ಕನ್ನಡ ವಿವೇಕ

ಬದುಕನ್ನು ಹಸನು ಮಾಡಲು ಕನ್ನಡ ಭಾಷೆ, ಸಂಸ್ಕೃತಿಯು ನಮಗೆ ನೀಡಿದ ಕೆಲವು ಗಾದೆ, ಸೂಕ್ತಿ, ನಾಣ್ಣುಡಿ, ಲೋಕೋಕ್ತಿ, ನಲ್ವಾತು ಇವುಗಳಲ್ಲಿ ವಾರಕ್ಕೆ ಒಂದರ ಕಿರು ಪರಿಚಯವನ್ನು ಈ ಅಂಕಣದಲ್ಲಿ ಮಾಡಿಕೊಡಲಾಗುತ್ತದೆ.

ಕನ್ನಡ ಗಾದೆಮಾತು – ಅಂಬಲಿ‌ ಕುಡಿದರೂ ಇಂಬಾಗಿ ಕುಡಿ‌.

ಅಂಬಲಿ ಎಂಬುದು ರಾಗಿ ಹಸಿಹಿಟ್ಟಿಗೆ      ಒಂದಿಷ್ಟು ನೀರು ಮತ್ತು ತುಸು ಉಪ್ಪು ಹಾಕಿ ಬೇಯಿಸಿದ ಗಂಜಿಯಂತಹ ಸರಳ ಆಹಾರ.‌ ಇದನ್ನು ಸಾಮಾನ್ಯವಾಗಿ ಬಡವರ ಊಟ ಎನ್ನುತ್ತಾರೆ. ಇಂತಹ ಅಂಬಲಿಯನ್ನು ಕುಡಿದರೂ ಇಂಬಾಗಿ ಅಂದರೆ ಖುಷಿ, ಪ್ರೀತಿ, ಸಂತೋಷದಿಂದ ಕುಡಿಯಬೇಕು ಎಂದು ಮೇಲಿನ ಗಾದೆಮಾತು ಹೇಳುತ್ತದೆ. ಜೀವನದಲ್ಲಿ ಪ್ರೀತಿ, ನೆಮ್ಮದಿ ಎಷ್ಟು ಮುಖ್ಯ ಎಂಬುದನ್ನು ಪರೋಕ್ಷವಾಗಿ ಹೇಳುವ ಜಾಣ್ಣುಡಿ ಇದು.‌ ಮೃಷ್ಟಾನ್ನ ಭೋಜನವನ್ನು ಅಸಂತೋಷದಿಂದ, ಹಂಗಿನಲ್ಲಿದ್ದೇನೆ ಎಂಬ ಭಾವದಿಂದ, ಚಿಂತೆಯೇ ಮಂತಾದ ಕಾರ್ಮೋಡಗಳು ಮನಸ್ಸನ್ನು ಕವಿದ […]

ಕನ್ನಡ ಗಾದೆಮಾತು – ಮೂರ್ಕಾಸಿನ ಗಳಿಕೆ, ಆರ್ಕಾಸಿನ‌ ಬಳಕೆ.

ನಾವು ನಮ್ಮ ಹಣಕಾಸನ್ನು ಬಳಸುವ ವಿಷಯದಲ್ಲಿ ನಮಗೆ ಎಚ್ಚರಿಕೆ ನೀಡುವ ಒಂದು ಗಾದೆ ಮಾತು ಇದು. ಯಾವಾಗಲೂ ನಾವು ಗಳಿಸಿದ ಹಣಕ್ಕಿಂತ ಬಳಸುವ ಹಣ ಹೆಚ್ಚಾಗಬಾರದು. ಮೂರು ಕಾಸನ್ನು ಗಳಿಸಿ‌ ಆರುಕಾಸನ್ನು ಬಳಸಿದರೆ ನಾವು ಸಾಲದ ಶೂಲಕ್ಕೆ ಅಥವಾ ಅತೃಪ್ತಿ – ಆತಂಕಗಳ ಕೂಪಕ್ಕೆ ಬೀಳಬೇಕಾಗುತ್ತದೆ. ಅಂದರೆ, ನಾವು ಗಳಿಸಿದ ಹಣಕ್ಕಿಂತ ಹೆಚ್ಚು ಹಣವನ್ನು ಎಂದೂ ಬಳಸಬಾರದು ಎಂಬ ವಿವೇಕವನ್ನು ಈ ಗಾದೆಮಾತು ನಾಲ್ಕೇ ಪದಗಳಲ್ಲಿ ಹೇಳುತ್ತದೆ. ‘ಸ್ಪೆಂಡ್ ಬಿಲೋ ಯುವರ್ ಮೀನ್ಸ್ (ನೀವು ಬಳಸಬಹುದಾದದ್ದಕ್ಕಿಂತ ಕಡಿಮೆ […]

ಕನ್ನಡ ಗಾದೆಮಾತು – ಅಳಿಲು ಏರಿದರೆ ಅರಳಿಮರ ಅಲ್ಲಾಡೀತೆ?

