ಕನ್ನಡ ವಿವೇಕ

ಬದುಕನ್ನು ಹಸನು ಮಾಡಲು ಕನ್ನಡ ಭಾಷೆ, ಸಂಸ್ಕೃತಿಯು ನಮಗೆ ನೀಡಿದ ಕೆಲವು ಗಾದೆ, ಸೂಕ್ತಿ, ನಾಣ್ಣುಡಿ, ಲೋಕೋಕ್ತಿ, ನಲ್ವಾತು ಇವುಗಳಲ್ಲಿ ವಾರಕ್ಕೆ ಒಂದರ ಕಿರು ಪರಿಚಯವನ್ನು ಈ ಅಂಕಣದಲ್ಲಿ ಮಾಡಿಕೊಡಲಾಗುತ್ತದೆ.

ಕನ್ನಡ ಗಾದೆಮಾತು – ಸಾಲ ಕೊಟ್ಟು ಸ್ನೇಹ ಕಳೆದುಕೊಂಡಂಗೆ. 

ನಾವು ಯಾರಿಗಾದರೂ ಸಾಲ ಕೊಟ್ಟರೆ ಅವರು ಅದನ್ನು ಮರಳಿಸುವ ತನಕ ನಮ್ಮ‌ ಮನಸ್ಸು ಸಮಾಧಾನವಾಗಿರುವುದಿಲ್ಲ. ನಾವು ಅದನ್ನು ಮರಳಿಸುವಂತೆ ಅವರ ಬಳಿ ಕೇಳಿದಾಗ ಕೆಲವರು ಕಾಳಜಿ, ಕೃತಜ್ಞತೆಗಳಿಂದ, ಇನ್ನು ಕೆಲವರು ಗೊಣಗಿಕೊಂಡು ಹಣವನ್ನು ಮರಳಿಸಬಹುದು, ಇನ್ನು ಕೆಲವು ಭಂಡರು ಹಣವನ್ನು ಮರಳಿಸದೆಯೂ ಇರಬಹುದು. ಆದರೆ ನಾವು ಇದೇ ಸಾಲವನ್ನು ಸ್ನೇಹಿತರಿಗೆ ಕೊಟ್ಟೆವೆಂದರೆ ಭಾರೀ ಪೀಕಲಾಟಕ್ಕೆ ಸಿಕ್ಕಿ ಹಾಕಿಕೊಳ್ಳುತ್ತೇವೆ. ಹಣವನ್ನು ವಾಪಸ್ ಕೇಳದಿದ್ದರೆ ಹಣವನ್ನು  ಕಳೆದುಕೊಳ್ಳಬೇಕಾಗುತ್ತೆ, ವಾಪಸ್ ಕೇಳಿದರೆ ಸ್ನೇಹಿತನಿಗೆ ಇರಿಸುಮುರಿಸಾಗುವುದರಿಂದ ಸ್ನೇಹವನ್ನು ಕಳೆದುಕೊಳ್ಳಬೇಕಾಗುತ್ತದೆ. ಬಹುಶಃ ಇದಕ್ಕಾಗಿಯೇ ಈ […]

ಕನ್ನಡ ಗಾದೆಮಾತು – ನಮ್ಮೋರಿಗೆ ಮುಳುಗಿ ಬಾ ಸಟ್ಟುಗ, ಅನ್ನಿಗರಿಗೆ ತೇಲಿ ಬಾ ಸಟ್ಟುಗ.

ವಿಚಿತ್ರ ಅನ್ನಿಸಿದರೂ  ಕುಟುಂಬಗಳಲ್ಲಿ  ನಿಜವಾಗಿಯೂ ನಡೆಯುವ ಒಂದು ಪಕ್ಷಪಾತವನ್ನು ಈ ಗಾದೆ ಮಾತು ಪರಿಚಯಿಸಿದೆ.  ಮನೆಗಳಲ್ಲಿ ತುಂಬ ಜನ ಒಟ್ಟಿಗೆ ಊಟಕ್ಕೆ ಕುಳಿತಾಗ ಬಡಿಸುವವರು ತಮಗೆ ಇಷ್ಟ ಇರುವವರಿಗೆ ಸಾರಿನ ಹೋಳುಗಳು ಜಾಸ್ತಿ ಬರುವಂತೆ ಸಟ್ಟುಗ ಅಥವಾ ಸೌಟನ್ನು ಪಾತ್ರೆಯ ಆಳಕ್ಕೆ ಹೋಗುವಂತೆ ಮುಳುಗಿಸಿ‌ ಬಡಿಸುವುದು, ತಮಗೆ ಇಷ್ಟ ಇಲ್ಲದವರಿಗೆ ಸಟ್ಟುಗವನ್ನು ಮೇಲೆ ಮೇಲೆಯೇ  ತೇಲಿಸಿ ನೀರು ನೀರಾದ ಸಾರನ್ನು ಬಡಿಸುವುದು – ಹೀಗೆ ಮಾಡುತ್ತಾರೆ. ‌ಈ ರೀತಿಯಲ್ಲಿ ತಮ್ಮ ಸಹಜೀವಿಗಳ ನಡುವೆ ಕೆಲವೊಮ್ಮೆ ಬಹಳ ಸೂಕ್ಷ್ಮವಾದ ರೀತಿಯಲ್ಲಿ […]

