ನಾವು ಮನುಷ್ಯರು ಕಷ್ಟಪಟ್ಟು ದುಡಿದು ನಮ್ಮ ಅನ್ನ ಸಂಪಾದಿಸಬೇಕು ಎಂಬ ಉತ್ತಮ ನೀತಿಯನ್ನು ನಾಲ್ಕೇ ಪದಗಳಲ್ಲಿ ಹೇಳುವ ಗಾದೆ ಮಾತಿದು. ರೆಟ್ಟೆ ಎಂಬ ನಾಮಪದಕ್ಕೆ ನಿಘಂಟಿನಲ್ಲಿ ಇರುವ ಅರ್ಥ ತೋಳು, ಬಾಹು ಎಂದು. ರೆಟ್ಟೆ ಮುರಿಯುವುದು ಅಂದರೆ ಶ್ರಮ ಪಟ್ಟು ಕೆಲಸ ಮಾಡುವುದು ಎಂದರ್ಥ. ನಾವು ತಿನ್ನುವ ರೊಟ್ಟಿಯು ನಮ್ಮ ರೆಟ್ಟೆ ಮುರಿದು ದುಡಿದು ಗಳಿಸಿದ ಹಣದಿಂದ ಬರಬೇಕೇ ಹೊರತು, ಇನ್ನೊಬ್ಬರ ಮರ್ಜಿ, ಭಿಕ್ಷೆ, ದಾನದಿಂದ ಬರಬಾರದು. ದುಡಿದು ಗಳಿಸಿ ತನ್ನ ಪರಿಶ್ರಮದ ಕೂಳನ್ನು ತಾನು ಉಣ್ಣುವುದರಲ್ಲಿ […]
ಇಬ್ಬಗೆ ( ಅಲೆ – ಕಣ ಇಬ್ಬಗೆ) – ವಿದ್ಯುತ್ಕಾಂತೀಯ ವಿಕಿರಣವು ಕೆಲವು ಸನ್ನಿವೇಶಗಳಲ್ಲಿ ಅಲೆಗಳಂತೆ ಮತ್ತು ಇನ್ನು ಕೆಲವು ಸನ್ನಿವೇಶಗಳಲ್ಲಿ ಕಣಗಳಂತೆ ವರ್ತಿಸುತ್ತದೆ. ಈ ಸನ್ನಿವೇಶವನ್ನು ಇಬ್ಬಗೆ( ಅಲೆ-ಕಣ ಇಬ್ಬಗೆ) ಎನ್ನುತ್ತಾರೆ.
ಒಣ ಮಂಜುಗಡ್ಡೆ – ಘನರೂಪದಲ್ಲಿರುವ ಇಂಗಾಲದ ಡೈಆಕ್ಸೈಡ್. ಇದನ್ನು ತಂಪುಕಾರಕವಾಗಿ ಬಳಸುತ್ತಾರೆ.
ಒಣ ಕೋಶ – ತನ್ನಲ್ಲಿನ ವಿದ್ಯುತ್ ವಿಭಜಕವು ಹಣ್ಣುಪಾಕ ಅಥವಾ ಲೇಹ್ಯದಂತಹ ಹದದಲ್ಲಿ ಇರುವ ಒಂದು ವಿದ್ಯುತ್ ರಾಸಾಯನಿಕ ಕೋಶ. ಇದನ್ನು ಕೈದೀಪದಂತಹ, ಕೈಯಲ್ಲಿಟ್ಟುಕೊಂಡು ಓಡಾಡಿಸುವ ಉಪಕರಣಗಳಲ್ಲಿ ಬಳಸುತ್ತಾರೆ.
ಚಾಲಕ ವಿದ್ಯುನ್ಮಂಡಲ – ಒಂದು ಅಥವಾ ಅದಕ್ಕಿಂತ ಹೆಚ್ಚು ವಿದ್ಯುನ್ಮಂಡಲಗಳಿಗೆ ಒಳಹರಿವಿನ ವಿದ್ಯುತ್ ನೀಡುವಷ್ಟು ಹೊರಹರಿವಿನ ಸಾಮರ್ಥ್ಯವುಳ್ಳ ವಿದ್ಯುನ್ಮಂಡಲ.
ಗತಿಶೀಲತೆಯ ದಿಶಾವೇಗ – ಒಂದು ಅರೆವಾಹಕದಲ್ಲಿ, ಏಕಘಟಕ ವಿದ್ಯುತ್ ಕ್ಷೇತ್ರದಲ್ಲಿ ಬೇಕಾದ್ದಕ್ಕಿಂತ ಹೆಚ್ಚು ಸಂಖ್ಯೆಯಲ್ಲಿರುವ ಅಲ್ಪಸಂಖ್ಯಾತ ವಿದ್ಯುದಂಶ ಒಯ್ಯಕಗಳ ಸರಾಸರಿ ದಿಶಾವೇಗ.
ಹೊರ ವಿದ್ಯುದ್ವಾರ – ಕ್ಷೇತ್ರ ಪರಿಣಾಮ ಟ್ರ್ಯಾನ್ಸಿಸ್ಟರುಗಳಲ್ಲಿ, ವಿದ್ಯುದಂಶಗಳು ವಿದ್ಯುದ್ವಾರದ ನಡುವಿನ ಜಾಗದಲ್ಲಿ ಯಾವ ವಿದ್ಯುದ್ವಾರದ ಮೂಲಕ ಹೊರಬರುತ್ತವೋ ಆ ವಿದ್ಯುದ್ವಾರ.
Like us!
Follow us!