ಕನ್ನಡ ಭಾಷೆಯ ಒಂದು ಅಪರೂಪದ ಗಾದೆಮಾತು ಇದು. ಪುಟಾಣಿ ಅಳಿಲೊಂದು ಏರಿದರೆ ಬೃಹತ್ ಗಾತ್ರದ ಅರಳಿಮರ ಅಲ್ಲಾಡುವುದಿಲ್ಲ. ಹಾಗೆಯೇ ಜೀವನದಲ್ಲಿ ಶ್ರದ್ಧಾಭಕ್ತಿಗಳಿಂದ ಸಾಧನೆ ಮಾಡುತ್ತಿರುವವರು, ಕೆಲಸಕ್ಕೆ ಬಾರದ ಟೀಕೆಗಳು, ನಾಲಗೆ ಸಡಿಲ ಇರುವವರು ಆಡುವ ಅಬದ್ಧ ಮಾತುಗಳು, ಜೀವನದಲ್ಲಿ ದಿನಾ ಬರುತ್ತಲೇ ಇರುವ ಸಣ್ಣ ಪುಟ್ಟ ಕಿರಿಕಿರಿ-ಕಷ್ಟಗಳ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು, ಅವುಗಳಿಂದ ವಿಚಲಿತರಾಗಿ ತಮ್ಮ ಸಾಧನೆಯನ್ನು ನಿಲ್ಲಿಸಬಾರದು, ಅರಳಿಮರದಂತೆ ಅವರು ಗಟ್ಟಿಯಾಗಬೇಕು. ಅಲ್ಲವೆ?  ಒಂದು ಮುಖ್ಯ ಜೀವನಕೌಶಲ್ಯವನ್ನು ಈ ಗಾದೆಮಾತು ಸಮರ್ಪಕವಾಗಿ ಹೇಳಿದೆ ಅನ್ನಿಸುತ್ತೆ. Kannada […]

ಕನ್ನಡ ಗಾದೆಮಾತು – ಕೊಟ್ಟೋನ್ ಕೋಡಂಗಿ, ಈಸ್ಕೊಂಡೋನ್ ಈರ್ಬದ್ರ.

ವ್ಯವಹಾರ ಪ್ರಪಂಚದಲ್ಲಿ  ಮತ್ತು ಕೆಲವೊಮ್ಮೆ ಭಾವನಾತ್ಮಕ ಸನ್ನಿವೇಶ ಗಳಲ್ಲೂ ಕೂಡ ಬಹಳವಾಗಿ ಸಲ್ಲುವ  ಗಾದೆಮಾತು ಇದು. ಅಪ್ರಾಮಾಣಿಕ ವ್ಯಕ್ತಿಗಳಿಗೆ ಸಾಲ ಕೊಟ್ಟು, ತಮ್ಮ ಮನೆ ಬಾಡಿಗೆಗೆ ಕೊಟ್ಟು, ಅಥವಾ ದುಬಾರಿ ಬಟ್ಟೆ, ಒಡವೆ, ಪುಸ್ತಕಗಳನ್ನು ಕಡ ಕೊಟ್ಟು ಅದನ್ನು‌  ಕಳೆದುಕೊಳ್ಳುವ ಸನ್ನಿವೇಶ ಬಂದಾಗ  ಈ ಗಾದೆಮಾತನ್ನು ಬಳಸುತ್ತಾರೆ. ಪ್ರೀತಿ, ವಿಶ್ವಾಸ, ನಂಬಿಕೆಗಳನ್ನು ಅಪಾತ್ರರ ಮೇಲೆ ಇಟ್ಟಾಗಲೂ ಹೀಗೆ ಆಗಬಹುದು‌. ಆಗ ಕೊಟ್ಟವನು ಬಯಲಾಟದ ಕೋಡಂಗಿ‌ ವೇಷದಂತೆ ಮೂರ್ಖನಾಗಿ, ಹಾಸ್ಯಾಸ್ಪದವಾಗಿ ಕಂಡರೆ ತೆಗೆದುಕೊಂಡವನು ದಕ್ಷಯಾಗ ಕಥೆಯ ಶಿವಕುಂತಲ ಜನ್ಯ […]

ಕನ್ನಡ ಗಾದೆಮಾತು – ಹಾಯೋನೊಬ್ಬ ಇದ್ರೆ ಕಾಯೋನು ಒಬ್ಬ ಇರ್ತಾನೆ. 

