ಕನ್ನಡ ವಿವೇಕ

ಬದುಕನ್ನು ಹಸನು ಮಾಡಲು ಕನ್ನಡ ಭಾಷೆ, ಸಂಸ್ಕೃತಿಯು ನಮಗೆ ನೀಡಿದ ಕೆಲವು ಗಾದೆ, ಸೂಕ್ತಿ, ನಾಣ್ಣುಡಿ, ಲೋಕೋಕ್ತಿ, ನಲ್ವಾತು ಇವುಗಳಲ್ಲಿ ವಾರಕ್ಕೆ ಒಂದರ ಕಿರು ಪರಿಚಯವನ್ನು ಈ ಅಂಕಣದಲ್ಲಿ ಮಾಡಿಕೊಡಲಾಗುತ್ತದೆ.

ಕನ್ನಡ ಗಾದೆಮಾತು – ಸಮಯಕ್ಕಾಗದ ಅರ್ಥ ಸಹಸ್ರವಿದ್ರೂ ವ್ಯರ್ಥ.

ಬಹಳ ಅರ್ಥಪೂರ್ಣ ಗಾದೆಮಾತಿದು. ನಮ್ಮ ಹತ್ತಿರ ಇರುವ ಹಣ ( ಅರ್ಥ) ಕಷ್ಟಸುಖಗಳ ನಮ್ಮ ಸಮಯ ಸಂದರ್ಭಕ್ಕೆ ಒದಗಬೇಕು.‌ ಆಗಲೇ ಅದು ಇರುವುದು ಸಾರ್ಥಕ ಆಗುತ್ತದೆ. ಸಮಯಕ್ಕೆ ಒದಗದ ದುಡ್ಡು ಸಾವಿರ ಅಲ್ಲ ಹತ್ತು ಸಾವಿರವಿದ್ದರೂ ಏನು ಪ್ರಯೋಜನ ಬಂತು? ಹಣದ ವಿಷಯದಲ್ಲಿ ಹಿರಿಯರು ನಮಗೆ ಈ ಗಾದೆಮಾತಿನ ಮೂಲಕ ಕೊಟ್ಟಿರುವ ಎಚ್ಚರಿಕೆಯನ್ನು ಗಮನಿಸಿ, ನಮ್ಮ ಹಣವು ನಮ್ಮ ಸಮಯಕ್ಕೆ ಆಗುವ ರೀತಿಯಲ್ಲಿ ಅದನ್ನು ನಿರ್ವಹಿಸಬೇಕು.‌ ಅಲ್ಲವೆ? Kannada proverb – Samayakkagada artha sahasraviddaru vyartha […]

ಕನ್ನಡ ಗಾದೆಮಾತು‌- ಉತ್ತಮ ಹೊಲ‌ ಮಧ್ಯಮ ವ್ಯಾಪಾರ ಕನಿಷ್ಠ ಚಾಕರಿ.

ಮನುಷ್ಯನು ತನ್ನ ಜೀವನೋಪಾಯಕ್ಕಾಗಿ ಯಾವುದೋ ಒಂದು ವೃತ್ತಿಯನ್ನು ಮಾಡಲೇಬೇಕಲ್ಲವೆ? ನಮ್ಮ ಗ್ರಾಮೀಣ ಜನಪದರು ಇಂತಹ ವೃತ್ತಿಗಳಲ್ಲಿ ಯಾವುದು ಎಲ್ಲಕ್ಕಿಂತ ಉತ್ತಮ ಎಂಬುದನ್ನು ತಮ್ಮದೇ ಆದ ರೀತಿಯಿಂದ ಹೇಳಿದ್ದಾರೆ. ಸ್ವಂತ ಹೊಲದಲ್ಲಿ ತನಗೆ ತಾನೇ ಒಡೆಯನಾಗಿ‌ ದುಡಿಯುವುದು ಎಲ್ಲಕ್ಕಿಂತ ಉತ್ತಮ,  ತಕ್ಕಮಟ್ಟಿಗೆ ಸ್ವಾಯತ್ತತೆಯನ್ನು ನೀಡಿದರೂ ಲಾಭ – ನಷ್ಟಗಳ ಜಾಲದಲ್ಲಿ ಬೀಳಿಸುವ ವ್ಯಾಪಾರ ವೃತ್ತಿ ಮಧ್ಯಮ, ಆದರೆ ತನ್ನ ಹೊಟ್ಟೆಪಾಡಿಗಾಗಿ ಇನ್ನೊಬ್ಬರ ಮರ್ಜಿ ಕಾಯಬೇಕಾದ ಚಾಕರಿಯು ವೃತ್ತಿಗಳಲ್ಲಿ ತುಂಬ ಅಧಮ ಎಂಬ ಅಭಿಪ್ರಾಯವನ್ನು ನೀಡಿದ್ದಾರೆ ಈ ಹಿರಿಯರು. ಮನುಷ್ಯನಿಗೆ […]

ಕನ್ನಡ ಗಾದೆಮಾತು – ಊರು ಬಾಗಿಲು ಮುಚ್ಚಬಹುದು, ದೂರುವವರ ಬಾಯಿ ಮುಚ್ಚೋಕಾಗುತ್ಯೆ?

