ಚಿತ್ರಬಟಾಣಿ ಕೇಳಿದ ಪುಟಾಣಿ

ಮಕ್ಕಳಿಗೆ ಊಟತಿಂಡಿ ಮಾಡಿ ಹಾಕುವ ತಾಯಂದಿರಿಗೆ ಮಕ್ಕಳ ಬೇಡಿಕೆಗಳನ್ನು ಪೂರೈಸುವ ಸಂದರ್ಭದಲ್ಲಿ  ಕೆಲವೊಮ್ಮೆ ನಗೆ ಹುಟ್ಟಿಸುವ  ಅನುಭವಗಳಾಗುತ್ತವೆ. ನಮ್ಮ ಮನೆಯಲ್ಲೂ ಇತ್ತೀಚೆಗೆ ಇಂತಹ ಒಂದು ಅನುಭವ ಆಯಿತು.   ನನ್ನ ಚಿಕ್ಕ ಮಗಳು ಪ್ರಣತಿ ತುಂಬ ಸೂಕ್ಷ್ಮವಾದ ರುಚಿಪ್ರಜ್ಞೆ ಇರುವ ಹುಡುಗಿ ; ಕೇವಲ ಪರಿಮಳ ನೋಡಿ ಖಾದ್ಯಪದಾರ್ಥ ತನಗೆ ಬೇಕೋ ಬೇಡವೋ ಎಂದು ನಿರ್ಧರಿಸಿಬಿಡುತ್ತಾಳೆ! ಅವಳು ಎಳೆಯ ಪುಟಾಣಿ ಆಗಿದ್ದಾಗಿನಿಂದಲೂ ಅವಳಿಗೆ ಇಷ್ಟವಾಗುವಂತೆ ತಿಂಡಿ-ಅಡಿಗೆ ಮಾಡುವುದು ನನಗೆ ಮತ್ತು ನಮ್ಮ‌ ಮನೆಗೆಲಸ ಸಹಾಯಕರಾದ ಯಲ್ಲಮ್ಮರಿಗೆ ಸವಾಲಿನ ಸಂಗತಿಯೇ. […]

 “ಚಾರುಲತ ಅಂದರೆ ಏನಮ್ಮ ಮಗು?”

ಶೈಕ್ಷಣಿಕ ವರ್ಷ ಪ್ರಾರಂಭ ಆದಾಗ ನಾವು ಅಧ್ಯಾಪಕರು ಹೊಸ ಹೊಸ ವಿದ್ಯಾರ್ಥಿಗಳನ್ನು ಭೇಟಿ ಮಾಡ್ತೇವೆ. ಹೊಸ ಹೊಸ ಮುಖಗಳು, ಹೊಸ ಹೊಸ ಹೆಸರುಗಳು, ಹೊಸ ಹೊಸ ಅನುಭವಗಳು.  ಹೀಗೆಯೇ ಮೊನ್ನೆ ಒಂದು ತರಗತಿಯಲ್ಲಿ ಹಾಜರಿ ಹಾಕ್ತಾ ಇದ್ದಾಗ ‘ಚಾರುಲತ’  ಎಂಬ ಹೆಸರನ್ನು ಕರೆದೆ. ಒಬ್ಬಳು ಹುಡುಗಿ ಓಗೊಟ್ಟಳು.‌ ‘ತನ್ನ ಹೆಸರಿನ ಅರ್ಥವು ಈ ಕಿಶೋರಿಗೆ ಗೊತ್ತಿರಬಹುದೇ?’ ಎಂಬ ಪ್ರಶ್ನೆಯು ನನ್ನ ಮನಸ್ಸಿನಲ್ಲಿ ಮೂಡಿ, “ಚಾರುಲತ ಅಂದರೆ ಏನಮ್ಮ ಮಗು?” ಎಂದು  ಅವಳನ್ನು ನಾನು ಕೇಳಿದೆ. ಆ ಪ್ರಶ್ನೆಯನ್ನು […]

 “ಅಮ್ಮಾ….ವರ್ತ್ನೇಗ್ ಹಾಕ್ಸ್ಕೊಳೀ……”