ಕನ್ನಡ ಗಾದೆಮಾತು – ಬಾಯಿದ್ದೋನಿಗೆ ಬರಗಾಲವಿಲ್ಲ, ರಾಗವಿದ್ದೋನಿಗೆ ಬೇಜಾರಿಲ್ಲ.

ಜನರೊಂದಿಗೆ ನಿಸ್ಸಂಕೋಚವಾಗಿ ಮಾತಾಡಿಕೊಂಡಿರುವವರಿಗೆ ಬದುಕು ಸಮೃದ್ಧವಾಗಿರುತ್ತದೆ ಎಂಬುದು ನಾವು ಸಾಮಾನ್ಯವಾಗಿ ಗಮನಿಸುವ ಸಂಗತಿ.‌ ಯಾರೋ ಕಾಫಿ ಕುಡಿಸುತ್ತಾರೆ, ಇನ್ಯಾರೋ ಊಟಕ್ಕೆ ಕರೆಯುತ್ತಾರೆ, ಮತ್ಯಾರೋ ತಮ್ಮ ಮನೆಯಲ್ಲಿ ಆಶ್ರಯ ಕೊಡುತ್ತಾರೆ, ಅಥವಾ ಎಲ್ಲಿ ಸಹಾಯ ಸಿಗುತ್ತದೆ ಎಂದು ಹೇಳುತ್ತಾರೆ‌‌‌‌. ಹೀಗಾಗಿ ಬಾಯಿ ಇದ್ದವರು ಬರಗಾಲವನ್ನು ಅನುಭವಿಸುವ ಪ್ರಶ್ನೆ ಉದ್ಭವಿಸುವುದಿಲ್ಲ. ಇದೇ  ರೀತಿಯಲ್ಲಿ, ಹಾಡಲು ಬರುವವರು ಒಂಟಿಯಾಗಿದ್ದರೂ ಯಾವುದೋ ಹಾಡನ್ನು ಗುನುಗಿಕೊಂಡು ಸಂತೋಷದಿಂದ ತಮ್ಮ ಪಾಡಿಗೆ ತಾವು ಸಮಯ ಕಳೆಯಬಲ್ಲರು. ಅವರಿಗೆ ಯಾರೂ ತಮ್ಮನ್ನು ಮಾತಾಡಿಸುತ್ತಿಲ್ಲ ಎಂಬ ಕೊರಗು ಉದ್ಭವಿಸುವುದಿಲ್ಲ. […]

ಕನ್ನಡ ಗಾದೆಮಾತು – ಇಪ್ಪತ್ತಕ್ಕೆ ಯಜಮಾನಿಕೆ ಬೇಡ, ಎಪ್ಪತ್ತಕ್ಕೆ ಕೆಮ್ಮು ಬೇಡ.

