ಕನ್ನಡ ವಿವೇಕ

ಬದುಕನ್ನು ಹಸನು ಮಾಡಲು ಕನ್ನಡ ಭಾಷೆ, ಸಂಸ್ಕೃತಿಯು ನಮಗೆ ನೀಡಿದ ಕೆಲವು ಗಾದೆ, ಸೂಕ್ತಿ, ನಾಣ್ಣುಡಿ, ಲೋಕೋಕ್ತಿ, ನಲ್ವಾತು ಇವುಗಳಲ್ಲಿ ವಾರಕ್ಕೆ ಒಂದರ ಕಿರು ಪರಿಚಯವನ್ನು ಈ ಅಂಕಣದಲ್ಲಿ ಮಾಡಿಕೊಡಲಾಗುತ್ತದೆ.

ತನ್ನ ಬೆನ್ನು ತನಗೆ ಕಾಣಲ್ಲ

ಇದು ಕನ್ನಡದ ಒಂದು ಪ್ರಸಿದ್ಧ ಗಾದೆಮಾತು. ಸಾಮಾನ್ಯವಾಗಿ ಮನುಷ್ಯರು ತಾವು ಮಾಡುವ ತಪ್ಪುಗಳಿಗೆ ಕುರುಡಾಗಿರುತ್ತಾರೆ. ತಾವು ಮಾಡುವುದು ಸರಿ ಎಂಬ ಭಾವ ಸದಾ ಅವರಲ್ಲಿ ಇರುತ್ತದೆ. ಇನ್ನೊಬ್ಬರ ತಪ್ಪನ್ನು ಬೇಗ ಕಂಡುಹಿಡಿಯುವ ಜನರು ತಮ್ಮ ತಪ್ಪನ್ನು ಬೇಗ ಅರ್ಥ ಮಾಡಿಕೊಳ್ಳುವುದಿಲ್ಲ. ಹೇಗೆ ನಮ್ಮ ಬೆನ್ನು ನಮಗೆ ಕಾಣುವುದಿಲ್ಲವೋ ಹಾಗೆ ನಮ್ಮ ತಪ್ಪು ನಮಗೆ ಅರ್ಥವಾಗುವುದಿಲ್ಲ ಎಂಬುದು ಈ ಗಾದೆ ಮಾತಿನ ಅರ್ಥ.

ಐದು ಬೆಳ್ಳು ಒಂದೆ ಸಮಕ್ಕೆ ಇರ್ತವ?

ಪ್ರಪಂಚ ಅನ್ನುವುದು ವಿವಿಧತೆಗಳ ಸಂಗಮ. ಹೂವುಗಳು, ಪ್ರಾಣಿ ಪಕ್ಷಿಗಳು, ಗಿಡಮರಗಳು, ಮನುಷ್ಯರು, ಅವರ ಸ್ವಭಾವಗಳು …… ಏನನ್ನು ಪರಿಗಣಿಸಿದರೂ ಅಲ್ಲಿ ಕಾಣುವುದು ಬಹುತ್ವ ಮತ್ತು ಅಪಾರ ವೈವಿಧ್ಯ. ಈ ವಿಷಯ ನಮಗೆ ಗೊತ್ತಿದ್ದರೂ ಮನೆಗಳಲ್ಲಿ, ಉದ್ಯೋಗ ಸ್ಥಳಗಳಲ್ಲಿ, ಸಮಾಜದಲ್ಲಿ ಜನರಿಂದ ನಮ್ಮ ನಿರೀಕ್ಷೆಗಳು ಕೈಗೂಡದಿದ್ದಾಗ ನಾವು ಬಹಳ ಬೇಸರ ಪಟ್ಟುಕೊಳ್ಳುತ್ತೇವೆ. `ಅವರು ನಾನಂದುಕೊಂಡಂತೆ ಯಾಕೆ ವರ್ತಿಸಲಿಲ್ಲ?,

ಒಳ್ಳೇದನ್ನ ಕೂಗ್ಹೇಳು, ಕೆಟ್ಟದ್ದನ್ನ ಕಿವೀಲ್ಹೇಳು.

