ಕನ್ನಡ ವಿವೇಕ

ಬದುಕನ್ನು ಹಸನು ಮಾಡಲು ಕನ್ನಡ ಭಾಷೆ, ಸಂಸ್ಕೃತಿಯು ನಮಗೆ ನೀಡಿದ ಕೆಲವು ಗಾದೆ, ಸೂಕ್ತಿ, ನಾಣ್ಣುಡಿ, ಲೋಕೋಕ್ತಿ, ನಲ್ವಾತು ಇವುಗಳಲ್ಲಿ ವಾರಕ್ಕೆ ಒಂದರ ಕಿರು ಪರಿಚಯವನ್ನು ಈ ಅಂಕಣದಲ್ಲಿ ಮಾಡಿಕೊಡಲಾಗುತ್ತದೆ.

ಕನ್ನಡ ಗಾದೆಮಾತು – ಹಿಮಾಲಯದಲ್ಲಿ ಹಿಮ ಹೆಚ್ಚಂತೆ, ವೀರಭದ್ರನಲ್ಲಿ ಅವತಾರ ಹೆಚ್ಚಂತೆ.

ವಿಶ್ವಜೀವನದ ಒಂದು  ವಿಚಿತ್ರ ಸಂಗತಿಯನ್ನು ಈ ಅಪರೂಪದ ಗಾದೆಮಾತು ಹೇಳುತ್ತದೆ. ಹಿಮಾಲಯ ಎಂಬುದು ತನ್ನ ಹೆಸರೇ ಸೂಚಿಸುವಂತೆ ಹಿಮದ ಮನೆ. ಅಲ್ಲಿ ಹಿಮದ ಹೆಚ್ಚಳ ಆಗುತ್ತಲೇ ಇರುತ್ತದೆ. ಹಾಗೆಯೇ ದಕ್ಷಯಜ್ಞದ ಸಂದರ್ಭದಲ್ಲಿ ಶಿವನ ಕೋಪದ ಫಲವಾಗಿ ಅವನ ಕೂದಲಿನಿಂದ  ಹುಟ್ಟಿದ ವೀರಭದ್ರನ ಆರ್ಭಟ ಬಹಳ ಹೆಚ್ಚು. ಅದು ಸದಾ ಹೆಚ್ಚುತ್ತಲೇ ಇರುವ ಸಂಗತಿ.  ನಮ್ಮನ್ನು ತುಂಬ ಯೋಚಿಸುವಂತೆ ಮತ್ತು ಬದುಕನ್ನು ಗಮನಿಸುವಂತೆ ಮಾಡುತ್ತದಲ್ಲವೆ ಈ ಗಾದೆಮಾತು? Kannada proverb – Himalayadalli hima hechchanthe. Veerabhadranalli avatara  […]

ಕನ್ನಡ ಗಾದೆಮಾತು – ಕಂಡದ್ದು ಕಂಡ ಹಾಗೆ ಹೇಳಿದರೆ ಕೆಂಡದಂಥಾ ಕೋಪ.

ಮನುಷ್ಯರ ಅಂತರಂಗದಲ್ಲಿನ ಒಂದು ವಿಲಕ್ಷಣ ಸ್ವಭಾವವನ್ಬು ಈ ಗಾದೆಮಾತು ಬಿಚ್ಚಿ ತೋರಿಸುತ್ತದೆ.  ಜನರಿಗೆ ತಾವು ಮಾಡುವ ಕೆಲವು ತಪ್ಪುಗಳು – ಉದಾಹರಣೆಗೆ, ಬಳಗದವರಲ್ಲಿ     ತಾರತಮ್ಯ ಮಾಡುವುದು, ಬೇರೆಯವರ ಸಮಯದ ಬಗ್ಗೆ ನಿರ್ಲಕ್ಷ್ಯ ತೋರುವುದು, ಮಾತು ಕೊಟ್ಟು ಉಳಿಸಿಕೊಳ್ಳದಿರುವುದು, ಅನಗತ್ಯವಾಗಿ ಸಿಟ್ಟು ಮಾಡಿಕೊಳ್ಳುವುದು, ಕಾರಣವಿಲ್ಲದೆ ಒರಟಾಗಿ ನಡೆದುಕೊಳ್ಳುವುದು….ಇಂಥವು – ಮತ್ತು  ಅವುಗಳಿಂದ ಬೇರೆಯವರಿಗೆ ಆಗುವ ತೊಂದರೆಗಳ  ಬಗ್ಗೆ ಅರಿವಿರುವುದಿಲ್ಲ ಎಂದಲ್ಲ. ಇರುತ್ತದೆ‌. ಆದರೆ, ಎದುರಿಗಿರುವವರು ಆ ತಪ್ಪುಗಳನ್ನು ಬಾಯಿಬಿಟ್ಟು ಹೇಳಿದರೆ, ಅಥವಾ ಬೆರಳಿಟ್ಟು ತೋರಿಸಿಬಿಟ್ಟರೆ ಮಾತ್ರ ಅವರಿಗೆ ವಿಪರೀತ ಕೋಪ […]

