ಬಹಳ ಅರ್ಥಪೂರ್ಣ ಗಾದೆಮಾತಿದು. ನಮ್ಮ ಹತ್ತಿರ ಇರುವ ಹಣ ( ಅರ್ಥ) ಕಷ್ಟಸುಖಗಳ ನಮ್ಮ ಸಮಯ ಸಂದರ್ಭಕ್ಕೆ ಒದಗಬೇಕು. ಆಗಲೇ ಅದು ಇರುವುದು ಸಾರ್ಥಕ ಆಗುತ್ತದೆ. ಸಮಯಕ್ಕೆ ಒದಗದ ದುಡ್ಡು ಸಾವಿರ ಅಲ್ಲ ಹತ್ತು ಸಾವಿರವಿದ್ದರೂ ಏನು ಪ್ರಯೋಜನ ಬಂತು? ಹಣದ ವಿಷಯದಲ್ಲಿ ಹಿರಿಯರು ನಮಗೆ ಈ ಗಾದೆಮಾತಿನ ಮೂಲಕ ಕೊಟ್ಟಿರುವ ಎಚ್ಚರಿಕೆಯನ್ನು ಗಮನಿಸಿ, ನಮ್ಮ ಹಣವು ನಮ್ಮ ಸಮಯಕ್ಕೆ ಆಗುವ ರೀತಿಯಲ್ಲಿ ಅದನ್ನು ನಿರ್ವಹಿಸಬೇಕು. ಅಲ್ಲವೆ? Kannada proverb – Samayakkagada artha sahasraviddaru vyartha […]
ಕನ್ನಡ ವಿವೇಕ
ಬದುಕನ್ನು ಹಸನು ಮಾಡಲು ಕನ್ನಡ ಭಾಷೆ, ಸಂಸ್ಕೃತಿಯು ನಮಗೆ ನೀಡಿದ ಕೆಲವು ಗಾದೆ, ಸೂಕ್ತಿ, ನಾಣ್ಣುಡಿ, ಲೋಕೋಕ್ತಿ, ನಲ್ವಾತು ಇವುಗಳಲ್ಲಿ ವಾರಕ್ಕೆ ಒಂದರ ಕಿರು ಪರಿಚಯವನ್ನು ಈ ಅಂಕಣದಲ್ಲಿ ಮಾಡಿಕೊಡಲಾಗುತ್ತದೆ.
Like us!
Follow us!