ವಿಶ್ವಜೀವನದ ಒಂದು ವಿಚಿತ್ರ ಸಂಗತಿಯನ್ನು ಈ ಅಪರೂಪದ ಗಾದೆಮಾತು ಹೇಳುತ್ತದೆ. ಹಿಮಾಲಯ ಎಂಬುದು ತನ್ನ ಹೆಸರೇ ಸೂಚಿಸುವಂತೆ ಹಿಮದ ಮನೆ. ಅಲ್ಲಿ ಹಿಮದ ಹೆಚ್ಚಳ ಆಗುತ್ತಲೇ ಇರುತ್ತದೆ. ಹಾಗೆಯೇ ದಕ್ಷಯಜ್ಞದ ಸಂದರ್ಭದಲ್ಲಿ ಶಿವನ ಕೋಪದ ಫಲವಾಗಿ ಅವನ ಕೂದಲಿನಿಂದ ಹುಟ್ಟಿದ ವೀರಭದ್ರನ ಆರ್ಭಟ ಬಹಳ ಹೆಚ್ಚು. ಅದು ಸದಾ ಹೆಚ್ಚುತ್ತಲೇ ಇರುವ ಸಂಗತಿ. ನಮ್ಮನ್ನು ತುಂಬ ಯೋಚಿಸುವಂತೆ ಮತ್ತು ಬದುಕನ್ನು ಗಮನಿಸುವಂತೆ ಮಾಡುತ್ತದಲ್ಲವೆ ಈ ಗಾದೆಮಾತು? Kannada proverb – Himalayadalli hima hechchanthe. Veerabhadranalli avatara […]
ಕನ್ನಡ ವಿವೇಕ
ಬದುಕನ್ನು ಹಸನು ಮಾಡಲು ಕನ್ನಡ ಭಾಷೆ, ಸಂಸ್ಕೃತಿಯು ನಮಗೆ ನೀಡಿದ ಕೆಲವು ಗಾದೆ, ಸೂಕ್ತಿ, ನಾಣ್ಣುಡಿ, ಲೋಕೋಕ್ತಿ, ನಲ್ವಾತು ಇವುಗಳಲ್ಲಿ ವಾರಕ್ಕೆ ಒಂದರ ಕಿರು ಪರಿಚಯವನ್ನು ಈ ಅಂಕಣದಲ್ಲಿ ಮಾಡಿಕೊಡಲಾಗುತ್ತದೆ.
Like us!
Follow us!