ಕನ್ನಡ ಭಾಷೆಯ ಈ ಗಾದೆಮಾತು ಉತ್ತಮ ನಡವಳಿಕೆಯೊಂದರ ಕಡೆ ನಮ್ಮ ಗಮನ ಸೆಳೆಯುತ್ತದೆ. ನಮ್ಮ ಸಹಜೀವಿಗಳೊಂದಿಗೆ ಒಡನಾಡುವಾಗ ನಾವು ನೆನಪಿಡಬೇಕಾದ ಒಂದು ಮಾತು ಇದು. ಕುಟುಂಬದಲ್ಲಿ, ಉದ್ಯೋಗ ಸ್ಥಳದಲ್ಲಿ, ಸಮಾರಂಭಗಳಲ್ಲಿ ನಮ್ಮ ಸಹಚರರು ಕೆಲವೊಮ್ಮೆ ಪ್ರಶಂಸನೀಯವಾದ ಕೆಲಸಗಳನ್ನು, ಇನ್ನೊಮ್ಮೆ ಅಷ್ಟೇನೂ ಪ್ರಶಂಸನೀಯವಲ್ಲದ ಕೆಲಸಗಳನ್ನು ಮಾಡಬಹುದು.

ಹಾಕ್ಮಣೆ ನೂಕ್ಮಣೆ ಯಾಕ್ಮಣೆ

ಕನ್ನಡದ ಈ ಗಾದೆಮಾತು ಮನುಷ್ಯ ಮನುಷ್ಯರ ನಡುವಿನ ಸಂಬಂಧಗಳಲ್ಲಿನ ಒಂದು ಸೂಕ್ಷ್ಮ ಅಂಶವನ್ನು ದಾಖಲಿಸುತ್ತದೆ. ಒಬ್ಬರ ಮನೆಗೆ ಅತಿಥಿಯಾಗಿ ಹೋದವರು, ಅತಿಥಿತನಕ್ಕೆ ಒಪ್ಪುವಂತೆ ಎಷ್ಟು ಕಾಲ ಇರಬೇಕೋ ಅಷ್ಟು ಕಾಲ ಮಾತ್ರ ಇದ್ದರೆ ಉಚಿತ. ಆದರೆ ಅದಕ್ಕಿಂತ ಹೆಚ್ಚು ಸಮಯ ಅತಿಥೇಯರ ಮನೆಯಲ್ಲಿದ್ದರೆ, ಅವರನ್ನು ಹೇಗೆ ನೋಡಿಕೊಳ್ಳಲಾಗುತ್ತದೆ ಎಂಬ ಕಟುಸತ್ಯವು ಇಲ್ಲಿ ಗೊತ್ತಾಗುತ್ತದೆ. ಪ್ರಾರಂಭದಲ್ಲಿ ಅತಿಥಿಗಳನ್ನು ಮಣೆಹಾಕಿ ಕೂರಿಸಿ ಉಪಚರಿಸಲಾಗುತ್ತದೆ.

