ಕನ್ನಡ ವಿವೇಕ

ಬದುಕನ್ನು ಹಸನು ಮಾಡಲು ಕನ್ನಡ ಭಾಷೆ, ಸಂಸ್ಕೃತಿಯು ನಮಗೆ ನೀಡಿದ ಕೆಲವು ಗಾದೆ, ಸೂಕ್ತಿ, ನಾಣ್ಣುಡಿ, ಲೋಕೋಕ್ತಿ, ನಲ್ವಾತು ಇವುಗಳಲ್ಲಿ ವಾರಕ್ಕೆ ಒಂದರ ಕಿರು ಪರಿಚಯವನ್ನು ಈ ಅಂಕಣದಲ್ಲಿ ಮಾಡಿಕೊಡಲಾಗುತ್ತದೆ.

ಕನ್ನಡ ಗಾದೆಮಾತು – ಹಾಳೂರಿಗುಳಿದವನೇ ಗೌಡ‌.‌

ಕನ್ನಡಿಗರು ಆಗಾಗ ಬಳಸುವ ಗಾದೆಮಾತು ಇದು‌. ಗೌಡ( ಗ್ರಾಮ ವೃದ್ಧ ಪದವು ‌ಸುಲಭೀಕರಣಗೊಂಡು ಜನರ ಬಾಯಲ್ಲಿ ಗೌಡ ಆಗಿದೆ).  ಗ್ರಾಮದಲ್ಲಿ ಹೆಚ್ಚಿನ ಸ್ಥಾನಮಾನ, ಆಸ್ತಿಪಾಸ್ತಿ ಮತ್ತು ಯಜಮಾನಿಕೆ ಇರುವಂತಹ ವ್ಯಕ್ತಿಯೇ ಗೌಡ‌‌. ಜನರಿದ್ದರೆ ಊರಿಗೆ ನೆಲೆ, ಜನರಿದ್ದರೆ ಗೌಡನಿಗೆ ಬೆಲೆ.‌ ಆದರೆ ಯಾವುದೋ ಕಾರಣಕ್ಕೆ ಜನರೆಲ್ಲ ಬೇರೆ ಊರಿಗೆ ಹೊರಟುಹೋಗಿ  ಆ ಊರು ಹಾಳೂರಾದರೆ? ಆಗ ಯಾವ ವ್ಯಕ್ತಿ ಆ ಊರಿನಲ್ಲಿ ಒಬ್ಬನೇ ಉಳಿದುಕೊಳ್ಳುತ್ತಾನೋ, ಅವನೇ ತನ್ನನ್ನು ತಾನು ಗೌಡ ಎಂದು ಕರೆದುಕೊಳ್ಳಬಹುದು! ಯಾಕೆಂದರೆ ಅದನ್ನು ಪ್ರಶ್ನೆ ಮಾಡಲು […]

ಕನ್ನಡ ಗಾದೆಮಾತು – ಕಾಯಿದ್ದ ಮರಕ್ಕೇ ಕಲ್ಲು ಬೀಳೋದು. 

ತುಂಬ ಕಷ್ಟ ಸುಖ ಕಂಡ ಹಿರಿಯರು ತಮ್ಮ ಜೀವನಾನುಭವವನ್ನು ಭಟ್ಟಿ ಇಳಿಸಿದ ಗಾದೆಮಾತಿದು. ಹಣ್ಣಿನ ತೋಪಿನಲ್ಲಿ ಯಾವ ಮರದಲ್ಲಿ ಹಣ್ಣು ಹೆಚ್ಚಾಗಿ ಬಿಟ್ಟಿರುತ್ತದೆಯೋ ಜನ  ಆ ಮರಕ್ಕೆ ತಾನೇ ಕಲ್ಲು ಹೊಡೆಯುವುದು? ಹೀಗೆಯೇ ಯಾವ ಮನುಷ್ಯರಲ್ಲಿ ಸಂಪನ್ಮೂಲ ( ಪ್ರತಿಭೆ, ಹಣ, ಕಾರ್ಯಸಾಮರ್ಥ್ಯ….ಇಂಥದ್ದು) ಇರುತ್ತದೋ ಅಂಥವರ ಮೇಲೆ ಬೇರೆಯವರ ಹಕ್ಕೊತ್ತಾಯ ಹೆಚ್ಚು.  ಅಸೂಯೆಯ ಮಾತುಗಳ ಪ್ರಹಾರ, ಕೆಲಸದ ಮೇಲೆ ಕೆಲಸ, ಆದೇಶದ ಮೇಲೆ ಆದೇಶ…ಹೀಗೆ ಅನೇಕ ಹೊಡೆತಗಳ ಪರಂಪರೆಗೆ ಅವರು ಒಳಗಾಗುತ್ತಾರೆ‌. ಹೀಗೆ ಕಷ್ಟ ಪಟ್ಟವರು ನೊಂದುಕೊಂಡಾಗ […]