ಕೆಲವು ವರ್ಷಗಳ ಹಿಂದೆ, ನಮ್ಮ ಬೀದಿಯಲ್ಲಿ ಹೂವಾಡಗಿತ್ತಿಯೊಬ್ಬಳು ದಿನಾಲೂ “ಹೂ ಬೇಕೇ ಹೂವು….” ಎಂದು ಕೂಗುತ್ತಾ ಬರುತ್ತಿದ್ದಳು. ನಾನು ಒಮ್ಮೊಮ್ಮೆ ಅವಳ ಹತ್ತಿರ ಮಲ್ಲಿಗೆ, ಕನಕಾಂಬರ, ಮೊಲ್ಲೆ.. ಹೀಗೆ ಯಾವುದಾದರೂ ಪರಿಮಳಯುತ ಹೂವನ್ನು ಕೊಳ್ಳುತ್ತಿದ್ದೆ. ಪ್ರತಿ ಸಲ ನಾನು ಹೂ ಕೊಂಡಾಗಲೂ ಅವಳು “ಅಮ್ಮಾ…ವರ್ತ್ನೇಗ್ ಹಾಕ್ಸ್ಕೊಳೀ…” ಅನ್ನುತ್ತಿದ್ದಳು. ನಮ್ಮ ಅಕ್ಕಪಕ್ಕದವರು ಮತ್ತು ಈ ಹೂವಾಡಗಿತ್ತಿ ಆಗಾಗ ಈ ‘ವರ್ತ್ನೆ’ ಪದವನ್ನು ಬಳಸುವುದನ್ನು ಕೇಳಿಸಿಕೊಂಡಿದ್ದೆ ನಾನು.‌ ದಿನಾಲೂ ಒಬ್ಬರ ಹತ್ತಿರವೇ ಹೂ ಪಡೆದು ತಿಂಗಳ ಕೊನೆಯಲ್ಲಿ ಅದರ ಹಣದ ಲೆಕ್ಕ ಚುಕ್ತಾ […]

 “ಅಯ್ಯೋ…. ಅನ್ನ ಮುಳ್ಳಕ್ಕಿ ಆಗ್ಹೋಯ್ತು ಅಮ್ಮ….”

ಈಚೆಗೆ  ಒಂದು ಸಲ ನಮ್ಮನೆಯಲ್ಲಿ ಅನ್ನ ಮಾಡಲಿಕ್ಕಾಗಿ ಕುಕ್ಕರ್ ಇಟ್ಟು ಕೂಗಿಸಿ, ಅದು ಆರಿದ ಮೇಲೆ ಮುಚ್ಚಳ ತೆಗೆದಾಗ ನಡೆದ ಪ್ರಸಂಗ ಇದು‌.‌ ಆಗ ಅಡಿಗೆಮನೆಯಲ್ಲಿ ನಾನು, ಯಲ್ಲಮ್ಮ (ನನ್ನ ಮನೆವಾಳ್ತೆ ಸಹಾಯಕಿ) ಇಬ್ಬರೂ ಇದ್ದೆವು‌. ಕುಕ್ಕರ್ ಮುಚ್ಚಳ ತೆಗೆದು ಅನ್ನ ಸರಿಯಾಗಿದೆಯೇ ಎಂದು ಗಮನಿಸಿದಾಗ ಅದು ಗಟ್ಟಿ ಗಟ್ಟಿಯಾಗಿಯೇ ಇತ್ತು, ಅಕ್ಕಿ ಕಾಳುಗಳು ಅರಳದೆ ಇನ್ನೂ ಬಿರುಸಾಗಿಯೇ ಇದ್ದವು‌. ಬಹುಶಃ ನೀರಿಟ್ಟಿದ್ದು ಕಡಿಮೆ ಆಯಿತೋ ಏನೋ. ಆ ಗಟ್ಟಿ ಗಟ್ಟಿ ಅಗುಳುಗಳನ್ನು ಯಲ್ಲಮ್ಮನೂ ಗಮನಿಸಿ ”ಅಯ್ಯೋ…. […]

 “ನನ್ನ ಹೆಸರು ಯಮನೂರಪ್ಪ ಮೇಡಮ್ಮು….”..!!!

ನಾವು ಕನ್ನಡಿಗರು ನಮ್ಮ ಮಕ್ಕಳಿಗೆ ಹೆಸರಿಡುವ ರೀತಿಯ ಬಗ್ಗೆ ನನಗೆ ತುಂಬ ಕುತೂಹಲ ಇದೆ. ಮನೆದೇವರ ಹಸರು, ಬಾಳಿ ಬದುಕಿದ ಮನೆಹಿರಿಯರ ಹೆಸರು, ತಮ್ಮ ಅಭಿಮಾನ ಗಳಿಸಿದ ರಾಜಕೀಯ ನಾಯಕರ, ಕವಿಗಳ, ಸಿನಿಮಾನಟರ ಹೆಸರು, ಸ್ನೇಹಿತರ ಹೆಸರು, ಅಪ್ಪ ಅಮ್ಮನ  ಹೆಸರಿನ ಮೊದಲಕ್ಷರಗಳನ್ನು ಸೇರಿಸಿದ ಹೆಸರು, ಇನ್ನು ಮುಂದೆ ಹೆಣ್ಣುಮಗು ಹುಟ್ಟಬಾರದು ಎಂದು ಬಯಸಿ ಇಟ್ಟಂತಹ ಸಾಕಮ್ಮ ಎಂಬ ಹೆಸರು!!!…..ಈ ನಡುವೆ ಗೂಗಲ್ ನಲ್ಲಿ ನೋಡಿ ಅರ್ಥ ಗೊತ್ತಿದ್ದೋ, ಗೊತ್ತಿಲ್ಲದೆಯೋ ಅಂತೂ ಇಟ್ಟ ಚಿತ್ರವಿಚಿತ್ರ ಹೆಸರು…ಒಂದೇ ಎರಡೇ….ನಮ್ಮ […]

