ಯೌವನದಲ್ಲಿ ಹುರುಪು, ಉತ್ಸಾಹ ಹೆಚ್ಚು, ಆದರೆ ತಾಳ್ಮೆ ಕಡಿಮೆ. ಹೀಗಾಗಿ, ಏನು ಮಾಡಿದರೂ ಅವಸರವಸರವಾಗಿ, ದುಡುಕು, ರಭಸಗಳಿಂದ ಅದರಲ್ಲಿ ತೊಡಗುವುದು ಯುವಕ-ಯುವತಿಯರ ಸ್ವಭಾವವಾಗಿರುತ್ತದೆ. ಆದರೆ, ಜೀವನದಲ್ಲಿ ನೊಂದು ಬೆಂದು ಕಷ್ಟ-ಸುಖ ಅನುಭವಿಸಿದ ಹಿರಿಯರು ಪ್ರಬುದ್ಧ ರೀತಿಯಲ್ಲಿ ವ್ಯವಹರಿಸುತ್ತಾರೆ ; ಯಾವ ರಸ್ತೆಯಲ್ಲಿ ಹೋಗಬೇಕು, ಯಾವುದರಲ್ಲಿ ಹೋಗಬಾರದು ಎಂಬುದು ಅವರಿಗೆ ಗೊತ್ತಿರುತ್ತದೆ. ಈ ಕಾರಣದಿಂದಾಗಿ, ಹಿರಿಯರ ರಸ್ತೆಯ ಜ್ಞಾನದಿಂದ ಕಿರಿಯರು ಕಲಿತರೆ, ಹಾಗೂ ಯುವಕರ ಹುರುಪು ಉತ್ಸಾಹಗಳನ್ನು ತಮ್ಮ ಅನುಭವದ ಮುಖೇನ ಹಿರಿಯರು ಸರಿದಾರಿಗೆ ಹಚ್ಚಿದರೆ ಬದುಕು ಸುಂದರವಾಗುತ್ತದೆ. […]
ಕನ್ನಡ ವಿವೇಕ
ಬದುಕನ್ನು ಹಸನು ಮಾಡಲು ಕನ್ನಡ ಭಾಷೆ, ಸಂಸ್ಕೃತಿಯು ನಮಗೆ ನೀಡಿದ ಕೆಲವು ಗಾದೆ, ಸೂಕ್ತಿ, ನಾಣ್ಣುಡಿ, ಲೋಕೋಕ್ತಿ, ನಲ್ವಾತು ಇವುಗಳಲ್ಲಿ ವಾರಕ್ಕೆ ಒಂದರ ಕಿರು ಪರಿಚಯವನ್ನು ಈ ಅಂಕಣದಲ್ಲಿ ಮಾಡಿಕೊಡಲಾಗುತ್ತದೆ.
Like us!
Follow us!