ಕನ್ನಡ ಗಾದೆಮಾತು – ಮಳೆ ನಿಂತ ಮೇಲೆ ಕೊಡೆ ಭಾರ.

ನಾವು ಮನುಷ್ಯರಲ್ಲಿ ಬಹುಮಂದಿ ಮೂಲತಃ ಆಲಸಿಗಳು ಮತ್ತು ಎಲ್ಲವನ್ನೂ ಉಪಯೋಗಿಸಿ ಎಸೆಯುವ ಗುಣದವರಿರಬೇಕು ಅನ್ನಿಸುತ್ತೆ. ಅದಕ್ಕೇ ನೋಡಿ ಮಳೆ ಇದ್ದಾಗ ನಮ್ಮನ್ನು ಕಾಪಾಡುವ ಅತ್ಯಗತ್ಯ ವಸ್ತುವಾಗಿ ಕಾಣಿಸುವ ಕೊಡೆಯು ಮಳೆ ನಿಂತ ಮೇಲೆ ಆ ಕ್ಷಣಕ್ಕೆ ತನ್ನ ಉಪಯೋಗವನ್ನು ಕಳೆದುಕೊಳ್ಳುತ್ತದೆ ಹಾಗೂ ಅದು ಬೇಡದ ಹೊರೆಯಾಗಿ ನಮಗೆ ಕಾಣಿಸಿಬಿಡುತ್ತೆ!  ದುರಂತವೆಂದರೆ ತಮ್ಮ ಸಹಜೀವಿಗಳ ವಿಷಯದಲ್ಲೂ ಕೆಲವರು ಇದೇ ಧೋರಣೆಯನ್ನು ತೋರಿಸುತ್ತಾರೆ. ವಿಪರ್ಯಾಸವಾದರೂ ಇದು ಸತ್ಯ. Kannada proverb – Male nintha mele kode bhara( When […]

ಕನ್ನಡ ಗಾದೆಮಾತು – ಅಂಬಲಿ‌ ಕುಡಿದರೂ ಇಂಬಾಗಿ ಕುಡಿ‌.

ಅಂಬಲಿ ಎಂಬುದು ರಾಗಿ ಹಸಿಹಿಟ್ಟಿಗೆ ಒಂದಿಷ್ಟು ನೀರು ಮತ್ತು ತುಸು ಉಪ್ಪು ಹಾಕಿ ಬೇಯಿಸಿದ ಗಂಜಿಯಂತಹ ಸರಳ ಆಹಾರ.‌ ಇದನ್ನು ಸಾಮಾನ್ಯವಾಗಿ ಬಡವರ ಊಟ ಎನ್ನುತ್ತಾರೆ. ಇಂತಹ ಅಂಬಲಿಯನ್ನು ಕುಡಿದರೂ ಇಂಬಾಗಿ ಅಂದರೆ ಖುಷಿ, ಪ್ರೀತಿ, ಸಂತೋಷದಿಂದ ಕುಡಿಯಬೇಕು ಎಂದು ಮೇಲಿನ ಗಾದೆಮಾತು ಹೇಳುತ್ತದೆ. ಜೀವನದಲ್ಲಿ ಪ್ರೀತಿ, ನೆಮ್ಮದಿ ಎಷ್ಟು ಮುಖ್ಯ ಎಂಬುದನ್ನು ಪರೋಕ್ಷವಾಗಿ ಹೇಳುವ ಜಾಣ್ಣುಡಿ ಇದು.‌ ಮೃಷ್ಟಾನ್ನ ಭೋಜನವನ್ನು ಅಸಂತೋಷದಿಂದ, ಹಂಗಿನಲ್ಲಿದ್ದೇನೆ ಎಂಬ ಭಾವದಿಂದ, ಚಿಂತೆಯೇ ಮಂತಾದ ಕಾರ್ಮೋಡಗಳು ಮನಸ್ಸನ್ನು ಕವಿದ ಸ್ಥಿತಿಯಿಂದ ಉಂಡರೆ […]

ಕನ್ನಡ ಗಾದೆಮಾತು – ಮೂರ್ಕಾಸಿನ ಗಳಿಕೆ, ಆರ್ಕಾಸಿನ‌ ಬಳಕೆ.