 Fovea ( yellow spot)

ಫೋವಿಯಾ ( ಯೆಲ್ಲೋ‌ ಸ್ಪಾಟ್) – ಕುಳಿ ( ಹಳದಿ ಕುಳಿ) – ಅಕ್ಷಿ ಪರದೆಯ (ರೆಟಿನಾ) ಮೇಲೆ ಶಂಕುಗಳು ಅತಿ ಹೆಚ್ಚಾಗಿ, ಒತ್ತೊತ್ತಾಗಿ ಸಂಗ್ರಹಿತವಾಗಿರುವ ಒಂದು ಚಿಕ್ಕ ಪ್ರದೇಶ ಇದು (ಕಾಲು ಮಿಲಿಮೀಟರ್ ). ಕಣ್ಣಿನಲ್ಲಿ ದೃಷ್ಟಿಯು ಅತ್ಯಂತ ತೀಕ್ಷ್ಣ ವಾಗಿರುವ ಸ್ಥಳವೆಂದರೆ ಇದೇ. 

   “ಮ್ಯಾಮ್…. ಈ ಪಾಠದ ಸಮ್ಮರಿ ‌ ಹೇಳಿ …..ಪ್ಲೀಸ್”

ಕಾಲೇಜುಗಳಲ್ಲಿ ಕನ್ನಡ ಪಾಠ ಮಾಡುವ ಎಲ್ಲ ಅಧ್ಯಾಪಕರ ಕಿವಿಗಳಿಗೂ ಪರೀಕ್ಷಾ ಸಮಯದಲ್ಲಿ ತಲುಪಿಯೇ  ತಲುಪುವ ಒಂದು ಕೋರಿಕೆ ಇದು.‌ ತರಗತಿಗೆ ಬಂದರೋ ಬಿಟ್ಟರೋ, ಪಾಠ ಕೇಳಿದರೋ ಬಿಟ್ಟರೋ ವಿದ್ಯಾರ್ಥಿಗಳು ತಮ್ಮ ಕನ್ನಡ ವಿಷಯದ ಪರೀಕ್ಷೆಗೆ ಒಂದು ಅಥವಾ ಎರಡು ದಿನ ಇದ್ದಾಗ ತಮ್ಮ ಅಧ್ಯಾಪಕರ ಮುಂದೆ ಈ  ‘ ಸಮ್ಮರಿ ಕೋರುವ’  ವಿನಂತಿಯನ್ನಂತೂ ಇಟ್ಟೇ ಇಡುತ್ತಾರೆ.‌  ಸಿರಿಗನ್ನಡವನ್ನು ಅವರು ನೆನಪಿಸಿಕೊಳ್ಳುವ ಪರಿ ಇದು!!          ‌    “ಅಯ್ಯಯ್ಯೋ …ಏನೂ ಓದಿಲ್ವಲ್ಲಪ್ಪಾ…    […]

 “ಸೂಳ್ ಬಪ್ಪುದು ಕಾಣಾ ಮಹಾಜಿರಂಗದೊಳ್”

ಸುಮಾರು 34-35 ವರ್ಷಗಳ ಹಿಂದೆ,  ಬೆಂಗಳೂರಿನ ಬಸವೇಶ್ವರ ನಗರದಲ್ಲಿರುವ ವಿದ್ಯಾವರ್ಧಕ ಸಂಘ – ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಬಿ.ಎಸ್ಸಿ. ಪದವಿಯ ಕನ್ನಡ ತರಗತಿಯೊಂದರಲ್ಲಿ, ಶ್ರೀಮತಿ ಶಾಂತಾ ನಾಗರಾಜ್ ಎಂಬ ಕನ್ನಡ ಅಧ್ಯಾಪಕಿಯು ಉಲ್ಲೇಖಿಸಿದ ವಾಕ್ಯ ಇದು‌. ಈ ಲೇಖಕಿ‌ ಕೂಡಾ ಆ ತರಗತಿಯ ವಿದ್ಯಾರ್ಥಿನಿಯರ ಗುಂಪಿನಲ್ಲಿ ಒಬ್ಬಳಾಗಿದ್ದಳು. 25-30 ಜನ ಅರಳುಗಣ್ಣಿನ ಮತ್ತು ಅಷ್ಟೇ ತುಂಟ ಸ್ವಭಾವದ ವಿಜ್ಞಾನದ ವಿದ್ಯಾರ್ಥಿನಿಯರಿಗೆ ಕನ್ನಡದ ಆದಿಕವಿಯ ಈ  ಅವಿಸ್ಮರಣೀಯ ಉದ್ಗಾರದ ಮಹತ್ವ ಎಷ್ಟು ಅರ್ಥವಾಯಿತೋ ಬಿಟ್ಟಿತೋ! ಆದರೆ ಮೇಡಂ […]