ನಾವು ಏನೇ ಕೆಲಸ ಮಾಡಿದರೂ, ಹೇಗೇ ಇದ್ದರೂ ನಮ್ಮ ಸುತ್ತಮುತ್ತ ಕೆಲವು ದೂರುವ ಜನರು ಇದ್ದೇ ಇರುತ್ತಾರೆ.‌ ಇಂತಹವರು ನೆಂಟರಿಷ್ಟರ ಬಳಗದಲ್ಲಿ, ಸಹೋದ್ಯೋಗಿಗಳಲ್ಲಿ, ನಮ್ಮ ನೆರೆಹೊರೆಯಲ್ಲಿ – ಒಟ್ಟಿನಲ್ಲಿ ಎಲ್ಲ ಕಡೆಯೂ ಕಂಡು ಬರುತ್ತಾರೆ.‌ ಮಳೆಹನಿಗಳಂತೆ ಇವರ ಕೊಂಕುಮಾತುಗಳು ತಟತಟ ಕೇಳುತ್ತಲೇ ಇರುತ್ತವೆ. ಅವರ ಬಾಯಿ ಮುಚ್ಚಿಸಲು ಆಗುವುದಿಲ್ಲ. ಆದರೆ ಒಂದು ಮುಖ್ಯ ವಿಷಯ ಇಲ್ಲಿದೆ. ಇಂತಹವರ ಮಾತುಗಳನ್ನು ಹೃದಯಕ್ಕೆ ಹಚ್ಚಿಕೊಂಡೆವೆಂದರೆ ಒಂದೇ ಒಂದು ಕೆಲಸವನ್ನೂ ಮಾಡಲಾಗುವುದಿಲ್ಲ. ಹೀಗಾಗಿ ಅವರ ಇರುವಿಕೆಯ ವಾಸ್ತವವನ್ನು ಒಪ್ಪಿಕೊಂಡೂ, ಅವರ ಮಾತುಗಳನ್ನು […]

ಕನ್ನಡ ಗಾದೆಮಾತು – ಬೊಬ್ಬೆ ಹೊಡೆದ್ರೆ ಹಬ್ಬ ಆಗುತ್ತಾ?

ಮನೆಯಲ್ಲಿ ಹಬ್ಬ, ಮದುವೆ-ಮುಂಜಿ ಎಂದರೆ ಮಾಡಬೇಕಾದ ಬಹಳಷ್ಟು ಕೆಲಸಗಳಿರುತ್ತವೆ ; ತೋರಣದಿಂದ ಹೂರಣದ ತನಕ, ಪೂಜೆ-ಪುನಸ್ಕಾರಗಳಿಂದ ದಾನದ ತನಕ. ವಾರ-ಹದಿನೈದು ದಿನಗಳ ಕಾಲ ಗಮನವಿಟ್ಟು ಕೆಲಸ ಮಾಡಿದರೆ ಮಾತ್ರ ಹಬ್ಬ ಚೆನ್ನಾಗಿ ಆಗುತ್ತದೆ. ಆದರೆ ಕೆಲವರು ಕೈಯಿಂದ ಏನೂ ಮಾಡದೆ, ಬರೀ ಕೆಲಸದ ಬಗ್ಗೆ ಮಾತಾಡಿ, ಕೂಗಾಡಿ ಬೊಬ್ಬೆ ಹೊಡೆಯುತ್ತಾ ಇರುತ್ತಾರೆ. ಇಂತಹವರಿದ್ದರೆ ಹಬ್ಬ ಆಗುವುದಿಲ್ಲ, ಯಾವ ಕೆಲಸವೂ ಆಗುವುದಿಲ್ಲ‌.  ಕೆಲಸಕ್ಕೆ ಬಾರದ ಈ ರೀತಿಯ ಬೊಬ್ಬೆವೀರರನ್ನು ನೋಡಿಯೇ ನಮ್ಮ ಹಿರಿಯರು ಈ ಗಾದೆ ಮಾತನ್ನು ಬಳಕೆಗೆ ತಂದಿರಬೇಕು. […]

ಕನ್ನಡ ಗಾದೆಮಾತು – ಸಾಲ ಕೊಟ್ಟು ಸ್ನೇಹ ಕಳೆದುಕೊಂಡಂಗೆ. 