ನಾವು ನಮ್ಮ ಹಣಕಾಸನ್ನು ಬಳಸುವ ವಿಷಯದಲ್ಲಿ ನಮಗೆ ಎಚ್ಚರಿಕೆ ನೀಡುವ ಒಂದು ಗಾದೆ ಮಾತು ಇದು. ಯಾವಾಗಲೂ ನಾವು ಗಳಿಸಿದ ಹಣಕ್ಕಿಂತ ಬಳಸುವ ಹಣ ಹೆಚ್ಚಾಗಬಾರದು. ಮೂರು ಕಾಸನ್ನು ಗಳಿಸಿ‌ ಆರುಕಾಸನ್ನು ಬಳಸಿದರೆ ನಾವು ಸಾಲದ ಶೂಲಕ್ಕೆ ಅಥವಾ ಅತೃಪ್ತಿ – ಆತಂಕಗಳ ಕೂಪಕ್ಕೆ ಬೀಳಬೇಕಾಗುತ್ತದೆ. ಅಂದರೆ, ನಾವು ಗಳಿಸಿದ ಹಣಕ್ಕಿಂತ ಹೆಚ್ಚು ಹಣವನ್ನು ಎಂದೂ ಬಳಸಬಾರದು ಎಂಬ ವಿವೇಕವನ್ನು ಈ ಗಾದೆಮಾತು ನಾಲ್ಕೇ ಪದಗಳಲ್ಲಿ ಹೇಳುತ್ತದೆ. ‘ಸ್ಪೆಂಡ್ ಬಿಲೋ ಯುವರ್ ಮೀನ್ಸ್ (ನೀವು ಬಳಸಬಹುದಾದದ್ದಕ್ಕಿಂತ ಕಡಿಮೆ […]

ಕನ್ನಡ ಗಾದೆಮಾತು – ಅಳಿಲು ಏರಿದರೆ ಅರಳಿಮರ ಅಲ್ಲಾಡೀತೆ?

ಕನ್ನಡ ಭಾಷೆಯ ಒಂದು ಅಪರೂಪದ ಗಾದೆಮಾತು ಇದು. ಪುಟಾಣಿ ಅಳಿಲೊಂದು ಏರಿದರೆ ಬೃಹತ್ ಗಾತ್ರದ ಅರಳಿಮರ ಅಲ್ಲಾಡುವುದಿಲ್ಲ. ಹಾಗೆಯೇ ಜೀವನದಲ್ಲಿ ಶ್ರದ್ಧಾಭಕ್ತಿಗಳಿಂದ ಸಾಧನೆ ಮಾಡುತ್ತಿರುವವರು, ಕೆಲಸಕ್ಕೆ ಬಾರದ ಟೀಕೆಗಳು, ನಾಲಗೆ ಸಡಿಲ ಇರುವವರು ಆಡುವ ಅಬದ್ಧ ಮಾತುಗಳು, ಜೀವನದಲ್ಲಿ ದಿನಾ ಬರುತ್ತಲೇ ಇರುವ ಸಣ್ಣ ಪುಟ್ಟ ಕಿರಿಕಿರಿ-ಕಷ್ಟಗಳ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು, ಅವುಗಳಿಂದ ವಿಚಲಿತರಾಗಿ ತಮ್ಮ ಸಾಧನೆಯನ್ನು ನಿಲ್ಲಿಸಬಾರದು, ಅರಳಿಮರದಂತೆ ಅವರು ಗಟ್ಟಿಯಾಗಬೇಕು. ಅಲ್ಲವೆ?  ಒಂದು ಮುಖ್ಯ ಜೀವನಕೌಶಲ್ಯವನ್ನು ಈ ಗಾದೆಮಾತು ಸಮರ್ಪಕವಾಗಿ ಹೇಳಿದೆ ಅನ್ನಿಸುತ್ತೆ. Kannada […]

ಕನ್ನಡ ಗಾದೆಮಾತು – ಕೊಟ್ಟೋನ್ ಕೋಡಂಗಿ, ಈಸ್ಕೊಂಡೋನ್ ಈರ್ಬದ್ರ.