 ‘ಬೆಳಗಿನ ಶುಭೋದಯ’ ಏಕೆ, ಶುಭೋದಯ ಸಾಕಲ್ಲವೇ?

ಗುಡ್ ಮಾರ್ನಿಂಗ್ ಎಂದು ಇಂಗ್ಲಿಷ್ ಭಾಷೆಯಲ್ಲಿ ಹೇಳುವ ಬದಲು  ಕನ್ನಡದಲ್ಲಿ ಅದನ್ನು ಹೇಳಬಯಸುವವರು ‘ಬೆಳಗಿನ ಶುಭೋದಯ’ ಎಂದು ಹೇಳುವುದನ್ನು ನಾವು ಅನೇಕ ಸಾರಿ ಗಮನಿಸುತ್ತೇವೆ. ಶುಭೋದಯ ಎಂಬ ಒಂದು ಪದದಲ್ಲಿ ಗುಡ್( ಶುಭ) ಮತ್ತು ಉದಯ( ಮಾರ್ನಿಂಗ್) ಎಂಬ ಎರಡೂ ಪದಗಳಿವೆ! ಹೀಗಾಗಿ ಬೆಳಗಿನ ಶುಭೋದಯ ಎಂದು ಹೇಳಿದಾಗ ಗುಡ್ ಮಾರ್ನಿಂಗ್ ಆಫ್ ಮಾರ್ನಿಂಗ್ ಎಂಬ ಅರ್ಥ ಬರುತ್ತದೆ! ಹೀಗಾಗಿ‌ ಶುಭೋದಯ ಸಾಕು. ‘ಬೆಳಗಿನ ಶುಭೋದಯ’ ಬೇಡ. ಇನ್ನು ಕೆಲವರು ಗುಡ್ ಆಫ್ಟರ್ ನೂನ್ ಗೆ ಕನ್ನಡದಲ್ಲಿ […]

 ದಿನಾ ಸಾಯೋರಿಗೆ ಅಳರ‍್ಯಾರು?

ಲೋಕದೊಂದಿಗೆ ನಾವು ವ್ಯವಹರಿಸುವಾಗ ನಮ್ಮ ಸುಖದುಃಖಗಳನ್ನು ಯಾರೊಂದಿಗೆ, ಎಷ್ಟರ ಮಟ್ಟಿಗೆ, ಯಾವಾಗ, ಹೇಗೆ ಹಂಚಿಕೊಳ್ಳುತ್ತೇವೆ ಎಂಬುದರ ಬಗ್ಗೆ ಲಕ್ಷ್ಯ ಕೊಡಬೇಕಾಗುತ್ತದೆ. ಸದಾಕಾಲ ತಮ್ಮ ಗೋಳುಗಳನ್ನು ಹೇಳುತ್ತಾ ಇರುವವರ ಬಗ್ಗೆ ಜನರು ಗೌರವ ಕಳೆದುಕೊಂಡು ಅವರ ಮಾತುಗಳಿಗೆ ಗಮನ ಕೊಡುವುದನ್ನು ನಿಲ್ಲಿಸಿಬಿಡುತ್ತಾರೆ – “ಅಯ್ಯೋ, ಅವರದ್ದು ದಿನಾ ಇದ್ದಿದ್ದೇ ಬಿಡು. ಒಂದಲ್ಲ ಒಂದು ವಿಷಯಕ್ಕೆ ಗೋಳಾಡ್ತಾನೇ ಇರ್ತಾರೆ. ದಿನಾ ಸಾಯೋರಿಗೆ ಅಳರ‍್ಯಾರು!’’ ಎನ್ನುತ್ತಾರೆ. ಈ ಗಾದೆಮಾತು ಎಷ್ಟು ಪರಿಣಾಮಕಾರಿಯಾದ ಉಕ್ತಿಯೆಂದರೆ ಸಾವು ಎನ್ನುವುದು ವ್ಯಕ್ತಿಗೆ ದಿನಾ ಬರುವಂತಹದ್ದಲ್ಲ ಎಂಬ […]

Page 1 of 2

Kannada Sethu. All rights reserved.