ಕನ್ನಡ ಗಾದೆಮಾತು – ಬಳ್ಳಿಗೆ ಕಾಯಿ ಭಾರವಾ? ಮರಕ್ಕೆ ಬಿಳಲು ಭಾರವಾ?

ಕನ್ನಡ ಭಾಷೆಯಲ್ಲಿ ಬಹಳವಾಗಿ ಬಳಕೆಯಲ್ಲಿರುವ ಗಾದೆ ಮಾತಿದು. ಬಹಳ ನವಿರು, ಕೋಮಲ ಅನ್ನಿಸುವ ಬಳ್ಳಿಗಳು ದಪ್ಪ ದಪ್ಪವಾದ ದೊಡ್ಡ ಕಾಯಿಗಳನ್ನು ಆರಾಮವಾಗಿ ಧರಿಸಿರುತ್ತವೆ ; ಆಲದ ಮರದಂತಹ ಮರಗಳು ದೊಡ್ಡ ದೊಡ್ಡ ಬಿಳಲುಗಳನ್ನು ಸರಾಗವಾಗಿ ಧರಿಸಿರುತ್ತವೆ‌. ಇದೇ ರೀತಿಯಲ್ಲಿ ತಂದೆ ತಾಯಂದಿರು (೯೯ ಶೇಕಡ) ತಮಗೆ ಎಷ್ಟೇ ಬಡತನ ಇದ್ದರೂ, ಎಷ್ಟೇ ಮಕ್ಕಳಿದ್ದರೂ ಅವರನ್ನು ಭಾರ ಎಂದುಕೊಳ್ಳದೆ ಅವರನ್ನು ಪ್ರೀತಿಯಿಂದ ಸಾಕುತ್ತಾರೆ. ಇಂತಹ ಸಂದರ್ಭದಲ್ಲಿ ಹುಟ್ಟಿರಬಹುದಾದ ಗಾದೆ ಮಾತಿದು. ಹಳೆಯ ಕಾಲದಲ್ಲಿ, ವಿವಾಹಿತ ಹೆಣ್ಣುಮಕ್ಕಳು ತಮ್ಮ ಗಂಡನ […]

ಕನ್ನಡ ಗಾದೆಮಾತು – ಕಿಡಿ ಸಣ್ಣದಾದ್ರೂ ಕಾಡು ಸುಡಬಲ್ಲುದು.

ತುಂಬ ಅರ್ಥಪೂರ್ಣವಾದ ಗಾದೆಮಾತು ಇದು. ‌ಬೆಂಕಿ ಕಿಡಿ ಚಿಕ್ಕದು ಎಂದು ಅದನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಪುಟ್ಟ ಹುಲ್ಲಿನಿಂದ ಪ್ರಾರಂಭಿಸಿ ಪೊದೆ, ಗಿಡ, ಮರ ಎಲ್ಲವನ್ನೂ ಒಂದರ ಹಿಂದೆ ಒಂದರಂತೆ ಸುಡಬಲ್ಲುದು ಅದು. ಹಾಗೆಯೇ ಚಾಡಿಮಾತು, ಹೊಟ್ಟೆಕಿಚ್ಚು, ಒಳಸಂಚುಗಳಂತಹ ಕೆಟ್ಟ ಸಂಗತಿಗಳು ; ಶುರುವಿನಲ್ಲಿಯೇ ಅವುಗಳ ಬೇರು ಚಿವುಟದಿದ್ದರೆ ಇಡೀ ಬದುಕನ್ನೇ ಹಾಳು ಮಾಡಬಲ್ಲಂತಹ ಶಕ್ತಿ ಹೊಂದಿರುತ್ತವೆ‌‌. ಹೀಗಾಗಿ ಚಿಕ್ಕದೆಂದು ನಿರ್ಲಕ್ಷ್ಯ ಮಾಡದೆ ಇಂತಹ ‘ಬೆಂಕಿಯ ಕಿಡಿ’ಗಳನ್ನು ನಾವು ಬೇಗನೆ ನಂದಿಸಬೇಕು. ಇಲ್ಲದಿದ್ದರೆ ನಮ್ಮ ಬದುಕೆಂಬ ಶ್ರೀಮಂತ ಕಾಡು ನಾವು […]