ನಮ್ಮ ಗ್ರಾಮೀಣ ಜನತೆಯು ನಂಬಿ ಬಾಳುತ್ತಿದ್ದ ಮೌಲ್ಯವೊಂದನ್ನು ಈ ಗಾದೆಮಾತು ಪ್ರಕಟಿಸಿದೆ.‌ ನಮ್ಮ ಜೀವನದಲ್ಲಿ ಕಷ್ಟಗಳು ಬರುತ್ತವೆ, ಅವು ಕೆಲವು ಸಲ ಮನುಷ್ಯರು ಕೊಡುವ ತೊಂದರೆಯಿಂದಲೂ ಬರಬಹುದು‌. ಹೀಗೆ ನಾವು ತೊಂದರೆ ಅನುಭವಿಸುತ್ತಿದ್ದಾಗ ನಮಗೆ ಪರಿಚಿತರಲ್ಲಿ ಒಬ್ಬರು ನಮಗೆ ಸಹಾಯ ಮಾಡಬಹುದು‌. ಕೆಲವು ಸಲ ಆ ಸಹಾಯವು ಆಸ್ತಿಕರ ಮಟ್ಟಿಗೆ ದೇವರ ಕೃಪೆಯ ರೂಪದಲ್ಲೂ ಬರಬಹುದು. ಹೀಗಾಗಿ ನಮಗೆ ತೊಂದರೆ ಕೊಡುವವರು ಇರುವಂತೆಯೇ ನಮ್ಮನ್ನು ಕಷ್ಟದಿಂದ ಪಾರು ಮಾಡಿ ಕೈಹಿಡಿಯುವವರು ಸಹ ಇರುತ್ತಾರೆ. ಈ ನಂಬಿಕೆ ಎಷ್ಟೋ […]

ಕನ್ನಡ ಗಾದೆಮಾತು – ಸಮಯಕ್ಕಾಗದ ಅರ್ಥ ಸಹಸ್ರವಿದ್ರೂ ವ್ಯರ್ಥ.

ಬಹಳ ಅರ್ಥಪೂರ್ಣ ಗಾದೆಮಾತಿದು. ನಮ್ಮ ಹತ್ತಿರ ಇರುವ ಹಣ ( ಅರ್ಥ) ಕಷ್ಟಸುಖಗಳ ನಮ್ಮ ಸಮಯ ಸಂದರ್ಭಕ್ಕೆ ಒದಗಬೇಕು.‌ ಆಗಲೇ ಅದು ಇರುವುದು ಸಾರ್ಥಕ ಆಗುತ್ತದೆ. ಸಮಯಕ್ಕೆ ಒದಗದ ದುಡ್ಡು ಸಾವಿರ ಅಲ್ಲ ಹತ್ತು ಸಾವಿರವಿದ್ದರೂ ಏನು ಪ್ರಯೋಜನ ಬಂತು? ಹಣದ ವಿಷಯದಲ್ಲಿ ಹಿರಿಯರು ನಮಗೆ ಈ ಗಾದೆಮಾತಿನ ಮೂಲಕ ಕೊಟ್ಟಿರುವ ಎಚ್ಚರಿಕೆಯನ್ನು ಗಮನಿಸಿ, ನಮ್ಮ ಹಣವು ನಮ್ಮ ಸಮಯಕ್ಕೆ ಆಗುವ ರೀತಿಯಲ್ಲಿ ಅದನ್ನು ನಿರ್ವಹಿಸಬೇಕು.‌ ಅಲ್ಲವೆ? Kannada proverb – Samayakkagada artha sahasraviddaru vyartha […]

ಕನ್ನಡ ಗಾದೆಮಾತು‌- ಉತ್ತಮ ಹೊಲ‌ ಮಧ್ಯಮ ವ್ಯಾಪಾರ ಕನಿಷ್ಠ ಚಾಕರಿ.

