ವಿಚಿತ್ರ ಅನ್ನಿಸಿದರೂ ಕುಟುಂಬಗಳಲ್ಲಿ ನಿಜವಾಗಿಯೂ ನಡೆಯುವ ಒಂದು ಪಕ್ಷಪಾತವನ್ನು ಈ ಗಾದೆ ಮಾತು ಪರಿಚಯಿಸಿದೆ. ಮನೆಗಳಲ್ಲಿ ತುಂಬ ಜನ ಒಟ್ಟಿಗೆ ಊಟಕ್ಕೆ ಕುಳಿತಾಗ ಬಡಿಸುವವರು ತಮಗೆ ಇಷ್ಟ ಇರುವವರಿಗೆ ಸಾರಿನ ಹೋಳುಗಳು ಜಾಸ್ತಿ ಬರುವಂತೆ ಸಟ್ಟುಗ ಅಥವಾ ಸೌಟನ್ನು ಪಾತ್ರೆಯ ಆಳಕ್ಕೆ ಹೋಗುವಂತೆ ಮುಳುಗಿಸಿ ಬಡಿಸುವುದು, ತಮಗೆ ಇಷ್ಟ ಇಲ್ಲದವರಿಗೆ ಸಟ್ಟುಗವನ್ನು ಮೇಲೆ ಮೇಲೆಯೇ ತೇಲಿಸಿ ನೀರು ನೀರಾದ ಸಾರನ್ನು ಬಡಿಸುವುದು – ಹೀಗೆ ಮಾಡುತ್ತಾರೆ. ಈ ರೀತಿಯಲ್ಲಿ ತಮ್ಮ ಸಹಜೀವಿಗಳ ನಡುವೆ ಕೆಲವೊಮ್ಮೆ ಬಹಳ ಸೂಕ್ಷ್ಮವಾದ ರೀತಿಯಲ್ಲಿ […]
ಕನ್ನಡ ವಿವೇಕ
ಬದುಕನ್ನು ಹಸನು ಮಾಡಲು ಕನ್ನಡ ಭಾಷೆ, ಸಂಸ್ಕೃತಿಯು ನಮಗೆ ನೀಡಿದ ಕೆಲವು ಗಾದೆ, ಸೂಕ್ತಿ, ನಾಣ್ಣುಡಿ, ಲೋಕೋಕ್ತಿ, ನಲ್ವಾತು ಇವುಗಳಲ್ಲಿ ವಾರಕ್ಕೆ ಒಂದರ ಕಿರು ಪರಿಚಯವನ್ನು ಈ ಅಂಕಣದಲ್ಲಿ ಮಾಡಿಕೊಡಲಾಗುತ್ತದೆ.
Like us!
Follow us!