ಹಿರಿಯರ ಜೀವನಾನುಭವದ ಸಾಕ್ಷಿ ಈ ಗಾದೆಮಾತು. ಇಪ್ಪತ್ತನೆಯ ವಯಸ್ಸಿನಲ್ಲಿ ಮನುಷ್ಯನ ಮೆದುಳು ಸಂಪೂರ್ಣವಾಗಿ ಬೆಳೆದಿರುವುದಿಲ್ಲ. ಹೀಗಾಗಿ ದೊಡ್ಡ ದೊಡ್ಡ ಜವಾಬ್ದಾರಿಗಳು ಹಾಗೂ ನಿರ್ಧಾರಗಳನ್ನು ಬೇಡುವ ಮನೆಯ ಜವಾಬ್ದಾರಿ ವಹಿಸಲು ಆ ವಯಸ್ಸಿನ ಯುವಕ/ಯುವತಿಯರಿಗೆ ಸಾಧ್ಯ ಆಗುವುದಿಲ್ಲ. ಇದೇ ರೀತಿಯಲ್ಲಿ ಎಪ್ಪತ್ತರ ಇಳಿವಯಸ್ಸಿನಲ್ಲಿ ಕೆಮ್ಮು ಅಥವಾ ಗೂರಲು ರೋಗವು ಮನುಷ್ಯನನ್ನು ಬಹುವಾಗಿ ದಣಿಸುತ್ತದೆ. ಬೇಗ ವಾಸಿಯಾಗದ ಈ ರೋಗ ಬಂದಿತೆಂದರೆ ನಿದ್ದೆ, ನೆಮ್ಮದಿ ದೂರವಾದವೆಂದೇ ಅರ್ಥ. ಅದಕ್ಕಾಗಿಯೇ ಈ ಗಾದೆಮಾತು ‘ಇಪ್ಪತ್ತಕ್ಕೆ ಯಜಮಾನಿಕೆ ಬೇಡ, ಎಪ್ಪತ್ತಕ್ಕೆ ಕೆಮ್ಮು ಬೇಡ’ […]

ಕನ್ನಡ ಗಾದೆಮಾತು – ಆಳಾಗಿ‌ ದುಡಿ, ಅರಸಾಗಿ ಉಣ್ಣು.

ಒಳ್ಳೆಯ ಬದುಕನ್ನು ನಮ್ಮದಾಗಿಸಿಕೊಳ್ಳುವುದು ಹೇಗೆ ಎಂಬುದನ್ನು ಒಂದೇ ವಾಕ್ಯದಲ್ಲಿ ಹೇಳಿಕೊಡುವ ಗಾದೆಮಾತಿದು. ದುಡಿಯುವಾಗ ಆಳಿನಂತೆ ನಾವು ಕಷ್ಟ ಪಟ್ಟು ದುಡಿಯಬೇಕು, ಅಂದರೆ ಪರಿಶ್ರಮ ಹಾಕಬೇಕು‌. ಆದರೆ, ನಮ್ಮ‌ ದುಡಿತದ ಫಲವನ್ನು ಉಣ್ಣುವಾಗ ರಾಜನಂತೆ ಖುಷಿಯಿಂದ, ಹಕ್ಕಿನಿಂದ ಉಣ್ಣಬೇಕು. ರಟ್ಟೆ ಮುರಿದು ದುಡಿಯಬೇಕು, ಚಪ್ಪರಿಸಿ ಸಂತೋಷವಾಗಿ ಉಣ್ಣಬೇಕು. ಇದೇ ಅಲ್ಲವೆ ಸಾರ್ಥಕ ಬದುಕು‌! ದುಡಿಯದೆ ಸೋಮಾರಿಯಾಗಿ ಅಥವಾ ದುಡಿತದಿಂದ ಗಳಿಸಿದ ಫಲವನ್ನು ಉಣ್ಣದೆ ಗೋಳುಮಾರಿಯಾಗಿ ಬದುಕುವುದೊಂದು ಬದುಕೇ? ನಮ್ಮ ಜೀವನವನ್ನು ಅರ್ಥಪೂರ್ಣ ಹಾಗೂ ರಸಮಯ ಮಾಡುವ ಸರಳ ಸೂತ್ರವಲ್ಲವೆ […]

ಕನ್ನಡ ಗಾದೆ ಮಾತು – ಕಾಲ‌ ಹೋಗ್ತದೆ, ಮಾತು ನಿಲ್ತದೆ.

ನಮ್ಮ‌ ಹಿರಿಯರ ಜೀವನಾನುಭವದ ಸಾರ ಈ ಗಾದೆಮಾತು. ಮಾತು ಅನ್ನುವುದು ಎಂತಹ ಮಹತ್ವದ ವಿಷಯ ಎಂಬುದನ್ನು ನಾವು ಅನೇಕ ಸಲ ಅರ್ಥ ಮಾಡಿಕೊಳ್ಳುವುದಿಲ್ಲ.‌ ಒಬ್ಬ ವ್ಯಕ್ತಿಯು ಕೋಪದಲ್ಲೋ, ಅವಿವೇಕದಿಂದಲೋ, ಅಥವಾ ತುಂಬ ಯೋಚಿಸಿಯೋ ಆಡುವ ಒಂದು ಮಾತು, ಕೇಳುಗನ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದುಬಿಡುತ್ತದೆ. ಅದರಲ್ಲೂ ಇನ್ನೂ ರೂಪುಗೊಳ್ಳುತ್ತಿರುವ ವಯಸ್ಸಿನ ಮಕ್ಕಳ ಮೇಲೆ ಇಂತಹ ಮಾತುಗಳ ಪ್ರಭಾವ ಬಹು ಹೆಚ್ಚು. ಎಷ್ಟೇ ಕಾಲ ಸರಿದರೂ ಆ ಮಾತಿನ ಪರಿಣಾಮ ಕಡಿಮೆ ಆಗುವುದಿಲ್ಲ! ಇದಕ್ಕಾಗಿಯೇ ಹಿರಿಯರು ಈ ಗಾದೆಮಾತನ್ನು ಹೇಳಿದ್ದಾರೆ.‌ […]