ಕನ್ನಡ ಗಾದೆಮಾತು – ಆರಕ್ಕೇರಲಿಲ್ಲ ಮೂರಕ್ಕಿಳಿಯಲಿಲ್ಲ.

ಕನ್ನಡ ಭಾಷೆಯಲ್ಲಿ ಆಗಾಗ ಬಳಕೆಯಾಗುವ ಒಂದು ಗಾದೆಮಾತಿದು. ಜೀವನದ ಕೆಲವು ಸನ್ನಿವೇಶಗಳು ಹೇಗಿರುತ್ತವೆ ಅಂದರೆ ನಾವು ಅಂದುಕೊಂಡಂತೆ ಯಾವುದೇ ಉತ್ತಮಿಕೆ, ಅಭಿವೃದ್ಧಿ ಆಗುತ್ತಿರುವುದಿಲ್ಲ, ಹಾಗೆಂದು ತೀರಾ ಇಳಿತವೂ ಆಗುತ್ತಿರುವುದಿಲ್ಲ. ಉದಾಹರಣೆಗೆ ಸೀಮಿತ ಸಂಬಳದ ಮಧ್ಯಮ ವರ್ಗದ ಜೀವನಕ್ರಮ,  ತೀರಾ ಹೆಚ್ಚು ಅಂಕ ತೆಗೆದುಕೊಳ್ಳದ ಆದರೆ ನಪಾಸಾಗದ ವಿದ್ಯಾರ್ಥಿಯ ವಿದ್ಯಾಭ್ಯಾಸ ಪರಿಸ್ಥಿತಿ, ಶಾಂತವಾಗಿ ಸಾಗುವ ನಿವೃತ್ತಿ ಜೀವನ…ಇಂಥವುಗಳ ಬಗ್ಗೆ ವ್ಯಾಖ್ಯಾನ ಮಾಡುವಾಗ “ಆರಕ್ಕೇರಲಿಲ್ಲ, ಮೂರಕ್ಕಿಳಿಯಲಿಲ್ಲ” ಎಂಬ ಗಾದೆ ಮಾತನ್ನು ಬಳಸುತ್ತಾರೆ.‌ ಹೆಚ್ಚು ಉತ್ಸಾಹವನ್ನೂ ಮೂಡಿಸದ ಆದರೆ ಅಂತಹ ಆತಂಕಕಾರಿಯೂ […]

ಕನ್ನಡ ಗಾದೆಮಾತು – ದೂರದ ನೀರು‌ ದಾಹಕ್ಕಿಲ್ಲ.

ನೀರಿನ ನೆಪದಲ್ಲಿ ಮನುಷ್ಯ ಸಂಬಂಧಗಳ ಬಗ್ಗೆ ಒಂದು ಮುಖ್ಯವಾದ ಒಳನೋಟವನ್ನು ಕೊಡುವ ಗಾದೆ ಮಾತು ಇದು. ನಮಗೆ ತುಂಬ ಬಾಯಾರಿಕೆಯಾದಾಗ  ನೀರು ತಕ್ಷಣ ಹತ್ತಿರದಲ್ಲಿ ಸಿಕ್ಕಿದರಷ್ಟೆ ನಮಗೆ ಅದರಿಂದ ಪ್ರಯೋಜನ. ಆದರೆ ಎಲ್ಲೋ ದೂರದಲ್ಲಿ ಎಷ್ಟು ನೀರಿದ್ದರೂ ಅದು ನಮ್ಮ ದಾಹ ಶಮನಕ್ಕೆ ಒದಗುವುದಿಲ್ಲ. ಹಾಗೆಯೇ, ನಾವು ಯಾರನ್ನು ಆತ್ಮೀಯರೆಂದು ಭಾವಿಸುತ್ತೇವೋ ಅವರು ನಮ್ಮ ಕಷ್ಟದ ಸಮಯದಲ್ಲಿ ಲಭ್ಯರಾಗಿ ನಮ್ಮ ಬೆಂಬಲಕ್ಕೆ ಸಿಗಬೇಕು.‌ಅದು ಬಿಟ್ಟು ಅವರು ಎಲ್ಲೋ ದೂರದಲ್ಲಿ ಇದ್ದುಬಿಟ್ಟರೆ ಏನು ಪ್ರಯೋಜನ? ಬಹುಶಃ,  ನಾವು ನಮ್ಮ […]

