ಕನ್ನಡ ಗಾದೆಮಾತು – ರೆಟ್ಟೆ ಮುರೀಬೇಕು ರೊಟ್ಟಿ ತಿನ್ನಬೇಕು

ನಾವು ಮನುಷ್ಯರು ಕಷ್ಟಪಟ್ಟು ದುಡಿದು ನಮ್ಮ ಅನ್ನ ಸಂಪಾದಿಸಬೇಕು ಎಂಬ ಉತ್ತಮ ನೀತಿಯನ್ನು ನಾಲ್ಕೇ ಪದಗಳಲ್ಲಿ ಹೇಳುವ ಗಾದೆ ಮಾತಿದು. ರೆಟ್ಟೆ ಎಂಬ ನಾಮಪದಕ್ಕೆ ನಿಘಂಟಿನಲ್ಲಿ ಇರುವ ಅರ್ಥ ತೋಳು, ಬಾಹು ಎಂದು. ರೆಟ್ಟೆ ಮುರಿಯುವುದು ಅಂದರೆ ಶ್ರಮ ಪಟ್ಟು ಕೆಲಸ ಮಾಡುವುದು ಎಂದರ್ಥ. ನಾವು ತಿನ್ನುವ ರೊಟ್ಟಿಯು ನಮ್ಮ ರೆಟ್ಟೆ ಮುರಿದು ದುಡಿದು ಗಳಿಸಿದ ಹಣದಿಂದ ಬರಬೇಕೇ ಹೊರತು, ಇನ್ನೊಬ್ಬರ ಮರ್ಜಿ, ಭಿಕ್ಷೆ, ದಾನದಿಂದ ಬರಬಾರದು. ದುಡಿದು ಗಳಿಸಿ ತನ್ನ ಪರಿಶ್ರಮದ ಕೂಳನ್ನು ತಾನು ಉಣ್ಣುವುದರಲ್ಲಿ […]

ಛಂದಸ್ಸಿನ ಪಾಠ ಅಕ್ಕಾ –  ನಿಜದಿ ತಲುಪಬೇಕು ಕಿವಿಗಳ ಮೂಲಕ

ಕನ್ನಡವನ್ನು ಐಚ್ಛಿಕ ವಿಷಯವಾಗಿ ಓದುವ ಪದವಿ ಅಥವಾ ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳು ತಮ್ಮ ಪಠ್ಯದ ಭಾಗವಾಗಿ ಛಂದಸ್ಸನ್ನು ಓದುತ್ತಾರೆ. ಛಂದಸ್ಸು ಎಂದರೆ ಪದ್ಯರಚನೆಯ ನಿಯಮ ಎಂದು ಅರ್ಥ. ಒಂದು ಪದ್ಯದ ಲಯ, ಗತಿ, ಓಟ, ಪ್ರಾಸ, ತಾಳಕ್ಕೆ ಸಿಗುವ ಗುಣ ಇವೆಲ್ಲವನ್ನೂ ಅಧ್ಯಯನ ಮಾಡುವುದು ಛಂದಸ್ಸಿನ ಪರಿಧಿಯಲ್ಲಿ ಸೇರುತ್ತದೆ. ಛಂದಸ್ಸು ಎಂದರೆ ಹೊದಿಸುವುದು ಎಂದೂ ಅರ್ಥವಿದೆ. ಪದಗಳಿಗೆ ಲಯದ ಹೊದಿಕೆ ತೊಡಿಸುವುದು ಅನ್ನಬಹುದೇನೋ. ಛಂದಸ್ಸನ್ನು ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ಪಾಠ ಮಾಡುವುದೆಂದರೆ ಅದು ಅಧ್ಯಾಪಕರಿಗೆ ಸವಾಲಿನ ವಿಷಯವೇ ಸರಿ. […]

Duality (wave – particle duality)