ಕನ್ನಡ ಗಾದೆಮಾತು – ಐದೂ ಬೆಳ್ಳು ಒಂದೇ ಸಮಕ್ಕೆ ಇರ್ತವಾ?

ಜೀವನದ ದಾರಿಯಲ್ಲಿ ನಮಗೆ ಅಗತ್ಯವಾದ ಒಂದು ವಿವೇಕದ ಮಾತು ಇದು. ನಾವು ಯಾವುದೇ ಸಮುದಾಯದ ಜೊತೆ ಕೆಲಸ ಮಾಡುವಾಗ ಈ ಮಾತು ಬಹಳ ಉಪಯೋಗಕ್ಕೆ ಬರುತ್ತದೆ. ನಮ್ಮ ಕೈಬೆರಳುಗಳೆಲ್ಲವೂ ಒಂದೇ ಅಳತೆ, ಗಾತ್ರದಲ್ಲಿ ಇರುವುದಿಲ್ಲ. ಆದರೆ, ಬೆರಳುಗಳ ಅಸಮಾನ ನೆಲೆಯು ಅವು ಒಂದು ಮುಷ್ಟಿಯಾಗಲು ಮತ್ತು ಅಳತೆ, ಗಾತ್ರದ ಬೇರೆ ಬೇರೆ ವಸ್ತುಗಳನ್ನು ಬಿಗಿಯಾಗಿ ಹಿಡಿದುಕೊಳ್ಳಲು ಅಗತ್ಯ. ನಮ್ಮ ಬೆರಳುಗಳು ಹೀಗಿರುವುದು, ನೂರಾರು ವರ್ಷಗಳ ಜೀವವಿಕಾಸದ ಫಲ ಎಂದು ಜೀವಶಾಸ್ತ್ರಜ್ಞರು ಹೇಳುತ್ತಾರೆ. ಈಗ ಜನರೊಂದಿಗಿನ ನಮ್ಮ ಅನುಭವದ […]

ಕನ್ನಡ ಗಾದೆಮಾತು – ಮಟ್ಟು ತಿಳೀದೆ ಮಾತಾಡಬಾರ್ದು.

ಮಟ್ಟು ಎಂದರೆ ಧಾಟಿ, ರೀತಿ‌ ಎಂದು ಅರ್ಥ. ನಾವು ಯಾರೊಂದಿಗಾದರೂ ಸಂಭಾಷಣೆ ಮಾಡುವಾಗ ಅವರ ಮನ:ಸ್ಥಿತಿ, ಮಾತಿನ ಧಾಟಿ, ಸಮಯ ಸಂದರ್ಭ ಇವುಗಳನ್ನು ನೋಡಿಕೊಂಡು ಮಾತಾಡಬೇಕು. ಅವರು ನೇರವಾಗಿ, ಸರಳವಾಗಿ ಮಾತಾಡುತ್ತಿದ್ದಾರೆಯೊ ಇಲ್ಲವೆ ವ್ಯಂಗ್ಯದ ಧಾಟಿಯಲ್ಲಿ ಮಾತಾಡುತ್ತಿದ್ದಾರೆಯೊ ಎಂಬುದನ್ನು ಅರಿತು‌ ಮಾತಾಡಬೇಕು.‌ ಆಗ ಮಾತ್ರ ನಮ್ಮ ಮಾತಿಗೆ ಗೌರವ ಸಿಗುತ್ತದೆ. ಜನರೊಂದಿಗಿನ ಒಡನಾಟದಲ್ಲಿನ ಒಂದು ಸೂಕ್ಷ್ಮವನ್ನು ಈ‌ ಗಾದೆಮಾತು ಚೆನ್ನಾಗಿ ಹೇಳಿದೆ. ಏನಂತೀರಿ? Kannada proverb – Mattu thileedhe maathadabardu ( Do not speak […]

ಕನ್ನಡ ಗಾದೆಮಾತು – ನೀಡಿದ ಕೈಗೆ ನೆರವಾಗಬೇಕು. 