ವ್ಯವಹಾರ ಪ್ರಪಂಚದಲ್ಲಿ  ಮತ್ತು ಕೆಲವೊಮ್ಮೆ ಭಾವನಾತ್ಮಕ ಸನ್ನಿವೇಶ ಗಳಲ್ಲೂ ಕೂಡ ಬಹಳವಾಗಿ ಸಲ್ಲುವ  ಗಾದೆಮಾತು ಇದು. ಅಪ್ರಾಮಾಣಿಕ ವ್ಯಕ್ತಿಗಳಿಗೆ ಸಾಲ ಕೊಟ್ಟು, ತಮ್ಮ ಮನೆ ಬಾಡಿಗೆಗೆ ಕೊಟ್ಟು, ಅಥವಾ ದುಬಾರಿ ಬಟ್ಟೆ, ಒಡವೆ, ಪುಸ್ತಕಗಳನ್ನು ಕಡ ಕೊಟ್ಟು ಅದನ್ನು‌  ಕಳೆದುಕೊಳ್ಳುವ ಸನ್ನಿವೇಶ ಬಂದಾಗ  ಈ ಗಾದೆಮಾತನ್ನು ಬಳಸುತ್ತಾರೆ. ಪ್ರೀತಿ, ವಿಶ್ವಾಸ, ನಂಬಿಕೆಗಳನ್ನು ಅಪಾತ್ರರ ಮೇಲೆ ಇಟ್ಟಾಗಲೂ ಹೀಗೆ ಆಗಬಹುದು‌. ಆಗ ಕೊಟ್ಟವನು ಬಯಲಾಟದ ಕೋಡಂಗಿ‌ ವೇಷದಂತೆ ಮೂರ್ಖನಾಗಿ, ಹಾಸ್ಯಾಸ್ಪದವಾಗಿ ಕಂಡರೆ ತೆಗೆದುಕೊಂಡವನು ದಕ್ಷಯಾಗ ಕಥೆಯ ಶಿವಕುಂತಲ ಜನ್ಯ […]

ಕನ್ನಡ ಗಾದೆಮಾತು – ಹಾಯೋನೊಬ್ಬ ಇದ್ರೆ ಕಾಯೋನು ಒಬ್ಬ ಇರ್ತಾನೆ. 

ನಮ್ಮ ಗ್ರಾಮೀಣ ಜನತೆಯು ನಂಬಿ ಬಾಳುತ್ತಿದ್ದ ಮೌಲ್ಯವೊಂದನ್ನು ಈ ಗಾದೆಮಾತು ಪ್ರಕಟಿಸಿದೆ.‌ ನಮ್ಮ ಜೀವನದಲ್ಲಿ ಕಷ್ಟಗಳು ಬರುತ್ತವೆ, ಅವು ಕೆಲವು ಸಲ ಮನುಷ್ಯರು ಕೊಡುವ ತೊಂದರೆಯಿಂದಲೂ ಬರಬಹುದು‌. ಹೀಗೆ ನಾವು ತೊಂದರೆ ಅನುಭವಿಸುತ್ತಿದ್ದಾಗ ನಮಗೆ ಪರಿಚಿತರಲ್ಲಿ ಒಬ್ಬರು ನಮಗೆ ಸಹಾಯ ಮಾಡಬಹುದು‌. ಕೆಲವು ಸಲ ಆ ಸಹಾಯವು ಆಸ್ತಿಕರ ಮಟ್ಟಿಗೆ ದೇವರ ಕೃಪೆಯ ರೂಪದಲ್ಲೂ ಬರಬಹುದು. ಹೀಗಾಗಿ ನಮಗೆ ತೊಂದರೆ ಕೊಡುವವರು ಇರುವಂತೆಯೇ ನಮ್ಮನ್ನು ಕಷ್ಟದಿಂದ ಪಾರು ಮಾಡಿ ಕೈಹಿಡಿಯುವವರು ಸಹ ಇರುತ್ತಾರೆ. ಈ ನಂಬಿಕೆ ಎಷ್ಟೋ […]

ಕನ್ನಡ ಗಾದೆಮಾತು – ಸಮಯಕ್ಕಾಗದ ಅರ್ಥ ಸಹಸ್ರವಿದ್ರೂ ವ್ಯರ್ಥ.

