ಈಚೆಗೆ ನಮ್ಮ ಹಂಪಿನಗರದ ಏಳನೇ ಮುಖ್ಯರಸ್ತೆಯ ಬಳಿ ಹೂವು ಕೊಂಡುಕೊಳ್ಳುತ್ತಿದ್ದಾಗ ಒಂದು ಕುತೂಹಲಕರ ವಿಷಯವನ್ನು ಗಮನಿಸಿದೆ. ಹೂಮಾರುವವರು ತಮ್ಮ ಬುಟ್ಟಿ ಇತ್ಯಾದಿಗಳನ್ನು ಇಟ್ಟುಕೊಂಡ ಜಾಗದ ಪಕ್ಕದಲ್ಲಿ ಇದ್ದ ಕಂಬವೊಂದಕ್ಕೆ ಕೆಲವು ಪುಟ್ಟ ಪುಟ್ಟ ದೇವರ ವಿಗ್ರಹಗಳನ್ನು ಕಟ್ಟಿಟ್ಟದ್ದು ಕಂಡುಬಂತು. ಬಹುಶಃ ಆ ಹೂ ಮಾರುವವರು ಮತ್ತು ಸುತ್ತಮುತ್ತ ಇದ್ದ ಹಣ್ಣಿನ ವ್ಯಾಪಾರಿಗಳು ಆ ವಿಗ್ರಹಗಳಿಗೆ ನಮಿಸಿ ತಮ್ಮ ದಿನದ ವ್ಯಾಪಾರವನ್ನು ಶುರು ಮಾಡುತ್ತಾರೆಂದು ತೋರುತ್ತದೆ. ಕಲ್ಲಿಗೆ ಭಕ್ತಿಯಿಂದ ಕುಂಕುಮ ಹಚ್ಚಿ ಹೂ ಇಟ್ಟು ಅದನ್ನೇ ಭಗವಂತನೆಂದು ತಿಳಿಯುವ […]
ಕನ್ನಡ ಪ್ರಸಂಗ
ಇದು ಲೇಖಕಿಯು ಕನ್ನಡದೊಂದಿಗೆ ಒಡನಾಡಿದ ಅನುಭವಗಳ ಕಥನವಾಗಿದೆ. ಕನ್ನಡ ಜಗತ್ತು ತನಗೆ ಕಲಿಸಿದ ಹಾಗೂ ಕನ್ನಡ ಭಾಷೆ ಹಾಗೂ ಸಾಹಿತ್ಯಗಳನ್ನು ತಾನು ಕಲಿಸಿದ ದಾರಿಯಲ್ಲಿನ ವಿವಿಧ ಅನುಭವಗಳನ್ನು ಓದುಗರೊಂದಿಗೆ ಹಂಚಿಕೊಳ್ಳುವ ಪ್ರಯತ್ನವಾಗಿರುತ್ತದೆ ಇದು. ವಾರಕ್ಕೆ ಒಂದು ಕನ್ನಡ ಪ್ರಸಂಗದಂತೆ ಈ ಅಂಕಣವು ಮೂಡಿ ಬರಲಿದೆ.
Like us!
Follow us!