ಕನ್ನಡ ಪ್ರಸಂಗ

ಇದು ಲೇಖಕಿಯು ಕನ್ನಡದೊಂದಿಗೆ ಒಡನಾಡಿದ ಅನುಭವಗಳ ಕಥನವಾಗಿದೆ. ಕನ್ನಡ ಜಗತ್ತು ತನಗೆ ಕಲಿಸಿದ ಹಾಗೂ ಕನ್ನಡ ಭಾಷೆ ಹಾಗೂ ಸಾಹಿತ್ಯಗಳನ್ನು ತಾನು ಕಲಿಸಿದ ದಾರಿಯಲ್ಲಿನ ವಿವಿಧ ಅನುಭವಗಳನ್ನು ಓದುಗರೊಂದಿಗೆ ಹಂಚಿಕೊಳ್ಳುವ ಪ್ರಯತ್ನವಾಗಿರುತ್ತದೆ ಇದು. ವಾರಕ್ಕೆ ಒಂದು ಕನ್ನಡ ಪ್ರಸಂಗದಂತೆ ಈ ಅಂಕಣವು ಮೂಡಿ ಬರಲಿದೆ.

“ಅವರು ನನ್ನನ್ನು ಮನುಷ್ಯರನ್ನಾಗಿ ಮಾಡಿದವರಮ್ಮಾ!”

ಆ ಹಿರಿಯರನ್ನು ನಾನು ಮೊದಲು ನೋಡಿದ್ದು ಸುಮಾರು ಇಪ್ಪತ್ತು ವರ್ಷಗಳ ಹಿಂದೆ. ನನ್ನ ಅಧ್ಯಯನದ ಸಲುವಾಗಿ, ಆಗ ಪುಸ್ತಕದ ಅಂಗಡಿಗಳಲ್ಲಿ ಲಭ್ಯವಿಲ್ಲದ, ಅನಕೃರ ಕೃತಿಗಳು ನನಗೆ ತುಂಬ ಜರೂರಾಗಿ ಬೇಕಿತ್ತು. ಈಗಿನ ತರಹ ಅಂತರ್ಜಾಲ ಸಂಪರ್ಕ, ವಿದ್ಯುನ್ಮಾನ ಪ್ರತಿ(ಸಾಫ್ಟ್ ಕಾಪಿ)ಗಳ ಕಾಲವಲ್ಲ ಅದು. ಹೀಗೇ ವಿಚಾರಿಸುತ್ತಿದ್ದಾಗ ಬೆಂಗಳೂರಿನ ವಿದ್ಯಾಪೀಠ ವೃತ್ತದ ಬಳಿ ಇರುವ ಒಬ್ಬ ವ್ಯಕ್ತಿಯ ಬಳಿ ಅನಕೃ ಅವರ ಸಮಗ್ರ ಕೃತಿಗಳ ಸಂಗ್ರಹ ಇದೆ ಎಂಬ ಮಾಹಿತಿ ಹಾಗೂ ಅವರ ಸ್ಥಿರದೂರವಾಣಿ(ಲ್ಯಾಂಡ್‌ಲೈನ್)ಯ ಸಂಖ್ಯೆ ನನಗೆ ಸಿಕ್ಕಿತು. […]

`ಫೋರ್ ಲೈಮ್ ಕೊಡಿ ಅಂಕಲ್’.

