ನಾವು ನಮ್ಮ ಹಣಕಾಸನ್ನು ಬಳಸುವ ವಿಷಯದಲ್ಲಿ ನಮಗೆ ಎಚ್ಚರಿಕೆ ನೀಡುವ ಒಂದು ಗಾದೆ ಮಾತು ಇದು. ಯಾವಾಗಲೂ ನಾವು ಗಳಿಸಿದ ಹಣಕ್ಕಿಂತ ಬಳಸುವ ಹಣ ಹೆಚ್ಚಾಗಬಾರದು. ಮೂರು ಕಾಸನ್ನು ಗಳಿಸಿ ಆರುಕಾಸನ್ನು ಬಳಸಿದರೆ ನಾವು ಸಾಲದ ಶೂಲಕ್ಕೆ ಅಥವಾ ಅತೃಪ್ತಿ – ಆತಂಕಗಳ ಕೂಪಕ್ಕೆ ಬೀಳಬೇಕಾಗುತ್ತದೆ. ಅಂದರೆ, ನಾವು ಗಳಿಸಿದ ಹಣಕ್ಕಿಂತ ಹೆಚ್ಚು ಹಣವನ್ನು ಎಂದೂ ಬಳಸಬಾರದು ಎಂಬ ವಿವೇಕವನ್ನು ಈ ಗಾದೆಮಾತು ನಾಲ್ಕೇ ಪದಗಳಲ್ಲಿ ಹೇಳುತ್ತದೆ. ‘ಸ್ಪೆಂಡ್ ಬಿಲೋ ಯುವರ್ ಮೀನ್ಸ್ (ನೀವು ಬಳಸಬಹುದಾದದ್ದಕ್ಕಿಂತ ಕಡಿಮೆ […]
ಕನ್ನಡ ವಿವೇಕ
ಬದುಕನ್ನು ಹಸನು ಮಾಡಲು ಕನ್ನಡ ಭಾಷೆ, ಸಂಸ್ಕೃತಿಯು ನಮಗೆ ನೀಡಿದ ಕೆಲವು ಗಾದೆ, ಸೂಕ್ತಿ, ನಾಣ್ಣುಡಿ, ಲೋಕೋಕ್ತಿ, ನಲ್ವಾತು ಇವುಗಳಲ್ಲಿ ವಾರಕ್ಕೆ ಒಂದರ ಕಿರು ಪರಿಚಯವನ್ನು ಈ ಅಂಕಣದಲ್ಲಿ ಮಾಡಿಕೊಡಲಾಗುತ್ತದೆ.
Like us!
Follow us!