ಕನ್ನಡ ಪ್ರಸಂಗ

ಇದು ಲೇಖಕಿಯು ಕನ್ನಡದೊಂದಿಗೆ ಒಡನಾಡಿದ ಅನುಭವಗಳ ಕಥನವಾಗಿದೆ. ಕನ್ನಡ ಜಗತ್ತು ತನಗೆ ಕಲಿಸಿದ ಹಾಗೂ ಕನ್ನಡ ಭಾಷೆ ಹಾಗೂ ಸಾಹಿತ್ಯಗಳನ್ನು ತಾನು ಕಲಿಸಿದ ದಾರಿಯಲ್ಲಿನ ವಿವಿಧ ಅನುಭವಗಳನ್ನು ಓದುಗರೊಂದಿಗೆ ಹಂಚಿಕೊಳ್ಳುವ ಪ್ರಯತ್ನವಾಗಿರುತ್ತದೆ ಇದು. ವಾರಕ್ಕೆ ಒಂದು ಕನ್ನಡ ಪ್ರಸಂಗದಂತೆ ಈ ಅಂಕಣವು ಮೂಡಿ ಬರಲಿದೆ.

ಕನ್ನಡ ರತ್ನಕೋಶ, ಪಾರ್ವತಿ ಟೀಚರ್ ಮತ್ತು ಪಾನಿಪುರಿ

ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ಕನ್ನಡ ರತ್ನಕೋಶವು ಕನ್ನಡ ಭಾಷೆ ಮತ್ತು ಸಾಹಿತ್ಯಗಳನ್ನು ಕಲಿಯುವ ವಿದ್ಯಾರ್ಥಿಗಳಿಗೆ ಮತ್ತು ಕಲಿಸುವ ಅಧ್ಯಾಪಕರಿಗೆ ತುಂಬ ಉಪಯುಕ್ತವಾದ ಕೃತಿ. ಅದರಲ್ಲಿ ನೂರಾರು ಕನ್ನಡ ಪದಗಳಿಗೆ ಅಕಾರಾದಿಯಲ್ಲಿ ಅರ್ಥಗಳಿರುವುದು ಮಾತ್ರವಲ್ಲ, ಕನ್ನಡ ನುಡಿಗಟ್ಟುಗಳು, ಸಂಖ್ಯಾಯುತ ವಿಷಯಪದಗಳಿಗೆ ವಿಸ್ತರಣೆಗಳು(ಉದಹರಣೆಗೆ ಪಂಚಲೋಹ, ಸಪ್ತರ್ಷಿ, ನವರತ್ನ ಇತ್ಯಾದಿ)

“ಓ, ಸಂಪೂರ್ಣಾನ? ಶೂನ್ಯ ನೋಡಿ’’!!

ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಪ್ರಸನ್ನ ಚಿತ್ರಮಂದಿರದಿಂದ ರಾಜಾಜಿನಗರದ ಪ್ರವೇಶದ್ವಾರ (ಎಂಟ್ರೆನ್ಸ್)ಕ್ಕೆ ಹೋಗುವ ರಸ್ತೆಯಲ್ಲಿ ಒಂದು ಪೆಟ್ರೋಲ್ ಬಂಕ್ ಇದೆ. ಒಂದು ಬೆಳಿಗ್ಗೆ ನಾನು ಹೊಂಡಾ ಆಕ್ಟಿವಾ ಎಂಬ ನಾಮಧೇಯದ ನನ್ನ ದ್ವಿಚಕ್ರ ರಥದ ಹೊಟ್ಟೆ ತುಂಬಿಸಲು ಅಲ್ಲಿಗೆ ಹೋಗಿದ್ದೆ. ಸಾಲಲ್ಲಿ ನಿಂತಿದ್ದವಳು ನನ್ನ ಸರದಿ ಬಂದಾಗ ಪೆಟ್ರೋಲು ಹಾಕುವ ಹುಡುಗನಿಗೆ `ಪೂರ್ತಿ ಟ್ಯಾಂಕ್ ಹಾಕಪ್ಪ’ ಎಂದೆ.