ತಮ್ಮ ಮಕ್ಕಳನ್ನು `ಇಂಗ್ಲಿಷ್ ಮೀಡಿಯಂ’ ಶಾಲೆಗೆ ಸೇರಿಸುವುದು, ಆ ಮಕ್ಕಳು ಜನರ ಮುಂದೆ ಇಂಗ್ಲಿಷ್ ಮಾತಾಡುವಾಗ ಹಿರಿಹಿರಿ ಹಿಗ್ಗುವುದು, ಅಂಗಡಿಗಳಲ್ಲಿ, ಸಮಾರಂಭಗಳಲ್ಲಿ ತಾವು ಕೂಡ ತಮ್ಮ ಮಕ್ಕಳೊಂದಿಗೆ ಆಂಗ್ಲಭಾಷೆಯಲ್ಲಿ ಮಾತಾಡಿ ತಾವು ಎಷ್ಟು `ಫಾರ್‌ವರ್ಡ್, ಶ್ರೀಮಂತ ಜನಗಳು, ತಮ್ಮ ಮಕ್ಕಳನ್ನು ಹೇಗೆ ಇಂಗ್ಲಿಷ್ ಮಾಧ್ಯಮದ ಶಾಲೆಯಲ್ಲಿ ಓದಿಸುತ್ತಿದ್ದೇವೆ’ ಎಂಬುದನ್ನು ತೋರಿಸಿಕೊಳ್ಳುವುದು ಕನ್ನಡ ನಾಡಿನಲ್ಲಿನ ಸಾಕಷ್ಟು ತಂದೆತಾಯಿಯರ ಅಭ್ಯಾಸವಾಗಿದೆ. ಇದರ ಗಂಭೀರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯ ಆಯಾಮಗಳನ್ನು ನಾನಿಲ್ಲಿ ಚರ್ಚಿಸಲು ಹೋಗುತ್ತಿಲ್ಲ. ಇದು ನಮ್ಮ ದೈನಂದಿನ ಜೀವನದ […]

`ಲೊಡ್ಡೆ ಡಾಕ್ಟರ್ ಕೈಗುಣಾನೇ ಕೈಗುಣ ಅಮ್ಮ!’

`ಮೊಮ್ಮಗಂಗೆ ಹುಷಾರಿರಲಿಲ್ಲ ಕಣ್ರಮ್ಮ, ಡಾಕ್ಟರ್ ಹತ್ರ ರ‍್ಕೊಂಡು ಹೋಗಿದ್ದೆ’’ ಅಂತ ನಮ್ಮ ಮನೆಯಲ್ಲಿ ಅನೇಕ ವರ್ಷದಿಂದ ಮನೆವಾಳ್ತೆ ಸಹಾಯಕರಾಗಿ ಕೆಲಸ ಮಾಡುತ್ತಿರುವ ಯಲ್ಲಮ್ಮ ಹೇಳಿದಾಗ `ಈಗ ಹೇಗಿದಾನೆ ಮಗು?’ ಎಂದು ಕೇಳಿದೆ. `ನಮ್ಮ ಲೊಡ್ಡೆ ಡಾಕ್ಟರ್ ಕೈಗುಣಾನೇ ಕೈಗುಣ ಅಮ್ಮ. ಅವ್ರು ಒಂದು ಸಲ ನೋಡಿದ್ರೆ ಸಾಕು ರೋಗ ವಾಸಿಯಾಯ್ತು ಅಂತಾನೇ ಅರ್ಥ’’ ಅಂದರು ಯಲ್ಲಮ್ಮ.  `ಲೊಡ್ಡೆ ಡಾಕ್ಟರ್’ ಎಂಬ ಪದದಿಂದ ನನ್ನಲ್ಲಿ ಕುತೂಹಲವುಂಟಾಗಿ `ಯಾಕಮ್ಮ ಅವರನ್ನ ಹಾಗೆ ಕರೀತಿರಿ? ಆ ಡಾಕ್ಟರ್ ಹೆಸರೇನು?’ ಎಂದು ಕೇಳಿದೆ. […]

ಹೆಂಗಸು `ರಾಷ್ಟ್ರಪತಿ’ಯಾದಾಗ ಅವರನ್ನು ಏನೆಂದು ಕರೆಯಬೇಕು?