ಮನುಷ್ಯನು ತನ್ನ ಜೀವನೋಪಾಯಕ್ಕಾಗಿ ಯಾವುದೋ ಒಂದು ವೃತ್ತಿಯನ್ನು ಮಾಡಲೇಬೇಕಲ್ಲವೆ? ನಮ್ಮ ಗ್ರಾಮೀಣ ಜನಪದರು ಇಂತಹ ವೃತ್ತಿಗಳಲ್ಲಿ ಯಾವುದು ಎಲ್ಲಕ್ಕಿಂತ ಉತ್ತಮ ಎಂಬುದನ್ನು ತಮ್ಮದೇ ಆದ ರೀತಿಯಿಂದ ಹೇಳಿದ್ದಾರೆ. ಸ್ವಂತ ಹೊಲದಲ್ಲಿ ತನಗೆ ತಾನೇ ಒಡೆಯನಾಗಿ‌ ದುಡಿಯುವುದು ಎಲ್ಲಕ್ಕಿಂತ ಉತ್ತಮ,  ತಕ್ಕಮಟ್ಟಿಗೆ ಸ್ವಾಯತ್ತತೆಯನ್ನು ನೀಡಿದರೂ ಲಾಭ – ನಷ್ಟಗಳ ಜಾಲದಲ್ಲಿ ಬೀಳಿಸುವ ವ್ಯಾಪಾರ ವೃತ್ತಿ ಮಧ್ಯಮ, ಆದರೆ ತನ್ನ ಹೊಟ್ಟೆಪಾಡಿಗಾಗಿ ಇನ್ನೊಬ್ಬರ ಮರ್ಜಿ ಕಾಯಬೇಕಾದ ಚಾಕರಿಯು ವೃತ್ತಿಗಳಲ್ಲಿ ತುಂಬ ಅಧಮ ಎಂಬ ಅಭಿಪ್ರಾಯವನ್ನು ನೀಡಿದ್ದಾರೆ ಈ ಹಿರಿಯರು. ಮನುಷ್ಯನಿಗೆ […]

ಕನ್ನಡ ಗಾದೆಮಾತು – ಊರು ಬಾಗಿಲು ಮುಚ್ಚಬಹುದು, ದೂರುವವರ ಬಾಯಿ ಮುಚ್ಚೋಕಾಗುತ್ಯೆ?

ನಾವು ಏನೇ ಕೆಲಸ ಮಾಡಿದರೂ, ಹೇಗೇ ಇದ್ದರೂ ನಮ್ಮ ಸುತ್ತಮುತ್ತ ಕೆಲವು ದೂರುವ ಜನರು ಇದ್ದೇ ಇರುತ್ತಾರೆ.‌ ಇಂತಹವರು ನೆಂಟರಿಷ್ಟರ ಬಳಗದಲ್ಲಿ, ಸಹೋದ್ಯೋಗಿಗಳಲ್ಲಿ, ನಮ್ಮ ನೆರೆಹೊರೆಯಲ್ಲಿ – ಒಟ್ಟಿನಲ್ಲಿ ಎಲ್ಲ ಕಡೆಯೂ ಕಂಡು ಬರುತ್ತಾರೆ.‌ ಮಳೆಹನಿಗಳಂತೆ ಇವರ ಕೊಂಕುಮಾತುಗಳು ತಟತಟ ಕೇಳುತ್ತಲೇ ಇರುತ್ತವೆ. ಅವರ ಬಾಯಿ ಮುಚ್ಚಿಸಲು ಆಗುವುದಿಲ್ಲ. ಆದರೆ ಒಂದು ಮುಖ್ಯ ವಿಷಯ ಇಲ್ಲಿದೆ. ಇಂತಹವರ ಮಾತುಗಳನ್ನು ಹೃದಯಕ್ಕೆ ಹಚ್ಚಿಕೊಂಡೆವೆಂದರೆ ಒಂದೇ ಒಂದು ಕೆಲಸವನ್ನೂ ಮಾಡಲಾಗುವುದಿಲ್ಲ. ಹೀಗಾಗಿ ಅವರ ಇರುವಿಕೆಯ ವಾಸ್ತವವನ್ನು ಒಪ್ಪಿಕೊಂಡೂ, ಅವರ ಮಾತುಗಳನ್ನು […]

ಕನ್ನಡ ಗಾದೆಮಾತು – ಬೊಬ್ಬೆ ಹೊಡೆದ್ರೆ ಹಬ್ಬ ಆಗುತ್ತಾ?