ಇಬ್ಬಗೆ ( ಅಲೆ – ಕಣ ಇಬ್ಬಗೆ) – ವಿದ್ಯುತ್ಕಾಂತೀಯ ವಿಕಿರಣವು ಕೆಲವು ಸನ್ನಿವೇಶಗಳಲ್ಲಿ ಅಲೆಗಳಂತೆ ಮತ್ತು ಇನ್ನು ಕೆಲವು ಸನ್ನಿವೇಶಗಳಲ್ಲಿ ಕಣಗಳಂತೆ ವರ್ತಿಸುತ್ತದೆ. ಈ ಸನ್ನಿವೇಶವನ್ನು ಇಬ್ಬಗೆ( ಅಲೆ-ಕಣ ಇಬ್ಬಗೆ) ಎನ್ನುತ್ತಾರೆ.

Dry ice

ಒಣ ಮಂಜುಗಡ್ಡೆ – ಘನರೂಪದಲ್ಲಿರುವ ಇಂಗಾಲದ ಡೈಆಕ್ಸೈಡ್. ಇದನ್ನು ತಂಪುಕಾರಕವಾಗಿ ಬಳಸುತ್ತಾರೆ.

Dry cell

ಒಣ ಕೋಶ – ತನ್ನಲ್ಲಿನ ವಿದ್ಯುತ್ ವಿಭಜಕವು ಹಣ್ಣುಪಾಕ ಅಥವಾ ಲೇಹ್ಯದಂತಹ ಹದದಲ್ಲಿ ಇರುವ ಒಂದು ವಿದ್ಯುತ್ ರಾಸಾಯನಿಕ ಕೋಶ. ಇದನ್ನು ಕೈದೀಪದಂತಹ, ಕೈಯಲ್ಲಿಟ್ಟುಕೊಂಡು ಓಡಾಡಿಸುವ ಉಪಕರಣಗಳಲ್ಲಿ ಬಳಸುತ್ತಾರೆ.

Driver

ಚಾಲಕ ವಿದ್ಯುನ್ಮಂಡಲ – ಒಂದು ಅಥವಾ ಅದಕ್ಕಿಂತ ಹೆಚ್ಚು ವಿದ್ಯುನ್ಮಂಡಲಗಳಿಗೆ ಒಳಹರಿವಿನ ವಿದ್ಯುತ್ ನೀಡುವಷ್ಟು  ಹೊರಹರಿವಿನ ಸಾಮರ್ಥ್ಯವುಳ್ಳ ವಿದ್ಯುನ್ಮಂಡಲ.

Drift velocity

ಗತಿಶೀಲತೆಯ ದಿಶಾವೇಗ – ಒಂದು ಅರೆವಾಹಕದಲ್ಲಿ, ಏಕಘಟಕ ವಿದ್ಯುತ್ ಕ್ಷೇತ್ರದಲ್ಲಿ ಬೇಕಾದ್ದಕ್ಕಿಂತ ಹೆಚ್ಚು ಸಂಖ್ಯೆಯಲ್ಲಿರುವ ಅಲ್ಪಸಂಖ್ಯಾತ ವಿದ್ಯುದಂಶ ಒಯ್ಯಕಗಳ ಸರಾಸರಿ ದಿಶಾವೇಗ.

ಕನ್ನಡ ಗಾದೆಮಾತು –  ಗಣೇಶನ್ನ ಮಾಡು ಅಂದ್ರೆ ಅವರಪ್ಪನ್ನ ಮಾಡಿದ್ರಂತೆ!