ಪ್ರಪಂಚದ ಬಹುತೇಕ ದೇಶಗಳು ಪುರುಷ ಪ್ರಧಾನ ವ್ಯವಸ್ಥೆಯನ್ನು ಹೊಂದಿರುವುದರಿಂದ ಮಹಿಳೆಯೊಬ್ಬರು ದೇಶದ ಪ್ರಥಮ ಪ್ರಜೆಯಾಗುವುದೆಂದರೆ ಅದು ವಿಶೇಷವಾದ ಮತ್ತು ಹೆಮ್ಮೆ ಪಡುವ ಸಂಗತಿಯಾಗಿದೆ. ೨೫-೦೭-೨೦೦೭ರಂದು ಶ್ರೀಮತಿ ಪ್ರತಿಭಾ ಪಾಟೀಲ್ ಅವರು ಭಾರತದ ಮೊಟ್ಟಮೊದಲ ಮಹಿಳಾ ರಾಷ್ಟ್ರಾಧ್ಯಕ್ಷರಾದಾಗ ಅವರನ್ನು ಏನೆಂದು ಕರೆಯುವುದು ಎಂದು ಗೊಂದಲವಾಯಿತು. ಅವರನ್ನು ರಾಷ್ಟ್ರಪತಿ ಎಂದು ಕರೆಯಲಾಗದು. ಪತಿ ಎಂಬ ಪುಲ್ಲಿಂಗನಾಮವನ್ನು ಮಹಿಳೆಗೆ ಬಳಸುವುದು ಹೇಗೆ? ಇನ್ನೂ ಕೆಲವು ಪದಗಳಿವೆ. ಉದಾಹರಣೆಗೆ ಕಾಲೇಜುಗಳಲ್ಲಿ ಅಧ್ಯಾಪಕಿಯರಿಗೆ ಬಳಸುವ ಪದ ಮೇಡಂ, ಮ್ಯಾಮ್. ಇದಕ್ಕೆ ಯಾವ ಕನ್ನಡ ಪದ […]

ಹಾಡೆಂಬ ಸೇತುವೆಯ ಮೂಲಕ ಪಾಠವನ್ನು `ಮನ ಮುಟ್ಟಿಸುತ್ತಿದ್ದ’ ಕನ್ನಡ ಟೀಚರ್‌ಗಳು

ಮನಸ್ಸು ಬಾಲ್ಯಕ್ಕೆ ಹೋಯಿತೆಂದರೆ ಶಾಲೆಯಲ್ಲಿನ ಕನ್ನಡ ತರಗತಿಗಳು ನೆನಪಾಗುತ್ತವೆ.

ಮಂಗಳೂರಿಗೆ ಸೇರಿದ್ದ ಕಾಟಿಪಳ್ಳ ಮತ್ತು ಬೈಕಂಪಾಡಿ ಎಂಬ ಪುಟ್ಟ ಊರುಗಳಲ್ಲಿನ ಸರ್ಕಾರಿ ಶಾಲೆಗಳಲ್ಲಿ ನನ್ನ ಪ್ರಾಥಮಿಕ ಹಂತದ ವಿದ್ಯಾಭ್ಯಾಸ ನಡೆದದ್ದು. ಆ ಸರಳವಾದ ಹಳ್ಳಿಶಾಲೆಗಳಲ್ಲಿ ಎಷ್ಟು ಶ್ರದ್ಧಾವಂತ ಅಧ್ಯಾಪಕ-ಅಧ್ಯಾಪಕಿಯರಿರುತ್ತಿದ್ದರು! ಈಗ ನಾನೇ ಕಾಲೇಜು ಅಧ್ಯಾಪಕಿಯಾಗಿ ಅನೇಕ ವರ್ಷ ಕಳೆದ ಮೇಲೆ ಹಿನ್ನೋಟದ ಕಿಟಕಿಯಿಂದ ನೋಡುವಾಗ ಆ ಅಧ್ಯಾಪಕರ ಕಷ್ಟಸುಖಗಳು ಹೇಗಿದ್ದಿರಬಹುದು ಎಂದು ಯೋಚಿಸುವಂತಾಗುತ್ತದೆ.