ಪ್ರಣತಿ ಮತ್ತು ಕರ್ವಾಲೋ

ಪ್ರಣತಿ ನನ್ನ ಇಬ್ಬರು ಮಕ್ಕಳಲ್ಲಿ ಚಿಕ್ಕವಳು. ಈಗ ಅವಳಿಗೆ ಹದಿನೆಂಟು ವರ್ಷ. ಎರಡು ವರ್ಷಗಳ ಹಿಂದೆ ಅಂದರೆ ಅವಳಿಗೆ ಹದಿನಾರು ವರ್ಷವಾಗಿದ್ದಾಗ ನಡೆದಿದ್ದ ಪ್ರಸಂಗವೊಂದನ್ನು ಇಲ್ಲಿ ಬರೆಯುತ್ತಿದ್ದೇನೆ.

ವರ್ಷ್‌ತೊಡ್ಕು, ಹೊಸ್ತೊಡ್ಕು  ವರ್ಷದ ತೊಡಗು(ತೊಡಕು)

ಯುಗಾದಿ ಹಬ್ಬದ ಮಾರನೆಯ ದಿನ ಎಲ್ಲ ಕಡೆ ರಜೆಯ ಮನಸ್ಥಿತಿ ಇರುವುದನ್ನು ನಾವು ಗಮನಿಸಿದ್ದೇವೆ ಅಲ್ಲವೇ? “ಇವತ್ತು ವರ್ಷ್‌ತೊಡ್ಕಲ್ವಾ, ಖಾರದೂಟ ಇರುತ್ತೆ. ನಿಮ್ಮನೇಲಿ ಏನು ವಿಶೇಷ? ॒॒ ॒“ಇಲ್ಲಪ್ಪಾ ನಾವು ಖಾರದೂಟದವರಲ್ಲ, ಹೊಸ್ತೊಡಕಿಗೆ ನಮ್ಮನೇಲಿ ಇವತ್ತು ಪಾಯ್ಸ ಮಾಡ್ತಾರೆ ಇಂತಹ ಮಾತುಗಳು ಕಿವಿ ಮೇಲೆ ಅಂದು ಬೀಳುತ್ತವೆ.

“ಕನ್ನಡ `ರಾಜ್ಯೋಸ್ತವಕ್ಕೆ ಚೀಫ್‌ಗೆಸ್ಟ್ ಬೇಕು, ಇಲ್ಲಿ ಸಿಗ್ತಾರಲ್ಲ?

ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ಕನ್ನಡ ವಿಭಾಗಗಳಲ್ಲಿ ನವೆಂಬರ್ ತಿಂಗಳು ಬಂತೆಂದರೆ ಒಂದು ಗಡಿಬಿಡಿ ಪ್ರಾರಂಭವಾಗುತ್ತದೆ. ಬೇರೆ ಬೇರೆ ಸಂಘ ಸಂಸ್ಥೆಗಳಲ್ಲಿ ನಡೆಯುವ ಕನ್ನಡ ರಾಜ್ಯೋತ್ಸವ ಸಮಾರಂಭಕ್ಕೆ, ಕನ್ನಡ ಅಧ್ಯಾಪಕರನ್ನು ಅತಿಥಿಗಳಾಗಿ ಆಹ್ವಾನಿಸಲು ಆಯೋಜಕರು, ಸಂಘಟಕರು ಬರುವ ತಿಂಗಳು ಅದು.

“ಏ …… ಶ್‌ಶ್ …….. ಪಠ್ಯಪುಸ್ತಕ ಅಂದ್ರೆ ಏನೇ?

ಪದವಿ ತರಗತಿಗಳಲ್ಲಿ ಕನ್ನಡ ಪಾಠ ಮಾಡುವಾಗ ಅಧ್ಯಾಪಕರಿಗೆ ಎದುರಾಗುವ ಅನುಭವಗಳಲ್ಲಿ ಕೆಲವು ಏಕಕಾಕ್ಕೆ ಶೋಚನೀಯವಾಗಿಯೂ, ತಮಾಷೆಯಾಗಿಯೂ ಇರುತ್ತವೆ. ಇಂತಹ ಒಂದು ಅನುಭವ ಇಲ್ಲಿದೆ.

“ಆ ಮಗು ಖಂಡಿತವಾಗಿಯೂ ಶ್ರೀಮಂತರ ಮನೆಯದೇ ಆಗಿರಬೇಕು ಮ್ಯಾಮ್.