ನಾವು ಯಾರಿಗಾದರೂ ಸಾಲ ಕೊಟ್ಟರೆ ಅವರು ಅದನ್ನು ಮರಳಿಸುವ ತನಕ ನಮ್ಮ‌ ಮನಸ್ಸು ಸಮಾಧಾನವಾಗಿರುವುದಿಲ್ಲ. ನಾವು ಅದನ್ನು ಮರಳಿಸುವಂತೆ ಅವರ ಬಳಿ ಕೇಳಿದಾಗ ಕೆಲವರು ಕಾಳಜಿ, ಕೃತಜ್ಞತೆಗಳಿಂದ, ಇನ್ನು ಕೆಲವರು ಗೊಣಗಿಕೊಂಡು ಹಣವನ್ನು ಮರಳಿಸಬಹುದು, ಇನ್ನು ಕೆಲವು ಭಂಡರು ಹಣವನ್ನು ಮರಳಿಸದೆಯೂ ಇರಬಹುದು. ಆದರೆ ನಾವು ಇದೇ ಸಾಲವನ್ನು ಸ್ನೇಹಿತರಿಗೆ ಕೊಟ್ಟೆವೆಂದರೆ ಭಾರೀ ಪೀಕಲಾಟಕ್ಕೆ ಸಿಕ್ಕಿ ಹಾಕಿಕೊಳ್ಳುತ್ತೇವೆ. ಹಣವನ್ನು ವಾಪಸ್ ಕೇಳದಿದ್ದರೆ ಹಣವನ್ನು  ಕಳೆದುಕೊಳ್ಳಬೇಕಾಗುತ್ತೆ, ವಾಪಸ್ ಕೇಳಿದರೆ ಸ್ನೇಹಿತನಿಗೆ ಇರಿಸುಮುರಿಸಾಗುವುದರಿಂದ ಸ್ನೇಹವನ್ನು ಕಳೆದುಕೊಳ್ಳಬೇಕಾಗುತ್ತದೆ. ಬಹುಶಃ ಇದಕ್ಕಾಗಿಯೇ ಈ […]

ಕನ್ನಡ ಗಾದೆಮಾತು – ನಮ್ಮೋರಿಗೆ ಮುಳುಗಿ ಬಾ ಸಟ್ಟುಗ, ಅನ್ನಿಗರಿಗೆ ತೇಲಿ ಬಾ ಸಟ್ಟುಗ.

ವಿಚಿತ್ರ ಅನ್ನಿಸಿದರೂ  ಕುಟುಂಬಗಳಲ್ಲಿ  ನಿಜವಾಗಿಯೂ ನಡೆಯುವ ಒಂದು ಪಕ್ಷಪಾತವನ್ನು ಈ ಗಾದೆ ಮಾತು ಪರಿಚಯಿಸಿದೆ.  ಮನೆಗಳಲ್ಲಿ ತುಂಬ ಜನ ಒಟ್ಟಿಗೆ ಊಟಕ್ಕೆ ಕುಳಿತಾಗ ಬಡಿಸುವವರು ತಮಗೆ ಇಷ್ಟ ಇರುವವರಿಗೆ ಸಾರಿನ ಹೋಳುಗಳು ಜಾಸ್ತಿ ಬರುವಂತೆ ಸಟ್ಟುಗ ಅಥವಾ ಸೌಟನ್ನು ಪಾತ್ರೆಯ ಆಳಕ್ಕೆ ಹೋಗುವಂತೆ ಮುಳುಗಿಸಿ‌ ಬಡಿಸುವುದು, ತಮಗೆ ಇಷ್ಟ ಇಲ್ಲದವರಿಗೆ ಸಟ್ಟುಗವನ್ನು ಮೇಲೆ ಮೇಲೆಯೇ  ತೇಲಿಸಿ ನೀರು ನೀರಾದ ಸಾರನ್ನು ಬಡಿಸುವುದು – ಹೀಗೆ ಮಾಡುತ್ತಾರೆ. ‌ಈ ರೀತಿಯಲ್ಲಿ ತಮ್ಮ ಸಹಜೀವಿಗಳ ನಡುವೆ ಕೆಲವೊಮ್ಮೆ ಬಹಳ ಸೂಕ್ಷ್ಮವಾದ ರೀತಿಯಲ್ಲಿ […]

ಕನ್ನಡ ಗಾದೆಮಾತು – ಬಾಯಿದ್ದೋನಿಗೆ ಬರಗಾಲವಿಲ್ಲ, ರಾಗವಿದ್ದೋನಿಗೆ ಬೇಜಾರಿಲ್ಲ.