ಕನ್ನಡ ತರಗತಿಯಲ್ಲಿ ಡಯಾನಳ ಇಂಗ್ಲಿಷ್ ಟಿಪ್ಪಣಿ

ತರಗತಿಯೆಂದ ಮೇಲೆ ಅಲ್ಲಿ ನಾನಾ ರೀತಿಯ, ನಾನಾ ಸ್ವಭಾವದ ವಿದ್ಯಾರ್ಥಿಗಳು ಇರುವುದು ಸಹಜ. ಕೆಲವು ವಿದ್ಯಾರ್ಥಿನಿಯರು ತಮ್ಮ ಕೆಲವು ವಿಶಿಷ್ಟ ಚರ್ಯೆ, ನಡವಳಿಕೆಗಳಿಂದ ಅಧ್ಯಾಪಕರ ಮನಸ್ಸಿನಲ್ಲಿ ಉಳಿದುಬಿಡುತ್ತಾರೆ. ನನ್ನ ಮನಸ್ಸಿನಲ್ಲಿ ಹೀಗೆ ಉಳಿದುಕೊಂಡ ಒಬ್ಬ ವಿದ್ಯಾರ್ಥಿನಿಯೆಂದರೆ ಡಯಾನಾ. ಈಕೆಯು ಎರಡನೆ ಬಿ.ಎಸ್ಸಿಗೆ ನಾನು ಕನ್ನಡ ಪಾಠ ಮಾಡುತ್ತಿರುವಾಗ ನನಗೆ ಪರಿಚಿತಳಾದವಳು.

`ತುಂತುರು’ ಮೂಲಕ ಕನ್ನಡ ಒದಲು ಕಲಿತ ರಶ್ಮಿ ಪುಟ್ಟಿ

ಓದುವ ಆಸಕ್ತಿ ಇರುವ ಮನೆಯಲ್ಲಿ ಹುಟ್ಟಿ ಬೆಳೆಯುವ ಮಕ್ಕಳಿಗೆ ಅವರಿಗೇ ಅರಿವಿಲ್ಲದಂತೆ ಪುಸ್ತಕಗಳು ಸಂಗಾತಿಗಳಾಗಿಬಿಡುತ್ತವೆ. ನಾನು ಇಂತಹದೊಂದು ಮನೆಯಲ್ಲಿ ಹುಟ್ಟಿದ್ದು ನನ್ನ ಅದೃಷ್ಟ ಅನ್ನಬೇಕು. ವೃತ್ತಿಯಿಂದ ನಗರ ಯೋಜನ ಇಲಾಖೆಯಲ್ಲಿ ಕಿರಿಯ ಯಂತ್ರಜ್ಞಾನಿ(ಇಂಜಿನಿಯರ್) ಆಗಿದ್ದ ನನ್ನ ತಂದೆಯವರು, ತಮ್ಮ ಸೋದರರ ಹಾಗೂ ಸೋದರಿಯ ಕಾರಣದಿಂದಾಗಿ, ರಾಮಕೃಷ್ಣಾಶ್ರಮದ ಗಾಢವಾದ ಪರಿಚಯ, ಸಂಪರ್ಕಗಳನ್ನು ಹೊಂದಿದ್ದರು.