ಕನ್ನಡ ಗಾದೆಮಾತು – ಧೂಪ ಹಾಕಿದ್ರೆ ಪಾಪ ಹೋದೀತೆ?

ಪ್ರಾಸಬದ್ಧವಾದ ಮತ್ತು ಅರ್ಥಪೂರ್ಣವಾದ ಒಂದು ಕನ್ನಡ ಗಾದೆಮಾತು ಇದು‌. ಜನರು ಸುಳ್ಳು, ಮೋಸ, ಕಳವು, ಪರಪೀಡನೆ, ಜೀವಹಿಂಸೆ ಮುಂತಾದ ಪರಪೀಡನೆಗಳಲ್ಲಿ ತೊಡಗಿ (ಅಂದರೆ ಅನೇಕ ಪಾಪಗಳನ್ನು ಮಾಡಿ), ನಂತರ, ದೇವರ ಪೂಜೆಯನ್ನು ಧೂಪ ದೀಪಗಳೊಂದಿಗೆ ವಿಜೃಂಭಣೆಯಿಂದ ಮಾಡಿಬಿಟ್ಟರೆ, ಅವರು ಮಾಡಿದ ಪಾಪಕಾರ್ಯಗಳು ಮಾಯವಾಗಿಬಿಡುವವೇನು? ಖಂಡಿತ ಇಲ್ಲ. ಹೀಗಾಗಿ ‘ಪಾಪಕಾರ್ಯಗಳನ್ನು ಯಾವುದೇ ಕಾರಣಕ್ಕೂ ಮಾಡಬಾರದು ಮತ್ತು ಎಷ್ಟು ಧೂಪ ಹಾಕಿ ಪೂಜೆ ಮಾಡಿದರೂ ಈ ಕೆಟ್ಟ ಕೆಲಸಗಳ ಪರಿಣಾಮ ಹೋಗುವುದಿಲ್ಲ’ ಎಂಬುದು ಈ ಗಾದೆಮಾತು ಕಲಿಸುವ ಜೀವನಪಾಠವಾಗಿದೆ.  Kannada […]

ಕನ್ನಡ ಗಾದೆಮಾತು – ಹಂಚಿ ಉಂಡರೆ ಹಸಿವಿಲ್ಲ. 

ಮೂರೇ ಪದಗಳಿದ್ದರೂ ಮಾರುದ್ದದ ಪ್ರೀತಿಭಾವ ತುಂಬಿರುವ ಗಾದೆಮಾತು ಇದು. ಸಾಮಾನ್ಯವಾಗಿ ಅವರವರ ಊಟದ ಬುತ್ತಿಯನ್ನು ತರುವ ಎಂಟು-ಹತ್ತು  ಜನ ಒಂದೆಡೆ ಸೇರಿದ್ದಾರೆ  ಎಂದಿಟ್ಟುಕೊಳ್ಳೋಣ. ಅವರಲ್ಲಿ ಒಬ್ಬರು ಜಾಸ್ತಿ, ಒಬ್ಬರು ಕಡಿಮೆ ಆಹಾರ ತಂದಿರಬಹುದು‌, ಇನ್ನೊಬ್ಬರು ಅಂದು ಬುತ್ತಿಯನ್ನೇ ತರದಿರಬಹುದು. ಆದರೆ ತಂದಿರುವುದನ್ನು ಅವರು ಎಲ್ಲರೂ ಹಂಚಿಕೊಂಡು ತಿಂದರೆ ಎಲ್ಲರ ಹೊಟ್ಟೆಯೂ ತುಂಬುತ್ತದೆ! ಹೆಚ್ಚು ಕಡಿಮೆಗಳು ಸೇರಿ ಏನೋ ಒಂದು ಸಮತೋಲನವೂ ಉಂಟಾಗುತ್ತದೆ, ಇದರೊಂದಿಗೆ ಒಟ್ಟಿಗೆ ಊಟ ಮಾಡಿದ/ತಿಂಡಿ ತಿಂದ ಸಂತೋಷವೂ ಇರುತ್ತದೆ ಮತ್ತು ಯಾರೂ ಹಸಿವಿನಿಂದ ನರಳುವುದಿಲ್ಲ. […]

ಕನ್ನಡ ಗಾದೆಮಾತು – ಕುಯ್ಯಲಾರದೋನಿಗೆ ಕುಡಗೋಲೊಂಬತ್ತು.

