ಕನ್ನಡದ ಒಂದು ವಿಶಿಷ್ಟ ಗಾದೆಮಾತಿದು. ಜೀವನದಲ್ಲಿ ನಾವು ಕೆಲವೊಮ್ಮೆ ನಮ್ಮ ಕುಟುಂಬ ಸದಸ್ಯರಿಗೆ, ಬಂಧುಮಿತ್ರರಿಗೆ ಅಥವಾ ಉದ್ಯೋಗ ಕ್ಷೇತ್ರದ ಸಹೋದ್ಯೋಗಿಗಳಿಗೆ ಎಷ್ಟು ಸಹಾಯ/ಸೇವೆ ಮಾಡಿದರೂ ಅವರಿಗೆ ಏಕೋ ಸಮಾಧಾನ,ತೃಪ್ತಿ ಇರುವುದಿಲ್ಲ. ‘ನೀನೇನು ಮಹಾ ಮಾಡಿದೆ? ಯಾರಿದ್ರೂ ಇಷ್ಟು ಮಾಡ್ತಿದ್ರು ಬಿಡು’ ಅಂದುಬಿಡುತ್ತಾರೆ. ಕೆಲವು ಸಲ ನಾವು ಕೂಡ ಅವರು ‘ತಮ್ಮ ಗರಿಷ್ಠ ಮಿತಿ’ ಎಂದು ತಿಳಿದ ಕೆಲಸದ ಬಗ್ಗೆ ಹೀಗೆಯೇ ಪ್ರತಿಕ್ರಯಿಸಬಹುದು. ಅಂತಹ ಸನ್ನಿವೇಶದಲ್ಲಿ ‘ ಅಯ್ಯೋ, ಇದರಿಂದ ಆಚೆಗೆ ಇನ್ನೇನು ಮಾಡಲಪ್ಪಾ!?’ ಎಂಬ ಅಸಹಾಯಕ ಭಾವಕ್ಕೆ […]
ಕನ್ನಡ ವಿವೇಕ
ಬದುಕನ್ನು ಹಸನು ಮಾಡಲು ಕನ್ನಡ ಭಾಷೆ, ಸಂಸ್ಕೃತಿಯು ನಮಗೆ ನೀಡಿದ ಕೆಲವು ಗಾದೆ, ಸೂಕ್ತಿ, ನಾಣ್ಣುಡಿ, ಲೋಕೋಕ್ತಿ, ನಲ್ವಾತು ಇವುಗಳಲ್ಲಿ ವಾರಕ್ಕೆ ಒಂದರ ಕಿರು ಪರಿಚಯವನ್ನು ಈ ಅಂಕಣದಲ್ಲಿ ಮಾಡಿಕೊಡಲಾಗುತ್ತದೆ.