ಕೆಲವರಿಗೆ ಯಾವ ಕೆಲಸ ಕೊಟ್ಟರೂ ಅವರು ಅದನ್ನು ಸರಿಯಾಗಿ ಮಾಡುವುದಿಲ್ಲ. ಉದಾಹರಣೆಗೆ ಯಾವುದೋ ಸಾಮಾನು ತಾ ಅಂದರೆ ಇನ್ಯಾವುದನ್ನೋ‌ ತರುವುದು, ಅಡಿಗೆಗೆ ಒಂದು‌‌ ಹಿಡಿ‌ ಉಪ್ಪು ಹಾಕೆಂದರೆ ಮೂರು ಹಿಡಿ ಹಾಕಿಬಿಡುವುದು…..ಹೀಗೆ. ಇಂಥವರು ಪ್ರತಿಯೊಂದು ಕೆಲಸದಲ್ಲೂ ಯಡವಟ್ಟು ಮಾಡುತ್ತಾರೆ. ಇಂಥವರ ಬಗ್ಗೆ ಹೇಳಿರುವ ಮಾತಿದು. ಗಣೇಶನ ಮೂರ್ತಿಯನ್ನು ಮಾಡು ಎಂದರೆ ಅವರ ತಂದೆಯಾದ ಶಿವನ ಮೂರ್ತಿಯನ್ನು ಮಾಡಿದರೆ ಏನು ಮಾಡಬೇಕು ನೀವೇ ಹೇಳಿ! ಇಂತಹ ಯಡವಟ್ಟರಿಗಾಗಿಯೇ ಮಾಡಿರುವ ಗಾದೆ ಮಾತಿದು.  Kannada proverb – Ganeshanna maadu […]

ಎಮ್ಮೆಯ ಕನ್ನಡ!!

ಅಧ್ಯಾಪಕರ ಉದ್ಯೋಗದಲ್ಲಿ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಎಂಬುದು ತುಂಬ ಗಂಭೀರ ವಿಷಯ ಹಾಗೂ ಅತ್ಯಂತ ಜವಾಬ್ದಾರಿಯುತವಾಗಿ ಮಾಡಬೇಕಾದ ಕೆಲಸ.‌ ಆದಾಗ್ಯೂ ಕೆಲವೊಮ್ಮೆ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಬರೆಯವ ಉತ್ತರಗಳು, ಮಾಡುವ ತಪ್ಪುಗಳು ಮೌಲ್ಯಮಾಪಕರಿಗೆ ನಗೆಯುಕ್ಕಿಸಿ ಅವರ ಮನಸ್ಸನ್ನು ತುಸು ತಿಳಿಗೊಳಿಸುವುದು ಸುಳ್ಳಲ್ಲ. ಅಂತಹದೇ ಒಂದು ಪ್ರಸಂಗ ಈ ಅಧ್ಯಾಪಕಿಗೂ ಎದುರಾಯಿತು.  ಇಂಗ್ಲಿಷ್ ಮತ್ತು ಕನ್ನಡದ ಬಳಕೆಯನ್ನು ಕುರಿತು ಬರೆಯಬೇಕಾಗಿದ್ದ ಒಂದು ಉತ್ತರದಲ್ಲಿ ನಮ್ಮ ಮಹಾವಿದ್ಯಾಲಯದ ವಿದ್ಯಾರ್ಥಿನಿಯೊಬ್ಬಳು ” ನಮ್ಮ ಎಮ್ಮೆಯ ಕನ್ನಡ ಭಾಷೆಯು ತುಂಬ ಪ್ರಾಚೀನವಾದುದು” ಎಂದು ಬರೆದಿದ್ದಳು‌! […]

Drain

ಹೊರ ವಿದ್ಯುದ್ವಾರ – ಕ್ಷೇತ್ರ ಪರಿಣಾಮ ಟ್ರ್ಯಾನ್ಸಿಸ್ಟರುಗಳಲ್ಲಿ, ವಿದ್ಯುದಂಶಗಳು ವಿದ್ಯುದ್ವಾರದ ನಡುವಿನ ಜಾಗದಲ್ಲಿ ಯಾವ ವಿದ್ಯುದ್ವಾರದ ಮೂಲಕ‌ ಹೊರಬರುತ್ತವೋ ಆ ವಿದ್ಯುದ್ವಾರ. 

Page 96 of 140

Kannada Sethu. All rights reserved.