ಕೆಲಸದ ವಿಷಯ ಬಂದರೆ  ನಾವು ಎರಡು ತರಹದ ಜನರನ್ನು ನೋಡಬಹುದು. ‌ಒಂದು, ಯಾವುದೇ ನೆಪ ಹೇಳದೆ ಅಚ್ಚುಕಟ್ಟಾಗಿ ಕೆಲಸ ಮಾಡುವವರು, ಇನ್ನೊಂದು, ಕೆಲಸ ಮಾಡದೆ ಬರೀ ನೆಪ ಹೇಳುವವರು‌.‌ ಈ ಎರಡನೆಯ ರೀತಿಯ ಜನರು ತಮ್ಮ ಕೈಲಿ ಕೆಲಸ ಸಾಗದು ಎಂಬ ಕಾರಣಕ್ಕಾಗಿ ಸಮಯ, ಸಲಕರಣೆಗಳು, ಸಂಗಡಿಗರು, ಸನ್ನಿವೇಶ ಎಲ್ಲವನ್ನೂ ದೂರುತ್ತಾ ಇರುತ್ತಾರೆ. ಉದಾಹರಣೆಗೆ ಹೊಲದಲ್ಲಿ ಪೈರು ಕುಯ್ಯುವವನು, ಬೆನ್ನು ಬಾಗಿಸಿ, ಬಾಯಿ ಮುಚ್ಚಿಕೊಂಡು ತನ್ನ ಕುಡುಗೋಲಿನಿಂದ( ಕೃಷಿಯಲ್ಲಿ ಬಳಸುವ, ಬಾಗಿರುವ ಒಂದು ರೀತಿಯ ಕತ್ತಿ) ಪೈರು ಕೊಯ್ಯಬೇಕಲ್ಲವೆ? […]

ಕನ್ನಡ ಗಾದೆಮಾತು- ಕಳ್ಳನಿಗೊಂದು ಪಿಳ್ಳನೆವ.‌

ಈ ಗಾದೆಮಾತು ಕನ್ನಡ ಭಾಷೆಯಲ್ಲಿ ಸಾಕಷ್ಟು ಬಳಕೆಯಲ್ಲಿದೆ.‌ ಯಾರಾದರೂ ತಮ್ಮ  ಕೆಟ್ಟ ಚಟದಲ್ಲೋ, ದುರಾಭ್ಯಾಸದಲ್ಲೋ ( ಸಿಗರೇಟು, ಕುಡಿತ, ಜೂಜು, ಮಾದಕ ದ್ರವ್ಯ ವ್ಯಸನ)  ತೊಡಗಲು ಸಣ್ಣ ನೆಪ ಸಿಕ್ಕಿದರೂ ಸಾಕು, ಆ ಅವಕಾಶವನ್ನು ಬಿಡದೆ ಬಳಸಿಕೊಳ್ಳುತ್ತಾರಲ್ಲವೆ? ಅಂತಹ ಸಂದರ್ಭಗಳಲ್ಲಿ ಈ ಗಾದೆಮಾತನ್ನು ಬಳಸಲಾಗುತ್ತದೆ. ಜೊತೆಗೆ, ಕೆಲಸಗಳ್ಳರು ತಮಗೊಂದು ಸಣ್ಣ ನೆವ ಸಿಕ್ಕಿದರೂ ಸಾಕು, ಕೆಲಸದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆಗಲೂ ಈ ಮಾತು ಬಳಕೆಯಾಗುತ್ತದೆ. ಪಿಳ್ಳೆ ಎಂದರೆ ಪುಟ್ಟ, ಚಿಕ್ಕ ಎಂದು ಅರ್ಥ.‌ ಒಟ್ಟಿನಲ್ಲಿ ಜನ ಚಿಕ್ಕ […]

Page 7 of 20

Kannada Sethu. All rights reserved.