ಆ ಹಿರಿಯರನ್ನು ನಾನು ಮೊದಲು ನೋಡಿದ್ದು ಸುಮಾರು ಇಪ್ಪತ್ತು ವರ್ಷಗಳ ಹಿಂದೆ. ನನ್ನ ಅಧ್ಯಯನದ ಸಲುವಾಗಿ, ಆಗ ಪುಸ್ತಕದ ಅಂಗಡಿಗಳಲ್ಲಿ ಲಭ್ಯವಿಲ್ಲದ, ಅನಕೃರ ಕೃತಿಗಳು ನನಗೆ ತುಂಬ ಜರೂರಾಗಿ ಬೇಕಿತ್ತು. ಈಗಿನ ತರಹ ಅಂತರ್ಜಾಲ ಸಂಪರ್ಕ, ವಿದ್ಯುನ್ಮಾನ ಪ್ರತಿ(ಸಾಫ್ಟ್ ಕಾಪಿ)ಗಳ ಕಾಲವಲ್ಲ ಅದು. ಹೀಗೇ ವಿಚಾರಿಸುತ್ತಿದ್ದಾಗ ಬೆಂಗಳೂರಿನ ವಿದ್ಯಾಪೀಠ ವೃತ್ತದ ಬಳಿ ಇರುವ ಒಬ್ಬ ವ್ಯಕ್ತಿಯ ಬಳಿ ಅನಕೃ ಅವರ ಸಮಗ್ರ ಕೃತಿಗಳ ಸಂಗ್ರಹ ಇದೆ ಎಂಬ ಮಾಹಿತಿ ಹಾಗೂ ಅವರ ಸ್ಥಿರದೂರವಾಣಿ(ಲ್ಯಾಂಡ್ಲೈನ್)ಯ ಸಂಖ್ಯೆ ನನಗೆ ಸಿಕ್ಕಿತು. […]
ಕನ್ನಡ ಪ್ರಸಂಗ
ಇದು ಲೇಖಕಿಯು ಕನ್ನಡದೊಂದಿಗೆ ಒಡನಾಡಿದ ಅನುಭವಗಳ ಕಥನವಾಗಿದೆ. ಕನ್ನಡ ಜಗತ್ತು ತನಗೆ ಕಲಿಸಿದ ಹಾಗೂ ಕನ್ನಡ ಭಾಷೆ ಹಾಗೂ ಸಾಹಿತ್ಯಗಳನ್ನು ತಾನು ಕಲಿಸಿದ ದಾರಿಯಲ್ಲಿನ ವಿವಿಧ ಅನುಭವಗಳನ್ನು ಓದುಗರೊಂದಿಗೆ ಹಂಚಿಕೊಳ್ಳುವ ಪ್ರಯತ್ನವಾಗಿರುತ್ತದೆ ಇದು. ವಾರಕ್ಕೆ ಒಂದು ಕನ್ನಡ ಪ್ರಸಂಗದಂತೆ ಈ ಅಂಕಣವು ಮೂಡಿ ಬರಲಿದೆ.
Like us!
Follow us!