತ್ಯಗತ್ಯ ವಸ್ತುವಾಗಿ ಕಾಣಿಸುವ ಕೊಡೆಯು ಮಳೆ ನಿಂತ ಮೇಲೆ ಆ ಕ್ಷಣಕ್ಕೆ ತನ್ನ ಉಪಯೋಗವನ್ನು ಕಳೆದುಕೊಳ್ಳುತ್ತದೆ ಹಾಗೂ ಅದು ಬೇಡದ ಹೊರೆಯಾಗಿ ನಮಗೆ ಕಾಣಿಸಿಬಿಡುತ್ತೆ!  ದುರಂತವೆಂದರೆ ತಮ್ಮ ಸಹಜೀವಿಗಳ ವಿಷಯದಲ್ಲೂ ಕೆಲವರು ಇದೇ ಧೋರಣೆಯನ್ನು ತೋರಿಸುತ್ತಾರೆ. ವಿಪರ್ಯಾಸವಾದರೂ ಇದು ಸತ್ಯ. Kannada proverb – Male nintha mele kode bhara( When […]

ಕನ್ನಡ ಗಾದೆಮಾತು – ಅಂಬಲಿ‌ ಕುಡಿದರೂ ಇಂಬಾಗಿ ಕುಡಿ‌.

ಅಂಬಲಿ ಎಂಬುದು ರಾಗಿ ಹಸಿಹಿಟ್ಟಿಗೆ ಒಂದಿಷ್ಟು ನೀರು ಮತ್ತು ತುಸು ಉಪ್ಪು ಹಾಕಿ ಬೇಯಿಸಿದ ಗಂಜಿಯಂತಹ ಸರಳ ಆಹಾರ.‌ ಇದನ್ನು ಸಾಮಾನ್ಯವಾಗಿ ಬಡವರ ಊಟ ಎನ್ನುತ್ತಾರೆ. ಇಂತಹ ಅಂಬಲಿಯನ್ನು ಕುಡಿದರೂ ಇಂಬಾಗಿ ಅಂದರೆ ಖುಷಿ, ಪ್ರೀತಿ, ಸಂತೋಷದಿಂದ ಕುಡಿಯಬೇಕು ಎಂದು ಮೇಲಿನ ಗಾದೆಮಾತು ಹೇಳುತ್ತದೆ. ಜೀವನದಲ್ಲಿ ಪ್ರೀತಿ, ನೆಮ್ಮದಿ ಎಷ್ಟು ಮುಖ್ಯ ಎಂಬುದನ್ನು ಪರೋಕ್ಷವಾಗಿ ಹೇಳುವ ಜಾಣ್ಣುಡಿ ಇದು.‌ ಮೃಷ್ಟಾನ್ನ ಭೋಜನವನ್ನು ಅಸಂತೋಷದಿಂದ, ಹಂಗಿನಲ್ಲಿದ್ದೇನೆ ಎಂಬ ಭಾವದಿಂದ, ಚಿಂತೆಯೇ ಮಂತಾದ ಕಾರ್ಮೋಡಗಳು ಮನಸ್ಸನ್ನು ಕವಿದ ಸ್ಥಿತಿಯಿಂದ ಉಂಡರೆ […]

ಕನ್ನಡ ಗಾದೆಮಾತು – ಮೂರ್ಕಾಸಿನ ಗಳಿಕೆ, ಆರ್ಕಾಸಿನ‌ ಬಳಕೆ.

ನಾವು ನಮ್ಮ ಹಣಕಾಸನ್ನು ಬಳಸುವ ವಿಷಯದಲ್ಲಿ ನಮಗೆ ಎಚ್ಚರಿಕೆ ನೀಡುವ ಒಂದು ಗಾದೆ ಮಾತು ಇದು. ಯಾವಾಗಲೂ ನಾವು ಗಳಿಸಿದ ಹಣಕ್ಕಿಂತ ಬಳಸುವ ಹಣ ಹೆಚ್ಚಾಗಬಾರದು. ಮೂರು ಕಾಸನ್ನು ಗಳಿಸಿ‌ ಆರುಕಾಸನ್ನು ಬಳಸಿದರೆ ನಾವು ಸಾಲದ ಶೂಲಕ್ಕೆ ಅಥವಾ ಅತೃಪ್ತಿ – ಆತಂಕಗಳ ಕೂಪಕ್ಕೆ ಬೀಳಬೇಕಾಗುತ್ತದೆ. ಅಂದರೆ, ನಾವು ಗಳಿಸಿದ ಹಣಕ್ಕಿಂತ ಹೆಚ್ಚು ಹಣವನ್ನು ಎಂದೂ ಬಳಸಬಾರದು ಎಂಬ ವಿವೇಕವನ್ನು ಈ ಗಾದೆಮಾತು ನಾಲ್ಕೇ ಪದಗಳಲ್ಲಿ ಹೇಳುತ್ತದೆ. ‘ಸ್ಪೆಂಡ್ ಬಿಲೋ ಯುವರ್ ಮೀನ್ಸ್ (ನೀವು ಬಳಸಬಹುದಾದದ್ದಕ್ಕಿಂತ ಕಡಿಮೆ […]

Page 1 of 18

Kannada Sethu. All rights reserved.