ಪ್ರಾಸಬದ್ಧವಾದ ಮತ್ತು ಅರ್ಥಪೂರ್ಣವಾದ ಒಂದು ಕನ್ನಡ ಗಾದೆಮಾತು ಇದು. ಜನರು ಸುಳ್ಳು, ಮೋಸ, ಕಳವು, ಪರಪೀಡನೆ, ಜೀವಹಿಂಸೆ ಮುಂತಾದ ಪರಪೀಡನೆಗಳಲ್ಲಿ ತೊಡಗಿ (ಅಂದರೆ ಅನೇಕ ಪಾಪಗಳನ್ನು ಮಾಡಿ), ನಂತರ, ದೇವರ ಪೂಜೆಯನ್ನು ಧೂಪ ದೀಪಗಳೊಂದಿಗೆ ವಿಜೃಂಭಣೆಯಿಂದ ಮಾಡಿಬಿಟ್ಟರೆ, ಅವರು ಮಾಡಿದ ಪಾಪಕಾರ್ಯಗಳು ಮಾಯವಾಗಿಬಿಡುವವೇನು? ಖಂಡಿತ ಇಲ್ಲ. ಹೀಗಾಗಿ ‘ಪಾಪಕಾರ್ಯಗಳನ್ನು ಯಾವುದೇ ಕಾರಣಕ್ಕೂ ಮಾಡಬಾರದು ಮತ್ತು ಎಷ್ಟು ಧೂಪ ಹಾಕಿ ಪೂಜೆ ಮಾಡಿದರೂ ಈ ಕೆಟ್ಟ ಕೆಲಸಗಳ ಪರಿಣಾಮ ಹೋಗುವುದಿಲ್ಲ’ ಎಂಬುದು ಈ ಗಾದೆಮಾತು ಕಲಿಸುವ ಜೀವನಪಾಠವಾಗಿದೆ. Kannada […]
ಕನ್ನಡ ವಿವೇಕ
ಬದುಕನ್ನು ಹಸನು ಮಾಡಲು ಕನ್ನಡ ಭಾಷೆ, ಸಂಸ್ಕೃತಿಯು ನಮಗೆ ನೀಡಿದ ಕೆಲವು ಗಾದೆ, ಸೂಕ್ತಿ, ನಾಣ್ಣುಡಿ, ಲೋಕೋಕ್ತಿ, ನಲ್ವಾತು ಇವುಗಳಲ್ಲಿ ವಾರಕ್ಕೆ ಒಂದರ ಕಿರು ಪರಿಚಯವನ್ನು ಈ ಅಂಕಣದಲ್ಲಿ ಮಾಡಿಕೊಡಲಾಗುತ್ತದೆ.