ಕನ್ನಡ ಅಧ್ಯಾಪಕರಿಗೆ ತರಗತಿಗಳಲ್ಲಿ ಕೇವಲ ಭಾಷಾ ಪ್ರಪಂಚದ ಅನುಭವಗಳು ಮಾತ್ರವಲ್ಲ, ಸಮಾಜ ದ ಬಗೆಗಿನ ಅನಿರೀಕ್ಷಿತ ಒಳನೋಟಗಳೂ ಸಿಗುತ್ತವೆ.

ಸಂಸಾರ ಎಂಬ ಪದಕ್ಕಿರುವ ಅರ್ಥವಿಸ್ತಾರ ……..ಅಬ್ಬ!

ಪದಗಳು ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ಅರ್ಥಗಳನ್ನು ಕೊಡುತ್ತವೆ ಎಂಬುದು ಭಾಷಾ ಕುತೂಹಲಿಗಳಿಗೆ ಗೊತ್ತಿರುವ ವಿಷಯವೇ ಆಗಿದೆ. ಉದಾಹರಣೆಗೆ ಇರುವೆ, ಅರಸು, ಹತ್ತು, ಹರಿ …… ಇಂತಹ ಪದಗಳಿಗಿರುವ ವಿವಿಧ ಅರ್ಥಗಳು. ಈ ಹಿನ್ನೆಲೆಯಲ್ಲಿ ಸಂಸಾರ ಎಂಬ ಪದವನ್ನು ಗಮನಿಸಬಹುದು.

`ಆಪ್ಕೋ ಕ್ಯಾ ಚಾಹಿಯೆ ಮೇಡಂ ಎಂದ ಶೃಂಗೇರಿಯ ಮಾಣಿ!

ಕೆಲವು ವರ್ಷಗಳ ಹಿಂದೆ ಒಂದು ದಿನ ನಾನು ಮತ್ತು ನನ್ನ ಜೀವನ ಸಂಗಾತಿ ರವಿಕುಮಾರ್, ಕೋರಮಂಗಲಕ್ಕೆ ಬ್ಯಾಂಕಿನ ಕೆಲಸಕ್ಕೆಂದು ಹೋಗಿದ್ದೆವು. ನಾನು ಕಾಲೇಜಿನಿಂದ ನೇರವಾಗಿ ಬ್ಯಾಂಕಿಗೆ ಹೋಗಿದ್ದರಿಂದ ಮತ್ತು ಅಲ್ಲೂ ಕೆಲಸದಲ್ಲಿ ತುಸು ವಿಳಂಬವಾದದ್ದರಿಂದ ಹೊಟ್ಟೆ ಹಸಿಯುತ್ತಿತ್ತು. ಸರಿ, ಕೆಲಸವಾದ ನಂತರ ಹತ್ತಿರದ ಹೋಟಲೊಂದಕ್ಕೆ ಹೋಗಿ ಏನಾದರೂ ತಿಂಡಿ ತಿನ್ನೋಣವೆಂದು ಕುಳಿತೆವು.

ಹಳ್ಳಿ ಗಡಿಯಾರ, ಒಳ್ಳೆ ಆಹಾರ

ಗೆಳತಿಯೊಬ್ಬರು ಒಂದು ದಿನ ಹೀಗೇ ವಾಟ್ಯಾಪ್ಪಿನಲ್ಲಿ `ಹಳ್ಳಿ ಗಡಿಯಾರ ಒಳ್ಳೆ ಆಹಾರ ಎಂಬ ವಾಕ್ಯ ಕಳಿಸಿ `ಈ ಒಗಟು ಬಿಡಿಸುತ್ತೀರಾ? ಎಂದು ಕೇಳಿದರು. `ತಮಾಷೆಗೆ ಎಂದು ಕೂಡ ಪಾಪ ಸೇರಿಸಿದ್ದರು. ಸರಿ, ತಲೆಗೆ ಹುಳ ಬಿಟ್ಟಂತೆ ಆಗಿ ದಿನವೆಲ್ಲ ಯೋಚನೆ.

Page 18 of 19

Kannada Sethu. All rights reserved.