ಜನರೊಂದಿಗೆ ನಿಸ್ಸಂಕೋಚವಾಗಿ ಮಾತಾಡಿಕೊಂಡಿರುವವರಿಗೆ ಬದುಕು ಸಮೃದ್ಧವಾಗಿರುತ್ತದೆ ಎಂಬುದು ನಾವು ಸಾಮಾನ್ಯವಾಗಿ ಗಮನಿಸುವ ಸಂಗತಿ.‌ ಯಾರೋ ಕಾಫಿ ಕುಡಿಸುತ್ತಾರೆ, ಇನ್ಯಾರೋ ಊಟಕ್ಕೆ ಕರೆಯುತ್ತಾರೆ, ಮತ್ಯಾರೋ ತಮ್ಮ ಮನೆಯಲ್ಲಿ ಆಶ್ರಯ ಕೊಡುತ್ತಾರೆ, ಅಥವಾ ಎಲ್ಲಿ ಸಹಾಯ ಸಿಗುತ್ತದೆ ಎಂದು ಹೇಳುತ್ತಾರೆ‌‌‌‌. ಹೀಗಾಗಿ ಬಾಯಿ ಇದ್ದವರು ಬರಗಾಲವನ್ನು ಅನುಭವಿಸುವ ಪ್ರಶ್ನೆ ಉದ್ಭವಿಸುವುದಿಲ್ಲ. ಇದೇ  ರೀತಿಯಲ್ಲಿ, ಹಾಡಲು ಬರುವವರು ಒಂಟಿಯಾಗಿದ್ದರೂ ಯಾವುದೋ ಹಾಡನ್ನು ಗುನುಗಿಕೊಂಡು ಸಂತೋಷದಿಂದ ತಮ್ಮ ಪಾಡಿಗೆ ತಾವು ಸಮಯ ಕಳೆಯಬಲ್ಲರು. ಅವರಿಗೆ ಯಾರೂ ತಮ್ಮನ್ನು ಮಾತಾಡಿಸುತ್ತಿಲ್ಲ ಎಂಬ ಕೊರಗು ಉದ್ಭವಿಸುವುದಿಲ್ಲ. […]

ಕನ್ನಡ ಗಾದೆಮಾತು – ಇಪ್ಪತ್ತಕ್ಕೆ ಯಜಮಾನಿಕೆ ಬೇಡ, ಎಪ್ಪತ್ತಕ್ಕೆ ಕೆಮ್ಮು ಬೇಡ.

ಹಿರಿಯರ ಜೀವನಾನುಭವದ ಸಾಕ್ಷಿ ಈ ಗಾದೆಮಾತು. ಇಪ್ಪತ್ತನೆಯ ವಯಸ್ಸಿನಲ್ಲಿ ಮನುಷ್ಯನ ಮೆದುಳು ಸಂಪೂರ್ಣವಾಗಿ ಬೆಳೆದಿರುವುದಿಲ್ಲ. ಹೀಗಾಗಿ ದೊಡ್ಡ ದೊಡ್ಡ ಜವಾಬ್ದಾರಿಗಳು ಹಾಗೂ ನಿರ್ಧಾರಗಳನ್ನು ಬೇಡುವ ಮನೆಯ ಜವಾಬ್ದಾರಿ ವಹಿಸಲು ಆ ವಯಸ್ಸಿನ ಯುವಕ/ಯುವತಿಯರಿಗೆ ಸಾಧ್ಯ ಆಗುವುದಿಲ್ಲ. ಇದೇ ರೀತಿಯಲ್ಲಿ ಎಪ್ಪತ್ತರ ಇಳಿವಯಸ್ಸಿನಲ್ಲಿ ಕೆಮ್ಮು ಅಥವಾ ಗೂರಲು ರೋಗವು ಮನುಷ್ಯನನ್ನು ಬಹುವಾಗಿ ದಣಿಸುತ್ತದೆ. ಬೇಗ ವಾಸಿಯಾಗದ ಈ ರೋಗ ಬಂದಿತೆಂದರೆ ನಿದ್ದೆ, ನೆಮ್ಮದಿ ದೂರವಾದವೆಂದೇ ಅರ್ಥ. ಅದಕ್ಕಾಗಿಯೇ ಈ ಗಾದೆಮಾತು ‘ಇಪ್ಪತ್ತಕ್ಕೆ ಯಜಮಾನಿಕೆ ಬೇಡ, ಎಪ್ಪತ್ತಕ್ಕೆ ಕೆಮ್ಮು ಬೇಡ’ […]

ಕನ್ನಡ ಗಾದೆಮಾತು – ಆಳಾಗಿ‌ ದುಡಿ, ಅರಸಾಗಿ ಉಣ್ಣು.