ಸಮುದ್ರದ ನಂಟಸ್ತನ ಉಪ್ಪಿಗೆ ಬಡತನ

ಕನ್ನಡದ ಈ ಗಾದೆಮಾತು ಜೀವನದಲ್ಲಿ ನಾವು ಕೆಲವೊಮ್ಮೆ ಎದುರಿಸುವ ವಿಪರ್ಯಾಸದ ಸನ್ನಿವೇಶವೊಂದನ್ನು ತುಂಬ ಚೆನ್ನಾಗಿ ವಿವರಿಸುತ್ತದೆ. ತುಂಬ ಆಸ್ತಿ ಇರುವ ವ್ಯಕ್ತಿಯೊಬ್ಬನಿಗೆ ಏನೇನೋ ಕಾರಣಕ್ಕೆ ಆ ಆಸ್ತಿಯನ್ನು ಅನುಭವಿಸಲು ಸಾಧ್ಯವಾಗದಿರುವುದು, ಸಂಘ ಸಂಸ್ಥೆಗಳಲ್ಲಿ ಬೇಕಾದಷ್ಟು ಅನುದಾನ, ನಿಧಿಗಳು ಇದ್ದರೂ ಅಲ್ಲಿನ ಉದ್ಯೋಗಿಗಳು ಒಂದು ಹಾಳೆ, ಗುಂಡುಸೂಜಿಗೂ ಪರದಾಡಬೇಕಾದ ಪರಿಸ್ಥಿತಿ,

ದೊರೆ ಮನಸ್ಸು, ಮರದ ನೆರಳು ಇದ್ಹಂಗಿರಲ್ಲ.

ಅಧಿಕಾರವುಳ್ಳವರು ತಮ್ಮ ಕೈಕೆಳಗಿನ ನೌಕರರನ್ನು ನಡೆಸಿಕೊಳ್ಳುವ ರೀತಿ ಯಾವಾಗಲೂ ಒಂದೇ ಸಮನಾಗಿರುವುದಿಲ್ಲ. ತಮ್ಮ ಆಜ್ಞಾನುವರ್ತಿಗಳನ್ನು ಅಧಿಕಾರವುಳ್ಳವರು ಇಂದು ಎಷ್ಟೇ ಆಪ್ತತೆಯಿಂದ ನಡೆಸಿಕೊಂಡರೂ ನಾಳೆ ಅದೇ ಆಪ್ತತೆ, ವಿಶ್ವಾಸಗಳಿಂದ ನಡೆಸಿಕೊಳ್ಳುತ್ತಾರೆ ಎಂದು ಖಚಿತವಾಗಿ ಹೇಳಲಾಗದು. ಸನ್ನಿವೇಶ ಬದಲಾದಾಗ ದೊರೆ/ಅಧಿಕಾರಿಗಳು ಇದ್ದಕ್ಕಿದ್ದಂತೆ ತಮ್ಮ ವರ್ತನೆಗಳನ್ನು ಬದಲಾಯಿಸುವ ಸಾಧ್ಯತೆ ಇರುತ್ತದೆ.

ಪಾಪದೂರಿಗೆ ಜಾರ್ಬಂಡೆ, ಪುಣ್ಯದೂರಿಗೆ ಏರ್ಬಂಡೆ

ಒಳ್ಳೆಯ ಕೆಲಸ ಮತ್ತು ಕೆಟ್ಟ ಕೆಲಸಗಳನ್ನು ಕುರಿತು ಎಚ್ಚರಿಕೆ ಕೊಡುವ ಒಂದು ಗಾದೆಮಾತಿದು. ಪಾಪ ಅಥವಾ ಕೆಟ್ಟದ್ದನ್ನು ಮಾಡುವುದು ಜಾರುಬಂಡೆ ಜಾರಿದಂತೆ ಸರಾಗ, ಮತ್ತು ಒಮ್ಮೆ ಶುರು ಮಾಡಿದರೆ ಮಧ್ಯೆ ನಿಲ್ಲಿಸಲು ಸಾಧ್ಯವಾಗದಂಥದ್ದು. ಅದೇ ಒಳ್ಳೆಯ ಕೆಲಸಗಳನ್ನು ಮಾಡುವುದೆಂದರೆ ಏರುಬಂಡೆ ಅಥವಾ ಬೆಟ್ಟ ಹತ್ತಿದಷ್ಟು ಕಷ್ಟಕರ ಮತ್ತು ಹಂತ ಹಂತವಾಗಿ ಮಾಡಬೇಕಾದ್ದು, ಒಂದೇ ಉಸುರಿಗೆ ಆಗುವಂಥದ್ದಲ್ಲ.

