ಮನುಷ್ಯನ ಆಸೆಗೆ ಮಿತಿ ಇಲ್ಲ. ಉಪ್ಪು ಸಿಗುವವರೆಗೂ ಅದರ ಚಿಂತೆ ಮಾಡುವ ಮನುಷ್ಯ ಅದು ಸಿಕ್ಕಿದ ತಕ್ಷಣ ತುಪ್ಪದ ಚಿಂತೆ ಮಾಡುತ್ತಾನೆ. ಇನ್ನು ತುಪ್ಪ ಸಿಕ್ಕಿದರೆ ಅವನಿಗೆ ತೃಪ್ತಿ ಆಗುತ್ತದೆಯೇ? ಇಲ್ಲ. ಮುಂದೆ ಅವನಿಗೆ ಕೊಪ್ಪರಿಗೆ ಹೊನ್ನಿನ ಚಿಂತೆ ಶುರುವಾಗುತ್ತದೆ! ಒಟ್ಟಿನಲ್ಲಿ ಎಷ್ಟಿದ್ದರೂ ಇನ್ನಷ್ಟಕ್ಕೆ ಆಸೆ ಪಡುವುದೇ ಮನುಷ್ಯನ ಸ್ವಭಾವ. ಪುರಂದರದಾಸರು ಸಹ ‘ಇಷ್ಟು ದೊರಕಿದರೆ ಅಷ್ಟು ಬೇಕೆಂಬಾಸೆ, ಅಷ್ಟು ದೊರಕಿದರೆ ಮತ್ತಿಷ್ಟರಾಸೆ’ ಎಂದು ಮನುಷ್ಯನ ಈ ಸ್ವಭಾವವನ್ನು ಬಯಲಿಗೆಳೆದಿದ್ದಾರೆ. ಈ ಗಾದೆಮಾತನ್ನು ಅರ್ಥ ಮಾಡಿಕೊಂಡರೆ ಬಹುಶಃ […]
ಕನ್ನಡ ವಿವೇಕ
ಬದುಕನ್ನು ಹಸನು ಮಾಡಲು ಕನ್ನಡ ಭಾಷೆ, ಸಂಸ್ಕೃತಿಯು ನಮಗೆ ನೀಡಿದ ಕೆಲವು ಗಾದೆ, ಸೂಕ್ತಿ, ನಾಣ್ಣುಡಿ, ಲೋಕೋಕ್ತಿ, ನಲ್ವಾತು ಇವುಗಳಲ್ಲಿ ವಾರಕ್ಕೆ ಒಂದರ ಕಿರು ಪರಿಚಯವನ್ನು ಈ ಅಂಕಣದಲ್ಲಿ ಮಾಡಿಕೊಡಲಾಗುತ್ತದೆ.