ಬಹಳ ಅರ್ಥಪೂರ್ಣ ಗಾದೆಮಾತಿದು. ನಮ್ಮ ಹತ್ತಿರ ಇರುವ ಹಣ ( ಅರ್ಥ) ಕಷ್ಟಸುಖಗಳ ನಮ್ಮ ಸಮಯ ಸಂದರ್ಭಕ್ಕೆ ಒದಗಬೇಕು.‌ ಆಗಲೇ ಅದು ಇರುವುದು ಸಾರ್ಥಕ ಆಗುತ್ತದೆ. ಸಮಯಕ್ಕೆ ಒದಗದ ದುಡ್ಡು ಸಾವಿರ ಅಲ್ಲ ಹತ್ತು ಸಾವಿರವಿದ್ದರೂ ಏನು ಪ್ರಯೋಜನ ಬಂತು? ಹಣದ ವಿಷಯದಲ್ಲಿ ಹಿರಿಯರು ನಮಗೆ ಈ ಗಾದೆಮಾತಿನ ಮೂಲಕ ಕೊಟ್ಟಿರುವ ಎಚ್ಚರಿಕೆಯನ್ನು ಗಮನಿಸಿ, ನಮ್ಮ ಹಣವು ನಮ್ಮ ಸಮಯಕ್ಕೆ ಆಗುವ ರೀತಿಯಲ್ಲಿ ಅದನ್ನು ನಿರ್ವಹಿಸಬೇಕು.‌ ಅಲ್ಲವೆ? Kannada proverb – Samayakkagada artha sahasraviddaru vyartha […]

ಕನ್ನಡ ಗಾದೆಮಾತು‌- ಉತ್ತಮ ಹೊಲ‌ ಮಧ್ಯಮ ವ್ಯಾಪಾರ ಕನಿಷ್ಠ ಚಾಕರಿ.

ಮನುಷ್ಯನು ತನ್ನ ಜೀವನೋಪಾಯಕ್ಕಾಗಿ ಯಾವುದೋ ಒಂದು ವೃತ್ತಿಯನ್ನು ಮಾಡಲೇಬೇಕಲ್ಲವೆ? ನಮ್ಮ ಗ್ರಾಮೀಣ ಜನಪದರು ಇಂತಹ ವೃತ್ತಿಗಳಲ್ಲಿ ಯಾವುದು ಎಲ್ಲಕ್ಕಿಂತ ಉತ್ತಮ ಎಂಬುದನ್ನು ತಮ್ಮದೇ ಆದ ರೀತಿಯಿಂದ ಹೇಳಿದ್ದಾರೆ. ಸ್ವಂತ ಹೊಲದಲ್ಲಿ ತನಗೆ ತಾನೇ ಒಡೆಯನಾಗಿ‌ ದುಡಿಯುವುದು ಎಲ್ಲಕ್ಕಿಂತ ಉತ್ತಮ,  ತಕ್ಕಮಟ್ಟಿಗೆ ಸ್ವಾಯತ್ತತೆಯನ್ನು ನೀಡಿದರೂ ಲಾಭ – ನಷ್ಟಗಳ ಜಾಲದಲ್ಲಿ ಬೀಳಿಸುವ ವ್ಯಾಪಾರ ವೃತ್ತಿ ಮಧ್ಯಮ, ಆದರೆ ತನ್ನ ಹೊಟ್ಟೆಪಾಡಿಗಾಗಿ ಇನ್ನೊಬ್ಬರ ಮರ್ಜಿ ಕಾಯಬೇಕಾದ ಚಾಕರಿಯು ವೃತ್ತಿಗಳಲ್ಲಿ ತುಂಬ ಅಧಮ ಎಂಬ ಅಭಿಪ್ರಾಯವನ್ನು ನೀಡಿದ್ದಾರೆ ಈ ಹಿರಿಯರು. ಮನುಷ್ಯನಿಗೆ […]

Page 3 of 19

Kannada Sethu. All rights reserved.