ಒಳ್ಳೆಯ ಬದುಕನ್ನು ನಮ್ಮದಾಗಿಸಿಕೊಳ್ಳುವುದು ಹೇಗೆ ಎಂಬುದನ್ನು ಒಂದೇ ವಾಕ್ಯದಲ್ಲಿ ಹೇಳಿಕೊಡುವ ಗಾದೆಮಾತಿದು. ದುಡಿಯುವಾಗ ಆಳಿನಂತೆ ನಾವು ಕಷ್ಟ ಪಟ್ಟು ದುಡಿಯಬೇಕು, ಅಂದರೆ ಪರಿಶ್ರಮ ಹಾಕಬೇಕು‌. ಆದರೆ, ನಮ್ಮ‌ ದುಡಿತದ ಫಲವನ್ನು ಉಣ್ಣುವಾಗ ರಾಜನಂತೆ ಖುಷಿಯಿಂದ, ಹಕ್ಕಿನಿಂದ ಉಣ್ಣಬೇಕು. ರಟ್ಟೆ ಮುರಿದು ದುಡಿಯಬೇಕು, ಚಪ್ಪರಿಸಿ ಸಂತೋಷವಾಗಿ ಉಣ್ಣಬೇಕು. ಇದೇ ಅಲ್ಲವೆ ಸಾರ್ಥಕ ಬದುಕು‌! ದುಡಿಯದೆ ಸೋಮಾರಿಯಾಗಿ ಅಥವಾ ದುಡಿತದಿಂದ ಗಳಿಸಿದ ಫಲವನ್ನು ಉಣ್ಣದೆ ಗೋಳುಮಾರಿಯಾಗಿ ಬದುಕುವುದೊಂದು ಬದುಕೇ? ನಮ್ಮ ಜೀವನವನ್ನು ಅರ್ಥಪೂರ್ಣ ಹಾಗೂ ರಸಮಯ ಮಾಡುವ ಸರಳ ಸೂತ್ರವಲ್ಲವೆ […]

ಕನ್ನಡ ಗಾದೆ ಮಾತು – ಕಾಲ‌ ಹೋಗ್ತದೆ, ಮಾತು ನಿಲ್ತದೆ.

ನಮ್ಮ‌ ಹಿರಿಯರ ಜೀವನಾನುಭವದ ಸಾರ ಈ ಗಾದೆಮಾತು. ಮಾತು ಅನ್ನುವುದು ಎಂತಹ ಮಹತ್ವದ ವಿಷಯ ಎಂಬುದನ್ನು ನಾವು ಅನೇಕ ಸಲ ಅರ್ಥ ಮಾಡಿಕೊಳ್ಳುವುದಿಲ್ಲ.‌ ಒಬ್ಬ ವ್ಯಕ್ತಿಯು ಕೋಪದಲ್ಲೋ, ಅವಿವೇಕದಿಂದಲೋ, ಅಥವಾ ತುಂಬ ಯೋಚಿಸಿಯೋ ಆಡುವ ಒಂದು ಮಾತು, ಕೇಳುಗನ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದುಬಿಡುತ್ತದೆ. ಅದರಲ್ಲೂ ಇನ್ನೂ ರೂಪುಗೊಳ್ಳುತ್ತಿರುವ ವಯಸ್ಸಿನ ಮಕ್ಕಳ ಮೇಲೆ ಇಂತಹ ಮಾತುಗಳ ಪ್ರಭಾವ ಬಹು ಹೆಚ್ಚು. ಎಷ್ಟೇ ಕಾಲ ಸರಿದರೂ ಆ ಮಾತಿನ ಪರಿಣಾಮ ಕಡಿಮೆ ಆಗುವುದಿಲ್ಲ! ಇದಕ್ಕಾಗಿಯೇ ಹಿರಿಯರು ಈ ಗಾದೆಮಾತನ್ನು ಹೇಳಿದ್ದಾರೆ.‌ […]

Page 3 of 19

Kannada Sethu. All rights reserved.