ಮನೆಯಲ್ಲಿ ಹಬ್ಬ, ಮದುವೆ-ಮುಂಜಿ ಎಂದರೆ ಮಾಡಬೇಕಾದ ಬಹಳಷ್ಟು ಕೆಲಸಗಳಿರುತ್ತವೆ ; ತೋರಣದಿಂದ ಹೂರಣದ ತನಕ, ಪೂಜೆ-ಪುನಸ್ಕಾರಗಳಿಂದ ದಾನದ ತನಕ. ವಾರ-ಹದಿನೈದು ದಿನಗಳ ಕಾಲ ಗಮನವಿಟ್ಟು ಕೆಲಸ ಮಾಡಿದರೆ ಮಾತ್ರ ಹಬ್ಬ ಚೆನ್ನಾಗಿ ಆಗುತ್ತದೆ. ಆದರೆ ಕೆಲವರು ಕೈಯಿಂದ ಏನೂ ಮಾಡದೆ, ಬರೀ ಕೆಲಸದ ಬಗ್ಗೆ ಮಾತಾಡಿ, ಕೂಗಾಡಿ ಬೊಬ್ಬೆ ಹೊಡೆಯುತ್ತಾ ಇರುತ್ತಾರೆ. ಇಂತಹವರಿದ್ದರೆ ಹಬ್ಬ ಆಗುವುದಿಲ್ಲ, ಯಾವ ಕೆಲಸವೂ ಆಗುವುದಿಲ್ಲ‌.  ಕೆಲಸಕ್ಕೆ ಬಾರದ ಈ ರೀತಿಯ ಬೊಬ್ಬೆವೀರರನ್ನು ನೋಡಿಯೇ ನಮ್ಮ ಹಿರಿಯರು ಈ ಗಾದೆ ಮಾತನ್ನು ಬಳಕೆಗೆ ತಂದಿರಬೇಕು. […]

ಕನ್ನಡ ಗಾದೆಮಾತು – ಸಾಲ ಕೊಟ್ಟು ಸ್ನೇಹ ಕಳೆದುಕೊಂಡಂಗೆ. 

ನಾವು ಯಾರಿಗಾದರೂ ಸಾಲ ಕೊಟ್ಟರೆ ಅವರು ಅದನ್ನು ಮರಳಿಸುವ ತನಕ ನಮ್ಮ‌ ಮನಸ್ಸು ಸಮಾಧಾನವಾಗಿರುವುದಿಲ್ಲ. ನಾವು ಅದನ್ನು ಮರಳಿಸುವಂತೆ ಅವರ ಬಳಿ ಕೇಳಿದಾಗ ಕೆಲವರು ಕಾಳಜಿ, ಕೃತಜ್ಞತೆಗಳಿಂದ, ಇನ್ನು ಕೆಲವರು ಗೊಣಗಿಕೊಂಡು ಹಣವನ್ನು ಮರಳಿಸಬಹುದು, ಇನ್ನು ಕೆಲವು ಭಂಡರು ಹಣವನ್ನು ಮರಳಿಸದೆಯೂ ಇರಬಹುದು. ಆದರೆ ನಾವು ಇದೇ ಸಾಲವನ್ನು ಸ್ನೇಹಿತರಿಗೆ ಕೊಟ್ಟೆವೆಂದರೆ ಭಾರೀ ಪೀಕಲಾಟಕ್ಕೆ ಸಿಕ್ಕಿ ಹಾಕಿಕೊಳ್ಳುತ್ತೇವೆ. ಹಣವನ್ನು ವಾಪಸ್ ಕೇಳದಿದ್ದರೆ ಹಣವನ್ನು  ಕಳೆದುಕೊಳ್ಳಬೇಕಾಗುತ್ತೆ, ವಾಪಸ್ ಕೇಳಿದರೆ ಸ್ನೇಹಿತನಿಗೆ ಇರಿಸುಮುರಿಸಾಗುವುದರಿಂದ ಸ್ನೇಹವನ್ನು ಕಳೆದುಕೊಳ್ಳಬೇಕಾಗುತ್ತದೆ. ಬಹುಶಃ ಇದಕ್ಕಾಗಿಯೇ ಈ […]

Page 1 of 17

Kannada Sethu. All rights reserved.