ಗುಡಿಸಿದ್ರೆ ಕಸವಿರ್‍ಬಾರ್‍ದು, ಬಡಿಸಿದ್ರೆ ಹಸಿವಿರ್‍ಬಾರ್‍ದು

ಕೆಲಸ ಮಾಡುವ ಉತ್ತಮ ರೀತಿಯೊಂದನ್ನು ಹೇಳುವ ಕನ್ನಡ ಗಾದೆಮಾತು ಇದು. ಕಸ ಗುಡಿಸಿದರೆ ಸ್ವಲ್ಪವೂ ಕಸ ಇರದಂತೆ ಗುಡಿಸಬೇಕು ಮತ್ತು ಊಟ ಬಡಿಸುವಾಗ ಉಣ್ಣುವವರಿಗೆ ಹಸಿವು ಸ್ವಲ್ಪವೂ ಉಳಿಯದಂತೆ ಅಂದರೆ, ಅವರು ಹೊಟ್ಟೆ ತುಂಬ ಉಣ್ಣುವಂತೆ ಬಡಿಸಬೇಕು ಎನ್ನುವುದು ಇದರ ಮೇಲ್ನೋಟದ ಅರ್ಥ.

ಆಕಾಶ ನೋಡಕ್ಕೆ ನೂಕಾಟ ಯಾತಕ್ಕೆ?

ಇದು ಕನ್ನಡದ ಒಂದು ಸ್ವಾರಸ್ಯಕರವಾದ ಗಾದೆಮಾತು. ನಾವು ತಲೆ ಎತ್ತಿದರೆ ಸಾಕು ನಮಗೆ ಕಾಣುವ ಆಕಾಶ ನೋಡಲಿಕ್ಕಾಗಿ, ಒಬ್ಬರನ್ನೊಬ್ಬರು ತಳ್ಳಿ ನೂಕಾಡಿ ನೋಡುವ ಅಗತ್ಯ ಏನಿದೆ? ಆರಾಮವಾಗಿ ಆಕಾಶ ನೋಡಬಹುದಲ್ಲವೇ? ಇದೇ ಈ ಗಾದೆಯ ಅರ್ಥ. ಮೇಲ್ನೋಟಕ್ಕೆಯೇ ಗೋಚರವಾಗುವ ಈ ಅರ್ಥದ ಹಿಂದಿನ ಮರ್ಮ ಏನೆಂದರೆ, ಜೀವನದಲ್ಲಿ ನಾವು ಯಾವುದಾದರೊಂದು ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಇಚ್ಛಿಸಿದರೆ,

ಹತ್ತ್ ಜನಕ್ಕೆ ಹುಲ್ಲ್ ಕಡ್ಡಿ, ಒಬ್ಬಂಗೆ ತಲೆಹೊರೆ.

ಕನ್ನಡದ ಒಂದು ಸತ್ವಯುತ ಗಾದೆಮಾತು. ಇದರ ಅರ್ಥ ಹೀಗಿದೆ. ಹುಲ್ಲುಹೊರೆಯೊಂದನ್ನು ಹತ್ತು ಜನ ಹಂಚಿಕೊಂಡು ಹೊತ್ತರೆ ಒಬ್ಬೊಬ್ಬರಿಗೆ ಹೊರಲು ಒಂದೊಂದೇ ಹುಲ್ಲುಕಡ್ಡಿ ಬರುವುದರಿಂದ ಅದು ಭಾರ ಅನ್ನಿಸುವುದಿಲ್ಲ. ಅದೇ ಹುಲ್ಲುಹೊರೆಯನ್ನು ಒಬ್ಬನೇ ವ್ಯಕ್ತಿ ಹೊತ್ತರೆ ಅದು ಅವನಿಗೆ ತುಂಬ ಭಾರ ಅನ್ನಿಸುತ್ತೆ.

Page 19 of 19

Kannada Sethu. All rights reserved.