ಉತ್ತಮವಾದ ಜೀವನ ಮೌಲ್ಯವೊಂದನ್ಬು ಸರಳವಾಗಿ ಹೇಳುವ ಗಾದೆಮಾತು ಇದು. ನಮಗೆ ಅನ್ನ ನೀಡಿದ ಕೈಯಾಗಲಿ, ಸಹಾಯ ನೀಡಿದ ಕೈಯಾಗಲಿ ಆ ಸಮಯದಲ್ಲಿ ನಮಗೆ ಅಮೂಲ್ಯವಾದ ಉಪಕಾರ ಮಾಡಿರುತ್ತದೆ. ಆ ಕೈ ಅಂದರೆ ಅಂತಹ ಕೊಡುಗೈ ಮನಸ್ಸಿನ ವ್ಯಕ್ತಿಗಳು ಕಷ್ಟದಲ್ಲಿದ್ದಾಗ ಅಥವಾ ನಮ್ಮ ಸಹಾಯವು ಅವರಿಗೆ ಬೇಕಾದ ಪರಿಸ್ಥಿತಿ ಬಂದಾಗ, ನಾವು ಅವಶ್ಯವಾಗಿ ಈ‌ ದಿಸೆಯಲ್ಲಿ ಕಾರ್ಯಪ್ರವೃತ್ತರಾಗಿ, ಅವರಿಗೆ ಅಗತ್ಯವಾಗಿರುವ ಸೇವೆಯನ್ನು ನೀಡಬೇಕು. ಉಪಕಾರ ಸ್ಮರಣೆಯ ಮೌಲ್ಯವನ್ನು ಹೇಳಿಕೊಡುವಂತಹ ಉತ್ತಮ ಗಾದೆಮಾತಿದು. Kannada proverb – Needida kaige […]

ಕನ್ನಡ ಗಾದೆಮಾತು – ಕಷ್ಟವಿಲ್ಲದೆ ಇಷ್ಟ ಈಡೇರಲ್ಲ.

ಮನುಷ್ಯನು ಇಷ್ಟಪಟ್ಟ ಸಂಗತಿಗಳು ಅವನಿರುವಲ್ಲಿಗೇ ತಾನಾಗಿ ಬಂದುಬಿಡುವುದಿಲ್ಲ‌.  ಅವಕ್ಕಾಗಿ ನಾವು ಬಹಳ ಪರಿಶ್ರಮ ಪಡಬೇಕಾಗುತ್ತದೆ.‌  ಶಿಕ್ಷಣದಲ್ಲಿ ಹೆಚ್ಚಿನ ಅಂಕಗಳ ಗಳಿಕೆ, ಉದ್ಯೋಗದಲ್ಲಿ ಉನ್ನತ ಹಂತ ಪಡೆಯುವಿಕೆ, ಹೆಚ್ಚಿನ ವಿದ್ಯಾರ್ಹತೆ, ಸಮಾಜದಲ್ಲಿ ಗೌರವಾರ್ಹ ಸ್ಥಾನಮಾನ – ಇವೆಲ್ಲಕ್ಕೂ ಛಲ ಬಿಡದ ನಿರಂತರ ಪರಿಶ್ರಮ ಬೇಕು‌.‌ ‘ಇಲ್ಲ, ನನಗೆ ಇಷ್ಟೆಲ್ಲ ಕಷ್ಟ ಪಡಲು ಆಗುವುದಿಲ್ಲ’ ಎನ್ನುವವರಿಗೆ ಯಶಸ್ಸೆಂಬ ದೇವತೆ ಒಲಿಯುವುದಿಲ್ಲ. ಹೀಗಾಗಿ ಈ ಗಾದೆಮಾತು ಒಂದು ವಾಸ್ತವಿಕ ವಿಷಯವನ್ನು ಹಾಗೂ ಯಶಗಳಿಕೆಯ ಬಗೆಗೆ ಒಂದು ಕಿವಿಮಾತನ್ನು ಹೇಳುತ್ತದೆ ಅನ್ನಬಹುದು‌. Kannada […]

Page 5 of 20

Kannada Sethu. All rights reserved.