ಕನ್ನಡದ ಡಿಜಿಟಲ್ ನವೋದಯ

ಕನ್ನಡದ ಡಿಜಿಟಲ್ ನವೋದಯ’ ಎಂಬ ಪದಗುಚ್ಛವೇ ರೋಮಾಂಚ ಹುಟ್ಟಿಸುವಂಥದ್ದು. ಕನ್ನಡವನ್ನು ಪ್ರೀತಿಸುವ ಯಾರೇ ಆದರೂ ಅದು ಕಾಲಕ್ಕೆ ತಕ್ಕಂತೆ ಬದಲಾಗಬೇಕು, ಮತ್ತು ನವೀಕರಣಗೊಳ್ಳಬೇಕು ಎಂದು ಒಪ್ಪುತ್ತಾರೆ. ಎಲ್ಲ ಜೀವಂತ ಭಾಷೆಗಳಂತೆ ಕನ್ನಡವೂ ಕಾಲದ ಕರೆಗೆ ಓಗೊಟ್ಟು ಬದಲಾಗುತ್ತಾ, ಹೊಸದಾಗುತ್ತಾ ಬಂದಿದೆ. ಮಾಹಿತಿ ತಂತ್ರಜ್ಞಾನ ಯುಗದ ಅಂತರ್ಜಾಲ ಪ್ರಪಂಚದಲ್ಲಿ ಕನ್ನಡ ಪಡೆದಿರುವ ಹೊಸ ರೂಪ ಅಂದರೆ ಅದು ಡಿಜಿಟಲ್ ರೂಪ.

`ಕಾಂಚಾಣ್ಣ’ಳು  ಕನ್ನಡ ಬರವಣಿಗೆ ಕಲಿತದ್ದು!

ಪದವಿ ತರಗತಿಗಳಲ್ಲಿ ಹೊಸ ತಂಡ ಬಂದ ಮೊದಲ ದಿನ ಇನ್ನೂ ಅಧಿಕೃತ (ಕಾಲೇಜಿನ ಕಛೇರಿ ಮೂಲಕ ಬರುವಂಥದ್ದು) ಪ್ರವೇಶಾತಿ ಪಟ್ಟಿ ಬಂದಿಲ್ಲದಿರುವುದರಿಂದ, ಹಾಜರಾಗಿರುವ ವಿದ್ಯಾರ್ಥಿನಿಯರಿಂದಲೇ ಒಂದು ಹಾಳೆಯಲ್ಲಿ ಹೆಸರು ಬರೆಸಿಕೊಳ್ಳುವ ಬಗ್ಗೆ ಹಿಂದಿನ ಕನ್ನಡ ಪ್ರಸಂಗವೊಂದರಲ್ಲಿ ಬರೆದಿದ್ದೆ. ವಿದ್ಯಾರ್ಥಿನಿಯರು ಹೆಸರು ಬರೆಯುವ ರೀತಿಯಲ್ಲೇ ನಮಗೆ ಅವರ ಕನ್ನಡ ಬರವಣಿಗೆಯ ಗುಣಮಟ್ಟದ ಅರಿವು ತಕ್ಕ ಮಟ್ಟಿಗೆ ಆಗುತ್ತದೆ.

“ನಾನು ಸತ್ತಿದ್ದೆ ಅಂದ್ಕೊಂಡು ಅಂಗಳದಲ್ಲಿ ಚಾಪೆ ಮೇಲೆ ಮಲಗಿಸಿದ್ರಂತೆ ಮ್ಯಾಮ್”

ನಾವು ಕನ್ನಡ ಅಧ್ಯಾಪಕರು ತರಗತಿಗಳಲ್ಲಿ ಕೆಲವೊಮ್ಮೆ ಅನೂಹ್ಯವಾದ ಭಾವುಕ ಸನ್ನಿವೇಶಗಳಿಗೆ ಸಾಕ್ಷಿಯಾಗುತ್ತೇವೆ. ಈಗ ನಾನು ವಿವರಿಸಲಿರುವುದು ಅಂತಹ ಒಂದು ಸನ್ನಿವೇಶ. ಅಂತಾರಾಷ್ಟ್ರೀಯ ಮಹಿಳಾ ದಿನವಾದ ಮಾರ್ಚ್ ೮ರ ಸಂದರ್ಭದಲ್ಲಿ ಇದನ್ನು ಹಂಚಿಕೊಳ್ಳುವುದು ಸೂಕ್ತ ಅನ್ನಿಸಿತು.

Page 17 of 19

Kannada Sethu. All rights reserved.