ಜನರೊಂದಿಗೆ ನಿಸ್ಸಂಕೋಚವಾಗಿ ಮಾತಾಡಿಕೊಂಡಿರುವವರಿಗೆ ಬದುಕು ಸಮೃದ್ಧವಾಗಿರುತ್ತದೆ ಎಂಬುದು ನಾವು ಸಾಮಾನ್ಯವಾಗಿ ಗಮನಿಸುವ ಸಂಗತಿ. ಯಾರೋ ಕಾಫಿ ಕುಡಿಸುತ್ತಾರೆ, ಇನ್ಯಾರೋ ಊಟಕ್ಕೆ ಕರೆಯುತ್ತಾರೆ, ಮತ್ಯಾರೋ ತಮ್ಮ ಮನೆಯಲ್ಲಿ ಆಶ್ರಯ ಕೊಡುತ್ತಾರೆ, ಅಥವಾ ಎಲ್ಲಿ ಸಹಾಯ ಸಿಗುತ್ತದೆ ಎಂದು ಹೇಳುತ್ತಾರೆ. ಹೀಗಾಗಿ ಬಾಯಿ ಇದ್ದವರು ಬರಗಾಲವನ್ನು ಅನುಭವಿಸುವ ಪ್ರಶ್ನೆ ಉದ್ಭವಿಸುವುದಿಲ್ಲ. ಇದೇ ರೀತಿಯಲ್ಲಿ, ಹಾಡಲು ಬರುವವರು ಒಂಟಿಯಾಗಿದ್ದರೂ ಯಾವುದೋ ಹಾಡನ್ನು ಗುನುಗಿಕೊಂಡು ಸಂತೋಷದಿಂದ ತಮ್ಮ ಪಾಡಿಗೆ ತಾವು ಸಮಯ ಕಳೆಯಬಲ್ಲರು. ಅವರಿಗೆ ಯಾರೂ ತಮ್ಮನ್ನು ಮಾತಾಡಿಸುತ್ತಿಲ್ಲ ಎಂಬ ಕೊರಗು ಉದ್ಭವಿಸುವುದಿಲ್ಲ. […]
ಕನ್ನಡ ವಿವೇಕ
ಬದುಕನ್ನು ಹಸನು ಮಾಡಲು ಕನ್ನಡ ಭಾಷೆ, ಸಂಸ್ಕೃತಿಯು ನಮಗೆ ನೀಡಿದ ಕೆಲವು ಗಾದೆ, ಸೂಕ್ತಿ, ನಾಣ್ಣುಡಿ, ಲೋಕೋಕ್ತಿ, ನಲ್ವಾತು ಇವುಗಳಲ್ಲಿ ವಾರಕ್ಕೆ ಒಂದರ ಕಿರು ಪರಿಚಯವನ್ನು ಈ ಅಂಕಣದಲ್ಲಿ ಮಾಡಿಕೊಡಲಾಗುತ್ತದೆ.
Like us!
Follow us!